ಪೆರಾಜೆ,ಸಂಪಾಜೆ ಭಾಗಗಳಲ್ಲಿ ಕಾಡಾನೆಗಳಿಂದ ಹೆಚ್ಚಿದ ಸಮಸ್ಯೆ, ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕಿ ಭಾಗೀರಥಿ ಮುರುಳ್ಯ
ಪೆರಾಜೆ, ಸಂಪಾಜೆ, ಅರಂಬೂರು ಸೇರಿದಂತೆ ಸುಳ್ಯ ತಾಲೂಕಿನಾದ್ಯಂತ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕಾಡಾನೆಗಳಿಂದ ಬೆಳೆ ನಾಶವಾಗುತ್ತಿದ್ದು ಈ ಹಿನ್ನಲೆಯಲ್ಲಿ ಆನೆ ಹಾವಳಿ ಸಮಸ್ಯೆ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ನ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸೆ.25 ರಂದು ಸಭೆ ನಡೆಸಿ ಚರ್ಚಿಸಲಾಯಿತು.ತಾಲೂಕಿನಾದ್ಯಂತ ಕಾಡಾನೆ ಉಪಟಳ ಹೆಚ್ಚಾಗಿದ್ದು ಕೃಷಿಯನ್ನು ಹಾಳು ಸಂಪೂರ್ಣ ಹಾಳುಮಾಡುತ್ತಿದೆ. ಇದರಿಂದ ಕೃಷಿಯನ್ನು ಅವಲಂಬಿಸಿದ ಕೃಷಿಕರು ಸಮಸ್ಯೆಗೆ ಪಾಲಾಗಿದ್ದಾರೆ. ಹಾಗೂ. ಪೂಮಲೆ ಕಾಡಿನಿಂದ ಬರುವ ಆನೆಗಳ ಹಿಂಡು ರಸ್ತೆಯ ಮುಖಾಂತರ ಕೃಷಿಕರ ತೋಟಗಳಿಗೆ ನುಗ್ಗಿ […]










