December 2025

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಲ್ಲಿದ್ದ ಮಗು ಬಾವಿಗೆ ಬಿದ್ದು ಸಾವು

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಿಂದ ಮಗು ಆಯತಪ್ಪಿ ಜಾರಿ ಬಾವಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ನಡೆದಿದೆ.ಮೃತ ಮಗುವನ್ನು ಕೀರ್ತನಾ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ನಯನಾ ಕರ್ಕಡ ಅವರು ಮನೆ ಸಮೀಪದ ಬಾವಿಯಿಂದ ನೀರು ಎಳೆಯುತ್ತಿದ್ದಾಗ ಈ ರ್ಘಟನೆ ನಡೆದಿದೆ.ಕೂಡಲೇ ತಾಯಿ ನಯನಾ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಗುವನ್ನು ಹೊರತೆಗೆದರಾದರೂ, ಅದಾಗಲೇ ಮಗು ಮೃತಪಟ್ಟಿತ್ತು.ಘಟನಾ ಸ್ಥಳಕ್ಕೆ ಉಡುಪಿ ನಗರ ಠಾಣಾ ಪಿಎಸ್‌ ಐ ಭರತೇಶ್ ಕಂಕಣವಾಡಿ ಭೇಟಿ ನೀಡಿ […]

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಲ್ಲಿದ್ದ ಮಗು ಬಾವಿಗೆ ಬಿದ್ದು ಸಾವು Read More »

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಪ್ರತಿಭೋತ್ಸವ

ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರಸೂಸಲು ಸೂಕ್ತ ವೇದಿಕೆಯೇ ಪ್ರತಿಭೋತ್ಸವ: ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪಠ್ಯ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೊರಸೂಸುವುದಕ್ಕೆ ಪ್ರತಿಭೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಶಾಲಾ ಸಂಚಾಲಕ ಸದಾನಂದ ಮಾವಜಿ ಹೇಳಿದರು. ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್ , ಎಸ್. ಡಿ.ಎಂ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಪ್ರತಿಭೋತ್ಸವ Read More »

ಪಂಜ : ಡಿ.21ಕ್ಕೆ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ ಪೂರ್ವಭಾವಿ ಸಭೆ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ-2026ರ ಪೂರ್ವಭಾವಿ ಸಭೆಯು ಡಿ.21 ರಂದು ಸಂಜೆ ಗಂಟೆ 4.30ಕ್ಕೆ ದೇಗುಲದಲ್ಲಿ ನಡೆಯಲಿದೆ ಎಂದು ದೇವಳದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ತಿಳಿಸಿದ್ದಾರೆ.ಈ ಸಭೆಗೆ ಸೀಮೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ.

ಪಂಜ : ಡಿ.21ಕ್ಕೆ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಸುಳ್ಯದ ಹಿರಿಯ ಉದ್ಯಮಿ ಸುದೇಶ್ ಶೆಟ್ಟಿ ನಿಧನ

ಸುಳ್ಯದ ಹಿರಿಯ ಉದ್ಯಮಿ ಸುದರ್ಶನ ಕೃಷಿ ಏಜೆನ್ಸಿ ಮಾಲಕ ಸುದೇಶ್ ಕುಮಾರ್ ಶೆಟ್ಟಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.16 ರಂದು ನಿಧನರಾದರು.ಅವರಿಗೆ 56 ವರ್ಷ ಪ್ರಾಯವಾಗಿತ್ತುಮೃತರು ಪತ್ನಿ ಅಕ್ಷತಾ ಎಸ್. ಶೆಟ್ಟಿ, ಪುತ್ರರಾದ ಸಮನ್ಯು ಮತ್ತು ಶುಶಾನ್ ರನ್ನು ಅಗಲಿದ್ದಾರೆ ಮೃತರ ಅಂತಿಮ ದರ್ಶನ ಇಂದು ಮಧ್ಯಾಹ್ನ 1 ಗಂಟೆಗೆ ಬೀರಮಂಗಲ ಮನೆಯಲ್ಲಿ ನಡೆಯಲಿದೆ ಕುಟುಂಬದವರು ತಿಳಿಸಿದ್ದಾರೆ.

ಸುಳ್ಯದ ಹಿರಿಯ ಉದ್ಯಮಿ ಸುದೇಶ್ ಶೆಟ್ಟಿ ನಿಧನ Read More »

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 1082 ಲಕ್ಷ ರೂ ಅನುದಾನ ಬಿಡುಗಡೆ.

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸುಳ್ಯ ಕ್ಷೇತ್ರದ 21 ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ (SDMF) ನಿಧಿಯಿಂದ ಅನುದಾನ1082ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಈ ನಿಧಿಯಿಂದ ವಿಶೇಷವಾಗಿ ನೆಲ್ಯಾಡಿ ಗ್ರಾಮದ ಬೈಲು-ಕುತ್ಯಾಡಿ ಸೇತುವೆಗೆ 60ಲಕ್ಷ ರೂ ಮತ್ತು ಆಲಂಕಾರು ಗ್ರಾಮದ ಕಕ್ವೆ ರಸ್ತೆ ಮರುನಿರ್ಮಾಣಕ್ಕೆ 50ಲಕ್ಷ ರೂ ಹಾಗೂ ಸುಳ್ಯ ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆಗಳು ಹಾಗೂ ತಡೆಗೊಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ ಎಂದು ತಿಳಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 1082 ಲಕ್ಷ ರೂ ಅನುದಾನ ಬಿಡುಗಡೆ. Read More »

ಡಿ.26ರಿಂದ ಡಿ.28ರ ತನಕ ತೊಡಿಕಾನ ಪಡ್ಪು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸ ಡಿ.26ರಿಂದ ಡಿ.28ರ ತನಕ ನಡೆಯಲಿದೆ ಎಂದು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಕೆ ನಾರಾಯಣ ಕುಂಟುಕಾಡು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸ್ವಸ್ತಿ। ಶ್ರೀ ವಿಶ್ವಾವಸು ಸಂವತ್ಸರದ ಧನುರ್ ಮಾಸ ೧೦. ಸಲುವ ತಾರೀಕು 28-12-2025ನೇ ರವಿವಾರ ಪೂರ್ವಾಹ್ನ 7.00ರಿಂದ 8.00 ರ ತನಕ ಜರುಗುವ ಧನುರ್ ಲಗ್ನದ ಸುಮುಹೂರ್ತದಲ್ಲಿ ಆಲೆಟ್ಟಿ ಶ್ರೀ ವಿಷ್ಣುಮೂರ್ತಿ ದೈವದ ಪ್ರಧಾನ ಅರ್ಚಕರಾದ ಕುರಿಂಜ ತರವಾಡಿನ ಶ್ರೀ

ಡಿ.26ರಿಂದ ಡಿ.28ರ ತನಕ ತೊಡಿಕಾನ ಪಡ್ಪು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

ತೊಡಿಕಾನ : ಮಲ್ಲಿಕಾರ್ಜುನ ‌ದೇವಳದಲ್ಲಿ ಧನುಪೂಜೆ ಆರಂಭ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಲ್ಲಿ ಇಂದಿನಿಂದ ( ಡಿ.16) ಧನು ಪೂಜೆ ಶ್ರದ್ದಾ ಭಕ್ತಿಯಿಂದ ಅರಂಭಗೊಂಡಿದೆ.ಧನು ಪೂಜೆಯ ಅಂಗವಾಗಿ ದೇವಳದಲ್ಲಿ ದಿನ ನಿತ್ಯ ಭಜನಾ ಸತ್ಸಂಗ ನಡೆಯುತ್ತಿದ್ದುಧನು ಪೂಜಾ ಪ್ರಥಮ ದಿನದಂದುಮಹಾ ವಿಷ್ಣು ಭಜನಾ ತಂಡ ಕಾಯರ್ತೋಡಿಯವರಿಂದ ಭಜನಾ ಸೇವೆ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ಸಿಬ್ಬಂದಿಗಳು ಸೀಮೆಯ ಭಕ್ತರು ನೂರಾರು ಸಂಖ್ಯೆಯಲ್ಲಿ ಪೂಜೆಯ ಲ್ಲಿ ಭಾಗವಹಿಸಿದರು.

ತೊಡಿಕಾನ : ಮಲ್ಲಿಕಾರ್ಜುನ ‌ದೇವಳದಲ್ಲಿ ಧನುಪೂಜೆ ಆರಂಭ Read More »

ಕಬ್ಬಡ್ಡಿ ಆಟಗಾರನ ಮೇಲೆ ಗುಂಡಿನ ದಾಳಿ: ಸ್ಥಳದಲ್ಲೆ ಸಾವು

ಡಿಸೆಂಬರ್ 15 ರಂದು ಮೊಹಾಲಿಯ ಬೆಡ್ವಾನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ 4 ದಿನಗಳ ಪಂದ್ಯಾವಳಿಯ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ದಾಳಿಕೋರನೊಬ್ಬ ಕಬಡ್ಡಿ ಆಟಗಾರ ರಾಣಾ ಬಾಲಚೌರಿ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಣಾ ಬಾಲಚೌರಿ ಮೃತಪಟ್ಟಿದ್ದಾರೆ. ಗುಂಡು ಹಾರಿಸಿದ ನಂತರ ದಾಳಿಕೋರ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಪಂಜಾಬ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಬ್ಬಡ್ಡಿ ಆಟಗಾರನ ಮೇಲೆ ಗುಂಡಿನ ದಾಳಿ: ಸ್ಥಳದಲ್ಲೆ ಸಾವು Read More »

ಅರಂತೋಡು : ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ನೂರಾರು ಭಕ್ತರಿಂದ ಕೊರಗಜ್ಜ ದೈವಕ್ಕೆ ಅಗೆಲು ಸೇವೆ ಸಮರ್ಪಣೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ಡಿ 15ರಂದು ಸಂಕ್ರಮಣದಂದು ಕೊರಗಜ್ಜ ದೈವಕ್ಕೆ ಅಗೇಲು ಸೇವೆ ಸಮರ್ಪಣೆ ನಡೆಯಿತು. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ನೂರಾರು ಭಕ್ತರು ಕೊರಗಜ್ಜನಿಗೆ ಅಗೇಲು ಸೇವೆ ಸಮರ್ಪಿಸಿ ದರು. .

ಅರಂತೋಡು : ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ನೂರಾರು ಭಕ್ತರಿಂದ ಕೊರಗಜ್ಜ ದೈವಕ್ಕೆ ಅಗೆಲು ಸೇವೆ ಸಮರ್ಪಣೆ Read More »

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಭಜನಾ ಸತ್ಸಂಗ ಕಾರ್ಯ ಕ್ರಮ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘ ತೊಡಿಕಾನ ಇವರ ನೇತ್ರತ್ವದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಭಜನಾ ರಂಗಪೂಜೆಯ ಪ್ರಯುಕ್ತ ತಾಲೂಕಿನ ವಿವಿಧ ಭಜನಾ ಸಂಘಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ.ಬೆಳಿಗ್ಗೆ ಪೂಜೆಯಿಂದ ರಾತ್ರಿ ಪೂಜೆ ಗಂಟೆ 7-00ರ ತನಕ ಊರ ಮತ್ತು ಪರವೂರ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮ ಜರಗಲಿರುವುದು. ಭಕ್ತಾಧಿಗಳು ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ, ಶ್ರೀ ದೇವದ ಕೃಪೆಗೆ ಪಾತ್ರರಾಗಬೇಕಾಗಿ ಭಜನಾ ಸಂಘದವರು ವಿನಂತಿಕೊಂಡಿದ್ದಾರೆ.

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಭಜನಾ ಸತ್ಸಂಗ ಕಾರ್ಯ ಕ್ರಮ Read More »

error: Content is protected !!
Scroll to Top