January 2025

ಸುಳ್ಯದ 108 ಆಂಬ್ಯುಲೆನ್ಸ್ ನ ಟಯರ್ ಸವೆದರೂ ಬದಲಾಗದ ಟಯರ್, ಅಪಾಯದಲ್ಲಿ ಸುಳ್ಯದ 108 ಆಂಬ್ಯುಲೆನ್ಸ್

ಸುಳ್ಯ ತಾಲೂಕು ಆಸ್ಪತ್ರೆಯ 108 ಆಂಬುಲೆನ್ಸ್ ಕಳೆದ ಮೂರು ದಿನದಿಂದ ಗಾಡಿಯ ಟೈಯರ್ ಸಮಸ್ಯೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.ಡ್ಯೂಟಿ ರೋಸ್ಟರ್ ಕೂಡ ಚೇಂಜ್ ಆಗಿ ಇನ್ನಷ್ಟು ಸಾರ್ವಜನಿಕ ವಲಯಗಳಲ್ಲಿ ತೊಂದರೆಗಳು ಉಂಟಾಗಿದೆ ಇದರ ಬಗ್ಗೆ ಸಚಿವರು ಆದಷ್ಟು ಬೇಗ ಗಮನ ಹರಿಸಬೇಕಾಗಿದೆ.108 ಆಂಬುಲೆನ್ಸ್ ಜವಾಬ್ದಾರಿ ಹೊತ್ತಿರುವ ಗ್ರೀನ್ ಹೆಲ್ತ್ ಸರ್ವಿಸ್, ಇ ಎಂ ಅರ್ ಐ ಏಕ ಏಕಿಯಾಗಿ ಡ್ಯೂಟಿ ರೂಸ್ಟರ್ ಚೇಂಜ್ ಮಾಡಿದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸಾರ್ವಜನಿಕರಿಗೆ 108 ಸೇವೆಯಲ್ಲಿ […]

ಸುಳ್ಯದ 108 ಆಂಬ್ಯುಲೆನ್ಸ್ ನ ಟಯರ್ ಸವೆದರೂ ಬದಲಾಗದ ಟಯರ್, ಅಪಾಯದಲ್ಲಿ ಸುಳ್ಯದ 108 ಆಂಬ್ಯುಲೆನ್ಸ್ Read More »

ಪ್ರಿಯಕರನಿಗೆ ಚೂರಿಯಿಂದ ಇರಿದ ಯುವತಿ

ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪಾರ್ಟಿಗೆ ಬಂದಿದ್ದ ಪ್ರಿಯತಮನಿಗೆ ಚೂರಿಯಿಂದ ಇರಿದ ಘಟನೆ ಬುಧವಾರ ನಡೆದಿದೆ. ಮನುಕುಮಾ‌ರ್ (25) ಚಾಕು ಇರಿತಕ್ಕೊಳಗಾದ ಯುವಕ. ಈತನಿಗೆ ಪ್ರಿಯತಮೆ ಭವಾನಿ ಚಾಕುವಿನಿಂದ ಇರಿದಿದ್ದಾಳೆ. ಪ್ರಿಯತಮೆ ಹಾಗೂ ಮನುಕುಮಾರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲವು ದಿನಗಳಿಂದ ಅವರು ವೈಮನಸ್ಸಿಂದ ದೂರವಾಗಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿದ ಸಂದರ್ಭದಲ್ಲಿ ಮನುಕುಮಾರ್ ಮನೆಗೆ ತೆರಳುತ್ತಿದ್ದ ವೇಳೆ ಯುವತಿ ಮನುಕುಮಾರಿಗೆ ಚಾಕು ಇರಿದಿದ್ದಾಳೆ.

ಪ್ರಿಯಕರನಿಗೆ ಚೂರಿಯಿಂದ ಇರಿದ ಯುವತಿ Read More »

ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನಬ್ರಹ್ಮಕಲಶೋತ್ಸವ ಅಂಗವಾಗಿ ಭಕ್ತರಿಂದ ಹಸುರು ಹೊರೆಕಾಣಿಕೆ ಸಮರ್ಪಣೆ

ಕಡಬ ತಾಲೂಕಿನ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬುಧವಾರದಿಂದ ಜ.೭ರ ವರೆಗೆ ನಡೆಯಲಿದ್ದು ಆ ಪ್ರಯುಕ್ತ ಕ್ಷೇತ್ರಕ್ಕೆ ಭಕ್ತರು ಬುಧವಾರ ಹಸುರು ಹೊರೆಕಾಣಿಕೆ ಸಮರ್ಪಿಸಿದರು.ಬೆಳಗ್ಗೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನೆರವೇರಿಸಲಾಯಿತು. ಕ್ಷೇತ್ರಕ್ಕೆ ಭಕ್ತರು ಸಲ್ಲಿಸಿದ ಹೊರೆ ಕಾಣಿಕೆಯನ್ನು ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಯಿತು. ಅಲೆಕ್ಕಾಡಿ ಮುಖ್ಯದ್ವಾರದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ವ್ಯವಸ್ಥಾಪನಾ

ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನಬ್ರಹ್ಮಕಲಶೋತ್ಸವ ಅಂಗವಾಗಿ ಭಕ್ತರಿಂದ ಹಸುರು ಹೊರೆಕಾಣಿಕೆ ಸಮರ್ಪಣೆ Read More »

ವಾಟರ್ ಬೆಡ್ ಕೊಡುಗೆ

ಸಂಪಾಜೆ ವಲಯ ತೊಡಿಕಾನ ಕಾರ್ಯಕ್ಷೇತ್ರದ ಆದಿಶಕ್ತಿ ಸಂಘದ ಸದಸ್ಯ ರಾದ ವಸಂತಿ ರವರ ಅತ್ತೆಯವರಾದ ರಾಮಕ್ಕ‍ರವರು ಅನಾರೋಗ್ಯದಿಂದ ಇದ್ದು ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ನ್ನು ವಲಯ ಜನಜಾಗ್ರತಿ ಅಧ್ಯಕ್ಷರಾದ ಸೋಮಶೇಖರ ಪೈಕ ರವರು ವಿತರಿಸಿದರು ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು

ವಾಟರ್ ಬೆಡ್ ಕೊಡುಗೆ Read More »

ಹುತಾತ್ಮ ಯೋಧ ದಿವಿನ್‌ರಿಗೆ ಅಂತಿಮ ನಮನ ಸಲ್ಲಿಸಿದ ಸದಾನಂದ ಮಾವಜಿ

ಮಡಿಕೇರಿ: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ತೀವ್ರ ಗಾಯಗೊಂಡು ಹುತಾತ್ಮರಾದ ಸೈನಿಕ ಪಿ.ಪಿ. ದಿವಿನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಸೂದನ ಈರಪ್ಪ, ಸಿಬ್ಬಂದಿ ಜ್ಯೋತಿ ಅವರುಗಳು ಜೊತೆಯಲ್ಲಿದ್ದು ಹುತಾತ್ಮ ದಿವಿನ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ದಿವಿನ್ ಅವರ ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ

ಹುತಾತ್ಮ ಯೋಧ ದಿವಿನ್‌ರಿಗೆ ಅಂತಿಮ ನಮನ ಸಲ್ಲಿಸಿದ ಸದಾನಂದ ಮಾವಜಿ Read More »

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕುಂಬಳಚೇರಿ ಶಾಲೆಗೆ ಸ್ಮಾರ್ಟ್ ಟಿ.ವಿ ಹಸ್ತಾಂತರ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇದರ ಅಡಿಯಲ್ಲಿ ಕರ್ನಾಟಕ ಸಂಭ್ರಮ -50 2024-25 ನೇ ಸಾಲಿನ ಸ್ಮಾರ್ಟ್ ಟಿ.ವಿ.ಯನ್ನು ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ, ಹಿರಿಯ ರಾಜಕಾರಣಿ, ಊರಿನ ಹಿರಿಯರಾದ ಪ್ರೊ.ರಾಧಾಕೃಷ್ಣ ಕೆ.ಇ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಂಬಳಚೇರಿ ಹಿ.ಪ್ರಾ ಶಾಲೆಗೆ ನೀಡಲಾಯಿತು.ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಇದ್ದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕುಂಬಳಚೇರಿ ಶಾಲೆಗೆ ಸ್ಮಾರ್ಟ್ ಟಿ.ವಿ ಹಸ್ತಾಂತರ Read More »

ಭಾರತೀಯ ಯೋಧ ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ

ಕ್ಯಾಪ್ಟನ್ ವಸಂತ ಪೇರಡ್ಕರವರು ಭಾರತೀಯ ಸೇನೆಯಲ್ಲಿ ಸುದೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಡಿ.31 ಸೇವೆಯಿಂದ ನಿವೃತ್ತಿಯಾದರು.1996 ಏಪ್ರಿಲ್ 25 ರಂದು ಸೇನೆಗೆ ಸೇರ್ಪಡೆಗೊಂಡ ಇವರು ರಾಜಸ್ತಾನ, ಅಸ್ಸಾಂ, ಜಮ್ಮು ಕಾಶ್ಮೀರ, ಲಡಾಕ್, ಅರುಣಾಚಲ ಪ್ರದೇಶ, ಕೊಯಮತ್ತೂರು, ಆಂಧ್ರ ಪ್ರದೇಶ ದಲ್ಲಿ ಸೇವೆ ಸಲ್ಲಿಸಿದ್ದರು.ಇವರು ಪೇರಡ್ಕದ ಮಡಪ್ಪಾಡಿ ರಾಮಚಂದ್ರ ಮತ್ತು ದೇವಕಿ ದಂಪತಿಯ ಪುತ್ರ. ವಸಂತ ರವರ ಪತ್ನಿ ಮಮತಾ, ಪುತ್ರಿಯರಾದ ತ್ರಿಶಾ ಪಿ.ವಿ., ದಿಶಾ ಪಿ.ವಿ. ರೊಂದಿಗೆ ನೆಲೆಸಿದ್ದಾರೆ.

ಭಾರತೀಯ ಯೋಧ ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ Read More »

ಕಡಬ ಠಾಣೆಯಲ್ಲಿ ಹಿಂದು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ರೌಡಿಶೀಟರ್ ರದ್ದುಗೋಳಿಸಿದ ಹೈಕೋರ್ಟ್

ಕಡಬ ತಾಲೂಕಿನ ಮರ್ಧಾಳ ಹಿಂದೂ ಕಾರ್ಯಕರ್ತರಾದ ವಿನುತ್ ಕೆ ಮತ್ತು ಶ್ರೀಕರ ಕಂಪ ಇವರ ಮೇಲೆ ದಾಖಲಾಗಿದ್ದ ರೌಡಿಶೀಟರ್ ನ್ನು ಕರ್ನಾಟಕದ ಉಚ್ಚ ನ್ಯಾಯಾಲಯ ರದ್ದುಗೋಳಿಸಿ ಆದೇಶ ಮಾಡಿದೆ.ಅರ್ಜಿದಾರರ ಪರ ಹೈಕೋರ್ಟ್ ನ್ಯಾಯವಾದಿ ಬಿ ವಿನೋದ್ ಕುಮಾರ್ ವಾದ ಮಂಡಿಸಿದರು.

ಕಡಬ ಠಾಣೆಯಲ್ಲಿ ಹಿಂದು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ರೌಡಿಶೀಟರ್ ರದ್ದುಗೋಳಿಸಿದ ಹೈಕೋರ್ಟ್ Read More »

ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿ, ಹೆಂಡತಿಯ ಕೊಲೆಗೆ ಯತ್ನಿಸಿದ ಆರೋಪಿಗೆ ಮರಣದಂಡನೆ ವಿಧಿಸಿದ ಮಂಗಳೂರು ನ್ಯಾಯಾಲಯ

ಮೂವರು ಮಕ್ಕಳನ್ನು ಬಾವಿಗೆ ನೂಕಿ ಹಾಕಿ ಕೊಲೆಗೈದು, ಪತ್ನಿಯನ್ನು ಕೊಲೆಗೆ ಯತ್ನಿಸಿದ್ದ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ, ಕಿನ್ನಿಗೋಳಿ ಪದ್ಮನೂರು ನಿವಾಸಿ ಹಿತೇಶ್ ಶೆಟ್ಟಿಗಾರ್ ಎಂಬಾತನಿಗೆ ಮಂಗಳೂರು ನ್ಯಾಯಾಲಯವು ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ.ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಸಂಜೆ 5.15ಕ್ಕೆ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ (11), ದಕ್ಷಿತ್ (5) ಎಂಬವರನ್ನು ಬಾವಿಗೆ ತಳ್ಳಿ ಹಾಕಿ ಕೊಲೆ ಮಾಡಿದ್ದಲ್ಲದೆ, ತನ್ನ ಪತ್ನಿ ಲಕ್ಷ್ಮಿ ಯನ್ನು

ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿ, ಹೆಂಡತಿಯ ಕೊಲೆಗೆ ಯತ್ನಿಸಿದ ಆರೋಪಿಗೆ ಮರಣದಂಡನೆ ವಿಧಿಸಿದ ಮಂಗಳೂರು ನ್ಯಾಯಾಲಯ Read More »

ಕೋಳಿಕಲ್ಲು ಮಲೆ ಮೀಸಲು ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿ ಮಾಡುತ್ತಿದ್ದ 30 ಜನರು ಅರಣ್ಯ ಇಲಾಖೆಯ ವಶ!

ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆಯಲ್ಲಿ ಹೊಸ ವರ್ಷ ಆಚರಣೆ ಪಾರ್ಟಿ ಮಾಡುತ್ತಿದ್ದ 40 ಜನರು ಅರಣ್ಯ ಇಲಾಖೆಯ ವಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ.ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶದ ಬಗ್ಗೆ ಬಂಧಿಸಿ ಕೇಸು ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಇದರಲ್ಲಿ ಕಡಬ, ಸುಳ್ಯ ಹಾಗೂ ಪೆರಾಜೆ ಭಾಗದವರು ಇದ್ದರೆಂದು ಹೇಳಲಾಗಿದೆ

ಕೋಳಿಕಲ್ಲು ಮಲೆ ಮೀಸಲು ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿ ಮಾಡುತ್ತಿದ್ದ 30 ಜನರು ಅರಣ್ಯ ಇಲಾಖೆಯ ವಶ! Read More »

error: Content is protected !!
ಮಾರ್ದನಿ ವಾಟ್ಸಪ್‌ ಗ್ರೂಪ್‌ಗೆ ಸೇರಿ