ಕ್ರೈಂ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

ಮೂಡುಬಿದಿರೆಯಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನ ಸದಾನಂದ ಸುವರ್ಣ ಮತ್ತು ರಾಜಶ್ರೀ ದಂಪತಿಯ ಪುತ್ರ ಶ್ರವಣ್ ಮೃತಪಟ್ಟ ವಿದ್ಯಾರ್ಥಿ. ಕಾಮಗಾರಿ ಹಂತದಲ್ಲಿರುವ ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ದೈವಸ್ಥಾನದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಅವರೊಂದಿಗೆ ಶ್ರವಣ್ ಸಹ ಸವಾರರಾಗಿದ್ದರು ಎಂದು ತಿಳಿದುಬಂದಿದೆ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು Read More »

ಅರಂತೋಡು : ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾದ ಕಾರು

ಅರಂತೋಡು ನಯಾರ ಪೆಟ್ರೋಲ್ ಪಂಪ್ ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾಗಿ ವಂಚಿಸಿದ ಘಟನೆ ಫೆ.13ರಂದು ನಡೆದಿದೆ.ಕಾರು ಚಾಲಕ ಕಾರಿಗೆ ರೂ. 2, 510 ಪೆಟ್ರೋಲ್ ಹಾಕಿಸಿ ಪರಾರಿಯಾದ.ಬಳಿಕ ಜಾಲ್ಸೂರು ಚೆಕ್ ಪೋಸ್ಟ್ ಬಳಿ ಫಾರೆಸ್ಟ್ ಸಿಬ್ಬಂದಿಗಳು, ಆಟೋ ಚಾಲಕರು, ಜಾಲ್ಲೂರು ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಅಡ್ಡ ಗಟ್ಟಿದಾಗ ಕಾರನ್ನು ನಿಲ್ಲಿಸದೇ ಪುತ್ತೂರಿನತ್ತ ಪರಾರಿಯಾದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಅರಂತೋಡು : ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾದ ಕಾರು Read More »

ಪರಿವಾರಕಾನ : ಹೃದಯಾಘಾತದಿಂದ ನಿಧನ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪರಿವಾರಕಾನ ನಿವಾಸಿ ಚಂದ್ರಶೇಖರ್ (55 ವರ್ಷ)ರವರು ಹೃದಯಾಘಾತದಿಂದ ಫೆ.12ರಂದು ರಾತ್ರಿ ನಿಧನರಾದರುರಾತ್ರಿ ಎದೆನೋವು ಕಾಣಿಸಿಕೊಂಡು ತಕ್ಷಣ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವ ವೇಳೆಗೆ ಹೃದಯಘಾತದಿಂದ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.ಮೃತರು ಪತ್ನಿ , ಪುತ್ರ , ಪುತ್ರಿ ಇಬ್ಬರು ಸಹೋದರರನ್ನು ಒಬ್ಬರು ಸಹೋದರಿಯನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.

ಪರಿವಾರಕಾನ : ಹೃದಯಾಘಾತದಿಂದ ನಿಧನ Read More »

ಗುತ್ತಿಗಾರು : ಅಡಿಕೆ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಊರವರು

ಗುತ್ತಿಗಾರಿನ ವಳಲಂಬೆ ಬಳಿ ತೋಟವೊಂದರಿಂದ ಫೆ.11 ರ ಸಂಜೆ ಹಣ್ಣಡಿಕೆ ಕದ್ದಿರುವುದಾಗಿ ವರದಿಯಾಗಿದ್ದು ಅವರನ್ನು ಸುಬ್ರಹ್ಮಣ್ಯ ಪೋಲೀಸರಿಗೆ ಸ್ಥಳೀಯರು ಪೆ.12ರಂದು ಒಪ್ಪಿಸಿರುವುದಾಗಿ ತಿಳಿದು ಬಂದಿದೆ.ಇಬ್ಬರು ಗಂಡಸು, ಒಬ್ಬರು ಹೆಂಗಸು ಇದ್ದು ಮೂವರು ಸೇರಿ ಈ ಹಿಂದೆ ಕೂಡ ಇದೇ ರೀತಿ ಕಳ್ಳತನ ನಡೆಸಿ ಸಿಕ್ಕಿ ಬಿದ್ದಿದ್ದರೆನ್ನಲಾಗಿದೆ. ಇದೀಗ ಇಲ್ಲಿನ ನಿವಾಸಿಗಳು ಕಾದು ಕುಳಿತು ಕಳ್ಳತನ ಮಾಡಿರುದವರನ್ನು‌ ಪೊಲೀಸರಿಗೆ ಒಪ್ಪಿಸಿದರು.ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ‌‌.

ಗುತ್ತಿಗಾರು : ಅಡಿಕೆ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಊರವರು Read More »

ಅಡ್ತಲೆ : ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಆಡ್ತಲೆ ಗ್ರಾಮದ ವಿವಿಧೆಡೆ ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ ಹಾಗೂ ಕಿರ್ಲಾಯ ಶಾಲೆಯ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಕೇಶವ ಆಡ್ತಳೆ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ,ಪ್ರಮುಖರಾದ ಶೇಖರ ಚೋಡಿಪಣೆ, ಭಾರತಿ ಉಳುವಾರು,ಬೂತ್ ಸಮಿತಿ ಅಧ್ಯಕ್ಷರಾದ ವಿಶ್ವನಾಥ ,ಮಣಿಪ್ರಸಾದ,ACF ಪ್ರಶಾಂತ್ ಪೈ, ಸಿಬ್ಬಂದಿಗಳಾದ ದೀಪಕ್.ಶಿವಕುಮಾರ್ ಜಿ.ಪಿ. ಜಯಪ್ರಕಾಶ್ , ವಿನಾಯಕ್,ಅಭಿಲಾಶ, ಉಪಸ್ಥಿತರಿದ್ದರು.

ಅಡ್ತಲೆ : ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ಗುತ್ತಿಗಾರು : ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನ ಶವ ಶೌಚಾಲಯದೊಳಗೆ ಪತ್ತೆ!

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಅಡ್ಡನಪಾರೆ ಎಂಬಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನೋರ್ವನ ಮೃತದೇಹ ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಫೆ.12ರಂದು ಸಂಜೆ ವರದಿಯಾಗಿದೆ.ಅಡ್ಡನಪಾರೆ ನಿವಾಸಿ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ (27 ವರ್ಷ) ಎಂಬವರೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.ಮಹಾಬಲ ಫೆ.4ರಂದು ರಾತ್ರಿಮದ್ಯ ಸೇವಿಸಿ ಬಂದು ಮನೆಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದರೆನ್ನಲಾಗಿದೆ‌.ನಾಪತ್ತೆಯಾಗಿದ್ದ ಮಹಾಬಲ ಅವರ ಮೃತದೇಹ ಅವರ ಮನೆಯ ಬಳಿಯ ವಾಸವಿಲ್ಲದ ಮನೆಯೊಂದರ ಶೌಚಾಲಯದ ಒಳಗೆ ಪತ್ತೆಯಾಗಿತ್ತು.ಸ್ಥಳೀಯ ಮನೆಯವರು ವಾಸನೆ

ಗುತ್ತಿಗಾರು : ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನ ಶವ ಶೌಚಾಲಯದೊಳಗೆ ಪತ್ತೆ! Read More »

ಅಡ್ಯಡ್ಕ : ಸಿ.ಆರ್.ಸಿ ಕಾಲೋನಿ ನಿವಾಸಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿ ನಿವಾಸಿ ಸದಾಶಿವರವರು ಫೆ. ೮ರಂದು ತನ್ನ ಮಗಳ ಮನೆ ತಮಿಳುನಾಡಿನಲ್ಲಿ ಹೃದಯಾಘಾತದಿಂದ ನಿಧನರಾರು. ಅವರಿಗೆ ಸುಮಾರು ೭೦ ವರ್ಷ ಪ್ರಾಯವಾಗಿತ್ತು.ಸದಾಶಿವರು ಒಂದು ವಾರದ ಹಿಂದೆ ತನ್ನ ಮಗಳ ಮನೆ ತಮಿಳುನಾಡಿಗೆ ತೆರಳಿದ್ದರ.ಅವರ ಪಾರ್ಥಿವ ಶರೀರ ಫೆ.,9ರಂದು ರಾತ್ರಿ ಸುಮಾರು 8 ಗಂಟೆಗೆ ಅಡ್ಯಡ್ಕಕ್ಕೆ ತಲುಪಲಿದೆ. ಬಳಿಕ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ‌.ಮೃತರು ಪುತ್ರ ರಾಮಕೃಷ್ಣ, ಮಗಳು, ಮೊಮ್ಮಕ್ಕಳನ್ನು ಬಂಧುಗಳನ್ನು ಅಗಲಿದ್ದಾರೆ.

ಅಡ್ಯಡ್ಕ : ಸಿ.ಆರ್.ಸಿ ಕಾಲೋನಿ ನಿವಾಸಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು Read More »

ಸಂಪಾಜೆ : ಮಾವನಿಂದ ಸೊಸೆಯ ಮೇಲೆ ಹಲ್ಲೆ

ಮಾವ ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಸೊಸೆ ದೂರು ನೀಡಿದ ಹಿನ್ನಲೆಯಲ್ಲಿ ಮಾವನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.ದಿನಾಂಕ 02.02.2026 ರಂದು ರಾತ್ರಿ ಸುಮಾರು 7.30 ಗಂಟೆಗೆ ತಾನು ಸಂಪಾಜೆ ಕಲ್ಲುಗುಂಡಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ಇರುವ ಸಂದರ್ಭದಲ್ಲಿ, ತನ್ನ ಮಾವ ಅಕ್ರಮವಾಗಿ ಕೊಠಡಿ ಪ್ರವೇಶಿಸಿ ತನ್ನ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಪರಚಿ ಕಚ್ಚಿ ಗಾಯಗೊಳಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಸಾಹಿತ್ಯ ರೈ ಎಂಬವರು ಬಂಟ್ವಾಳ ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು

ಸಂಪಾಜೆ : ಮಾವನಿಂದ ಸೊಸೆಯ ಮೇಲೆ ಹಲ್ಲೆ Read More »

ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಮದಕ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಸುಳ್ಯ ಪೋಲಿಸರು ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ ಬೈಕ್ ಹಾಗೂ ಕೋಳಿಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.ಸ್ಥಳದಲ್ಲಿದ್ದ 1 ಬೈಕ್ ಮತ್ತು 4 ಕೋಳಿಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಉಬರಡ್ಕ ಮಿತ್ತೂರು ಗ್ರಾಮದಮದಕ ಕೆ.ಎಫ್.ಡಿ.ಸಿ.ರಬ್ಬರ್ ಪ್ಲಾಂಟೇಷನ್ ಒಳಗೆ ಕೋಳಿ ಅಂಕ ನಡೆಯುತ್ತಿದ್ದಾಗ ಸುಳ್ಯ ಕ್ರೈಂ ಎಸ್. ಐ. ಸರಸ್ವತಿ ಯವರ ತಂಡ ದಾಳಿ ನಡೆಸಿತ್ತು.

ಕೋಳಿ ಅಂಕಕ್ಕೆ ಪೊಲೀಸ್ ದಾಳಿ Read More »

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಇನ್ಸ್ ಪೆಕ್ಟರ್

ಠಾಣೆಗೆ ಬಂದ ದೂರುದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಲೋಕಾಯುಕ್ತ ಪೊಲೀಸ್ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಇನ್ಸ್ ಪೆಕ್ಟರ್ Read More »

error: Content is protected !!
Scroll to Top