Uncategorized

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ಅರ್ಚಕರಾಗಿ ಮನೋಜ್ ಭಟ್ ಕನ್ಯಾನ ನೇಮಕ

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ಅರ್ಚಕರಾಗಿ ಮನೋಜ್ ಭಟ್ ಕನ್ಯಾನ ನೇಮಕಗೊಂಡಿದ್ದು ದೇವಳದ ವ್ಯವಸ್ಥಾಪನಾ ಸಮಿತಿಯವರು ಸ್ವಾಗತಿಸಿದರು.ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ ಕಾನತ್ತೂರ್,ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತ್ಯ ನಾರಾಯಣ ಭಟ್, ಸಂತೋಷ ಕುಮಾರ್ ರೈ ಪಲತಡ್ಕ, ಮೈಲಪ್ಪ ಗೌಡ ಎಣ್ಮೂರು,ಧರ್ಮಪಾಲ ಗೌಡ ಮರಕಡ, ಧರ್ಮಣ್ಣ ನಾಯ್ಕ ಗರಡಿ, ಮಾಲಿನಿ ಕುದ್ವ,ಪವಿತ್ರ ಮೆಲ್ಲೆಟ್ಟಿ ಹಾಗೂ ಗೌರವ ಸಲಹೆಗಾರರಾದ ಪರಮೇಶ್ವರ ಗೌಡ ಬಿಳಿಮಲೆ ಉಪಸ್ಥಿತರಿದ್ದರು.

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ಅರ್ಚಕರಾಗಿ ಮನೋಜ್ ಭಟ್ ಕನ್ಯಾನ ನೇಮಕ Read More »

ಜೂನ್ 9 ರಂದು ಜಿಫ್ರಿ ತಂಘಳ್ ರವರಿಂದ ಅರಂತೋಡು ಮಸೀದಿಯ ಮೇಲಂತಸ್ತು ಮತ್ತು ನೂತನ ಮದರಸ ಕಟ್ಟಡಕ್ಕೆ ಶಿಲಾನ್ಯಾಸ

ಅರಂತೋಡು : ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಮೇಲಂತಸ್ತು ನಿರ್ಮಾಣ ಕಾಮಗಾರಿಗೆ ಹಾಗೂ ನುಸ್ರತುಲ್ ಇಸ್ಲಾಂ ಮದರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜೂನ್ 9 ರಂದು ಬೆಳಗ್ಗೆ ಗಂಟೆ 9.30ಕ್ಕೆ ಅರಂತೋಡು ಮಸೀದಿ ವಠಾರದಲ್ಲಿ ನಡೆಯಲಿದೆ. ನೂತನ ಮದರಸ ಕಟ್ಟಡಕ್ಕೆ ಶಿಲಾನ್ಯಾಸವನ್ನು ಸಮಸ್ತ ಕೇರಳ ಜಂಇತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಉಲಮಾ, ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಘಳ್ ನೆರವೇರಿಸಲಿದ್ದು, ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್

ಜೂನ್ 9 ರಂದು ಜಿಫ್ರಿ ತಂಘಳ್ ರವರಿಂದ ಅರಂತೋಡು ಮಸೀದಿಯ ಮೇಲಂತಸ್ತು ಮತ್ತು ನೂತನ ಮದರಸ ಕಟ್ಟಡಕ್ಕೆ ಶಿಲಾನ್ಯಾಸ Read More »

ಮಾಣಿ : ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು

ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ ಸಮೀಪದಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಪ್ರತಿಭಾವಂತೆಯಾಗಿರುವ ಬಾಲಕಿ ನೈರುತಿ ಎಂ ಸುವರ್ಣ(10) ಮೃತಪಟ್ಟ ಘಟನೆ ವರದಿಯಾಗಿದೆ.ಬಾಳ್ತಿಲ ಗ್ರಾಮದ ನಿವಾಸಿ ಹೇಮಂತ್ ಎಂಬವರ ಪುತ್ರಿಯಾಗಿರುವ ನೈರುತಿ ಪ್ರತಿಭಾವಂತೆಯಾಗಿದ್ದಳು,ತಂದೆ ಮತ್ತು ತಾಯಿಯೊಂದಿಗೆ ಬುಧವಾರ ಸಂಜೆ ವೇಳೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬರುವಾಗ ಸೂರಿಕುಮೇರು ಸಮೀಪಿಸುತ್ತಿರುವಾಗಲೇ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದು ಕಾಂಕ್ರೀಟ್ ರಸ್ತೆಗೆಸೆಯಲ್ಪಟ್ಟ ನೈರುತಿಯ ತಲೆ ಭಾಗಕ್ಕೆ ಗಂಭೀರ ಪೆಟ್ಟು ತಗುಲಿರುವುದರಿಂದ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಸಾವನ್ನಪ್ಪಿದಳು.

ಮಾಣಿ : ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು Read More »

ಡಿ.ಕೆ.ಶಿ ಸರ್ಕಾರದ ಮೊದಲ ವಿಕೆಟ್ ಪತನ!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ತಮಗೆ ನಿರೀಕ್ಷಿತ “ಬೆಂಗಳೂರು ನಗರಾಭಿವೃದ್ಧಿ” ಖಾತೆ ಸಿಗದ ಕಾರಣ ಅಚ್ಚರಿಯ ರಾಜೀನಾಮೆ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಖಾತೆ ಸಿಗದ ಕಾರಣ ಸಚಿವ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲದೆ ಈ ನಿರ್ಧಾರ ಕೈಗೊಂಡಿದ್ದೇನೆ,” ಎಂದು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿ ಸರ್ಕಾರದ ಮೊದಲ ವಿಕೆಟ್ ಪತನ! Read More »

ಆರು ಜನರ ಮರ್ಡರ್ ಪ್ರಕರಣ, ಪ್ರಮುಖ ಆರೋಪಿ ಸೇರಿ ಹಲವರ ಬಂಧನ!

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಆಸ್ತಿ ವಿವಾದ ಸಂಬಂಧಿತ ಆರು ಜನರ ಭೀಕರ ಕೊಲೆ ಪ್ರಕರಣದಲ್ಲಿ, ಪೊಲೀಸರು ಪ್ರಮುಖ ಸೂತ್ರಧಾರಿ ಹಾಗೂ ಮುಖ್ಯ ಆರೋಪಿ ಸೇರಿದಂತೆ ಮತ್ತಿಬ್ಬರನ್ನು ಗುರುವಾರ ಬಂಧಿಸಿದ್ದಾರೆ. ಈ ಬಂಧನಗಳೊಂದಿಗೆ ಒಟ್ಟು ಹದಿನೇಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಮೇ 29ರಂದು ನಡೆದಿದ್ದ ಈ ಪ್ರಕರಣದ ತನಿಖೆ

ಆರು ಜನರ ಮರ್ಡರ್ ಪ್ರಕರಣ, ಪ್ರಮುಖ ಆರೋಪಿ ಸೇರಿ ಹಲವರ ಬಂಧನ! Read More »

ಅರಂತೋಡು ತೊಡಿಕಾನ ರಸ್ತೆ ಪರ್ನೋಜಿ‌ ಸಮೀಪ ಕುಸಿತ!

ಅರಂತೋಡು ತೊಡಿಕಾನ ದ ಪರ್ನೋಜಿ ಸಮೀಪ ಮುಖ್ಯ ರಸ್ತೆಯ ತಲಭಾಗದಲ್ಲಿ ಭೂಕುಸಿತವಾಗಿದ್ದು ಅಪಾಯ ಎದುರಾಗಿದೆ.ವಾಹನ ಸವಾರರು ಗಮನ ಹರಿಸಬೇಕಾಗಿದೆ.

ಅರಂತೋಡು ತೊಡಿಕಾನ ರಸ್ತೆ ಪರ್ನೋಜಿ‌ ಸಮೀಪ ಕುಸಿತ! Read More »

ಮರ್ಕಂಜ : ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನ‌ ಹಸ್ತಾಂತರ

ಸಂಪಾಜೆ ವಲಯದ ಮರ್ಕಂಜ ಗ್ರಾಮದ ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನವನ್ನು ಸುಳ್ಯ ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಾಂತಪ್ಪ ರೈ ಮತ್ತು ಸಮಿತಿಯ ಸದಸ್ಯರುಗಳಾದ ರಾಘವ ಗೌಡ ಕಂಜಿಪಿಲಿ ಗೋವಿಂದ ಅಳವುಪಾರೆ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕುಂಞಮು ಕಾರ್ಯದರ್ಶಿಯಾದ ರವಿ ಮತ್ತು ಸರ್ವ ಸದಸ್ಯರು ಹಾಗೂ ವಲಯದ ಮೇಲ್ವಿಚಾರಕರಾದ ಹರೀಶ್ ಆಚಾರ್ಯ

ಮರ್ಕಂಜ : ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನ‌ ಹಸ್ತಾಂತರ Read More »

ಜೂ.15ರಿಂದ ಜೂ.18ರ ತನಕ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಸುಳ್ಯದ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಜೂನ್ 15ರಿಂದ ಜೂ.18ರ ತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಕಾಮತ್,ಧರ್ಮದರ್ಶಿ ಉಮೇಶ್ ಪಿ.ಕೆ,ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ತಿಳಿಸಿದ್ದಾರೆ.ಅವರು ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಇತ್ತೀಚೆಗೆ ಸ್ಥಳದ ಮತ್ತು ದೈವಗಳ ಬಗ್ಗೆ ಪ್ರಶ್ನಾಚಿಂತನೆ ಇಟ್ಟಾಗ ದೈವಗಳಿಗೆ ನೂತನ ಶಿಲಾಮಯ ಗುಡಿ ನಿರ್ಮಿಸಬೇಕೆಂಬ ಚಿಂತನೆ ಮೂಡಿ ಬಂದು ಆ

ಜೂ.15ರಿಂದ ಜೂ.18ರ ತನಕ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

ಪರಿವಾರಕಾನ : ತ್ಯಾಜ್ಯ ಎಸೆದವರಿಗೆ ದಂಡ

ಅಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಪರಿವಾರ ಕಾನದಲ್ಲಿ ತ್ಯಾಜ್ಯ ಎಸೆದವರಿಗೆ ಗ್ರಾಮ ಪಂಚಾಯತಿ ವತಿಯಿಂದ 3000 ರೂಪಾಯಿ ದಂಡನೆ ವಿಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಸೆದ ತ್ಯಾಜ್ಯಗಳನ್ನು ಪರಿಶೀಲಿಸಿದಾಗ ಲಭ್ಯವಾದ ವಿಳಾಸದಂತೆ ದಂಡಪಾವತಿಸುವಂತೆ ತಿಳಿಸಲಾಯಿತು. ಇದಕ್ಕೆ ಸಹಕರಿಸದಿದ್ದಾಗ ಸುಳ್ಳದ ಪೋಲೀಸ್ ಸಬ್ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್ ರವರ ಸಹಕಾರದೊಂದಿಗೆ ದಂಡನೆಯನ್ನು ವಿಧಿಸಲಾಗಿದೆ. ಮತ್ತು ಈ ಕಾರ್ಯಾಚರಣೆಯು ನಿರಂತರವಾಗಿ ಮುಂದುವರಿಯಲಿದೆ ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ ಆರ್ ಅವರು ತಿಳಿಸಿದ್ದಾರೆ

ಪರಿವಾರಕಾನ : ತ್ಯಾಜ್ಯ ಎಸೆದವರಿಗೆ ದಂಡ Read More »

ಸಾಹಿತ್ಯ ನಿಧಿ ಪ್ರಕಾಶನದ ವತಿಯಿಂದ ಸ್ವ ರಚಿತ – ಕವನಗಳ ಆಹ್ವಾನ

ಶ್ರೀ ನಿಮಿಷಾಂಭ ದೇವಿಯ ಕೃಪಾಶೀರ್ವಾದದಿಂದ“ನಿಮಿಷಾಂಭ ದೇವಿ ಕವನ ಸಂಕಲನ”ಕ್ಕಾಗಿಭಕ್ತ ಕವಿಗಳಿಂದ ಸ್ವರಚಿತ ಕನ್ನಡ ಕವನಗಳನ್ನು ಸಾಹಿತ್ಯ ನಿಧಿ ಪತ್ರಿಕೆ ಮತ್ತು ಪ್ರಕಾಶನ ಆಹ್ವಾನ ಮಾಡಲಾಗಿದೆ.ವಿಷಯ:ದೇವಿಯ ಮಹಿಮೆ • ಭಕ್ತಿ • ಕ್ಷೇತ್ರ ವೈಭವ • ಭಕ್ತರ ಅನುಭವನಿಯಮಗಳು:

ಸಾಹಿತ್ಯ ನಿಧಿ ಪ್ರಕಾಶನದ ವತಿಯಿಂದ ಸ್ವ ರಚಿತ – ಕವನಗಳ ಆಹ್ವಾನ Read More »

error: Content is protected !!
Scroll to Top