ಪ್ರಚಲಿತ

ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಹಲವು ವರ್ಷಳಿಗೊಮ್ಮೆ ನಡೆಯುವ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮುಂದಿನ ಮಾರ್ಚ್ 15,16,17 ಮತ್ತು 18 ರಂದು ನಡೆಯಲಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಫೆ.4 ರಂದು ದೈವಸ್ಥಾನದಲ್ಲಿ ನೆರವೇರಿತು.ದೈವಸ್ಥಾನದ ಕುಟುಂಬದ ಯಜಮಾನ ಹಿರಿಯರಾದ ಕುಂಞಕಣ್ಣ ಅವರು ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿ ಅಧ್ಯಕ್ಷ ಸುಧಾರ ರೈ,ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕಾರ್ಯಾಧ್ಯಕ್ಷರಾದ ಎನ್.ಎ.ರಾಮಚಂದ್ರ, ನಾರಾಯಣ ಕೇಕಡ್ಕ ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಡು, ಕುಂಞರಾಮನ್ ಶ್ರೀ […]

ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ Read More »

ಸರ್ವ ಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ -ಸದಾನಂದ ಮಾವಜಿ

ಪ್ರಸ್ತುತ ಕಾಲಘಟ್ಟದಲ್ಲಿ ಸರ್ವಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ ಎಂದು ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂಧ ಮಾಜಿ ಹೇಳಿದರು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸರ್ವಧರ್ಮ ಸಮ್ಮೇಳನಗಳು ನಶಿಸಿ ಹೋಗಿದೆ ಇಂದು ಇದರ ಅಗತ್ಯ ಇದೆ. ಪೇರಡ್ಕದ ಸೌಹಾರ್ಧತೆಯು ತೆಕ್ಕಿಲ್ ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದಿದೆ ಅವರ ಕುಟುಂಬದ ಕುಡಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಪೇರಡ್ಕದ ದರ್ಗಾ ಶರಿಫ್ ಕಾರ್ಣಿಕ ಇರುವ ಕ್ಷೇತ್ರ ಅದರ ಅನುಭವ ನನಗೂ ಆಗಿದೆ

ಸರ್ವ ಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ -ಸದಾನಂದ ಮಾವಜಿ Read More »

ದೇವರ ಮೇಲಿನ ಭಕ್ತಿಯಿಂದ ಜೀವನ ಪಾವನವಾಗುತ್ತದೆ: ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ

ದೇವರ ಮೇಲಿನ‌ ಭಕ್ತಿಯಿಂದ ಬದುಕು ಪಾವನವಾಗುತ್ತದೆ, ಜೀವನ ಸುಂದರ ವಾಗುತ್ತದೆ. ಮಡಿವಾಳ ಸಮಾಜ ಆತ್ಮೀಯತೆಯಿಂದ ಬಂಧುತ್ವ ಹೊಂದಿದ ಏಕಮಾತ್ರ ಸಮಾಜ ಎಂದು ಮೂಡಬಿದ್ರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಹೇಳಿದರು.ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರದ ಮನೆ ಚಾರಿಟೇಬಲ್ ಟ್ರಸ್ಟ್ ಹುಳಿಯಡ್ಕ ಇದರ ವತಿಯಿಂದ ಶ್ರೀ ನಾಗಸಾನಿಧ್ಯ ಮತ್ತು ಶ್ರೀ ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವೀರಭದ್ರ ದೇವರ ಭಂಡಾರ ಮನೆ ಗೃಹ ಪ್ರವೇಶ ಮತ್ತು ವಾರ್ಷಿಕ ಪೂಜೆಯ ಅಂಗವಾಗಿ

ದೇವರ ಮೇಲಿನ ಭಕ್ತಿಯಿಂದ ಜೀವನ ಪಾವನವಾಗುತ್ತದೆ: ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ Read More »

ಸುಳ್ಯ : ನಾಳೆ ಪವರ್ ಕಟ್

33 ಕಾವು – ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.04ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುಳ್ಯ : ನಾಳೆ ಪವರ್ ಕಟ್ Read More »

ಐವರ್ನಾಡು : ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಫೆ. 8, 9, 10 ರಂದು ನಡೆಯುವ ಪ್ರತಿಷ್ಟಾ ವಾರ್ಷಿಕೋತ್ಸವ ಪ್ರಯುಕ್ತ ಫೆ.2 ರಂದು ಬೆಳಿಗ್ಗೆ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿಯ ಬಳಿಕ ಅರ್ಚಕರಾದ ರಾಮಚಂದ್ರ ಪಿ.ಜಿ. ಯವರಿಂದ ಗೊನೆ ಕಡಿಯುವ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಯ ನೂತನ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿಕೋಡಿ, ಪೂರ್ವಾಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ರಾಜಾರಾಮ ರಾವ್ ಉದ್ದಂಪಾಡಿ, ವೈದಿಕ ಮುಖ್ಯಸ್ಥರು, ವಸಿಷ್ಠ ಭಟ್ ನಾಟಿಕೇರಿ ನರಸಿಂಹ ಭಟ್, ಅರ್ಚಕರ ಸಹಾಯಕರು.

ಐವರ್ನಾಡು : ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಉಬೈಸ್ ಗೂನಡ್ಕ ರವರಿಗೆ ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ಪ್ರದಾನ

ಉಬೈಸ್ ಗೂನಡ್ಕ ರವರಿಗೆ ಮೆಡಲ್ ಮತ್ತು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಯನ್ನು ರಾಮಕೃl ಮಠದ ಕಾರ್ಯದರ್ಶಿ ಸ್ವಾಮಿ ಅತಿ ದೇವಾನಂದ ಮಹಾರಾಜ್, ಐಎಎಸ್ ಅಧಿಕಾರಿಗಳು ಮತ್ತು ಬಿಹಾರದ ಮಾಜಿ ಕಾರ್ಮಿಕ ಸಚಿವ ಸುರೇಂದ್ರ ರಾಂ ಅವರಿಂದ ಪ್ರದಾನ ಮಾಡಲಾಯಿತು. ಉಬೈಸ್ ಅವರು ಯೆನೆಪೋಯಾ ವಿಶ್ವವಿದ್ಯಾಲಯದಲ್ಲಿ ಸಕ್ರಿಯ NSS ಸ್ವಯಂಸೇವಕರಾಗಿ, ಚುರುಕು ವಿದ್ಯಾರ್ಥಿಯಾಗಿ ಮತ್ತು ತುರ್ತು ರಕ್ತದಾತರಾಗಿ ವಿಶಿಷ್ಟ ಹೆಸರು ಮಾಡಿದ್ದಾರೆ. ಯೆನಪೋಯಾ ಕಾಲೇಜಿನ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿರುವ ಅವರು ರಾಷ್ಟ್ರೀಯ ಶಿಬಿರದಲ್ಲೂ ಭಾಗವಹಿಸಿದ್ದಾರೆ. NSS ಮತ್ತು

ಉಬೈಸ್ ಗೂನಡ್ಕ ರವರಿಗೆ ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ಪ್ರದಾನ Read More »

ಉಬರಡ್ಕ : ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಉಬರಡ್ಕದ ಶ್ರೀ ವೀರಭದ್ರ ದೇವರ ಭಂಡಾರದ ಮನೆಯ ಗೃಹಪ್ರವೇಶ ಮತ್ತು ಶ್ರೀ ದೇವರ ಪ್ರತಿಷ್ಟ್ಯ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮಾಚಿದೇವ ಜಯಂತಿ ಆಚರಣೆ ಫೆ.2 ರಂದು ಸಂಜೆ ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸುಳ್ಯ ತಾಲೂಕು ಮಡಿವಾಳ ಸಂಘದ ಅಧ್ಯಕ್ಷರಾದ ಲೋಕೇಶ್ ಏನೆಕಲ್ಲು ವಹಿಸಿದ್ದರು.ಉಬರಡ್ಕದ ಶ್ರೀ ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟ ಪೂರ್ವಧ್ಯಕ್ಷ ರತ್ನಕರ ಗೌಡ ಬಳ್ಳಡ್ಕ ಸಭಾ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಸಮೂಹ ಸಂಪನ್ಮೂಲ ವ್ಯಕ್ತಿ

ಉಬರಡ್ಕ : ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ Read More »

ಉಬರಡ್ಕ : ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಮೆರವಣಿಗೆ

ಉಬರಡ್ಕ ಮಿತ್ತೂರಿನ ಹುಳಿಯಡ್ಕ ಶ್ರೀ ವೀರಭದ್ರ ಭಂಡಾರದ ಮನೆ ಚಾರಿಟೇಬಲ್ ಟ್ರಸ್ಟ್ ಇಲ್ಲಿಯ ವೀರಭದ್ರ ದೇವರ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ಫೆ.3 ರಂದು ನಡೆಯಲಿದ್ದು, ಇದರ ಪ್ರಯುಕ್ತ ಇಂದು ಬೆಳಿಗ್ಗೆ ಹಸಿರುವಾಣಿ ಮೆರವಣಿಗೆಯು ಕುತ್ತಮೊಟ್ಟೆ ಹೂಪಾರೆಯ ಶ್ರೀ ಅಯ್ಯಪ್ಪ ಶಾಸ್ತಾವು ಭಜನಾ ಮಂದಿರದಿಂದ ಶಂಖನಾದದೊಂದಿಗೆ ಸಾಗಿ ವೀರಭದ್ರ ಕ್ಷೇತ್ರಕ್ಕೆ ತಲುಪಿತು. ನಂತರ ಉಗ್ರಾಣ ತುಂಬಿಸಲಾಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಸಮಿತಿಯ ಪದಾಧಿಕಾರಿಗಳು ಎಲ್ಲರನ್ನೂ ಸ್ವಾಗತಿಸಿದರು.ಸಂಜೆ ಪೂರ್ಣಕುಂಭ ಸ್ವಾಗತದೊಂದಿಗೆ ತಂತ್ರಿಗಳ ಆಗಮನ, ನಂತರ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ,

ಉಬರಡ್ಕ : ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಮೆರವಣಿಗೆ Read More »

ಸಾತ್ವಿಕರಾದ ಮಹಾತ್ಮರ ಬದುಕು ಮಾದರಿಯಾಗಿಸೋಣ – ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್

ಗೂನಡ್ಕ: ಸಾತ್ವಿಕರಾದ ಔಲಿಯಾಗಳು ಅಲ್ಲಾಹನ ಇಷ್ಟದಾಸರಾಗಿದ್ದಾರೆ. ನೈಜ ವಿಶ್ವಾಸ, ನಿಷ್ಕಳಂಕ ಸತ್ಕರ್ಮಗಳು ಮತ್ತು ಪರಮೋನ್ನತ ಆಧ್ಯಾತ್ಮ ಶಕ್ತಿಗಳ ಮೂಲಕ ಅಲ್ಲಾಹನ ಪ್ರೀತಿ ಪಾತ್ರರಾದ ಇಂತಹ ಮಹಾನುಭಾವರಿಂದ ಈ ಜಗತ್ತಿನಲ್ಲಿ ಧಾರ್ಮಿಕತೆ, ಶಾಂತಿ ಮತ್ತು ನೆಮ್ಮದಿ ನೆಲೆ ನಿಂತಿದೆ. ನೈತಿಕ ಮೌಲ್ಯಗಳೊಂದಿಗೆ ಸಜ್ಜನರಾಗಿ ಬಾಳಲು ನಾವು ಅವರ ಬದುಕನ್ನು ಮಾದರಿಯಾಗಿಸಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಕರೆ ನೀಡಿದರು. ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸಿನ ಎರಡನೇ ದಿನದ ಕಾರ್ಯಕ್ರಮವನ್ನು

ಸಾತ್ವಿಕರಾದ ಮಹಾತ್ಮರ ಬದುಕು ಮಾದರಿಯಾಗಿಸೋಣ – ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ Read More »

ಐವರ್ನಾಡು : 17ನೇ ವರ್ಷದ ಸಾಮೂಹಿಕ‌ ಸತ್ಯನಾರಾಯಣ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳ್ಳಾರೆ ವಲಯ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಐವರ್ನಾಡು ಇದರ ಸಹಯೋಗದಿಂದ 17ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಈ ದಿನ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಸಭಾಂಗಣದಲ್ಲಿ ನಡೆಯಿತು. ಶ್ರೀ ಸತ್ಯನಾರಾಯಣ ಪೂಜೆಗೆ 105 ವೃತದಾರಿಗಳು ಇದ್ದು 620 ಸತ್ಯನಾರಾಯಣ ಪೂಜಾ ಸೇವೆ ಆಗಿರುತ್ತದೆ. ಈ ಪೂಜಾ ಧಾರ್ಮಿಕ ಸಭಾ ಕಾರ್ಯಕ್ರಮವು ಭಕ್ತಾದಿಗಳಿಗೆ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಆಶೀರ್ವಚನ ನೀಡಿದರು.

ಐವರ್ನಾಡು : 17ನೇ ವರ್ಷದ ಸಾಮೂಹಿಕ‌ ಸತ್ಯನಾರಾಯಣ ಪೂಜೆ Read More »

error: Content is protected !!
Scroll to Top