January 2025

ಪೆರುವಾಜೆ : ಜಾತ್ರೋತ್ಸವ ಆರಂಭ

ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ರಾತ್ರಿ ಧ್ವಜಾರೋಹಣಗೊಳ್ಳುವ ಮೂಲಕ ಜಾತ್ರೋತ್ಸವ ಪ್ರಾರಂಭವಾಗಿದೆ.ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಉಪಸ್ಥಿತಿಯಲ್ಲಿ ರಾತ್ರಿ ದೇವತಾ ಪ್ರಾರ್ಥನೆ ಬಳಿಕ ಧ್ವಜಾರೋಹಣ ನಡೆಯಿತು. ನಂತರ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ,ಶ್ರೀ ಭೂತ ಬಲಿ ನಡೆಯಿತು ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ […]

ಪೆರುವಾಜೆ : ಜಾತ್ರೋತ್ಸವ ಆರಂಭ Read More »

ಬೈಕ್ ಅಪಘಾತದಲ್ಲಿ 10 ನೇ ತರಗತಿಯ ವಿದ್ಯಾರ್ಥಿ ಸಾವು

ಬೈಕೊಂದು ಸವಾರನ ನಿಯಂತ್ರಣ ಕಳೆದುಕೊಂಡು ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಕಡಬ ತಾಲೂಕಿನ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ.ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎಂದು ಗುರುತಿಸಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ,

ಬೈಕ್ ಅಪಘಾತದಲ್ಲಿ 10 ನೇ ತರಗತಿಯ ವಿದ್ಯಾರ್ಥಿ ಸಾವು Read More »

ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ : ಪೀಟರ್‌ ಪೌಲ್ ಸಲ್ದಾನಾ

ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆ ಕಾರಣದಿಂದಲೇ ಪೋಷಕರ ಅಭಿಮಾನಕ್ಕೆ ಪಾತ್ರವಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಬೆಳೆಯುತ್ತಿವೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಹಾಗೂ ಮಂಗಳೂರು ಕೆಥೋಲಿಕ್ ಬೋರ್ಡ್ ಅಧ್ಯಕ್ಷ ರೆ.ಫಾ. ಡಾ.ಪೀಟರ್‌ ಪೌಲ್ ಸಲ್ದಾನಾ ಹೇಳಿದರು.ಸುಳ್ಯದ ಸಂತ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ರಜತ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ

ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ : ಪೀಟರ್‌ ಪೌಲ್ ಸಲ್ದಾನಾ Read More »

ಭರತನಾಟ್ಯ ಜ್ಯೂನಿಯ‌ರ್ ವಿಭಾಗದ ಪರೀಕ್ಷೆಯಲ್ಲಿ ಗಾನವಿಗೆ ಡಿಸ್ಟಿಂಕ್ಷನ್

ಪುತ್ತೂರು ತಾಲೂಕಿನ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ 6 ನೇ ತರಗತಿ ವಿದ್ಯಾರ್ಥಿನಿ ಗಾನವಿ ಎಚ್ ರವರು ಭರತನಾಟ್ಯ ಜ್ಯೂನಿಯ‌ರ್ ವಿಭಾಗದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ.ಪುತ್ತೂರು ಕ್ಯಾಂಪ್ಕೊ ಚಾಕಲೇಟ್ ಪ್ಯಾಕ್ಟರಿಯ ಉದ್ಯೋಗಿ, ನಿವೃತ್ತ ಸೈನಿಕ ಗಣೇಶ್ ನರಿಮೊಗರು ಮತ್ತು ಸಂಗೀತ ಶಿಕ್ಷಕಿ ಜಾಸ್ಮಿನ್ ಯು ನರಿಮೊಗರುರವರ ಪುತ್ರಿಯಾಗಿರುವ ಗಾನವಿ ಎಚ್ ರವರು ಕುದ್ಮಾಡಿ ನಯನಾ ವಿ.ರೈ ಮತ್ತು ಸ್ವಸ್ತಿಕ್ ಆರ್ ಶೆಟ್ಟಿ ರವರ ಶಿಷ್ಯೆಸವಣೂರು ನಿವ್ರತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಉಳುವಾರು ಜಯಪ್ಪ ಹಾಗೂ ವಿಮಲ ದಂಪತಿಯ ಮೊಮ್ಮಗಳು.

ಭರತನಾಟ್ಯ ಜ್ಯೂನಿಯ‌ರ್ ವಿಭಾಗದ ಪರೀಕ್ಷೆಯಲ್ಲಿ ಗಾನವಿಗೆ ಡಿಸ್ಟಿಂಕ್ಷನ್ Read More »

ಸುಳ್ಯ : ಬಿಜೆಪಿ ಸಂಘಟನಾ ಪರ್ವ ಸಭೆ

ಸುಳ್ಯ ಬಿಜೆಪಿ ಸಂಘಟನಾ ಪರ್ವ ಸಭೆ ಸುಳ್ಯದ ಕಛೇರಿಯಲ್ಲಿ ನಡೆಯಿತು. ಸುಳ್ಯ ಮಂಡಲದ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅವರನ್ನು ಆಯ್ಕೆಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ, ಮಾನ್ಯ ಸಂಸದರಾದ ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಎಸ್ ಅಂಗಾರ,ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪಕ್ಷದ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ : ಬಿಜೆಪಿ ಸಂಘಟನಾ ಪರ್ವ ಸಭೆ Read More »

ಹೆಂಡತಿಯ ಸಿಟ್ಟು ತಲೆಗೆ ಏರಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಹೆಂಡತಿ

ಗಂಡ ಹೆಂಡತಿ ನಡುವೆ ಹೊಡೆದಾಡವಾಗಿ ಪತ್ನಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಪರಿಣಾಮ ಗಾಯವಾದ ಘಟನೆ ವರದಿಯಾಗಿದೆ.ಪೆರಾಜೆಯ ದಾಸರಹಿತ್ತು ಎಂಬಲ್ಲಿ ಗಂಡ ಮದ್ಯಪಾನ ಮಾಡಿ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದನೆನ್ನಲಾಗಿದೆ. ಪರಿಣಾಮ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಅದು ಹೊಡೆದಾಟವಾಯಿತು. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡರು.ಹೆಂಡತಿ ಸೌಟು ಬೀಸಿದಾಗ ಅದು ಗಂಡನ ತಲೆಗೆ ಬಡಿಯಿತು. ಪರಿಣಾಮವಾಗಿ ತಲೆಯಲ್ಲಿ ಗಾಯವಾಗಿ ರಕ್ತ ಚಿಮ್ಮಿತು.ಈ ವಿಷಯ ಅಕ್ಕ ಪಕ್ಕದ ಮನೆಯವರು ಬಂದು ನೋಡಿ ಗಂಡ ಹೆಂಡತಿಯನ್ನು ಅವರಿಬ್ಬರನ್ನೂ ಉನೈಸ್ ಪೆರಾಜೆಯವರು ತಮ್ಮ

ಹೆಂಡತಿಯ ಸಿಟ್ಟು ತಲೆಗೆ ಏರಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಹೆಂಡತಿ Read More »

ಆಟವಾಡುತ್ತಿದ್ದಾಗ ಯುವಕ ಕುಸಿದು ಬಿದ್ದು ಸಾವು

ಮಂಗಳೂರು ಅತ್ತಾವರ ಐವರಿ ಟವರ್‌ ನಿವಾಸಿಯಾಗಿದ್ದ ಶರೀಫ್‌ ಅವರ ಪುತ್ರ ಶಹೀಮ್‌ (20) ಆಟವಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಫಳ್ನೀರ್‌ನಲ್ಲಿ ಬುಧವಾರ ಸಂಭವಿಸಿದೆ.ಈತ ಬುಧವಾರ ಸಂಜೆ ಗೆಳೆಯರ ಜತೆ ಶಟ್ಲ್ ಆಟವಾಡುತ್ತಿದ್ದಾಗ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ. ಅಷ್ಟರಲ್ಲೇ ಮೃತಪಟ್ಟಿದ್ದರು. ಅಲೋಶಿಯಸ್‌ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದರು.

ಆಟವಾಡುತ್ತಿದ್ದಾಗ ಯುವಕ ಕುಸಿದು ಬಿದ್ದು ಸಾವು Read More »

ರಜತ ಸಂಭ್ರಮದಲ್ಲಿ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ

ವಿದ್ಯೆ ಎನ್ನುವುದು ಸಾಮಾನ್ಯ ಮನುಷ್ಯನನ್ನು ಮೃಗತ್ವದಿಂದ ದೈವತ್ವಕ್ಕೆ ಎತ್ತುವ ಒಂದು ಸಾಧನ. ಶಿಕ್ಷಣ ಸಂಸ್ಥೆಗಳು ಜಾಗೃತ ಮತ್ತು ತಿಳುವಳಿಕೆಯುಳ್ಳ  ನಿರ್ಧಾರಗಳನ್ನು ತೆಗೆದುಕೊಳ್ಳುವ, ಜವಾಬ್ದಾರಿಯುತ ನಾಗರಿಕನನ್ನು ಸೃಷ್ಟಿಸುವಮಹತ್ತಾದ ಜವಾಬ್ದಾರಿಯನ್ನು ಹೊಂದಿವೆ. ಪಡೆದಂತಹ ತಿಳುವಳಿಕೆಗಳು ನಡವಳಿಕೆಗಳಾದಾಗ ಶಿಕ್ಷಣ ಸಂಸ್ಥೆಗಳು ಸಾರ್ಥಕತೆಯನ್ನು ಪಡೆಯುತ್ತವೆ. ಸುಳ್ಯ ಇಂದು ಜಾಗತಿಕ ಭೂಪಟದಲ್ಲಿ ಗುರುತಿಸಲ್ಪಟ್ಟಿದೆ ಎಂದರೆ ಅದಕ್ಕೆ ಕಾರಣಕರ್ತರು ಸುಳ್ಯದ ಶಿಕ್ಷಣ ಬ್ರಹ್ಮ ಎಂದು ಕರೆಯಲ್ಪಡುವ ಆಧುನಿಕ ಸುಳ್ಯದ ನಿರ್ಮಾತೃ ಪೂಜ್ಯರಾದ ದಿ. ಡಾ.ಕುರುಂಜಿ ವೆಂಕಟರಮಣ ಗೌಡರು. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ವೈದ್ಯಕೀಯ

ರಜತ ಸಂಭ್ರಮದಲ್ಲಿ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ Read More »

ಗೋಣಿಕೊಪ್ಪದ ಪುಟ್ಟ ಬಾಲೆಗಾಗಿ ಮಿಡಿದ ಸುಳ್ಯ ದ ಹೃದಯಗಳು

ಕೊಡಗು ಜಿಲ್ಲೆಯ ಗೋಣಿಕೊಪ್ಪದಿಂದ ಪುಟ್ಟ ಬಾಲೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಅತೀ ಕಡಿಮೆ ಅವಧಿಯಲ್ಲಿ ತಲುಪಿಸುವಲ್ಲಿ ಸುಳ್ಯ ತಾಲೂಕು ಅಂಬುಲನ್ಸ್ ಮಾಲಕರ ಹಾಗೂ ಚಾಲಕರ ಸಂಘ ನೆರವಾಯಿತು, ಸುಳ್ಯ ಗಡಿಪ್ರದೇಶವಾದ ಕೊಯನಾಡುವಿನಿಂದ ಜಾಲ್ಸೂರು ವರೆಗೆ ಸಂಘದ ವಿವಿಧ ವಾಹನಗಳು ಬೆಂಗಾವಲಾಗಿ ಸಂಚರಿಸಿತು, ಸಂಘದ ಈ ಕಾರ್ಯಾಚರಣೆಯಲ್ಲಿ ಸುಳ್ಯದ ಸಮಾನ ಮನಸ್ಕ ಹೃದಯಗಳು ಆ ಬಾಲೆಗಾಗಿ ಮಿಡಿದವು, ಸುಳ್ಯ ದ ಮುಖಾಂತರ ಅಂಬುಲನ್ಸ್ ಚಲಿಸಲಿದೆ ಎಂಬ ಮಾಹಿತಿ ತಿಳಿದ ತಕ್ಷಣ ತಾಲೂಕಿನ ಹಲವು ಜನರು ಆ ಬಾಲೆಯ

ಗೋಣಿಕೊಪ್ಪದ ಪುಟ್ಟ ಬಾಲೆಗಾಗಿ ಮಿಡಿದ ಸುಳ್ಯ ದ ಹೃದಯಗಳು Read More »

ನಾಪತ್ತೆಯಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಪತ್ತೆ! ಎಲ್ಲಿ ಪತ್ತೆಯಾದರು ಇಲ್ಲಿದೆ ಮಾಹಿತಿ ನೋಡಿ

ಆಲೆಟ್ಟಿ ಗ್ರಾಮದಿಂದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳು ಅವರ ತಾಯಿ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿಯ ಕಟಪಾಡಿಯಲ್ಲಿರುವ ಮಹಿಳೆಯ ತಾಯಿ ಮನೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಹೇಳಲಾಗಿದೆ.

ನಾಪತ್ತೆಯಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಪತ್ತೆ! ಎಲ್ಲಿ ಪತ್ತೆಯಾದರು ಇಲ್ಲಿದೆ ಮಾಹಿತಿ ನೋಡಿ Read More »

error: Content is protected !!
Scroll to Top