ಪ್ರಚಲಿತ

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ ಬೇಂದ್ರೆ ರಾಷ್ಟ್ರಪ್ರಶಸ್ತಿ

ಬೆಳಕು ಸಾಹಿತ್ಯಿಕ,ಶೈಕ್ಷಣಿಕ,ಸಾಂಸ್ಕೃತಿಕ ಟ್ರುಸ್ಟ್(ರಿ)ರಾಯಚೂರು ಇದರ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಸೆ:21 ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜರುಗಿದೆ. ಇಲ್ಲಿ ನೀಡುವ ದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರ’ಸರಿಯಾಗಲಿ ಸಮಾಜ’ಎಂಬ ಕವನ ಆಯ್ಕೆಯಾಗಿದ್ದು’ನೆನಪಿನ ಬುತ್ತಿ’ ಸಂಪಾದಿತ ಕವನ ಸಂಕಲನದಲ್ಲೂ ಅದು ಸ್ಥಾನ ಪಡೆದಿರುವುದಕ್ಕೆ ಇವರುದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಣ್ಯರ ಸಮಕ್ಷಮ ಸ್ವೀಕರಿಸಿದರು.

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ ಬೇಂದ್ರೆ ರಾಷ್ಟ್ರಪ್ರಶಸ್ತಿ Read More »

ಅಡ್ತಲೆ : ನೂತನ ಚಂದನಾ ಮಹಿಳಾ ಮಂಡಳ ಅಸ್ತಿತ್ವಕ್ಕೆ

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನೂತನವಾಗಿ ಚಂದನಾ ಮಹಿಳಾ ಮಂಡಳಾ ರಚನೆಗೊಂಡಿದೆ.ಮಹಿಳಾ ಮಂಡಳ ಅಧ್ಯಕ್ಷರಾಗಿ ಸರಸ್ವತಿ ಚಿದಾನಂದ ಅಡ್ತಲೆಉಪಾಧ್ಯಕ್ಷರಾಗಿ ಯಶೋದ ಜಯರಾಮ ಅಡ್ತಲೆಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಅಜಿತ್ ಪಿಂಡಿಮನೆಕೋಶಧಿಕಾರಿಯಾಗಿ ದಿವ್ಯ ಮೋಹನ್ ಅಡ್ತಲೆ ಆಯ್ಕೆಯಾಗಿದ್ದಾರೆ.ನಿರ್ದೆಶಕರಾಗಿ ಶ್ಯಾಮಲಾ ಹರಿಪ್ರಸಾದ್ ಅಡ್ತಲೆ,ಸುಜಯ ಲೋಹಿತ್ ಮೇಲಡ್ತಲೆ, ಲತಾ ಜಯರಾಮ ಮೇಲಡ್ತಲೆ, ಕವಿತಾ ವಿಶ್ವನಾಥ್ ಅಡ್ತಲೆ, ವಿಮಲಾ ಶಶಿಕುಮಾರ್ ಉಳುವಾರು, ಜಯಲತಾ ಭವಾನಿಶಂಕರ್ ಅಡ್ತಲೆ, ದಿನೇಶ್ವರಿ ಶಿವರಾಮ ಪಿಂಡಿಮನೆ, ಹಸ್ತವಿ ಹೇಮಾಕುಮಾರ ಚೀಮಾಡು ಆಯ್ಕೆಗೊಂಡರು.ಸದಸ್ಯರಾಗಿ ಮನಿಮಾಲ ಅಡ್ತಲೆ ,ವಸಂತಿ ಪಿಂಡಿಮನೆ,ಜಯಂತಿ

ಅಡ್ತಲೆ : ನೂತನ ಚಂದನಾ ಮಹಿಳಾ ಮಂಡಳ ಅಸ್ತಿತ್ವಕ್ಕೆ Read More »

ನೆಕ್ಸ್ಟ ಜನರೇಶನ್ ಜಿಎಸ್ ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ

ನೆಕ್ಸ್ಟ ಜನರೇಶನ್ ಜಿಎಸ್ ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟರನ್ನು ಪಕ್ಷ ನೇಮಕಗೊಳಿಸಿದೆ.ಜಿಎಸ್ ಟಿ ಸ್ಲಾಬ್ ವಿಚಾರವಾಗಿ ರಾಜ್ಯದ್ಯಾಂತ ಜನಸಾಮಾನ್ಯರಿಗೆ ತಿಳಿಸಲು ಈ ಜವಾಬ್ದಾರಿ ನೀಡಲಾಗಿದ್ದು.ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವುದು.

ನೆಕ್ಸ್ಟ ಜನರೇಶನ್ ಜಿಎಸ್ ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ಏಷ್ಯಾ ಕಪ್ 2025: ಭಾರತಕ್ಕೆ ಭರ್ಜರಿ ಜಯ, ಪಾಕ್‌ಗೆ ಮತ್ತೆ ಮುಖಭಂಗ

.21ರಂದು ನಡೆದ ಏಷ್ಯಾ ಕಪ್ 2025ರ ಸೂಪರ್ ಪೋರ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ 5 ವಿಕೆಟ್ ಕಳೆದುಕೊಂಡು 172 ರನ್‌ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನತ್ತಿದ ಭಾರತದ ಪರ ಆರಂಭಿಕರಾದ ಅಭಿಷೇಕ್ (74), ಗಿಲ್ (47) ಮತ್ತು ತಿಲಕ್ () ಗಳಿಸಿ ಭಾರತದ ಗೆಲುವಿಗೆ ಕಾರಣರಾದರು

ಏಷ್ಯಾ ಕಪ್ 2025: ಭಾರತಕ್ಕೆ ಭರ್ಜರಿ ಜಯ, ಪಾಕ್‌ಗೆ ಮತ್ತೆ ಮುಖಭಂಗ Read More »

ಸುಳ್ಯ ನಗರ ಪಂಚಾಯತ್ ಶೆಡ್ ನಲ್ಲಿ ರಾಶಿ ಬಿದ್ದ ಕಸವನ್ನು ಖಾಲಿ ಮಾಡಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ

ಸುಳ್ಯ ನಗರ ಪಂಚಾಯತ್ ಮುಂಭಾಗದ ಶೆಡ್ ನಲ್ಲಿ ಅನೇಕ ವರ್ಷಗಳಿಂದ ರಾಶಿ ಬಿದ್ದಿದ್ದ ತ್ಯಾಜ್ಯ ಕೊನೆಗೂ ಖಾಲಿಯಾಗಿದೆ. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಪ್ರಯತ್ನದಿಂದ ಮೊದಲ ಬಾರಿಗೆ ಕಸ ಸಂಪೂರ್ಣ ಖಾಲಿಯಾಗಿದ್ದು ಅಧ್ಯಕ್ಷರ ಈ ಕೆಲಸವನ್ನು ಅನೇಕರು ಶ್ಲಾಘಿಸಿದ್ದಾರೆ.ಶಶಿಕಲಾ ನೀರಬಿದಿರೆ ನಗರ ಪಂಚಾಯತ್ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಸುಳ್ಯದ ಕಸದ ಸಮಸ್ಯೆ ಪರಿಹಾರಕ್ಕೆ ಸಂಸದರು, ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮುಖಾಂತರ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ರಾಶಿ ಬಿದ್ದಿದ್ದ ಕಸದ ಬಗ್ಗೆ ನಿರಂತರ ಟೀಕೆ, ರಾಜಕೀಯ

ಸುಳ್ಯ ನಗರ ಪಂಚಾಯತ್ ಶೆಡ್ ನಲ್ಲಿ ರಾಶಿ ಬಿದ್ದ ಕಸವನ್ನು ಖಾಲಿ ಮಾಡಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ Read More »

ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ‌ ಸಭೆ

ಕರ್ನಾಟಕ ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಸುಳ್ಯ ತಾಲೂಕು ಸಮಿತಿ ನೇತೃತ್ವದಲ್ಲಿ ಸೆ. 21 ರಂದು ಸುಳ್ಯ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ರಾಜ್ಯ ಅಧ್ಯಕ್ಷ ನಂದರಾಜ್ ಸಂಕೇಶ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಒಳಮೀಸಲಾತಿ, ನಕಲಿ ಜಾತಿ ಸರ್ಟಿಫಿಕೇಟ್ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಯಿತು.ಒಳ ಮೀಸಲಾತಿಯಲ್ಲಿ ಶೇ. 1 ರಿಂದ ಶೇ. 6 ಕ್ಕೆ ಮೊಗೇರ ಸಮುದಾಯವನ್ನು ಸೇರ್ಪಡೆ ಮಾಡಲಾಗಿದ್ದು, ಇದಕ್ಕೆ ಸಮುದಾಯದ ನಾಯಕರ ಹೋರಾಟದ ಬಗ್ಗೆ ವಿಮರ್ಶೆ ನಡೆಯಿತು.ಉತ್ತರ ಕನ್ನಡ, ಕಾರವಾರ ಮತ್ತಿತರ

ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ‌ ಸಭೆ Read More »

ಸಿ.ಸಿ. ಆರ್. ಟಿ.ಬಳಗ ಸುಳ್ಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂರಿಗೆ ಸನ್ಮಾನ

ಸಿ.ಸಿ. ಆರ್. ಟಿ.ಬಳಗ ಸುಳ್ಯ ಇವರ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂ ರು ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ರಾದ ಚಿನ್ನಪ್ಪ ಗೌಡ ಹಾಗೂ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶೀತಲ್ ಮೇಡಂ ಸನ್ಮಾನಿಸಿದರು. ನೂತನ ಶಿಕ್ಷಣ ಸಂಯೋಜಕರಾದ ಉದಯ್ ಕುಮಾರ್, ಮತ್ತು ನಾರಾಯಣ ಇವರನ್ನು ಅಭಿನಂದಿಸಲಾಯಿ ತು. ಕೇಶವ ಸಿ. ಎ ಕಾರ್ಯದರ್ಶಿ ccrt ಬಳಗ ಸುಳ್ಯ. ಸ್ವಾಗತಿಸಿದರು. ಸಂಯೋಜಕರಾದ ನಾರಾಯಣ ಐವರ್ಣಾಡು ವಂದಿಸಿದರು. ಗಿರಿಜಾ ಟೀಚರ್, ನಿವೃತ್ತ ಶಿಕ್ಷಕಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ

ಸಿ.ಸಿ. ಆರ್. ಟಿ.ಬಳಗ ಸುಳ್ಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂರಿಗೆ ಸನ್ಮಾನ Read More »

ರಶ್ಮಿ ಆಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇಲ್ಲಿ ಜಿಲ್ಲಾ ನಿರೂಪಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದಾರೆ.ಕಾಂಗ್ರೆಸ್ ಮುಖಂಡ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸಮಿತಿ ಸದಸ್ಯರಾಗಿರುವ ಅಶೋಕ್‌ ನೆಕ್ರಾಜೆಯವರ ಪತ್ನಿಯಾಗಿರುವ ಇವರು ಕಳೆದ 3.5 ವರ್ಷಗಳ ಹಿಂದೆ ಸುಳ್ಯದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಶ್ಮಿ ಆಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ Read More »

ಸೆ.22ಕ್ಕೆ ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಗೊಂಬೆ ಹಬ್ಬ

ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ಇತಿಹಾಸ ಪ್ರಸಿದ್ದವಾದ 4 ನೇ ವರ್ಷದ ಗೊಂಬೆ ಹಬ್ಬ ಸೆ.22ರ ಸೋಮವಾರ ದಂದು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ನಿತ್ಯಾನಂದ ಮುಂಡೋಡಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶುಭಕರ ಬಿ. ಸಿ ರವರು ವಹಿಸಲಿದ್ದಾರೆ. ನವರಾತ್ರಿ ಯ ಒಂಭತ್ತು ದಿನವೂ ಸಾರ್ವಜನಿಕರಿಗೆ ಗೊಂಬೆ ಹಬ್ಬವನ್ನು ವೀಕ್ಷಿಸಲು ಮುಕ್ತ ಅವಕಾಶವಿದೆ ಎಂದು ಶಾಲೆಯ ಸಂಚಾಲಕಿ ಗೀತಾಂ ಜಲಿ ಯವರು ತಿಳಿಸಿದ್ದಾರೆ.

ಸೆ.22ಕ್ಕೆ ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಗೊಂಬೆ ಹಬ್ಬ Read More »

ಪುತ್ತೂರು : ನಾಳೆ (ಸೆ.21) ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಸಂಪ್ಯದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಸಮಾರಂಭ ಸೆ.21ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಆಸ್ಪತ್ರೆ ಯ ಕಾನೂನು ಸಲಹೆಗಾರ ಮೂಸಕುಂಜಿ ಪೈಂಬಿಚಾಲ್ ತಿಳಿಸಿದರು.ಸೆ. 20ರಂದು ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಒ.ಟಿ. ಕಾಂಪ್ಲೆಕ್ಸ್‌ನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್

ಪುತ್ತೂರು : ನಾಳೆ (ಸೆ.21) ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ Read More »

error: Content is protected !!
Scroll to Top