December 2024

ಕೆ.ಎಸ್.ಆರ್.ಟಿ.ಸಿ‌ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಕೆ ಎಸ್ ಆರ್ ಟಿಸಿ ಬಸ್ಸು ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುತ್ತೂರಿನ ಮುರ ಎಂಬಲ್ಲಿಂದ ಗುರುವಾರ ವರದಿಯಾಗಿದೆ.ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಅಬ್ದುಲ್ ಕುಂಞ (65) ಮೃತಪಟ್ಟ ವ್ಯಕ್ತಿ‌ ಎಂದು ಗುರುತಿಸಲಾಗಿದೆ.ಅಬ್ದುಲ್ ಕುಂಞಯವರು ಮುರದ ಮೆಡಿಕಲ್ ಶಾಪ್ ಗೆ ಬಂದಿದ್ದು, ವಾಪಸ್ಸು ರಸ್ತೆ ದಾಟಿ ಕೆದಿಲ ರಸ್ತೆಯತ್ತ ಹೋಗುತ್ತಿರುವಾಗ ಅವರ ಬೈಕ್ ಗೆ ಬಸ್ಸು ಢಿಕ್ಕಿ ಹೊಡೆದಿದೆ. ಬಸ್ಸು ಮಾಣಿಯಿಂದ ಪುತ್ತೂರಿನತ್ತ ಹೋಗುತ್ತಿತ್ತು.ಗಾಯಾಳು ಸವಾರನನ್ನು ಸ್ಥಳೀಯರ ನೆರವಿನಿಂದ ತಕ್ಷಣ […]

ಕೆ.ಎಸ್.ಆರ್.ಟಿ.ಸಿ‌ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು Read More »

ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರಿಗೆ ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024

ಬೆಂಗಳೂರಿನಲ್ಲಿ ಯಶ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್ ಸ್ಟಾರ್ ಆಫ್ ಸೌತ್ ಇಂಡಿಯಾ 2024 ಬ್ಯೂಟಿ ಕಾಂಪಿಟೇಶನ್ ಕಾರ್ಯಕ್ರಮದಲ್ಲಿ ಸುಳ್ಯದ ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರು ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024 ಪಡೆದುಕೊಂಡಿದ್ದಾರೆ.

ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರಿಗೆ ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024 Read More »

ಭೀಕರ ಅಪಘಾತದಲ್ಲಿ ಅಮರಮುಡ್ನೂರು ಗ್ರಾಮದ ಯುವಕ ಸಾವು

ಸೂರಿಕುಮೇರು ಎಂಬಲ್ಲಿ ನಿನ್ನೆ ತಡರಾತ್ರಿ ಬೈಕ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಮರ ಮುಡ್ನೂರು ಗ್ರಾಮದ ಮರ್ಗಿಲಡ್ಕ ನಿವಾಸಿ ಪುನೀತ್( 30) ಮ್ರತಪಟ್ಟಿದ್ದಾರೆ.ಮಂಗಳೂರಿನಲ್ಲಿ ಕೋಸ್ಟಲ್ ಕೋಳಿ ಫಾರ್ಮ್ ನಲ್ಲಿ ಚಾಲಕರಾಗಿದ್ದ ಅವರು ಕೆಲಸ ಮುಗಿಸಿ ಮನೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಸೂರಿಕುಮೇರು ರಾಜ್ಯ ಹೆದ್ದಾರಿಯಲ್ಲಿ ಟೆಂಪೊ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಭೀಕರ ಅಪಘಾತದಲ್ಲಿ ಅಮರಮುಡ್ನೂರು ಗ್ರಾಮದ ಯುವಕ ಸಾವು Read More »

ಅರಂತೋಡು ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ ಸಮಾರೋಪ

ಅಲ್ಲಾಹುವನ್ನು ಮರೆತಿದ್ದೇವೆ. ನಮ್ಮ ಶರೀರಕ್ಕೆ ದೇವರು ಸಮಯ ನಿಗಧಿಪಡಿಸಲಾಗಿದೆ, ಮರಣ ಎಂಬುದು ಖಚಿತ, ಆದುದರಿಂದ ಮರಣಾನಂತರದ ಜೀವನವೇ ಶಾಶ್ವತ ಎಂದು ಖ್ಯಾತ ವಾಗ್ಮಿ ಬಹು| ಅಬೂಬಕ್ಕರ್ ಸಿದ್ಧೀಕ್ ಅಝ್ಹರಿ ಪಯ್ಯನ್ನೂರು ಹೇಳಿದರು. ಅವರು ಡಿ.17 ರಂದು ಅರಂತೋಡು ಎಸ್.ಕೆ.ಎಸ್.ಎಸ್.ಎಪ್ ಶಾಖೆ ವತಿಯಿಂದ ನಡೆದ ಏಕದಿನ ಧಾರ್ಮಿಕ ಉಪನ್ಯಾಸದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷ ಜುಬೈರ್ ಎಸ್.ಇ ವಹಿಸಿದರು. ದುವಾವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ನೆರವೇರಿಸಿದರು. ಅತಿಥಿಗಳಾಗಿ

ಅರಂತೋಡು ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ ಸಮಾರೋಪ Read More »

ಕಲ್ಲುಗುಂಡಿಯಲ್ಲಿ ಕಾರು ಪಲ್ಟಿ ಹೊಡೆದು ಜಖಂ

ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಕಾರು ಪಲ್ಟಿಯಾದ ಘಟನೆ ಗುರುವಾರ ವರದಿಯಾಗಿದೆ.ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಟ್ಯಾಕ್ಸಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ.ಪ್ರಯಾಣಿಕರು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

ಕಲ್ಲುಗುಂಡಿಯಲ್ಲಿ ಕಾರು ಪಲ್ಟಿ ಹೊಡೆದು ಜಖಂ Read More »

ಕೃಷಿ ಉತ್ಪತ್ತಿಯ ಕುಸಿತ, ಧನ ಸಹಾಯ ಸ್ಥಗಿತಗೊಳಿಸಲಾಗಿದೆ ಎಂಬ ಮನೆ ಮುಂದೆ ಅಳವಡಿಸಿದ ಬ್ಯಾನರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

ಸುಳ್ಯ ತಾಲೂಕಿನಲ್ಲಿ ಈ ವರ್ಷ ಅಡಿಕೆ ಕ್ರಷಿಗೆ ಎಲೆ ಚುಕ್ಕಿ ರೋಗ ಬಾಧಿಸಿ ರೈತರು ಬಹಳ ಅರ್ಥಿಕ‌ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಇನ್ನೇನು ವಿವಿಧ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.ಎಲ್ಲ ಕಾರ್ಯಕ್ರಮಗಳಿಗೆ ಧನ ಸಹಾಯ ಅಗತ್ಯ ಇರುವುದರಿಂದ ಧನ ಸಹಾಯಕ್ಕಾಗಿ ಮನೆ ಮನೆ ತೆರಳುವುದು,ಸಂಗ್ರಹಿಸುವುದು ಸಾಮಾನ್ಯವಾಗಿದೆ.ಸುಳ್ಯ ಪರಿಸರದಲ್ಲಿ ಅಡಿಕೆ ಎಲೆಚುಕ್ಕಿ ರೋಗ ಹೆಚ್ಚು ಬಾಧಿಸಿರುವುದರಿಂದ ಇಲ್ಲಿಯ ರೈತರು ಅತೀ ಹೆಚ್ಚು ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ರೈತರೊಬ್ಬರು ತಮ್ಮ ಮನೆಯ ಮುಂದೆ ಬ್ಯಾನರ್ ಅಳವಡಿಸಿದ್ದಾರೆ.ಅದರಲ್ಲಿ ಕ್ರಷಿ ಉತ್ವತಿಯ ಕುಸಿತದಿಂದ ಎಲ್ಲಾ ರೀತಿಯ

ಕೃಷಿ ಉತ್ಪತ್ತಿಯ ಕುಸಿತ, ಧನ ಸಹಾಯ ಸ್ಥಗಿತಗೊಳಿಸಲಾಗಿದೆ ಎಂಬ ಮನೆ ಮುಂದೆ ಅಳವಡಿಸಿದ ಬ್ಯಾನರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ Read More »

ವಿಶೇಷ ಚೇತನ ವಿದ್ಯಾರ್ಥಿ ವೇಣುಪ್ರಸಾದ್ ಗೆ ಸುಲಭವಾಗಿ ನಡೆಯಲು ಉಚಿತ ಸಾಧನ ಸಲಕರಣೆ ವಿತರಣೆ

ತೊಡಿಕಾನ ಗ್ರಾಮದ ಅಡ್ಯಡ್ಕದ ವಿಶೇಷಚೇತನ ಹುಡುಗ ವೇಣುಪ್ರಸಾದ್ ರವರಿಗೆ ಸುಲಭವಾಗಿ ನಡೆಯಲು ಸಾಧನ ಸಲಕರಣೆಯನ್ನು ಪುತ್ತೂರಿನ ಎಂವಿ ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಮುಖ್ಯಸ್ಥ ಸುಬ್ರಮಣಿ ಕಲ್ಲುಗುಂಡಿ ಉಚಿತವಾಗಿ ವಿತರಿಸಿದ್ದಾರೆ.ವೇಣುಪ್ರಸಾದ್ ರಿಗೆ ಆರಂಭದಿಂದಲೂ ವಿವಿಧ ರೀತಿಯ ಸಹಕಾರ ನೀಡುತ್ತಿರುವ ಇವರು, ಈ ಹಿಂದೆಯೂ ಇವರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ದೊರಕಲು ಸಹಕರಿಸಿದ್ದರು.3 ವರ್ಷಗಳ ಹಿಂದೆಯೂ ಸುಬ್ರಮಣಿಯವರು ವೇಣುಪ್ರಸಾದ ರಿಗೆ ಇಂತಹ ಸಾಧನ ಸಲಕರಣೆ ನೀಡಿದ್ದರು. ನಿರಂತರವಾಗಿ ಇದನ್ನು ಉಪಯೋಗಿಸುತ್ತಿದ್ದರಿಂದ ಸಲಕರಣೆ ತುದಿ ಭಾಗ ತುಂಡಾಗಿತ್ತು.ಸುಬ್ರಮಣಿಯವರು ಈಗಾಗಲೇ

ವಿಶೇಷ ಚೇತನ ವಿದ್ಯಾರ್ಥಿ ವೇಣುಪ್ರಸಾದ್ ಗೆ ಸುಲಭವಾಗಿ ನಡೆಯಲು ಉಚಿತ ಸಾಧನ ಸಲಕರಣೆ ವಿತರಣೆ Read More »

ಪೆರಾಜೆಯಲ್ಲಿ ಭೀಕರ ಕಾರು ಅಪಘಾತ,ಪ್ರಯಾಣಿಕರಿಗೆ ಗಾಯ

ಪೆರಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಇದೀಗ ಅಪಘಾತಗೊಂಡಿದೆ.ಸುಳ್ಯದಿಂದ ಕಲ್ಲುಗುಂಡಿ ಕಡೆ ಸಂಚಾರಿಸುತ್ತಿದ್ದ ಕಾರು ಕನ್ನಡ ಪೆರಾಜೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಪರಿಣಾಮವಾಗಿ ಕಾರು ಜಖಂಗೊಂಡು ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪೆರಾಜೆಯಲ್ಲಿ ಭೀಕರ ಕಾರು ಅಪಘಾತ,ಪ್ರಯಾಣಿಕರಿಗೆ ಗಾಯ Read More »

ರಸ್ತೆ ಅಭಿವೃದ್ಧಿಗೆ ಎಲ್ಲ ಶಾಸಕರಿಗೆ ಪಕ್ಷ ಭೇದ ಮರೆತು ಅನುದಾನ ಹಂಚಿಕೆ : ಸಿದ್ಧ ರಾಮಯ್ಯ

ರಸ್ತೆಗಳ ಅಭಿವೃದ್ಧಿಗೆ ಎಲ್ಲ ಕ್ಷೇತ್ರಗಳಿಗೂ ಪಕ್ಷಾತೀತವಾಗಿ 2 ಸಾವಿರ ಕೋಟಿ ರೂ. ವಿತರಣೆ ಮಾಡಲಾಗುವುದು. ಈ ಮೂಲಕ ನಮ್ಮಶಾಸಕರು ಎದೆ ಎತ್ತಿ ಮಾತನಾಡುವ ಮೂಲಕ ವಿಪಕ್ಷದವರ ಬಾಯಿ ಮುಚ್ಚಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಯಲ್ಲಿ ಅವರು ಮಾತನಾಡಿದರು. ಮಳೆ ಹಾನಿ ಸರಿಪಡಿಸಲು ಹೆಚ್ಚುವರಿಯಾಗಿ 4 ಸಾವಿರ ಕೋಟಿ ರೂ., ಗ್ರಾಮೀಣ ರಸ್ತೆ ಹಾಳಾಗಿರುವುದಕ್ಕೆ 2 ಸಾವಿರ ಕೋಟಿ ರೂ. ಸಹಿತ ನಗರ, ಪಟ್ಟಣ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡಲಾಗುವುದು.ರಾಜ್ಯದ ಜನತೆ ಈಗಲೂ

ರಸ್ತೆ ಅಭಿವೃದ್ಧಿಗೆ ಎಲ್ಲ ಶಾಸಕರಿಗೆ ಪಕ್ಷ ಭೇದ ಮರೆತು ಅನುದಾನ ಹಂಚಿಕೆ : ಸಿದ್ಧ ರಾಮಯ್ಯ Read More »

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ- ಮಾಹಿತಿ ಕಾರ್ಯಕ್ರಮ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸುಳ್ಯ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಕ್ರೈಂ ಜಾಗೃತಿ ಮತ್ತು ವಾಹನ ಚಾಲನೆ ಕುರಿತು ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು.ಸೈಬರ್ ಕ್ರೈ೦ ಜಾಗೃತಿ ಕುರಿತು ಎ.ಎಸ್ ಐಉದಯಕುಮಾರ್ ಮಾಹಿತಿ ನೀಡಿದರು. ವಾಹನ ಚಾಲನೆ ಜಾಗೃತಿ ಕುರಿತು ಎ.ಎಸ್.ಐ ಸುರೇಶ್ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕ ಶಿವಪ್ರಕಾಶ ಕುದ್ಪಾಜೆ ಇದ್ದರು. ಶಿಕ್ಷಕ ಕುಮಾರ್ ಲಮಾಣಿ ವಂದಿಸಿ, ಶಿಕ್ಷಕಿ ಸವಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ- ಮಾಹಿತಿ ಕಾರ್ಯಕ್ರಮ Read More »

error: Content is protected !!
Scroll to Top