August 18, 2026

ಛಾಯಾರತ್ನ” ಪ್ರಶಸ್ತಿಗೆ ಲೋಕೇಶ್ ಬಿ.ಎನ್ ಆಯ್ಕೆ

ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ ಬ್ರಹ್ಮಾವರ ವಲಯದ ಜಂಟಿ ಆಶ್ರಯದಲ್ಲಿ ನೀಡಲಾಗುವ ಪ್ರತಿಷ್ಠಿತ “ಛಾಯಾರತ್ನ” ಪ್ರಶಸ್ತಿಗೆ ಸುಳ್ಯ ವಲಯದ ಛಾಯಾಗ್ರಾಹಕರಾದ ಸುಬ್ರಹ್ಮಣ್ಯದ ಲೋಕೇಶ್.ಬಿ.ಎನ್ ಆಯ್ಕೆಯಾಗಿದ್ದಾರೆ. ನಾಳೆ ಆ.18ರಂದು ಬ್ರಹ್ಮಾವರದ ರೋಟರಿ ಸಭಾಭವನದಲ್ಲಿ ಎಸ್.ಕೆ.ಪಿ.ಎ ಬ್ರಹ್ಮಾವರ ವಲಯದ ಬೆಳ್ಳಿ ಹಬ್ಬದ ವರ್ಷದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುವರು.

ಛಾಯಾರತ್ನ” ಪ್ರಶಸ್ತಿಗೆ ಲೋಕೇಶ್ ಬಿ.ಎನ್ ಆಯ್ಕೆ Read More »

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಮೂರನೇ ವಾರ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ

ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರದಲ್ಲಿ ಆಗಸ್ಟ್ 2ರಂದು ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭಗೊoಡಿದ್ದು ಆ.16ರಂದು ಮೂರನೇ ವಾರ ತರಗತಿ ನಡೆಯಿತು.ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿಜೀಯವರು ತರಗತಿ ನಡೆಸಿ ಕೊಟ್ಟರು.ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಟಿ ಪ್ರಣವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌.ಪ್ರತೀ ಭಾನುವಾರ ಬೆಳಿಗ್ಗೆ ಗಂಟೆ 10ರಿಂದ 11ರ ತನಕ ತರಗತಿ ನಡೆಯಲಿದೆ.ಜಪ, ಧ್ಯಾನ, ಪ್ರಾಣಾಯಾಮದ ಅಭ್ಯಾಸ ಮಾಡಲು ಉಚಿತವಾಗಿ ತರಬೇತಿ ನೀಡಲಾಗುವುದು. ಇದಕ್ಕೆ ಜಾತಿ, ಮತ, ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ತರಗತಿಯಲ್ಲಿ ಭಾಗವಹಿಸಲು ಅವಕಾಶವಿದೆ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಮೂರನೇ ವಾರ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ Read More »

error: Content is protected !!
Scroll to Top