Article

ಮರ್ಯಾದಾ ಹತ್ಯೆ ಮತ್ತು ಕಲುಷಿತ ಮನುಷ್ಯತ್ವ

✍️*ಧನ್ಯಾ ಬಾಳೆಕಜೆ*ಕರ್ನಾಟಕದಲ್ಲಿ ಕಳೆದೊಂದು ವಾರದಿಂದೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳು ಬಹುಶಃ ಮನುಷ್ಯತ್ವದ ಅಂತರಂಗ ಎಷ್ಟು ಕಲುಷಿತಗೊಂಡಿದೆ ಎಂಬುದನ್ನು ತೆರೆದಿಟ್ಟಿದೆ. ಒಂದೆಡೆ ಸಮಾಜಕ್ಕೆ ಹೆದರಿ ಮರ್ಯಾದಾ ಹತ್ಯೆ ನಡೆದರೆ, ಇನ್ನೊಂದೆಡೆ ನೂರ್ಕಾಲ ಸುಖವಾಗಿ ಬಾಳಿ ಎಂದು ಹಿರಿಯರ ಆಶೀರ್ವಾದ ಪಡೆದುಕೊಂಡು ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಪರಸ್ಪರ ಅನುಮಾನ-ಅವಮಾನಕ್ಕೊಳಗಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.ಮಾನ್ಯ ಎಂಬ ಯುವತಿ ಕೆಳಜಾತಿಯ ಯುವಕನನ್ನು ವರಿಸಿದಕ್ಕಾಗಿ ತಂದೆಯಿಂದಲೇ ಕ್ರೂರವಾಗಿ ಹತ್ಯೆಗೀಡಾಗಿದ್ದಾಳೆ. ಅದೂ ಗರ್ಭಿಣಿಯಾಗಿದ್ದಾಗ. ಕುಟುಂಬದ ಮರ್ಯಾದೆಯನ್ನು ಹಾಳು ಮಾಡಿ […]

ಮರ್ಯಾದಾ ಹತ್ಯೆ ಮತ್ತು ಕಲುಷಿತ ಮನುಷ್ಯತ್ವ Read More »

ಎಐ ಫೋಟೋ ಎಡಿಟಿಂಗ್‌ ಎಂಬ ಮಾರಕ ಕಾಯಿಲೆಗೆ ಬಲಿಯಾಗದಿರಿ!

✍️ಧನ್ಯಾ ಬಾಳೆಕಜೆಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಎಐ ಮುಖಾಂತರ ಎಡಿಟ್‌ ಮಾಡಿರುವುದು ಎನ್ನಲಾದ ಫೋಟೋಗಳು ಹರಿದಾಡುತ್ತಿದ್ದವು. ಬೆಳಗ್ಗೆ ಎದ್ದ ಕೂಡಲೇ ಫೇಸ್ಬುಕ್‌ ತೆರೆದಾಗ ಹರಿದಾಡುತ್ತಿದ್ದ ಇಂತಹ ಫೋಟೋಗಳು ನಿಜವೇ ಆಗಿರಬೇಕು ಎನ್ನುವಷ್ಟು ಸಹಜವಾಗಿದ್ದವು ಮತ್ತು ಈಗಲೂ ಅಂತಹ ಫೋಟೋಗಳು ನಿಜವೇ ಇರಬಹುದಲ್ಲವೇ ಎಂಬಷ್ಟು ಗೊಂದಲಗಳು ಮನಸ್ಸಿನೊಳಗೆ ಕೊರೆಯುವಷ್ಟು ಸಹಜವಾದ ಎಡಿಟ್‌ ಮಾಡಲಾದ ಫೋಟೋಗಳವು.ಆ ಫೋಟೋಗಳು ಯಾವುವು, ಅದರಲ್ಲಿದ್ದ ವ್ಯಕ್ತಿಗಳು ಯಾರು ಎಂಬುದೆಲ್ಲ ಇಲ್ಲಿ ಅನಗತ್ಯ. ಆದರೆ ಇಂತಹ ಫೋಟೋಗಳನ್ನು ಸೃಷ್ಟಿ ಮಾಡಲು ಬಳಸಿಕೊಂಡ ತಂತ್ರಜ್ಞಾನದ

ಎಐ ಫೋಟೋ ಎಡಿಟಿಂಗ್‌ ಎಂಬ ಮಾರಕ ಕಾಯಿಲೆಗೆ ಬಲಿಯಾಗದಿರಿ! Read More »

ಸರಿಯಾದ ಹೆಣ್ಣೊದಗಿ ಗಂಡು ಸುಖವಾಗಿರಲಿ..

ಮದುವೆಯಾಗಲು ಗಂಡು ಮಕ್ಕಳಿಗೆ ಹೆಣ್ಣೇ ಸಿಗುತ್ತಿಲ್ಲ ಎಂಬುದು ಕಳೆದ ಕೆಲ ವರ್ಷಗಳಿಂದ ಗಂಡು ಮಕ್ಕಳ ಕೂಗು. ಬಹುಶಃ ಕೆ.ಎಸ್.‌ ನರಸಿಂಹ ಸ್ವಾಮಿಯವರು ಈಗಿರುತ್ತಿದ್ದರೆ ಹೀಗೊಂದು ಕವನ ಬರೆಯುತ್ತಿದ್ದರೇನೋ..ಕೆ.ಎಸ್.ನರಸಿಂಹಸ್ವಾಮಿಯವರ ʼಮೈಸೂರು ಮಲ್ಲಿಗೆʼ ಕವನ ಸಂಕಲನದಲ್ಲಿ ʼಶಾನುಭೋಗರ ಮಗಳು ರತ್ನದಂತಹ ಹುಡುಗಿ..ʼಎಂಬ ಹಾಡೊಂದಿದೆ. ಈ ಹಾಡಿನಲ್ಲಿ ರತ್ನದಂತಹ ಹುಡುಗಿಯಾದ ಆಕೆಗೆ ʼಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ, ತಡವಾದರೇನಂತೆ? ನಷ್ಟವಿಲ್ಲʼ ಎಂಬ ಸಾಲೊಂದಿದೆ. ಹೊನ್ನೂರಿನ ಕೇರಿ ಮಾತ್ರವಲ್ಲ ಇಡೀ ಊರಿಗೇ ಚೆಲುವೆಯಾದ ಶಾನುಭೋಗರ ಮಗಳು ಸೀತಾದೇವಿಯ ರೂಪ,

ಸರಿಯಾದ ಹೆಣ್ಣೊದಗಿ ಗಂಡು ಸುಖವಾಗಿರಲಿ.. Read More »

ಸುಳ್ಯದ ಕಾಂತಮಂಗಲ ಪಯಸ್ವಿ‌‌ನಿ ನದಿ ತಟದಲೊಂದು ವರ್ಷಕ್ಕೆ ಒಂದು ಬಾರಿ ಮಾತ್ರ ಗರ್ಭಗುಡಿಯ ಭಾಗಿಲು ತೆಗೆಯುವ ಗುತ್ಯಮ್ಮ ದೇವಾಲಯ!

ಶ್ರದ್ದಾ ಕೇಂದ್ರಗಳಲ್ಲಿ ವಿಭಿನ್ನ ಶ್ರದ್ದಾ ಕೇಂದ್ರಗಳನ್ನು ನಾವು ಕಾಣಬಹುದಾಗಿದೆ.ಅಲ್ಲಿಯ ಪರ್ವ ದಿನಗಳು ಉತ್ಸಾವಾದಿ ದಿನಗಳ ಆಚರಣೆಗಳ ದಿನಗಳಲ್ಲಿ ಭಿನ್ನತೆಯನ್ನು‌ ಕಾಣಬಹುದಾಗಿದೆ. ಆದರೆ ಸುಳ್ಯ ತಾಲೂಕಿನಲ್ಲಿ ಬಹಳ ಅಪರೂಪವಾದ ದೇವಾಲಯವೊಂದಿದೆ. ಪ್ರತೀ ವರ್ಷ ಜ.31ರಂದು ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುವ ಜಿಲ್ಲೆಯ ಕ್ಷೇತ್ರ ಅದು ಸುಳ್ಯದ ಕಾಂತಮಂಗಲದಲ್ಲಿರುವ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ. ಅಕಾಡೆಮಿ ಆಫ್ ಲಿಬರಲ್‌ ಎಜ್ಯುಕೇಷನ್ ಕಮಿಟಿ ಬಿ ಇದರ ಅದ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ

ಸುಳ್ಯದ ಕಾಂತಮಂಗಲ ಪಯಸ್ವಿ‌‌ನಿ ನದಿ ತಟದಲೊಂದು ವರ್ಷಕ್ಕೆ ಒಂದು ಬಾರಿ ಮಾತ್ರ ಗರ್ಭಗುಡಿಯ ಭಾಗಿಲು ತೆಗೆಯುವ ಗುತ್ಯಮ್ಮ ದೇವಾಲಯ! Read More »

ರಜತ ಸಂಭ್ರಮದಲ್ಲಿ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ

ವಿದ್ಯೆ ಎನ್ನುವುದು ಸಾಮಾನ್ಯ ಮನುಷ್ಯನನ್ನು ಮೃಗತ್ವದಿಂದ ದೈವತ್ವಕ್ಕೆ ಎತ್ತುವ ಒಂದು ಸಾಧನ. ಶಿಕ್ಷಣ ಸಂಸ್ಥೆಗಳು ಜಾಗೃತ ಮತ್ತು ತಿಳುವಳಿಕೆಯುಳ್ಳ  ನಿರ್ಧಾರಗಳನ್ನು ತೆಗೆದುಕೊಳ್ಳುವ, ಜವಾಬ್ದಾರಿಯುತ ನಾಗರಿಕನನ್ನು ಸೃಷ್ಟಿಸುವಮಹತ್ತಾದ ಜವಾಬ್ದಾರಿಯನ್ನು ಹೊಂದಿವೆ. ಪಡೆದಂತಹ ತಿಳುವಳಿಕೆಗಳು ನಡವಳಿಕೆಗಳಾದಾಗ ಶಿಕ್ಷಣ ಸಂಸ್ಥೆಗಳು ಸಾರ್ಥಕತೆಯನ್ನು ಪಡೆಯುತ್ತವೆ. ಸುಳ್ಯ ಇಂದು ಜಾಗತಿಕ ಭೂಪಟದಲ್ಲಿ ಗುರುತಿಸಲ್ಪಟ್ಟಿದೆ ಎಂದರೆ ಅದಕ್ಕೆ ಕಾರಣಕರ್ತರು ಸುಳ್ಯದ ಶಿಕ್ಷಣ ಬ್ರಹ್ಮ ಎಂದು ಕರೆಯಲ್ಪಡುವ ಆಧುನಿಕ ಸುಳ್ಯದ ನಿರ್ಮಾತೃ ಪೂಜ್ಯರಾದ ದಿ. ಡಾ.ಕುರುಂಜಿ ವೆಂಕಟರಮಣ ಗೌಡರು. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ವೈದ್ಯಕೀಯ

ರಜತ ಸಂಭ್ರಮದಲ್ಲಿ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ Read More »

ಮಳೆಗಾಲದಲ್ಲಿ ಒಂದು ದಿನ..

ಮಳೆಯೆಂದರೆ ಸ್ವರ್ಗವಿದ್ದಂತೆ, ಗುಡುಗು ಮಿಂಚುಗಳ ಆರ್ಭಟದ ನಡುವೆ ಹನಿ ಹನಿಯಾಗಿ ಭೂಮಿಯನ್ನು ತಂಪಾಗಿಸಿ ಬಿಸಿಲ ಧಗೆಗೆ ಬರಡು ಭೂಮಿಯಂತಿರುವ ಮಣ್ಣಿಗೆ ಪರಿಮಳವನ್ನು ಪಸರಿಸುತ್ತದೆ .ಆ ಧೋ! ಎನ್ನುವ ಮಳೆಯ ಶಬ್ಧಕ್ಕೆ ಸಾಕಷ್ಟು ನೆನಪುಗಳು ಮರುಕಳಿಸುತ್ತವೆ.  ಸಣ್ಣವರಿದ್ದಾಗ ಒದ್ದೆ ಬಟ್ಟೆಯಲ್ಲಿ ತರಗತಿಗೆ ಹೋದದ್ದು, ಮಳೆಯಲ್ಲಿ ಆಟವಾಡಿದ್ದು ಹೀಗೆ ಹಲವಾರು ಸಿಹಿ ನೆನಪು ಗಳು ಮನಕ್ಕೆ ಮುದ  ನೀಡುತ್ತದೆ. ಕೆಲವರಿಗೆ ಹೊರಗಡೆ ಸುರಿಯುವ ಮಳೆಯು ಖುಷಿ ನೀಡಿದರೆ ಇನ್ನೂ ಕೆಲವರಿಗೆ ಗುಡುಗು -ಮಿಂಚುಗಳ ಶಬ್ಧಕ್ಕೆ ಕಿರಿಕಿರಿಯುಂಟಾಗುತ್ತದೆ.  ಅಂದು ವರ್ಷದ ಮೊದಲ

ಮಳೆಗಾಲದಲ್ಲಿ ಒಂದು ದಿನ.. Read More »

ಗುರು ಹಿರಿಯರ ಉತ್ತಮ ಹಿತನುಡಿಗಳನ್ನು ಧನತ್ಮಾಕವಾಗಿ ಸ್ವೀಕರಿಸಿ !

ಜೀವನವೆಂಬುದು ಕಷ್ಟ ಸುಖಗಳ ಸಮ್ಮೀಲನ . ಜೀವನದಲ್ಲಿ ಕಷ್ಟವೇ ಇದ್ದರೆ ಆ ಜೀವನಕ್ಕೆ ಅರ್ಥವೇ ಇರದು.ಜೀವನ ಪೂರ್ತಿ ಸುಖವೇ ಇದ್ದರೆ ಅದು ಜೀವನ‌ ಆಗುವುದಿಲ್ಲ. ಕಷ್ಟ ಸುಖ ಸಮ್ಮಿಶ್ರವಾಗಿದ್ದರೆ ಮಾತ್ರ ಆ ಜೀವನ ಹೆಚ್ಚು ಅರ್ಥ ಗರ್ಭಿತವಾಗಿರುತ್ತದೆ.ಇಲ್ಲಿ ಒಬ್ಬರಿಗೆ ಒಂದೊಂದು ಚಿಂತೆ .ತಾಯಿಗೆ ಈ ತಿಂಗಳು ಪೂರ್ತಿ  ಮನೆ ಹೇಗೆ ನಡೆಸುವವುದೆಂದು  ಚಿಂತೆ  ಎಂದಾದರೆ ,ತಂದೆಗೆ ವ್ಯವಹಾರದಲ್ಲಿ  ಲಾಭ ನಷ್ಟದ  ಚಿಂತೆ.ಇವರುಗಳ ಮಧ್ಯದಲ್ಲಿ ಮಕ್ಕಳದ್ದು ಇನ್ನೊಂದು ನಮೂನೆಯ ಚಿಂತೆ . ಬೆಳಗ್ಗೆ ಎದ್ದ ತಕ್ಷಣ ಶಾಲೆ ಅಥವಾ

ಗುರು ಹಿರಿಯರ ಉತ್ತಮ ಹಿತನುಡಿಗಳನ್ನು ಧನತ್ಮಾಕವಾಗಿ ಸ್ವೀಕರಿಸಿ ! Read More »

ಮುತ್ತಿನ ಹರಳು ಗಿಂತ ಅನ್ನದ ಬೆಲೆ ಹೆಚ್ಚು

ಭಾರತೀಯ ಸಂಸ್ಕೃತಿಯಲ್ಲಿ ಆಹಾರಕ್ಕೆ ಪೂಜನೀಯ ಸ್ಥಾನವಿದೆ.ಹಲವಾರು ಹಬ್ಬಗಳನ್ನು ಸಂಸ್ಕೃತಿ ಬದ್ದವಾಗಿ ಆಚರಿಸುವ  ದೇಶ ನಮ್ಮದು.ಅನ್ನದಾನ ಎಂಬುದನ್ನು ಪರಮ ಪುಣ್ಯದ ಕೆಲಸ ಎನ್ನುವ ನಂಬಿಕೆ. ಆದರೆ ಎಷ್ಟೋ ಜನ ರೈತರು ಬೆಲೆದ ಅಕ್ಕಿಯಿಂದ,ಅನೇಕ ದೇವಸ್ಥಾನದಲ್ಲಿ ಅನ್ನವನ್ನು ಮಾಡಿ ದೇವಸ್ಥಾನದಲ್ಲಿ ಅನ್ನದಾನ ಸೇವೆಯನ್ನು ಮಾಡುತ್ತಾರೆ. ದೇವಸ್ಥಾನದಲ್ಲಿ ಅನ್ನದಾನಕ್ಕೆ ಬಹಳ ಪ್ರಾಮುಖ್ಯತೆ ಇದೆ.ನಮ್ಮ ದೇವಸ್ಥಾನ/ದೈವಸ್ಥಾನಗಳಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಅನ್ನದಾನಕ್ಕೆ ಬಹಳ ಪ್ರಾಮುಖ್ಯತೆ ಇದೆ . ಈ ಅನ್ನದಾನವು ಶ್ರೀದೇವರ ಪ್ರಸಾದ. ಅನ್ನದ ಮೌಲ್ಯವನ್ನು ಅರಿಯದೆ ಪೂರ್ತಿಯಾಗಿ ಸೇವಿಸದೆ ಅಲ್ಲಲ್ಲಿ ಬಿಸಾಡು ತ್ತಿದ್ದಾರೆ

ಮುತ್ತಿನ ಹರಳು ಗಿಂತ ಅನ್ನದ ಬೆಲೆ ಹೆಚ್ಚು Read More »

ಹಣ ಮಾಡುವುದೇ ಬದುಕಲ್ಲ !

ಕೋಟಿಗಟ್ಟಲೆ ಆಸ್ತಿ, ಉದ್ಯಮಿ ಮಗ, ಲಾಯರ್‌ ಪುತ್ರಿಯನ್ನು ಹೊಂದಿರುವ ಲೇಖಕರೊಬ್ಬರು ವೃದ್ದಾಶ್ರಮದಲ್ಲಿದ್ದುಕೊಂಡು ಅನಾಥರಾಗಿ ಜೀವ ತೆತ್ತ ಸುದ್ದಿಯೊಂದು ಹಲವರ ಮನಸ್ಸನ್ನು ಘಾಸಿಗೊಳಿಸಿತ್ತು. ಜೊತೆಗೆ ತಮ್ಮ ಮಕ್ಕಳ ಲಕ್ಷ ಲಕ್ಷ ಪ್ಯಾಕೇಜ್‌ಗಳ ಬಗ್ಗೆ ಬಿಲ್ಡಪ್‌ ಕೊಡುವ ಹೆತ್ತವರಿಗೆ ಇದೊಂದು ಎಚ್ಚರಿಕೆ ಗಂಟೆಯೂ.ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತೊಂದಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಮಕ್ಕಳನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುವ ಹೆತ್ತವರು, ಆ ಮಕ್ಕಳಿಗೆ ಹೇಳಿ ಕೊಡುವುದು ಲಕ್ಷ ಎಣಿಸುವ ದಾರಿಗಳ ಬಗ್ಗೆಯೇ ಹೊರತು ಬದುಕುವ ಕಲೆಯ ಬಗ್ಗೆಯಲ್ಲ.

ಹಣ ಮಾಡುವುದೇ ಬದುಕಲ್ಲ ! Read More »

ಆನ್‌ಲೈನ್‌ ವಂಚಕರ ದಿನಕ್ಕೊಂದು ತಂತ್ರ-ಬಲಿಯಾದಿರಿ ಜೋಕೆ!

ಪತ್ರಿಕೋದ್ಯಮ ಬಿಟ್ಟು ನನ್ನದೇ ಸ್ವಂತ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಆನ್‌ಲೈನ್‌ ಉದ್ಯಮಕ್ಕಿಳಿದ ಆರಂಭದ ದಿನಗಳವು. ನನ್ನಂತೆ ನೂರಾರು ಮಂದಿ ಯುವತಿಯರು, ಮಹಿಳೆಯರು ಮನೆಯಲ್ಲೇ ತಯಾರಿಸಿದ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದ್ದುದರಿಂದ ನಾನೂ ಅವರಂತಾಗಬೇಕು ಎಂಬ ಹಂಬಲ ಬಲವಾಗಿತ್ತು. ಹಾಗಾಗಿ ನನ್ನ ಕನಸಿನ ನನಸಿಗಾಗಿ ಫೇಸ್ಬುಕ್‌, ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಆಯ್ಕೆ ಮಾಡಿಕೊಂಡಿದ್ದೆ.ಮದುವೆ, ಮಗು ಆದ ಮೇಲೆ ಮನೆಯಲ್ಲಿ ಕುಳಿತಿರಬಾರದು, ಅವರಿವರ ಬಾಯಿಗೆ ಆಹಾರವಾಗಬಾರದು ಎಂಬುದು ಜಾಗೃತ ಮನಸ್ಸಿನ ಪ್ರತಿ ಬಾರಿಯ ಎಚ್ಚರಿಕೆ. ಉತ್ಪನ್ನಗಳ ಮಾರಾಟದ ಬಗ್ಗೆ

ಆನ್‌ಲೈನ್‌ ವಂಚಕರ ದಿನಕ್ಕೊಂದು ತಂತ್ರ-ಬಲಿಯಾದಿರಿ ಜೋಕೆ! Read More »

error: Content is protected !!
Scroll to Top