January 2026

ರಿಕ್ಷಾ ಕಾರು ಅಪಘಾತ,ರಿಕ್ಷಾ ಚಾಲಕ ಮೃತ್ಯು

ಕೊಡಗು ಸಂಪಾಜೆ ಪೆಟ್ರೋಲ್ ಬಂಕಿನ ಸಮೀಪದಲ್ಲಿ ರಿಕ್ಷಾ ಕಾರು ಅಪಘಾತವಾಗಿ ರಿಕ್ಷಾಕ್ಕೆ ಕಾರು ಗುದ್ದಿದ ಪರಿಣಾಮ ರಿಕ್ಷಾ ಪಲ್ಟಿಯಾದ ಸಂಧರ್ಭ ಟಿಪ್ಪರ್ ಲಾರಿ ಹತ್ತಿ ರಿಕ್ಷಾ ಚಾಲಕ ಸುಂದರ ರವರು ಮೃತಪಟ್ಟ ಘಟನೆ ಜ.29ರಂದು ವರದಿಯಾಗಿದೆ.ರಿಕ್ಷಾದಲ್ಲಿದ್ದ ಪ್ರಯಾಣಿಕರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ರಿಕ್ಷಾ ಕಾರು ಅಪಘಾತ,ರಿಕ್ಷಾ ಚಾಲಕ ಮೃತ್ಯು Read More »

ತೊಡಿಕಾನ : ಪಾಷಾಣಮೂರ್ತಿ ದೈವದ ಕೋಲ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಒಳಪಟ್ಟ ಶ್ರೀ ಪಾಷಾನಮೂರ್ತಿ ಅಮ್ಮನವರ ಕಾಲಾವಧಿ ಕೋಲ ಜ.27ರಂದು ದೈವಸ್ಥಾನದಲ್ಲಿ ನಡೆಯಿತು.ಮೊದಲಿಗೆ ಕಲ್ಕುಡ ದೈವದ ಕೋಲ ನಡೆದು ಪಾಷಾಣಮೂರ್ತಿ ದೈವದ ಕೋಲ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು,ಸದಸ್ಯರು ಮಾಜಿ ಅಧ್ಯಕ್ಷರು ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು.ಪೆ.3ರಂದು ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ ನಡೆಯಲಿದೆ.

ತೊಡಿಕಾನ : ಪಾಷಾಣಮೂರ್ತಿ ದೈವದ ಕೋಲ Read More »

ಸುಳ್ಯ : ವೈಭವದಿಂದ ನಡೆದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ದರ್ಶನ ಬಲಿ

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಜ. 28 ರಂದು ಶ್ರೀ ದೇವರ ದರ್ಶನ ಬಲಿ ಹಾಗೂ ಬಟ್ಟಲು ಕಾಣಿಕೆ ಪ್ರಸಾದ ಶ್ರದ್ಧಾ ಭಕ್ತಿಯಿಂದ ಜರುಗಿತು.ಬಳಿಕ ಶ್ರೀ ದೇವರಿಗೆ ಮಹಾಪೂಜೆ ನೆರವೇರಿತು.ಈ ಸಂದರ್ಭದಲ್ಲಿ ಊರ ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಬಳಿಕ ಆಗಮಿಸಿದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಸಮಿತಿ ಪದಾಧಿಕಾರಿಗಳು ಮಾಜಿ ಅಧ್ಯಕ್ಷರು ಸದಸ್ಯರು, ಭಗವದ್ದ ಕ್ತರು

ಸುಳ್ಯ : ವೈಭವದಿಂದ ನಡೆದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ದರ್ಶನ ಬಲಿ Read More »

ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್’ ಸೇರಿ 6 ಮಂದಿ ದುರ್ಮರಣ

ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್’ ಸೇರಿ 6 ಮಂದಿ ದುರ್ಮರಣ Read More »

ಭಾರೀ ಗಾಳಿ: ಮೀನುಗಾರರು ಮುನ್ನೆಚ್ಚರಿಕೆ ವಹಿಸಲು ಸೂಚನೆ

ಜನವರಿ 27 ರಿಂದ 31 ರವರೆಗೆ ಅರಬ್ಬಿ ಸಮುದ್ರದಲ್ಲಿ ಭಾರೀ ಗಾಳಿ ಬೀಸುವ ನಿರೀಕ್ಷೆಯಿದ್ದು, ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ನಾಡದೋಣಿ ಮೀನುಗಾರರು ಸೇರಿದಂತೆ ಎಲ್ಲಾ ಮೀನುಗಾರರಿಗೆ ಮೀನುಗಾರಿಕೆ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಹೆಚ್ಚಿನ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ.

ಭಾರೀ ಗಾಳಿ: ಮೀನುಗಾರರು ಮುನ್ನೆಚ್ಚರಿಕೆ ವಹಿಸಲು ಸೂಚನೆ Read More »

ಸುಳ್ಯ : ವೈಭವದಿಂದ ನಡೆದ ಮಹಾವಿಷ್ಣು ದೇವರ ಭೂತ ಬಲಿ ಉತ್ಸವ ಮತ್ತು ಕಟ್ಟೆ ಪೂಜೆ

ಸುಳ್ಯ ಕಾಯರರ್ತೋಡಿ ಮಹಾವಿಷ್ಣು ದೇವರ ಕಾಲಾವಧಿ ಜಾತ್ರೋತ್ಸವ ಜ.26ರಿಂದ ಆರಂಭಗೊಂಡಿದೆ‌.ಜ 27ರಂದು ದೇವಳದಲ್ಲಿ ರಾತ್ರಿ ಭೂತಬಲಿ ಉತ್ಸವ ಮತ್ತು ಕಟ್ಟೆ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮತ್ತು ಸದಸ್ಯರು,ಮಾಜಿ ಅಧ್ಯಕ್ಷ ಪಿ.ಕೆ ಉಮೇಶ ಮತ್ತು ಸದಸ್ಯರು,ಭಕ್ತಾಧಿಗಳು ಉಪಸ್ಥಿತರಿದ್ದರು.ಬೆಳಿಗ್ಗೆ ಗಣಪತಿ ಹವಣ ಹವನ ನಡೆದು ಉಗ್ರಾಣ ತುಂಬಿಸಲಾಯಿತು.ಬೆಳಿಗ್ಗೆ ಹಸಿರುವಾಣಿ ಮೆರವಣಿಗೆ ನಡೆಯಿತು.ತಂತ್ರಿಗಳ ಆಗಮನ,ಶುದ್ಧಿ ಕಲಶ,ತಲಾಭಾರ ಸೇವೆ,ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.

ಸುಳ್ಯ : ವೈಭವದಿಂದ ನಡೆದ ಮಹಾವಿಷ್ಣು ದೇವರ ಭೂತ ಬಲಿ ಉತ್ಸವ ಮತ್ತು ಕಟ್ಟೆ ಪೂಜೆ Read More »

ತೊಡಿಕಾನ ::ಶ್ರದ್ಧಾ ಭಕ್ತಿಯಿಂದ ನಡೆದ ಚಾಕಡೆಡಿ ನೇಮೋತ್ಸವ

ತೊಡಿಕಾನ ಮಲ್ಲಿಕಾರ್ಜುನ ದೇವರ ಪಟ್ಟದ ದೈವ -ಸೀಮೆ ದೈವ ರಾಜನ್ ದೈವ ( ಶಿರಾಡಿ ಭೂತ) ಪರಿವಾರ ದೈವಗಳ ಕೋಲಚಾಕಟೆಡಿ ನೇಮ ಜ.26ರಂದು ನಡೆಯಿತು.ಬೆಳಿಗ್ಗೆ : 5:00 ಗಂಟೆಗೆಮಲೆ ಉಳ್ಳಾಕುಲು ನೇಮ ನಡೆಯಿತು.ಬೆಳಿಗ್ಗೆ 10:00 ಗಂಟೆಯಿಂದ ರಾಜನ್ ದೈವ ( ಶಿರಾಡಿ ಭೂತ) ದ ಕೋಲ ನಡೆದುಬಳಿಕ ಬಟ್ಟಿಭೂತ, ಪುರುಷ ಭೂತ, ಕರಿ ಭೂತ, ಮಲೆ ಮುದ್ದ, ಶೆಟ್ಟಿ ಭೂತ ಮತ್ತು ಅಂಗಾರ ದೈವಗಳ ಕೋಲ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು,ಮಾಜಿ‌ ಅಧ್ಯಕ್ಷರು‌

ತೊಡಿಕಾನ ::ಶ್ರದ್ಧಾ ಭಕ್ತಿಯಿಂದ ನಡೆದ ಚಾಕಡೆಡಿ ನೇಮೋತ್ಸವ Read More »

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ದಿ. 26 ಜನವರಿ 2026ರಂದು ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರು ಶ್ರೀ .ಶುಭಕರ ಬಿ.ಸಿ ಹಾಗೂ ಸಂಚಾಲಕಿ ಶ್ರೀಮತಿ. ಗೀತಾಂಜಲಿ ಟಿ.ಜಿ ,ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧರಾದ ಹರಿಶ್ಚಂದ್ರ ಬೊಳುಗಲ್ಲು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪುಟಾಣಿಗಳಿಗೆ ಉಡುಗೊರೆಯನ್ನು ನೀಡಿ ಸಂತೈಸಿದರು. ಇದೇ ಶುಭ ಸಂದರ್ಭದಲ್ಲಿ ನಿವೃತ್ತ ಯೋಧರಾದ ಮುಖ್ಯ ಅತಿಥಿಗಳನ್ನು ಶಾಲಾ ಪರವಾಗಿ

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ Read More »

ಪಂಜ : ಬ್ರಹ್ಮ ರಥೋತ್ಸವದ ರಥ ಮುಹೂರ್ತ ಕಾರ್ಯಕ್ರಮ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಪ್ರಯುಕ್ತ ನಡೆಯುವ ಬ್ರಹ್ಮ ರಥೋತ್ಸವದ ರಥ ಮುಹೂರ್ತ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ಪ್ರಾರಂಭ ಮಾಡಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಬ್ರಹ್ಮ ರಥೋತ್ಸವ ವ್ಯವಸ್ಥೆಯ ಸಂಚಾಲಕರಾದ ಕುಮಾರ ಕಕ್ಯಾನ, ಪುತ್ಯ, ಸಂಪ ಚಿದ್ಗಲ್ ಹಾಗೂ ಕಕ್ಯಾನ ಬೈಲ್ ನವರು ಉಪಸ್ಥಿತರಿದ್ದರು.

ಪಂಜ : ಬ್ರಹ್ಮ ರಥೋತ್ಸವದ ರಥ ಮುಹೂರ್ತ ಕಾರ್ಯಕ್ರಮ Read More »

ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು : ರಾಜೇಶ್ ದೇವರಕಾನ

ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು ಎಂದು ಆರ್.ಎಸ್.ಎಸ್ ದಕ್ಷಿಣ ಪ್ರಾಂತ ಭೌದ್ದಿಕ್ ಪ್ರಮುಖ್ ರಾಜೇಶ್ ದೇವರಕಾನ ಹೇಳಿದರು.ಹಿಂದೂ ಸಂಗಮ ಅರoತೋಡು ಮಂಡಲ, ಪೆರಾಜೆ, ಅರಂತೋಡು, ತೊಡಿಕಾನ ಗ್ರಾಮದ ವತಿಯಿಂದ ಪೆರಾಜೆ ಜ್ಯೋತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ‌ ಅವರು ದಿಕ್ಸೂಜಿ ಭಾಷಣ ಮಾಡಿದರು.ಭಾರತ ದೇಶ ಪುರಾಣ ಮತ್ತು ವಿಜ್ಞಾನಗಳ ಸತ್ವದೊಂದಿಗೆ ಪ್ರಾಚೀನ ರಾಷ್ಟ್ರವಾಗಿದೆ.ನಮ್ಮ ದೇಶದ ಪರಂಪರೆ ಹಲವು ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದೆ.ರಾಷ್ಟ್ರೀಯ ಪ್ರಜ್ಞೆಗಳನ್ನು ಮೂಡಿಸಲು ವ್ಯಕ್ತಿಯಲ್ಲಿ ರಾಷ್ಟ್ರೀಯ ವಿಚಾರಗಳನ್ನು ಮೂಡಿಸಬೇಕು.ವ್ಯಕ್ತಿ

ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು : ರಾಜೇಶ್ ದೇವರಕಾನ Read More »

error: Content is protected !!
Scroll to Top