ಪ್ರಚಲಿತ

ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಪ್ರಥಮ

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಭಾಗವಹಿಸಿ ಶಾಟ್ ಪುಟ್ ನಲ್ಲಿ ಪ್ರಥಮಾ ಡಿಸ್ಕಸ್ ತ್ರೋ ನಲ್ಲಿ ದ್ವಿತೀಯ ಹೆಮರ್ ತ್ರೋ ನಲ್ಲಿ ತೃತೀಯ ಪಡೆದು ತಾಲೂಕಿನ ಹೆಮ್ಮೆಯ ಕ್ರೀಡಾಪಟುವಾಗಿ ಹೊರ ಹೊಮ್ಮಿದ್ದಾರೆ.ಇವರು ದಿವಂಗತ ಚಿನ್ನಪ್ಪ ಗೌಡ ಮತ್ತು ಪುಷ್ಪಲತ ದೊಡ್ಡಿಹಿತ್ಲು ಇವರ ಪುತ್ರಿಯಾಗಿದ್ದು ಉಳುವಾರು ಕೆಎಸ್ಆರ್ಟಿಸಿ ಪವನ್ ಅವರ ಧರ್ಮಪತ್ನಿ ಯಾಗಿದ್ದಾರೆ.ಪ್ರಸ್ತುತ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ […]

ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಪ್ರಥಮ Read More »

ರಾಷ್ಟ್ರ ಮಟ್ಟದ ಪಾತ್ರಾಭಿನಯದಲ್ಲಿ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ,ವಿದ್ಯಾರ್ಥಿಗಳಿಗೆ ಸುಳ್ಯ ಪೇಟೆಯಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಗೌರವಾರ್ಪಣೆ

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ (NPEP) ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದು, ಜ.13ರಂದು ವಿದ್ಯಾರ್ಥಿಗಳು ಸುಳ್ಯಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷೆಯಲ್ಲಿ ಪ್ರಸ್ತುತ ಪಡೆಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ರಚಿಸಿ ನಿರ್ದೇಶನ ಮಾಡಿದ್ದರು.

ರಾಷ್ಟ್ರ ಮಟ್ಟದ ಪಾತ್ರಾಭಿನಯದಲ್ಲಿ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ,ವಿದ್ಯಾರ್ಥಿಗಳಿಗೆ ಸುಳ್ಯ ಪೇಟೆಯಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಗೌರವಾರ್ಪಣೆ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ನಡೆಯುತ್ತಿದೆ ಶ್ರದ್ದಾ ಭಕ್ತಿಯಿಂದ ಧನುಪೂಜೆ,ನಾಳೆ ಈ ವರ್ಷದ ಕೊನೆಯ ಧನುಪೂಜೆ,ಹೆಚ್ಚಿನ ಸಂಖ್ಯೆಯ ಭಕ್ತರ ನಿರೀಕ್ಷೆ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುರ್ ಮಾಸ ಪ್ರಯುಕ್ತ ಡಿ.16ರಿಂದ ಧನು ಪೂಜೆ ಆರಂಭಗೊಂಡಿದ್ದು ಜ.14ರಂದು ಸಮಾಪ್ತಿಯಾಗಲಿದೆ.ಮಂಗಳವಾರ ಈ ವರ್ಷದ ಕೊನೆಯ ಧನುಪೂಜೆ ಆಗಿರುವ ಹಿನ್ನಲೆ ಮತ್ತು ಸರಕಾರಿ ರಜೆ ಇರುವ ಹಿನ್ನಲೆಯಲ್ಲಿ ಈ ದಿನ ಹೆಚ್ಚಿನ ಭಕ್ತಾಧಿಗಳು ಧನುಪೂಜೆಯಲ್ಲಿ ಭಾಗವಹಿಸುವ ‌ನಿರೀಕ್ಷೆ ಇದೆ.ದೇವಳದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈಸಿದ್ದು, ಕಳೆದ 2017ರ ಮಾರ್ಚ್ 1ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿದೆ. ಶ್ರೀ ಕ್ಷೇತ್ರದ ಸವಾರ್‌ಂಗೀಣ ಅಭಿವೃದ್ಧಿಗೆ ಪೂರಕವಾಗಿ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ನಡೆಯುತ್ತಿದೆ ಶ್ರದ್ದಾ ಭಕ್ತಿಯಿಂದ ಧನುಪೂಜೆ,ನಾಳೆ ಈ ವರ್ಷದ ಕೊನೆಯ ಧನುಪೂಜೆ,ಹೆಚ್ಚಿನ ಸಂಖ್ಯೆಯ ಭಕ್ತರ ನಿರೀಕ್ಷೆ Read More »

ಇಂದು ಸಾರ್ವಜನಿಕ ಭೇಟಿಗೆ ಶಾಸಕರು ಲಭ್ಯರಿಲ್ಲ

ಇಂದು (ಜ.13 ) ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಸುಳ್ಯ ಕಛೇರಿಯಲ್ಲಿ ಸಾರ್ವಜನಿಕ ಭೇಟಿಗೆ ಲಬ್ಯರಿರುವುದಿಲ್ಲ. ಕಡಬ ಕಚೇರಿಯಲ್ಲ್ಕಿಯೂ ನಿಗದಿತ ದಿನದಂದು ಶಾಸಕರು ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.ಭೇಟಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.

ಇಂದು ಸಾರ್ವಜನಿಕ ಭೇಟಿಗೆ ಶಾಸಕರು ಲಭ್ಯರಿಲ್ಲ Read More »

ತೊಡಿಕಾನ : ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಹಿನ್ನಲೆ ದೇಣಿಗೆ ಸಂಗ್ರಹಕ್ಕೆ ಚಾಲನೆ

ತೊಡಿಕಾನ ಗ್ರಾಮದ ಪಡ್ಪು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ನಡೆಯುತ್ತಿದ್ದು ದೇಣಿಗೆ ಸಂಗ್ರಹ ಕಾರ್ಯಕ್ಕೆ ಜ.12 ದೈವಸ್ಥಾನದಲ್ಲಿ ಪ್ರಾರ್ಥಿಸಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ,ಗೌರವ ಸಲಹೆಗಾರರಾದಸಂತೋಷ್ ಕುತ್ತಮೊಟ್ಟೆ,ಕೆ ಕೆ ನಾರಾಯಣ ಕುಂಟುಕಾಡು ಇತರ ಪದಾಧಿಕಾರಿಗಳು,ಬೈಲುವಾರು ಸಮಿತಿಯವರು ಉಪಸ್ಥಿತರಿದ್ದರು.ದೈವಸ್ಥಾನದ ಜೀರ್ಣೊದ್ದಾರ ಕಾರ್ಯಕ್ಕೆ ಊರ ಹಾಗೂ ಪರ ಊರಿನ ದಾನಿಗಳ ಸಹಕಾರ ಅಗತ್ಯವಿದ್ದು ಸಹಕಾರ ನೀಡಬೇಕೆಂದು ಸಮಿತಿಯರು ವಿನಂತಿಸಿಕೊಂಡಿದ್ದಾರೆ. ಬೈಲುವಾರು ಸಮಿತಿಗಳ ಮೂಲಕ ಮನೆವಂತಿಗೆ ಸಂಗ್ರಹ ನಡೆಯುತ್ತಿದೆ.

ತೊಡಿಕಾನ : ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಹಿನ್ನಲೆ ದೇಣಿಗೆ ಸಂಗ್ರಹಕ್ಕೆ ಚಾಲನೆ Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಾರ್ಥನಾ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದರು ಪಾನೆಕಲ್ಲು ಪ್ರಾರ್ಥನಾ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ.ಪ್ರಾರ್ಥನಾ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ. ಎಲ್. ಭಟ್ ಅವರ ಶಿಷ್ಯೆ. ವಿದುಷಿ ಡಿಂಪಲ್ ಶಿವರಾಜ್ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.ಬಂದರು ಸರಕಾರಿ ಹಿರಿಯ ಪ್ರಾಥಮಿಕ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಾರ್ಥನಾ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಜ್ಞಾನಶ್ರೀ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದರು ಗ್ರಾಮದ ಪಾನೆಕಲ್ಲಿನ ಜ್ಞಾನಶ್ರೀ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ. ಜ್ಞಾನಶ್ರೀ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ. ಎಲ್. ಭಟ್ ಅವರ ಶಿಷ್ಯೆ. ವಿದುಷಿ ಡಿಂಪಲ್ ಶಿವರಾಜ್ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.ಬಂದರು ಪೆರ್ಲ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಜ್ಞಾನಶ್ರೀ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ Read More »

ಸುಳ್ಯ ಜೂನಿಯರ್ ಕಾಲೇಜಿಗೆ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ,ಸಾಧಕರಿಗೆ ಬಸ್ಸು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಿದ ಶಿಕ್ಷಕರು ಹೆತ್ತವರು

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ( NPEP) ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದೆ. ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷಾಯಲ್ಲಿ ಪ್ರಸ್ತುತ ಪಡೆಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ರಚಿಸಿ ನಿರ್ದೇಶನ ಮಾಡಿದ್ದರು. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಪೌರ್ಣಮಿ ಕೆ, ಹಿಮಾದ್ರಿ ಸಿ.ಎಮ್., ತನ್ವಿ ಕೆ.ಟಿ., ಅಶ್ವಿತಾ

ಸುಳ್ಯ ಜೂನಿಯರ್ ಕಾಲೇಜಿಗೆ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ,ಸಾಧಕರಿಗೆ ಬಸ್ಸು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಿದ ಶಿಕ್ಷಕರು ಹೆತ್ತವರು Read More »

ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೊಯಿಕುಳಿ ವಾರ್ಡ್ ನ ಕೊಯಿಕುಳಿ ಶಾಲಾ ವಠಾರ ನೀರಬಿದಿರೆ ಪ್ರದೇಶದ ಸುಮಾರು 30 ಮನೆಗಳಿಗೆ ಟೌನ್ ಫೀಡರ್ ನಿಂದ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜ.10ರಂದು ಚಾಲನೆ ನೀಡಲಾಯಿತು. ಕೊಯಿಕುಳಿ ಶಾಲಾ ಬಳಿ ನಿರ್ಮಿಸಲಾದ ನೂತನ ಟಿ.ಸಿ.ಬಳಿಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಚಾಲನೆ ನೀಡಿ ಮಾತನಾಡಿ 2013ರಲ್ಲಿ ಈ ಯೋಜನೆ ಮಂಜೂರಾಗಿದ್ದು, ಅದು ದುಗ್ಗಲಡ್ಕದ ವರೆಗೆ ಅನುಷ್ಠಾನ ಗೊಂಡಿತ್ತು. ಆದರೆ ಈ ಪ್ರದೇಶಕ್ಕೆ ವಿಸ್ತರಣೆ ಯಾಗಿರಲಿಲ್ಲ. 2023ರಲ್ಲಿ ಜಿಲ್ಲಾ ಉಸ್ತುವಾರಿ

ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ Read More »

ಸಂಪಾಜೆ ಧರ್ಮೋತ್ಥಾನ ಪರಿಷತ್ ವತಿಯಿಂದ ನಡೆಯಲಿದೆ “ಬೃಹತ್ ಹಿಂದೂ ಸಮಾಜೋತ್ಸವ,ಹಿಂದು ಮುಖಂಡರಿಂದ ಸಭೆ,ಸಾವಿರಾರು ಹಿಂದುಗಳ ಸಂಘಮಕ್ಕೆ ಸಾಕ್ಷಿಯಾಗಲಿದೆ ಹಿಂದು ಸಮಾಜೋತ್ಸವ!

. ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ಕಲ್ಲುಗುಂಡಿ, ಚೆಂಬು, ಮತ್ತು ಸಂಪಾಜೆ ಗ್ರಾಮದ ಪ್ರಮುಖರು ಸೇರಿ ಬೃಹತ್ ಹಿಂದೂ ಸಮಾಜೋತ್ಸವ ನಡೆಸುವ ಕುರಿತು ಸಮಾಲೋಚನೆ ಸಭೆ ನಡೆಸಿದರು . ವಿಚಾರ ಮಂಡನೆ ಸೇರಿದಂತೆ , ರಮಾದೇವಿ ಕಳಗಿ, ರಾಜ ಗೋಪಾಲ ಉಳುವಾರು , ಮಾಧವ ಪೇರಾಲು , ಶ್ರೀಧರ ದುಗ್ಗಳ ಮುಂತಾದವರು ಕಾರ್ಯ ಯೋಜನೆ ಕುರಿತು ಚರ್ಚಿಸಿದರು . ಯಶೋಧರ ಬಿ . ಜೆ ., ಮೋಹನ್ ಚೈಪೆ, ಸುಧಾಕರ ಪೆಲ್ತಡ್ಕ, ಶಿವಪ್ರಸಾದ್ ಗೂನಡ್ಕ, ಹೇಮನಾಥ ಕಡೆಪಾಲ,

ಸಂಪಾಜೆ ಧರ್ಮೋತ್ಥಾನ ಪರಿಷತ್ ವತಿಯಿಂದ ನಡೆಯಲಿದೆ “ಬೃಹತ್ ಹಿಂದೂ ಸಮಾಜೋತ್ಸವ,ಹಿಂದು ಮುಖಂಡರಿಂದ ಸಭೆ,ಸಾವಿರಾರು ಹಿಂದುಗಳ ಸಂಘಮಕ್ಕೆ ಸಾಕ್ಷಿಯಾಗಲಿದೆ ಹಿಂದು ಸಮಾಜೋತ್ಸವ! Read More »

error: Content is protected !!
Scroll to Top