ಪ್ರಚಲಿತ

ಸುಳ್ಯ ತಾಲೂಕಿನ ಜನರ ನಿದ್ರೆ ಕೆಡಿಸಿದೆ ಆಧಾರ ಕಾರ್ಡ್ ತಿದ್ದುಪಡಿ ಸಮಸ್ಯೆ

ತಾಲೂಕಿನಲ್ಲಿ,ತಾಲೂಕು ಆಡಳಿತ ಮಲಗಿದೆ.ಇಡೀ ಸುಳ್ಯ ತಾಲೂಕಿನ ಜನತೆಗೆ,ವಿದ್ಯಾರ್ಥಿಗಳಿಗೆ,ಪೆಡoಬೂತದಂತೆ ಕಾಡುವ ಸಮಸ್ಯೆ ಆಧಾರ ಕಾರ್ಡ್ ತಿದ್ದುಪಡಿ.ಸಾರ್ವಜನಿಕರ ಅನೇಕ ಸರಕಾರಿ ಸವಲತ್ತುಗಳನ್ನು ಪಡೆಯಲು, ಜಾಗದ ಸಮಸ್ಯೆಗಳಿಗೆ, ಪಾಸ್ ಪೋರ್ಟ್ ಪಡೆಯಲು, ಹಾಗೂ ಇತರೆ ಎಲ್ಲಾ ಸರಕಾರಿ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಹಾಗೂ ಇತರೆ ಶಾಲಾ ಕಾಲೇಜು ಕೆಲಸಗಳಿಗೆ, ಮೊದಲನೇ ಡಾಕ್ಯುಮೆಂಟ್ ಕೇಳೋದು ಆಧಾರ್ ಕಾರ್ಡ್. ಆಧಾರ ಕಾರ್ಡ್ ಮಾಡುವ ಸಂದರ್ಭ , ಬಹು ದೃಷ್ಟಿಯುಳ್ಳ ಅಧಿಕಾರಿಗಳು ಮಾಡುವ ಎಡವಟ್ಟುಗಳನ್ನು,ಸರಿಪಡಿಸದೆ ಇದ್ದಲ್ಲಿ, ನಿದ್ರೆಯಲ್ಲಿರುವ ನಮ್ಮದೇ ತಾಲೂಕಿನ ತಾಲೂಕಿನ, […]

ಸುಳ್ಯ ತಾಲೂಕಿನ ಜನರ ನಿದ್ರೆ ಕೆಡಿಸಿದೆ ಆಧಾರ ಕಾರ್ಡ್ ತಿದ್ದುಪಡಿ ಸಮಸ್ಯೆ Read More »

ಸುಳ್ಯದ 108 ಆಂಬ್ಯುಲೆನ್ಸ್ ನ ಟಯರ್ ಸವೆದರೂ ಬದಲಾಗದ ಟಯರ್, ಅಪಾಯದಲ್ಲಿ ಸುಳ್ಯದ 108 ಆಂಬ್ಯುಲೆನ್ಸ್

ಸುಳ್ಯ ತಾಲೂಕು ಆಸ್ಪತ್ರೆಯ 108 ಆಂಬುಲೆನ್ಸ್ ಕಳೆದ ಮೂರು ದಿನದಿಂದ ಗಾಡಿಯ ಟೈಯರ್ ಸಮಸ್ಯೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.ಡ್ಯೂಟಿ ರೋಸ್ಟರ್ ಕೂಡ ಚೇಂಜ್ ಆಗಿ ಇನ್ನಷ್ಟು ಸಾರ್ವಜನಿಕ ವಲಯಗಳಲ್ಲಿ ತೊಂದರೆಗಳು ಉಂಟಾಗಿದೆ ಇದರ ಬಗ್ಗೆ ಸಚಿವರು ಆದಷ್ಟು ಬೇಗ ಗಮನ ಹರಿಸಬೇಕಾಗಿದೆ.108 ಆಂಬುಲೆನ್ಸ್ ಜವಾಬ್ದಾರಿ ಹೊತ್ತಿರುವ ಗ್ರೀನ್ ಹೆಲ್ತ್ ಸರ್ವಿಸ್, ಇ ಎಂ ಅರ್ ಐ ಏಕ ಏಕಿಯಾಗಿ ಡ್ಯೂಟಿ ರೂಸ್ಟರ್ ಚೇಂಜ್ ಮಾಡಿದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸಾರ್ವಜನಿಕರಿಗೆ 108 ಸೇವೆಯಲ್ಲಿ

ಸುಳ್ಯದ 108 ಆಂಬ್ಯುಲೆನ್ಸ್ ನ ಟಯರ್ ಸವೆದರೂ ಬದಲಾಗದ ಟಯರ್, ಅಪಾಯದಲ್ಲಿ ಸುಳ್ಯದ 108 ಆಂಬ್ಯುಲೆನ್ಸ್ Read More »

ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನಬ್ರಹ್ಮಕಲಶೋತ್ಸವ ಅಂಗವಾಗಿ ಭಕ್ತರಿಂದ ಹಸುರು ಹೊರೆಕಾಣಿಕೆ ಸಮರ್ಪಣೆ

ಕಡಬ ತಾಲೂಕಿನ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬುಧವಾರದಿಂದ ಜ.೭ರ ವರೆಗೆ ನಡೆಯಲಿದ್ದು ಆ ಪ್ರಯುಕ್ತ ಕ್ಷೇತ್ರಕ್ಕೆ ಭಕ್ತರು ಬುಧವಾರ ಹಸುರು ಹೊರೆಕಾಣಿಕೆ ಸಮರ್ಪಿಸಿದರು.ಬೆಳಗ್ಗೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನೆರವೇರಿಸಲಾಯಿತು. ಕ್ಷೇತ್ರಕ್ಕೆ ಭಕ್ತರು ಸಲ್ಲಿಸಿದ ಹೊರೆ ಕಾಣಿಕೆಯನ್ನು ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಯಿತು. ಅಲೆಕ್ಕಾಡಿ ಮುಖ್ಯದ್ವಾರದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ವ್ಯವಸ್ಥಾಪನಾ

ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನಬ್ರಹ್ಮಕಲಶೋತ್ಸವ ಅಂಗವಾಗಿ ಭಕ್ತರಿಂದ ಹಸುರು ಹೊರೆಕಾಣಿಕೆ ಸಮರ್ಪಣೆ Read More »

ವಾಟರ್ ಬೆಡ್ ಕೊಡುಗೆ

ಸಂಪಾಜೆ ವಲಯ ತೊಡಿಕಾನ ಕಾರ್ಯಕ್ಷೇತ್ರದ ಆದಿಶಕ್ತಿ ಸಂಘದ ಸದಸ್ಯ ರಾದ ವಸಂತಿ ರವರ ಅತ್ತೆಯವರಾದ ರಾಮಕ್ಕ‍ರವರು ಅನಾರೋಗ್ಯದಿಂದ ಇದ್ದು ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ನ್ನು ವಲಯ ಜನಜಾಗ್ರತಿ ಅಧ್ಯಕ್ಷರಾದ ಸೋಮಶೇಖರ ಪೈಕ ರವರು ವಿತರಿಸಿದರು ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು

ವಾಟರ್ ಬೆಡ್ ಕೊಡುಗೆ Read More »

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕುಂಬಳಚೇರಿ ಶಾಲೆಗೆ ಸ್ಮಾರ್ಟ್ ಟಿ.ವಿ ಹಸ್ತಾಂತರ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇದರ ಅಡಿಯಲ್ಲಿ ಕರ್ನಾಟಕ ಸಂಭ್ರಮ -50 2024-25 ನೇ ಸಾಲಿನ ಸ್ಮಾರ್ಟ್ ಟಿ.ವಿ.ಯನ್ನು ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ, ಹಿರಿಯ ರಾಜಕಾರಣಿ, ಊರಿನ ಹಿರಿಯರಾದ ಪ್ರೊ.ರಾಧಾಕೃಷ್ಣ ಕೆ.ಇ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಂಬಳಚೇರಿ ಹಿ.ಪ್ರಾ ಶಾಲೆಗೆ ನೀಡಲಾಯಿತು.ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಇದ್ದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕುಂಬಳಚೇರಿ ಶಾಲೆಗೆ ಸ್ಮಾರ್ಟ್ ಟಿ.ವಿ ಹಸ್ತಾಂತರ Read More »

ಭಾರತೀಯ ಯೋಧ ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ

ಕ್ಯಾಪ್ಟನ್ ವಸಂತ ಪೇರಡ್ಕರವರು ಭಾರತೀಯ ಸೇನೆಯಲ್ಲಿ ಸುದೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಡಿ.31 ಸೇವೆಯಿಂದ ನಿವೃತ್ತಿಯಾದರು.1996 ಏಪ್ರಿಲ್ 25 ರಂದು ಸೇನೆಗೆ ಸೇರ್ಪಡೆಗೊಂಡ ಇವರು ರಾಜಸ್ತಾನ, ಅಸ್ಸಾಂ, ಜಮ್ಮು ಕಾಶ್ಮೀರ, ಲಡಾಕ್, ಅರುಣಾಚಲ ಪ್ರದೇಶ, ಕೊಯಮತ್ತೂರು, ಆಂಧ್ರ ಪ್ರದೇಶ ದಲ್ಲಿ ಸೇವೆ ಸಲ್ಲಿಸಿದ್ದರು.ಇವರು ಪೇರಡ್ಕದ ಮಡಪ್ಪಾಡಿ ರಾಮಚಂದ್ರ ಮತ್ತು ದೇವಕಿ ದಂಪತಿಯ ಪುತ್ರ. ವಸಂತ ರವರ ಪತ್ನಿ ಮಮತಾ, ಪುತ್ರಿಯರಾದ ತ್ರಿಶಾ ಪಿ.ವಿ., ದಿಶಾ ಪಿ.ವಿ. ರೊಂದಿಗೆ ನೆಲೆಸಿದ್ದಾರೆ.

ಭಾರತೀಯ ಯೋಧ ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ Read More »

ಯುವ ಸಂಸದ ತೇಜಸ್ವಿಸೂರ್ಯರಿಗೆ ಕೂಡಿ ಬಂತುಕಂಕಣ ಭಾಗ್ಯ , ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಆ ಸ್ಟಾರ್ ಸಿಂಗಾರ್ ಯಾರು ?

ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ಸ್ಪುರದ್ರೂಪಿ ಯುವಕ ತೇಜಸ್ವಿ ಸೂರ್ಯ ಅವರು ಜೀವನದ ಪ್ರಮುಖ ಕಾಲಘಟ್ವದ ಹೊಸ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದು ಮದುವೆಗೆ ದಿನ ನಿಗದಿಪಡಿಸಲಾಗಿದೆ. ಯುವ ಸಂಸದರು ಕೈ ಹಿಡಿಯುತ್ತಿರುವ ಆ ಹುಡುಗಿ ಯಾರೆಂದು ಎಲ್ಲರಲ್ಲೂ ಕುತೂಹಲ ಇರಬಹುದು.ತೇಜಸ್ವಿ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಪಡೆದಿದ್ದರು. 2024ರಲ್ಲೂ ಇದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಬಾರಿ ಗೆಲುವು ಸಾಧಿಸಿ ಸಂಸದರಾಗಿದ್ದಾರೆ. ಅವರ ಹುಡುಗಿ

ಯುವ ಸಂಸದ ತೇಜಸ್ವಿಸೂರ್ಯರಿಗೆ ಕೂಡಿ ಬಂತುಕಂಕಣ ಭಾಗ್ಯ , ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಆ ಸ್ಟಾರ್ ಸಿಂಗಾರ್ ಯಾರು ? Read More »

ಐವರ್ನಾಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎನ್ ಮನ್ಮಥ ಮೂರನೇ ಬಾರಿ ಆಯ್ಕೆ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್‌.ಎನ್.ಮನ್ಮಥ ಮೂರನೇ ಬಾರಿ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ‌ ಮಹೇಶ್‌ ಜಬಳೆ ಆಯ್ಕೆಯಾದರು.ಇಂದು ಸಂಘದ ಸಭಾಭವನದಲ್ಲಿ ಅವಿರೋಧ ಆಯ್ಕೆ ನಡೆಯಿತು.ಡಿ.22 ರಂದು ಚುನಾವಣೆ ನಡೆದು ಎಸ್.ಎನ್.ಮನ್ಮಥರವರ ತಂಡದ 11 ಮಂದಿ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಬಿಜೆಪಿ ಬೆಂಬಲಿತ ಅಭ್ಯರ್ಥಿ ಒಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಚುನಾವಣಾಧಿಕಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರು ಉಪಸ್ಥಿತರಿದ್ದು ಶುಭಹಾರೈಸಿದರು.ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಚಂದ್ರಶೇಖರ ಎಸ್,ರವಿನಾಥ ಮಡ್ತಿಲ,ಮಧುಕರ ನಿಡುಬೆ,ಅನಂತಕುಮಾ‌ರ್

ಐವರ್ನಾಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎನ್ ಮನ್ಮಥ ಮೂರನೇ ಬಾರಿ ಆಯ್ಕೆ Read More »

ಕಲಾವಿದೆ ಪೂಜಾ ಬೋರ್ಕರ್ ಅವರಿಗೆ ಪುತ್ತೂರು ಶಾಸಕರಿಂದ ಸನ್ಮಾನ

ಸುಳ್ಯ ಬೆಟ್ಟಂಪಾಡಿಯ ಹವ್ಯಾಸಿ ಚಿತ್ರ ಕಲಾವಿದರಾದ ಪೂಜಾ ಬೋರ್ಕರ್ ಅವರು ಪೆನ್ಸಿಲ್ ಆರ್ಟ್ ಮೂಲಕ ಪುತ್ತೂರು ಶಾಸಕ ಆಶೋಕ್ ರೈ ಅವರ ಭಾವಚಿತ್ರವನ್ನು ಬಿಡಿಸಿ ಶಾಸಕರ ಪುತ್ತೂರು ಕಚೇರಿಯಲ್ಲಿ ಅವರಿಗೆ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಶಾಸಕರು ಪೂಜಾರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲು ಹೊದಿಸಿ ಸನ್ಮಾನಿಸಿದರು.

ಕಲಾವಿದೆ ಪೂಜಾ ಬೋರ್ಕರ್ ಅವರಿಗೆ ಪುತ್ತೂರು ಶಾಸಕರಿಂದ ಸನ್ಮಾನ Read More »

ಹಣವೆಂಬ ಮಾಯೆ,ಹಣಕೆ ಮರುಳಾಗದವರು ಯಾರು ಇಲ್ಲ !

ಜಗತ್ತು ಒಂದು ಮಾಯೆ, ಆ ಮಾಯೆಯ ಒಳಗೆ ನಾವು ಒಂದು ಕೀಲು ಗೊಂಬೆ ಇದ್ದ ಹಾಗೆ. ಈ ಮಾಯದ ಜಗತ್ತಿನಲ್ಲಿ ಗುಣಕ್ಕಿಂತ ಹಣವೇ ಮೇಲಾಗಿದೆ.“ಹಣ ಕಂಡರೆ  ಹೆಣವು ಬಾಯಿ ಬಿಡುತ್ತದೆ” ಎಂಬ ಮಾತು ನೂರಕ್ಕೆ ನೂರು ಸತ್ಯವಾದದ್ದು. ಆ ಕಾಗದದ ಚೂರು ನಮಗೆ ಬೇಕಾದಷ್ಟು ಗೌರವವನ್ನು ಕೊಡಿಸುತ್ತದೆ. ಆದರೆ ನಿಜವಾದ ವ್ಯಕ್ತಿಗಳನ್ನಲ್ಲ .ಈ ಮಾಯದ ಜಗತ್ತಿನಲ್ಲಿ ಹಲವಾರು ಬದಲಾವಣೆ ಆಗುವುದು ಆದರೆ ಮಾನವ ಕುಲವು ಕೆಲವೊಮ್ಮೆ  ಮಾನವೀಯತೆಗಿಂತ,ಸ್ನೇಹ- ಸಂಬಂಧಗಳಿಗಿಂತ ಹೆಚ್ಚು ಮಾನವ ಒಲವನ್ನು ನೀಡುವುದು ಹಣಕ್ಕೆ ಮಾತ್ರ.

ಹಣವೆಂಬ ಮಾಯೆ,ಹಣಕೆ ಮರುಳಾಗದವರು ಯಾರು ಇಲ್ಲ ! Read More »

error: Content is protected !!
Scroll to Top