January 2025

ತೊಡಿಕಾನ : ಆಯಿರಕೊಡ ಅಭಿಷೇಕ,ಸಿಯಾಳಾಭಿಷೇಕ,ರಂಗಪೂಜೆ,ಜ.27ಕ್ಕೆ ಚಾಕಟಡಿ ನೇಮೋತ್ಸವ,ಜ.28ಕ್ಕೆ ಪಾಷಾಣಮೂರ್ತಿ ಅಮ್ಮನವರ ಕೋಲ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಶ್ರೀ ದೇವರಿಗೆ ಆಯಿರಕೊಡ ಅಭಿಷೇಕ,ಸಿಯಾಳಭಿಷೇಕ ಮತ್ತು ರಂಗಪೂಜೆ ನಡೆಯಿತು.ದೇವರಗುಂಡಿಯಿಂದ ಬೆಳಿಗ್ಗೆ ತೀರ್ಥ ತರಲಾಯಿತು,ಬಳಿಕ ಗಣಹೋಮ,ಶತರುದ್ರಾಭಿಷೇಕ,ಸಿಯಾಳಾಭಿ಼ಷೇಕ ನಡೆಯಿತು.ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಶ್ರೀ ಭಾರದ್ವಾಜಾಶ್ರಮ ಅರಂಬೂರು ಅವರಿಂದ ವೇದ ಪಾರಾಯಣ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ ಹಾಗೂ ಪರ ಊರಿನ ಸಾವಿರಾರು ಭಕ್ತರು ಧನು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದರು.ಜ.18ಕ್ಕೆ […]

ತೊಡಿಕಾನ : ಆಯಿರಕೊಡ ಅಭಿಷೇಕ,ಸಿಯಾಳಾಭಿಷೇಕ,ರಂಗಪೂಜೆ,ಜ.27ಕ್ಕೆ ಚಾಕಟಡಿ ನೇಮೋತ್ಸವ,ಜ.28ಕ್ಕೆ ಪಾಷಾಣಮೂರ್ತಿ ಅಮ್ಮನವರ ಕೋಲ Read More »

ಪಿಕಪ್ ಪಲ್ಟಿಯಾಗಿ ಚಾಲಕನಿಗೆ ಗಾಯ

ಜಾಲ್ಲೂರು ಗ್ರಾಮದ ಕುಂಬರ್ಚೊಡು ಬಳಿ ಪಿಕಪ್ ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ಬುಧವಾರ ವರದಿಯಾಗಿದೆ.ಕಾಟೂರು ಭಾಗಕ್ಕೆ ಜಲ್ಲಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿಯಾದ ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಈ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್ಸ್ ನಿಂದಾಗಿ ಈ ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ. ಈ ಹಿಂದೆ ಇಲ್ಲಿ ರಿಕ್ಷಾ ಹಾಗು ಲಾರಿ ಕೂಡ ಪಲ್ಟಿಯಾದ ಘಟನೆ ಸಂಭವಿಸಿತ್ತು. ಕೊಡಲೇ ಈ ಹಂಪ್ಸನ್ನು ತೆರಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಿಕಪ್ ಪಲ್ಟಿಯಾಗಿ ಚಾಲಕನಿಗೆ ಗಾಯ Read More »

ಎನ್ ಲೈಟ್ ಎಜ್ಯುಕೇಶನ್ ಸರ್ವಿಸ್ ಮತ್ತು ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ತರಬೇತಿ

ಅರಂತೋಡು ಪಟೇಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುಳ್ಯ ಏನ್ ಲೈಟ್ ಎಜ್ಯುಕೇಶನ್ ಸರ್ವಿಸ್ ವತಿಯಿಂದ ಎಸ್ ಎಸೆಲ್ಸಿ ವಿದ್ಯಾರ್ಥಿ ಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ತರಬೇತಿ ಮತ್ತು ಪರಿಕ್ಷಾ ಪೂರ್ವ ಸಿದ್ಧತಾ ಮಾಹಿತಿ ಕಾರ್ಯಗಾರ ವು ಅರಂತೋಡು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಜ.14 ರಂದು ನಡೆಯತು.ಅಧ್ಯಕ್ಷತೆಯನ್ನು ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದ್ರುದ್ದೀನ್ ಪಟೇಲ್ ವಹಿಸಿದರು. ಸೈಫುದ್ದೀನ್ ಪಟೇಲ್ ಹಾಗೂ.ನಿವೃತ ಎನ್.ಎಂ. ಪಿಯುಸಿ ಶಿಕ್ಷಕ ಅಬ್ದುಲ್ಲಾ ಮಾಸ್ತರ್,ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪಟೇಲ್ ಚಾರಿಟೇಬಲ್

ಎನ್ ಲೈಟ್ ಎಜ್ಯುಕೇಶನ್ ಸರ್ವಿಸ್ ಮತ್ತು ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ತರಬೇತಿ Read More »

ಅಕ್ಷತಾ ನಾಗನಕಜೆಯವರಿಗೆ ದಿನಕರ ದೇಸಾಯಿ ಪ್ರಶಸ್ತಿ

ಅಕ್ಷರನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕರ್ನಾಟಕ, ಅಕ್ಷರನಾದ ಪಬ್ಲಿಕೇಶನ್ಸ್ ಎ ಎಸ್ ಟಿ ಆರ್ ಬೆಂಗಳೂರು ಇವರು ಆಯೋಜಿಸಿರುವ “ಚುಟುಕು ಬ್ರಹ್ಮ” ಡಾ|| ದಿನಕರ ದೇಸಾಯಿಯವರ ಸವಿನೆನಪಿನಲ್ಲಿ “ರಾಜ್ಯ ಮಟ್ಟದ ಕವಿನುಡಿ ಸಂಭ್ರಮ ಮೂರನೇ ಆವೃತ್ತಿ-2025” ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ಯವರಿಗೆ “ದಿನಕರ ದೇಸಾಯಿ” ಪ್ರಶಸ್ತಿಯನ್ನು ಡಾ. ಶ್ರುತಿ ಮಧುಸೂದನ್ ಪ್ರಧಾನ ಸಂಪಾದಕರು ಅಕ್ಷರನಾದ ಪಬ್ಲಿಕೇಶನ್ಸ್ ಕರ್ನಾಟಕ ಇವರು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು.

ಅಕ್ಷತಾ ನಾಗನಕಜೆಯವರಿಗೆ ದಿನಕರ ದೇಸಾಯಿ ಪ್ರಶಸ್ತಿ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಧನುಪೂಜೆ ಸಂಪನ್ನ,ಸಾವಿರಾರು ಭಕ್ತರು ಭಾಗಿ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುರ್ ಮಾಸ ಪ್ರಯುಕ್ತ ಡಿ.16ರಿಂದ ಧನು ಪೂಜೆ ಆರಂಭಗೊಂಡಿದ್ದ ಜ.14ರಂದು ಸಮಾಪ್ತಿಯಾಯಿತು.ಇಂದು (ಮಂಗಳವಾರ) ಮಕರ ಸಂಕ್ರಾತಿಯಂದು ಧನುರ್ ಮಾಸದ ಕೊನೆಯ ಧನುಪೂಜೆ ನಡೆಯಿತು.ಧನುಪೂಜೆಯ ಮೊದಲು ಭಜನಾ ಸತ್ಸಂಗ ,ನ್ರತ್ಯ ಭಜನೆ ನಡೆಯಿತು.ಧನುಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ‌ ಹಾಗೂ ಪರ ಊರಿನ ಸಾವಿರಾರು ಭಕ್ತರು ಧನು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಧನುಪೂಜೆ ಸಂಪನ್ನ,ಸಾವಿರಾರು ಭಕ್ತರು ಭಾಗಿ Read More »

ಗುತ್ತಿಗಾರು : ದೈವಸ್ಥಾನದಿಂದ ಹುಂಡಿ ಕಳವು

ಗುತ್ತಿಗಾರಿನ ಮುತ್ತಪ್ಪ ತಿರುವಪ್ಪ ದೈವಸ್ಥಾನದಿಂದ ಹುಂಡಿ ಕಳ್ಳತನವಾದ ಘಟನೆ ವರದಿವಾಗಿದೆ.ಸೋಮವಾರ ತಡರಾತ್ರಿ ಕಳ್ಳತನ ನಡೆದಿರುವುದಾಗಿ ತಿಳಿದು ಬಂದಿದೆ.ಗುತ್ತಿಗಾರಿನ ಗಣೇಶ್ ಅವರ ತರಕಾರಿ ಅಂಗಡಿ, ದೈವಸ್ಥಾನದ ಒಳಭಾಗದ ದೊಡ್ಡ ಹುಂಡಿ ಕಳ್ಳತನಕ್ಕೂ ಯತ್ನಿಸಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುತ್ತಿಗಾರು : ದೈವಸ್ಥಾನದಿಂದ ಹುಂಡಿ ಕಳವು Read More »

ಏಪ್ರಿಲ್, ಮೇನಲ್ಲಿ ಜಿಪಂ, ತಾಪಂ ಚುನಾವಣೆ ಆಯುಕ್ತರಿಂದ ಮಾಹಿತಿ

ಜಿಪಂ, ತಾಪಂ ಚುನಾವಣೆ ನಡೆದಿಲ್ಲ. ಮೀಸಲಾತಿ ಅಂತಿಮ ಪಟ್ಟಿ ಕೈಸೇರುತ್ತಿದ್ದಂತೆ ವೇಳಾಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ನಿಗದಿ ಮಾಡುತ್ತೇವೆ ಎಂದು ರಾಜ್ಯ ಚುನಾವಣೆ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು. ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಮಾತನಾಡಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ಸಂಬಂಧಪಟ್ಟ ರಾಜಕೀಯ ಪಕ್ಷಗಳ ಜತೆಗೆ ಸಭೆ ಮಾಡಿದ ಬಳಿಕ ತೀರ್ಮಾನ ಮಾಡುತ್ತೇವೆ ಎಂದರು. ಇತ್ತೀಚೆಗೆ ಚುನಾವಣೆಗಳ ಫಲಿತಾಂಶದ

ಏಪ್ರಿಲ್, ಮೇನಲ್ಲಿ ಜಿಪಂ, ತಾಪಂ ಚುನಾವಣೆ ಆಯುಕ್ತರಿಂದ ಮಾಹಿತಿ Read More »

ಮತ್ತೆ ಸೈಕ್ಲೋನ್ ಎಫೆಕ್ಟ್: ಕರ್ನಾಟಕ ಸೇರಿ ಹಲವೆಡೆ ಮಳೆ ಮುನ್ಸೂಚನೆ

ಚಂಡಮಾರುತ ಹಿನ್ನೆಲೆ, ಇಂದಿನಿಂದ ಜನವರಿ 16 ರವರೆಗೆ ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಪೂರ್ವ ಉತ್ತರ ಪ್ರದೇಶ, ಛತ್ತೀಸ್‌ಗಢದಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮತ್ತೆ ಸೈಕ್ಲೋನ್ ಎಫೆಕ್ಟ್: ಕರ್ನಾಟಕ ಸೇರಿ ಹಲವೆಡೆ ಮಳೆ ಮುನ್ಸೂಚನೆ Read More »

ಐವರ್ನಾಡು : ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಲಾಭಂಶ ವಿತರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ಳಾರೆ ವಲಯ ಐವರ್ನಾಡು ಪಾಲೆ ಪಾಡಿ ದೇವರ ಖಾನ ಒಕ್ಕೂಟದ ಮತ್ತು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ವತಿಯಿಂದ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಂಘಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪಂಚಲಿಂಗೇಶ್ವರ ದೇವಸ್ಥಾನನದಲ್ಲಿ ಬಿಡುಗಡೆ ಮಾಡಲಾಯಿತು02.02.2025 ಭಾನುವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರನಾಡು ಸಭಾಭವನದಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘಗಳಿಗೆ ಲಾಭಾಂಶ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು

ಐವರ್ನಾಡು : ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಲಾಭಂಶ ವಿತರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಪ್ರಥಮ

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಭಾಗವಹಿಸಿ ಶಾಟ್ ಪುಟ್ ನಲ್ಲಿ ಪ್ರಥಮಾ ಡಿಸ್ಕಸ್ ತ್ರೋ ನಲ್ಲಿ ದ್ವಿತೀಯ ಹೆಮರ್ ತ್ರೋ ನಲ್ಲಿ ತೃತೀಯ ಪಡೆದು ತಾಲೂಕಿನ ಹೆಮ್ಮೆಯ ಕ್ರೀಡಾಪಟುವಾಗಿ ಹೊರ ಹೊಮ್ಮಿದ್ದಾರೆ.ಇವರು ದಿವಂಗತ ಚಿನ್ನಪ್ಪ ಗೌಡ ಮತ್ತು ಪುಷ್ಪಲತ ದೊಡ್ಡಿಹಿತ್ಲು ಇವರ ಪುತ್ರಿಯಾಗಿದ್ದು ಉಳುವಾರು ಕೆಎಸ್ಆರ್ಟಿಸಿ ಪವನ್ ಅವರ ಧರ್ಮಪತ್ನಿ ಯಾಗಿದ್ದಾರೆ.ಪ್ರಸ್ತುತ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ

ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಪ್ರಥಮ Read More »

error: Content is protected !!
Scroll to Top