February 2026

ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಮದಕ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಸುಳ್ಯ ಪೋಲಿಸರು ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ ಬೈಕ್ ಹಾಗೂ ಕೋಳಿಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.ಸ್ಥಳದಲ್ಲಿದ್ದ 1 ಬೈಕ್ ಮತ್ತು 4 ಕೋಳಿಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಉಬರಡ್ಕ ಮಿತ್ತೂರು ಗ್ರಾಮದಮದಕ ಕೆ.ಎಫ್.ಡಿ.ಸಿ.ರಬ್ಬರ್ ಪ್ಲಾಂಟೇಷನ್ ಒಳಗೆ ಕೋಳಿ ಅಂಕ ನಡೆಯುತ್ತಿದ್ದಾಗ ಸುಳ್ಯ ಕ್ರೈಂ ಎಸ್. ಐ. ಸರಸ್ವತಿ ಯವರ ತಂಡ ದಾಳಿ ನಡೆಸಿತ್ತು.

ಕೋಳಿ ಅಂಕಕ್ಕೆ ಪೊಲೀಸ್ ದಾಳಿ Read More »

ಸುಳ್ಯಕ್ಕೆ ನೂತನ‌ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸಿದ್ದಪ್ಪ ಹರಗಿ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಯಮನೂರಪ್ಪ ಸಿದ್ದಪ್ಪ ಹರಗಿ (ವೈ.ಎಸ್.ಹರಗಿ) ಎಂಬವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ. ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಅವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ.ಅವರು ಫೆ.2ರಂದು ಅವರು ಸುಳ್ಯಕ್ಕೆ ಬಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.ಸುಳ್ಯ ತಾಲೂಕು ಕಳೆದ ಒಂದು ವರ್ಷದಿಂದ ಖಾಯಂ ಶಿಕ್ಷಣಾಧಿಕಾರಿಗಳಲ್ಲದೆ ಸಮಸ್ಯೆ ಎದುರಿಸುತ್ತಿದೆ.

ಸುಳ್ಯಕ್ಕೆ ನೂತನ‌ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸಿದ್ದಪ್ಪ ಹರಗಿ Read More »

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಕಲ್ಕುಡ ಕಲ್ಲುರ್ಟಿ ದೈವಗಳ ಕೋಲ

ಸುಳ್ಯದ ಗಾಂಧಿನಗರ ನಾವೂರು ಶ್ರೀ ಕಲ್ಕುಡ ಪರಿವಾರ ದೈವಸ್ಥಾನದಲ್ಲಿಶ್ರೀ ಕಲ್ಕುಡ- ಕಲ್ಲುರ್ಟಿ,ದೈವಗಳ ಕಾಲಾವಧಿ ನೇಮೋತ್ಸವವು ಮುಂಜಾನೆಫೆ.1ರಂದು ಜರುಗಿತು. ದೈವಸ್ಥಾನದ ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಪಿ. ಕೆ. ಉಮೇಶ್ ಮತ್ತು ಸದಸ್ಯರಾದ ಭಾಸ್ಕರ ಐಡಿಯಲ್, ಸೋಮನಾಥ ಪೂಜಾರಿ, ಕೇಶವ ನಾಯಕ್, ಹರೀಶ್ ಬೂಡುಪನ್ನೆ, ಪ್ರಕಾಶ್ ಹೆಗ್ಡೆ, ಪಿ. ಆರ್. ಚಂದ್ರಶೇಖರ, ಪ್ರಸಾದ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು,ಕೋಶಾಧಿಕಾರಿ ಅವಿನಾಶ್ ಕುರುಂಜಿ ಹಾಗೂ ಸಮಿತಿಯ ಸದಸ್ಯರು, ದೈವದ ಪೂಜಾರಿ ಮೋಹನ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಕಲ್ಕುಡ ಕಲ್ಲುರ್ಟಿ ದೈವಗಳ ಕೋಲ Read More »

error: Content is protected !!
Scroll to Top