Author name: Tejas

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಇನ್ನಿಲ್ಲ

ಸಿಪಿಐ(ಎಂ) ನಾಯಕ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ಭೇಟಿಯಾದಾಗೆಲ್ಲ ದೇಶದ ರೈತರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದರು. ಈ ಸಮುದಾಯಗಳಿಗೆ ನ್ಯಾಯ ಕೊಡಿಸಲು ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದ ಬಯ್ಯಾರೆಡ್ಡಿಯವರು ಒಬ್ಬ ದಣಿವರಿಯದೆ ಇದ್ದ ಜನಪರ ಹೋರಾಟಗಾರ.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಇನ್ನಿಲ್ಲ Read More »

ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ

ಮಂಡೆಕೋಲಿನ ರೈತರ ಕೃಷಿ ತೋಟಕ್ಕೆ ಮೂರು ಕಾಡಾನೆಗಳು ಲಗ್ಗೆ ಇಟ್ಟ ಘಟನೆ ಸುಳ್ಯ ತಾಲೂಕಿನ ಗ್ರಾಮದ ಮಾವಂಜಿಯಿಂದ ವರದಿಯಾಗಿದೆ.ಮಂಡೆಕೋಲು ಗ್ರಾಮದ ಮಾವಂಜಿ ನಾರಾಯಣ ಶಿಬರೂರು ಅವರ ಮೂರು ಕಾಡಾನೆಗಳು ಕಂಡುಬಂದಿವೆ. ಕೆಲವು ದಿನಗಳ ಹಿಂದೆ ಈ ಭಾಗದ ಕೃಷಿ ತೋಟಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಅಪಾರ ಕೃಷಿ ಹಾನಿ ಮಾಡಿತ್ತು.ಇದೀಗ ಮತ್ತೆ ಕ್ರಷಿ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ.

ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ Read More »

ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಧುಗಿರಿ ಡಿವೈಎಸ್ಪಿಯ ಬಂಧನ!ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಡಿವೈಎಸ್ಪಿ

ದೂರು ನೀಡಲು ಡಿವೈಎಸ್ಪಿ ಕಚೇರಿಗೆ ಬಂದ ನೊಂದ ಮಹಿಳೆಯೊಬ್ಬರ ಮೇಲೆ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ನೀಚ ಕೆಲಸವನ್ನು ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಎಸಗಿದ್ದು ಮಧುಗಿರಿ ಪೊಲೀಸರು ಡಿವೈಎಸ್ಪಿಯನ್ನು ಬಂಧಿಸಿದ್ದಾರೆ.ಈ ಕ್ರತ್ಯದ ವಿಡಿಯೋ ಮಾದ್ಯಮಗಳಿಗೆ ದೊರಕಿದೆ.ಈ ಹೇಯ ಕ್ರತ್ಯದಿಂದ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.ಮಧುಗಿರಿ DYSP ರಾಮಚಂದ್ರಪ್ಪರು ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ತನ್ನ ಕಚೇರಿಯಲ್ಲಿನ ಏಕಾಂತ ಗೃಹ ಅಥವಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದು ಅನೈತಿಕ ಚಟುವಟಿಕೆ ಆರಂಭಿಸಿದ್ದಾನೆ. ಕಿಟಕಿಯ

ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಧುಗಿರಿ ಡಿವೈಎಸ್ಪಿಯ ಬಂಧನ!ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಡಿವೈಎಸ್ಪಿ Read More »

ಗೂನಡ್ಕ : ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ

ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ ಜ.2ರಂದು ಬಹಳ ಸಂಭ್ರಮ ಸಡಗರದಿಂದ ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಮಲಾನಿಲ್ ಕನ್ಸಲ್ಟೆನ್ಸಿ ಹಾಗೂ ಕ್ಯಾಡ್ ಸೆಂಟರ್ ಮಂಗಳೂರು ಇಲ್ಲಿನ ನಿರ್ವಹಣಾ ನಿರ್ದೇಶಕರಾದ ಅನಿಲ್ ಹೆಗ್ಡೆ ಕೆ. ಅವರು ಆಗಮಿಸಿದ್ದರು. ಸಭಾಧ್ಯಕ್ಷತೆಯನ್ನು ಶಾಲಾ ಸ್ಥಾಪಕಾಧ್ಯಕ್ಷರಾದ ರುಕ್ಮಯದಾಸ್ ಇವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್ ಅವರು ಸರ್ವರನ್ನು ಸ್ವಾಗತಿಸಿದರು. ಪ್ರಾಂಶುಪಾಲರಾದ ಶ್ ಶೋಭಾ ಕಿಶೋರ್ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ

ಗೂನಡ್ಕ : ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ Read More »

ಕೇರ್ಪಡ :ಪವಿತ್ರ ತೀರ್ಥ ಕೆರೆ ಪುಷ್ಕರಿಣಿ ಅಭಿವೃದ್ಧಿಗೊಂಡು ಲೋಕಾರ್ಪಣೆ

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಿ ದೇವಸ್ಥಾನಕ್ಕೆ ಸೇರಿದ ದೇವಳದ ಸಮೀಪದಲ್ಲಿರುವ ತೀರ್ಥ ಕೆರೆ ಪವಿತ್ರ ಪುಷ್ಕರಿಣಿ ಅಭಿವೃದ್ಧಿಗೊಂಡು ಜ.03 ರಂದು ಲೋಕಾರ್ಪಣೆಗೊಂಡಿದೆ. ಪವಿತ್ರ ಕೆರೆಯಲ್ಲಿ ಗಂಗಾಪೂಜೆ, ಗಂಗಾರತಿ, ದೀಪೋತ್ಸವ ಹಾಗೂ ಕ್ಷೇತ್ರದಲ್ಲಿ ಗೋಪೂಜೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ನಡೆಯುತ್ತಿದೆ.ಜ.06 ರಂದು ಪೂ. ಗಂಟೆ 8-23 ರಿಂದ 09-23 ವರೆಗೆ ಮಕರ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನೀ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಪವಿತ್ರವಾದ ಈ ತೀರ್ಥಕೆರೆಯ ಜಲದಲ್ಲಿ ಔಷಧೀಯ ಗುಣಗಳು ಇದೆ ಎಂದು ಅಷ್ಟಮಂಗಲ

ಕೇರ್ಪಡ :ಪವಿತ್ರ ತೀರ್ಥ ಕೆರೆ ಪುಷ್ಕರಿಣಿ ಅಭಿವೃದ್ಧಿಗೊಂಡು ಲೋಕಾರ್ಪಣೆ Read More »

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತರಗತಿ ಕೋಣೆ,ಕ್ರೀಡಾಂಗಣ ಉದ್ಘಾಟನೆ

ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03 ರಂದು ವಸಂತ ಸಂಭ್ರಮ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ಪ್ರಾರಂಭಗೊಂಡಿದ್ದು ಜ.5 ರವರೆಗೆ ನಡೆಯಲಿದೆ.ಶುಕ್ರವಾರ ಬೆಳಿಗ್ಗೆ ಶೈಕ್ಷಣಿಕ ದಿಬ್ಬಣ ನಡೆದ ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಚಾಲನೆ ನೀಡಲಾಯಿತು.ಒಸಾಟ್ ಪ್ರಾಯೋಹಕತ್ವದಲ್ಲಿ 1.5 ಕೋಟಿ ರೂ ನಿರ್ಮಾಷವಾದ 8 ತರಗತಿ ಕೊಠಡಿಗಳು,ನವೀಕೃತ ಕ್ರೀಡಾಂಗಣ ಉದ್ಘಾಟನೆಗೊಂಡಿತು.ನವೀಕೃತ ಕ್ರೀಡಾಂಗಣವನ್ನು ಹಿರಿಯರಾದ ಮಂಜುನಾಥ ಆಳ್ವ ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್.ರೈ ಧ್ವಜಾರೋಹನ ನೆರವೇರಿಸಿದರು.ಸ್ಟಾಲ್ ನ್ನು ಒಸಾಟ್ ಸಂಸ್ಥೆಯ ಚೆಯರ್ ಮೆನ್

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತರಗತಿ ಕೋಣೆ,ಕ್ರೀಡಾಂಗಣ ಉದ್ಘಾಟನೆ Read More »

ಬೆಳ್ಳಾರೆ ಕೆಪಿಎಸ್ ಶಿಕ್ಷಣ ಸಂಸ್ಥೆಗಳ ವಸಂತ ಸಂಭ್ರಮಕ್ಕೆ ಶಿಕ್ಷಣ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಂದ ಚಾಲನೆ

ಬೆಳ್ಳಾರೆ ಕೆಪಿಎಸ್ ಶಿಕ್ಷಣ ಸಂಸ್ಥೆಗಳ ಮೂರು ದಿನಗಳ ವಸಂತ ಸಂಭ್ರಮ ಕಾರ್ಯಕ್ರಮಕ್ಕೆ ಜ.03 ರಂದು ಕುಂಜಾಡಿ ನಾರಾಯಣ ರೈ ವೇದಿಕೆಯಲ್ಲಿ ಚಾಲನೆ ನೀಡಲಾಯಿತು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಡ ವ್ಯಕ್ತಿಯಾದ ನನ್ನನ್ನು ಗುರುತಿಸಿ ಪದ್ಮಶ್ರಿ ಪುರಸ್ಕಾರ ನೀಡಿದ್ದಾರೆ ಇದಕ್ಕೆ ಕಾರಣರಾದ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಪ್ರಧಾನಿ ಮೋದಿಯವರಿಗೆ ನಾ‌ನು ಚಿರರುಣಿ.ಮಾದ್ಯಮದವರಿಲ್ಲದಿದ್ದರೆ ನನ್ನನ್ನು ಯಾರೂ ಗುರುತಿಸುತ್ತಿರಲಿಲ್ಲ.ಅದರಲ್ಲಿ ಮುಖ್ಯವಾಗಿ ಹೊಸದಿಂಗತ ಪತ್ರಿಕೆಯಲ್ಲಿ ನನ್ನ ಬಗ್ಗೆ ಬರೆಯಲಾಗಿತ್ತು.ನನ್ನದು ಏನು

ಬೆಳ್ಳಾರೆ ಕೆಪಿಎಸ್ ಶಿಕ್ಷಣ ಸಂಸ್ಥೆಗಳ ವಸಂತ ಸಂಭ್ರಮಕ್ಕೆ ಶಿಕ್ಷಣ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಂದ ಚಾಲನೆ Read More »

ಬೆಳ್ಳಾರೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಸಂತ ಸಂಭ್ರಮಕ್ಕೆ ಶೈಕ್ಷಣಿಕ ದಿಬ್ಬಣದೊಂದಿಗೆ ಅದ್ದೂರಿ ಚಾಲನೆ

ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಿರಂತರ ಮೂರು ದಿನಗಳ ಕಾಲ ನಡೆಯುವ ವಸಂತ ಸಂಭ್ರಮ ಕಾರ್ಯಕ್ರಮವು ಅದ್ದೂರಿ ಶೈಕ್ಷಣಿಕ ದಿಬ್ಬಣದೊಂದಿಗೆ ಪ್ರಾರಂಭಗೊಂಡಿತು. ಬೆಳ್ಳಾರೆ ಬಸ್ಟೇಂಡ್ ಸಮೀಪ ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ಡಿ. ಯವರು ತೆಂಗಿನಕಾಯಿ ಒಡೆಯುವುದರ ಮೂಲಕ ಶೈಕ್ಷಣಿಕ ದಿಬ್ಬಣಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವಸಂತ ಸಂಭ್ರಮ ಸಮಿತಿ ಸಂಚಾಲಕ ಎಸ್.ಎನ್.ಮನ್ಮಥ,ಅಧ್ಯಕ್ಷೆ ರಾಜೀವಿ ಆ‌ರ್.ರೈ.ಶಾಲಾ ಎಸ್‌.ಡಿ.ಎಂ.ಉಪಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಕೆಪಿಎಸ್‌ ಪ್ರಾಂಶುಪಾಲ ಜನಾರ್ಧನ ಕೆ.ಎನ್.ಉಪಪ್ರಾಂಶುಪಾಲೆ ಉಮಾಕುಮಾರಿ,ಮುಖ್ಯ ಗುರು ಮಾಯಿಲಪ್ಪ

ಬೆಳ್ಳಾರೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಸಂತ ಸಂಭ್ರಮಕ್ಕೆ ಶೈಕ್ಷಣಿಕ ದಿಬ್ಬಣದೊಂದಿಗೆ ಅದ್ದೂರಿ ಚಾಲನೆ Read More »

ಕೊಳಂಗಾಯ ದಾಮೋದರ ನಿಧನ

ಪೆರಾಜೆ ಗ್ರಾಮದ ಕೊಳಂಗಾಯ ದಾಮೋಧರ ಅವರು ಅಲ್ಫ ಕಾಲದ ಅಸೌಖ್ಯದಿಂದ ಜ.2 ರಂದು ಕೆ. ವಿ. ಜಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವನಜಾಕ್ಷಿ, ಪುತ್ರರಾದ ಜ್ಞಾನೇಶ, ಲಿಕೇಶ, ಡಿಕೇಶ ಹಾಗೂ ಸಹೋದರಿಯರನ್ನು ಆಗಲಿದ್ದಾರೆ.

ಕೊಳಂಗಾಯ ದಾಮೋದರ ನಿಧನ Read More »

ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದುದು : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್

ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದುದು.ಹಿಂದು ಧರ್ಮ ಸನಾತನ ಧರ್ಮವಾಗಿದೆ ಎಂದು ಮಾಜಿ ಸಂಸದ ನಳೀನ್ ಕುಮಾರ್ ಹೇಳಿದರು.ಅವರು ಕೇರ್ಪಡ ಮಹಿಷಮರ್ದಿನೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಜ.2ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು..ನಮ್ಮ ಹಿಂದೂ ಧರ್ಮದ ಧಾರ್ಮಿಕ ವಿಚಾರಧಾರೆಗಳಿರುವ ಸಂಸ್ಕಾರದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜಿಲ್ಲೆಯ ಏಕೈಕ ದೇವಸ್ಥಾನ ಕೇರ್ಪಡ ಮಹಿಷಮರ್ದಿನೀ ಕ್ಷೇತ್ರ. ಇಂತ ಕೆಲಸಗಳನ್ನು ದೇವಸ್ಥಾನಗಳು ನಿರಂತರವಾಗಿ ಮಾಡಬೇಕಾಗಿದೆ”. ಎಂದು ಅವರು ಹೇಳಿದರು.ಪ್ರಕೃತಿಯ ಆರಾಧನೆಯ ಮೂಲಕ ಭಗವಂತನ್ನು ನಂಬುವುದು ಇಲ್ಲಿ ವಿಶೇಷತೆ” ಎಂದು ಹೇಳಿದರು.ಶಾಸಕಿ

ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದುದು : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ Read More »

error: Content is protected !!
Scroll to Top