ಕ್ರೈಂ

ತೊಡಿಕಾನ : ಪೆರಂಬಾರು ಚಿನ್ನಪ್ಪ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪೆರಂಬಾರು ಮನೆಯ ಚಿನ್ನಪ್ಪ ಗೌಡರು ನ.24ರಂದು ನಿಧನ ರಾದರು.ಅವರಿಗೆ 65 ವರ್ಷ ಪ್ರಾಯವಾಗಿತ್ತು.ಮ್ರತರು ಪತ್ನಿ ಸರಸ್ವತಿ,ಪುತ್ರರಾದ ಶಿವರಾಮ,ಯತೀಶ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ತೊಡಿಕಾನ : ಪೆರಂಬಾರು ಚಿನ್ನಪ್ಪ ಗೌಡ ನಿಧನ Read More »

ಕಲ್ಲುಗುಂಡಿ : ಗೂಳಿ ಕಾಳಗ ಅಂಗಡಿ ಧ್ವಂಸ

ಅರಂತೋಡು : ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ  ನೆಲ್ಲಿಕುಮೇರಿಯ ಫಿಲೋಮಿನ ಕುಟಿನ್ಹ ರವರ ಅಂಗಡಿಗೆ ಹೋರಿಗಳು ಗೂಳಿ ಕಾಳಗ ಮಾಡಿಕೊಂಡು ನುಗ್ಹಿ  ಅಂಗಡಿ ದ್ವಂಸ ಮಾಡಿದ ಘಟನೆ ನ.23ರಂದು  ಸಂಜೆ ವೇಳೆ ವರದಿಯಾಗಿದೆಇದರಿಂದ ಅಪಾರ  ನಷ್ಟ ಸಂಭವಿಸಿದೆದಾಳಿಯಿಂದ ಫಿಲೋಮಿನ ರವರಿಗೆ ಗಾಯವಾಗಿದೆಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಪಂಚಾಯತ್ ಸದಸ್ಯರಾದ ಜಿ ಕೆ ಹಮೀದ್, ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್, ಪಂಚಾಯತ್ ಸ್ವಚ್ಛತಾ ತಂಡದ ಗುರುವ ಕಡೆಪಾಲ ಭೇಟಿ ನೀಡಿದ್ದಾರೆ.

ಕಲ್ಲುಗುಂಡಿ : ಗೂಳಿ ಕಾಳಗ ಅಂಗಡಿ ಧ್ವಂಸ Read More »

ತೊಡಿಕಾನ : ನಾರ್ಕೋಡು ಸುಂದರ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ‌ ಗ್ರಾಮದ ನಾರ್ಕೋಡು ಪರ್ನೋಜಿ ಸುಂದರ ಗೌಡ ಅವರು ನ.23ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.ಅವರಿಗೆ 82 ವರ್ಷವಾಗಿತ್ತು.ಮ್ರತರು ಮಕ್ಕಳಾದ ಗುರುಪ್ರಸಾದ್,ಜಯಶ್ರೀ,ಸೊಸೆ ಮೊಮ್ಮಕ್ಕನ್ನು ಸಹೋದರನ್ನು ಕುಟುಂಬಸ್ಥರನ್ನು,ಬಂಧುಬಳಗ ,ಮಿತ್ರರನ್ನು ಅಗಲಿದ್ದಾರೆ.

ತೊಡಿಕಾನ : ನಾರ್ಕೋಡು ಸುಂದರ ಗೌಡ ನಿಧನ Read More »

ಕಲ್ಲುಗುಂಡಿ : ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ,ಪ್ರಕರಣ ದಾಖಲು

ಈಚರ್ ಲಾರಿಯಲ್ಲಿ ಅಕ್ರಮವಾಗಿ ಕೇರಳ ಕಡೆಯಿಂದ ಮಡಿಕೇರಿಯತ್ತ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದಾಗ ಸುಳ್ಯ ಪೊಲೀಸರು ಲಾರಿ ಮತ್ತು ಕಲ್ಲುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನವಂಬರ್ 20ರಂದು ರಾತ್ರಿ ವರದಿಯಾಗಿದೆ.ಈಚರ್ ವಾಹನದಲ್ಲಿ ಕೇರಳದ ಮಿಂಚಿನ ಪದವು ಎಂಬಲ್ಲಿಂದ ಸುಮಾರು 400 ಕೆಂಪು ಕಲ್ಲುಗಳನ್ನು ಪರವಾನಿಗೆ ಇಲ್ಲದೆ ಕೊಂಡೋಗುತ್ತಿದ್ದಾಗ ಕಲ್ಲುಗುಂಡಿ ಹೊರ ಠಾಣೆಯ ಬಳಿ ರಾತ್ರಿ ಸುಮಾರು 11.15 ರ ವೇಳೆಗೆ ಪೊಲೀಸರು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ.ಈ ಸಂದರ್ಭ ಕಲ್ಲು ಸಾಗಾಟಕ್ಕೆ ಪರವಾನಿಗೆ ಇಲ್ಲದೇ ಇರುವ ಬಗ್ಗೆ

ಕಲ್ಲುಗುಂಡಿ : ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ,ಪ್ರಕರಣ ದಾಖಲು Read More »

ಮಾವಜಿ ಮೋನಪ್ಪ ಗೌಡ ನಿಧನ

ಆಲೆಟ್ಟಿ ಗ್ರಾಮದ ಆರಂಬೂರು ಮಾಂಬುಳಿ ನಿವಾಸಿ ಮಾವಜಿ ಮೋನಪ್ಪ ರವರು ಅಲ್ಪಕಾಲದ ಅಸೌಖ್ಯದಿಂದ ನ. 21 ರಂದು ನಿಧನರಾದರು.ಮೃತರು ಪತ್ನಿ ಶ್ರೀಮತಿ, ಪುತ್ರರಾದ ಸನತ್, ಗಗನ್, ಜೀವನ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಮಾವಜಿ ಮೋನಪ್ಪ ಗೌಡ ನಿಧನ Read More »

ಚಿರತೆ ದಾಳಿಗೆ ಐದು ವರ್ಷದ ಮಗು ಬಲಿ

ಚಿಕ್ಕಮಗಳೂರಿನ ಕಡೂರು ತಾಲೂಕಿನ ನವಿಲೇಕಲ್ಲುಗುಡ್ಡ ಗ್ರಾಮದಲ್ಲಿ, ತಂದೆಯ ಮುಂದೆಯೇ ಚಿರತೆ ದಾಳಿ ಮಾಡಿ ಸಾನ್ವಿ ಎಂಬ ಮಗುವನ್ನು ಕೊಂದಿದೆ. ಕೂಲಿ ಕಾರ್ಮಿಕ ಬಸವರಾಜ್‌ ಅವರ ಪುತ್ರಿ ಸಾನ್ವಿ, ಮನೆಯ ಹಿಂದೆ ನಿಂತಿದ್ದಾಗ ಚಿರತೆ ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ದಿದೆ. ಘಟನೆ ಬೀರೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯುವಂತೆ ಈ ಹಿಂದೆ ಹಲವು ಬಾರಿ ಮನವಿ ಮಾಡಲಾಗಿತ್ತು

ಚಿರತೆ ದಾಳಿಗೆ ಐದು ವರ್ಷದ ಮಗು ಬಲಿ Read More »

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, 19 ವರ್ಷಗಳ ಬಳಿಕ ಬಂಧನ

ಮಂಗಳೂರು ನಗರ ಪೊಲೀಸರು 2006ರ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಬೀರ್‌ಗೆ ಆಶ್ರಯ ನೀಡಿ, ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪಿ ಅಬ್ದುಲ್ ಸಲಾಂ ಅಡ್ಡರು ಎಂಬಾತನನ್ನು 19 ವರ್ಷಗಳ ಬಳಿಕ ಬಂಧಿಸಿದ್ದಾರೆ. ಕೃತ್ಯ ನಡೆದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಅಬ್ದುಲ್ ಸಲಾಂ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣದ ದೋಷಾರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, 19 ವರ್ಷಗಳ ಬಳಿಕ ಬಂಧನ Read More »

ಕನಕಮಜಲು : ಕಾರು ಅಪಘಾತ

ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದು ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ನ.20ರಂದು ಸಂಜೆ ಕನಕಮಜಲಿನಿಂದ ವರದಿಯಾಗಿದೆ. ಮೈಸೂರಿನಿಂದ ಕುಂದಾಪುರಕ್ಕೆ ಹೋಗುತಿದ್ದ ಕಾರು ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಪಕ್ಕದ ಜಾಗದಲ್ಲಿ ಹೊಂಡವೊಂದಕ್ಕೆ ಬಿತ್ತು.‌ ಚಾಲಕ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಕನಕಮಜಲು : ಕಾರು ಅಪಘಾತ Read More »

ಮಹಿಷಾಸುರ ಪಾತ್ರ ನಿರ್ವಹಿಸಿದ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು

ಉಡುಪಿ: ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದು ನಿಧನ ಹೊಂದಿದ ಘಟನೆ ಬುಧವಾರ( ನ19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ.ಈಶ್ವರ ಗೌಡ 2ನೇ ಮೇಳದ ಪ್ರತಿಭಾನ್ವಿತ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು.ಈಶ್ವರ ಗೌಡ

ಮಹಿಷಾಸುರ ಪಾತ್ರ ನಿರ್ವಹಿಸಿದ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು Read More »

ಸ್ಕೂಟಿ ಅಪಘಾತದಲ್ಲಿ ಯುವತಿ ಸಾವು

ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಯುವತಿ ಮೃತಪಟ್ಟ ಘಟನೆ ಬಂಟ್ವಾಳದಿಂದ ವರದಿಯಾಗಿದೆ.ಬಂಟ್ವಾಳದ ಕಾವಳಕಟ್ಟೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಕಡಬದ ಯುವತಿ ಮೃತಪಟ್ಟಿದ್ದಾರೆ.ಸ್ಕೂಟರ್ ಸವಾರೆ, ಕಡಬದ ಶ್ರೀ ದುರ್ಗಾ ಎಲೆಕ್ಟ್ರಿಕಲ್ ಮಾಲಕ ಕುಂತೂರು ನಿವಾಸಿ ಸುನಿಲ್ ಕೊಲತ್ತಾಯ ಎಂಬವರ ಪುತ್ರಿ ಅನನ್ಯಾ (21ವ) ಮೃತಪಟ್ಟವರು. ಸಹ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಇಬ್ಬರೂ ಮಂಗಳೂರು ಕಾಲೇಜೊಂದರ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ. ಪುಂಜಾಲಕಟ್ಟೆ

ಸ್ಕೂಟಿ ಅಪಘಾತದಲ್ಲಿ ಯುವತಿ ಸಾವು Read More »

error: Content is protected !!
Scroll to Top