March 2025

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವತಿಯಿಂದ ರೂ 2ಲಕ್ಷ ಅನುದಾನದ ಮಂಜುರಾತಿ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ವಲಯದ ಕಲ್ಮಕಾರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ(ನಿ.) ಇದರ ಕಟ್ಟಡ ರಚನೆಗೆ ಶ್ರೀ ಕ್ಷೇತ್ರದಿಂದ ರೂ.2,00,000/- ಮೊತ್ತ ಅನುದಾನ ಮಂಜೂರಾಗಿದ್ದು, ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಕಟ್ಟಡದ ಉಧ್ಘಾಟನೆಯನ್ನು ಶ್ರೀ ಕೆ.ಪಿ ಸುಚರಿತ ಶೆಟ್ಟಿ ಅಧ್ಯಕ್ಷರು ದ.ಕ ಹಾಲು ಒಕ್ಕೂಟ ಮಂಗಳೂರು ಇವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಶ್ರೀ ಗಣೇಶ್ […]

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವತಿಯಿಂದ ರೂ 2ಲಕ್ಷ ಅನುದಾನದ ಮಂಜುರಾತಿ ಪತ್ರ ವಿತರಣೆ Read More »

ಮೋರಿಗೆ ಕಾರು ಡಿಕ್ಕಿ ಹೊಡೆದು ಪ್ರಯಾಣಿಕರಿಗೆ ಗಾಯ

ಸಂಪಾಜೆ ಸಮೀಪ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾ 10 ರಂದು ತಡ ರಾತ್ರಿ ಸುಮಾರು 1.45 ಗಂಟೆ ಸಮಯಕ್ಕೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮೋರಿಗೆ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ವರದಿಯಾಗಿದೆ. .ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತಿದ್ದ ಕಾರು ಮೂಲತಃ ಮಂಡ್ಯ ಮೂಲದವರಾಗಿದ್ದು ಚಾಲಕ ಅರುಣ್ ಸೇರಿದಂತೆ ಕಾರಿನಲ್ಲಿದ್ದ ಅವರ ಪತ್ನಿ ಹೇಮಾವತಿ, ಮಗ ಲಿಖಿತ್ ಮಗಳು ಲಾಸ್ಯ ಪ್ರಯಾಣಿಸುತ್ರಿದ್ದರು.ಘಟನೆಯಿಂದ ಹೇಮಾವತಿ ಹಾಗೂ ಮಗ ಲಿಖಿತ್ ಗೆ ಗಾಯಾಗಳಾಗಿದ್ದು ಕಾರಿನ

ಮೋರಿಗೆ ಕಾರು ಡಿಕ್ಕಿ ಹೊಡೆದು ಪ್ರಯಾಣಿಕರಿಗೆ ಗಾಯ Read More »

ಶಾಲಾ ಮಕ್ಕಳಿದ್ದ ರಿಕ್ಷಾಕ್ಕೆ ಕಾರು ಡಿಕ್ಕಿ

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಅಗಲ್ಪಾಡಿ ಎಂಬಲ್ಲಿ ಅಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಅಟೋದಲ್ಲಿದ್ದ ಶಾಲಾ ಮಕ್ಕಳು ಗಾಯಗೊಂಡು ಎರಡೂ ವಾಹನಗಳು ಜಖಂಗೊಂಡ ಘಟನೆ ಮಾ.10ರಂದು ಬೆಳಿಗ್ಹೆ ಬೆಳ್ನಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಅಟೋ ಬೆಳ್ಳಾರೆ ಕೆ.ಪಿ.ಎಸ್ ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರು ಸುಳ್ಯದ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳದೆಂದು ತಿಳಿದುಬಂದಿದೆ. ಅಟೋದಲ್ಲಿದ್ದ ಒಬ್ಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.

ಶಾಲಾ ಮಕ್ಕಳಿದ್ದ ರಿಕ್ಷಾಕ್ಕೆ ಕಾರು ಡಿಕ್ಕಿ Read More »

ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ಅವರಿಗೆ ಅಂತಾರಾಷ್ಟ್ರೀಯ ವನಿತಾ ಪ್ರಶಸ್ತಿ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 9 ರಂದು ಬಾಪೂ ಸಭಾಂಗಣ ಗಾಂಧಿ ಭವನ ಬೆಂಗಳೂರಿಲ್ಲಿ ಚೇತನ ಪೌಂಡೇಶನ್ ಕರ್ನಾಟಕ ಸೋಶಿಯಲ್ ಕ್ಲಬ್ ಆಶ್ರಯದಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಅಕ್ಷತಾ ನಾಗನಕಜೆ ಅವರ ಸಾಹಿತ್ಯ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಚೇತನ ಫೌಂಡೇಶನ್ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಅವರು ಅಂತರಾಷ್ಟ್ರೀಯ ವನಿತಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ಅವರಿಗೆ ಅಂತಾರಾಷ್ಟ್ರೀಯ ವನಿತಾ ಪ್ರಶಸ್ತಿ Read More »

ತೊಡಿಕಾನ : ಗೌಡ ಕಪ್ ಕಬಡ್ಡಿ ಪಂದ್ಯಾಟ,ಐತ್ತೂರು ತಂಡ ವಿನ್ನರ್,ಆದರ್ಶ ಹೊಸಮಠ ತಂಡ ರನ್ನರ್

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ನಡೆದ ಹೊನಲು ಬೆಳಕಿನಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಐತ್ತೂರು ತಂಡ ಆದರ್ಶ ಹೊಸಮಠದ ವಿರುದ್ದ ರೋಚಕ 16.6 ಅಂತರದಿಂದ ಜಯಗಳಿಸಿ ಪ್ರಥಮ ಸ್ಥಾನ ಪಡಕೊಂಡಿದೆ.ಆದರ್ಶ ಹೊಸಮಠ ತಂಡ ದ್ವಿತೀಯ ಸ್ಥಾನ ಪಡಕೊಂಡಿತು.ಎಣ್ಮೂರು ತಂಡ ತೃತೀಯ ಸ್ಥಾನವನ್ನು,ಅರಂತೋಡು ಉಳುವಾರು ತಂಡ ಚತುರ್ಥ ಸ್ಥಾನವನ್ನು ಪಡಕೊಂಡಿತು.ಐತ್ತೂರು

ತೊಡಿಕಾನ : ಗೌಡ ಕಪ್ ಕಬಡ್ಡಿ ಪಂದ್ಯಾಟ,ಐತ್ತೂರು ತಂಡ ವಿನ್ನರ್,ಆದರ್ಶ ಹೊಸಮಠ ತಂಡ ರನ್ನರ್ Read More »

ತೊಡಿಕಾನ : ಗೌಡ ಕಪ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ಫೆ.8ರಂದುತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೈದಾನದಲ್ಲಿ ಉದ್ಘಾಟನೆಗೊಂಡಿದೆ.ಶ್ರೀ ಅಕ್ಷಯ್ ಕುರುಂಜಿ ಆರ್ಕಿಟೆಕ್ಟ್ಎ.ಓ.ಎಲ್.ಇ.(ರಿ.),ಕುರುಂಜಿಭಾಗ್‌, ಸುಳ್ಯ ಇವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಶ್ರೀ ಬಿ. ರಮಾನಂದ ಗೌಡ ಬಾಳೆಕಜೆ ಅಧ್ಯಕ್ಷರು, ಗೌಡರ ಯುವ ಸೇವಾ ಸಂಘ ತೊಡಿಕಾನ ಗ್ರಾಮ ಅಧ್ಯಕ್ಷತೆ ವಹಿಸಲಿದ್ದರು‌ ಅರಂತೋಡು ತೊಡಿಕಾನ ಪ್ರಾಥಮಿಕ

ತೊಡಿಕಾನ : ಗೌಡ ಕಪ್ ಕಬಡ್ಡಿ ಪಂದ್ಯಾಟ ಉದ್ಘಾಟನೆ Read More »

ಬಾಜಿನಡ್ಕ : ಧಾರ್ಮಿಕ ಸಭಾ ಕಾರ್ಯಕ್ರಮ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬಾಜಿನಡ್ಕ ಆದಿನಾಗಬ್ರಹ್ಮ ಮೊಗೇರ್ಕಳ ದೈವಗಳ ನೇಮೋತ್ಸವ ಮತ್ತು ಸ್ವಾಮಿ ಕೊರಗಜ್ಕ ದೈವದ ಕೋಲದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮವು ಮಾ.8 ರಂದು ಸಂಜೆ ದೈವಸ್ಥಾನ ವಠಾರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ ಉದ್ಘಾಟಿಸಿದರು. ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠದ ಶ್ರೀ ಶ್ರೀ ರಾಜೇಶ್ ನಾಥ್ ಜೀ ಆಶೀರ್ವಚನ ಮಾಡಿದರು.ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ ಸದಸ್ಯ ಹರೀಶ್

ಬಾಜಿನಡ್ಕ : ಧಾರ್ಮಿಕ ಸಭಾ ಕಾರ್ಯಕ್ರಮ Read More »

ನಿವೃತ್ತ ಯೋಧ ಮೋಹನ ಕೆ. ಸಿ. ಹೃದಯಾಘಾತದಿಂದ ನಿಧನ

ಕೊಡಗು ಜಿಲ್ಲೆಯ ಪೆರಾಜೆ ಗ್ರಾಮದ ಅಮೆಚೂರ್ ಕೋಡಿಮನೆ ದಿ. ಚಂಗಪ್ಪರ ಪುತ್ರ ನಿವೃತ್ತ ಯೋಧ ಮೋಹನ ಕೆ. ಸಿ.ಯವರು ಹೃದಯಾಘಾತದಿಂದ ಮಾ. ೫ ರಂದು ನಿಧನರಾದರು.ಭಾರತೀಯ ಸೇನೆಯಲ್ಲಿ ೨೪ವರ್ಷ ಸೇವೆಗೈದು ಎರಡು ತಿಂಗಳ ಹಿಂದೆ ನಿವೃತ್ತಿಹೊಂದಿ ಮಡಿಕೇರಿಯ ಮನೆಯಲ್ಲಿ ವಾಸಿಸುತ್ತಿದ್ದರು. ಮಾ. ೫ರಂದು ಬೆಳಿಗ್ಗೆ ಸ್ನಾನ ಮಾಡಲೆಂದು ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾದರು. ಅದೇ ದಿನ ಸಂಜೆ ಅಮೆಚೂರು ಕೋಡಿಮನೆಗೆ ಮೃತದೇಹ ತಂದು ಅಂತ್ಯಕ್ರಿಯೆ ನಡೆಸಲಾಯಿತು.ಮೃತರು ಪತ್ನಿ ಟೈನಿ, ಇಬ್ಬರು ಪುತ್ರಿಯರಾದ ವಂಶಿ ಮತ್ತು ಲಿಶಿ

ನಿವೃತ್ತ ಯೋಧ ಮೋಹನ ಕೆ. ಸಿ. ಹೃದಯಾಘಾತದಿಂದ ನಿಧನ Read More »

ತೊಡಿಕಾನ ಗೌಡ ಕಪ್ ಕಬಡ್ಡಿ ಪಂದ್ಯಾಟ,ಮೊದಲ ಪಂದ್ಯಾಟದಲ್ಲಿ ತೊಡಿಕಾನ ಎ ತಂಡಕ್ಕೆ ಜಯ

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ನಡೆದ ಮೊದಲ ಹೊನಲು ಬೆಳಕಿನಪುರುಷರ ಕಬಡ್ಡಿ ಪಂದ್ಯಾಟದಲ್ಲಿತೊಡಿಕಾನ ಎ ತಂಡ ಐವರ್ನಾಡು ತಂಡವನ್ನು 11’18 ಅಂತರದಲ್ಲಿ ಸೋಲಿಸಿ ದ್ವಿತೀಯ ಹಂತದ ಪಂದ್ಯಾಕ್ಕೆ ಅರ್ಹತೆ ಪಡೆದಿದೆ.ತೊಡಿಕಾನ ಎ ತಂಡ ಆರಂಭದಲ್ಲಿ ಮುನ್ನೆಡೆ ಸಾಧಿಸಿಕೊಂಡು ಮುನ್ನುಗಿತು.

ತೊಡಿಕಾನ ಗೌಡ ಕಪ್ ಕಬಡ್ಡಿ ಪಂದ್ಯಾಟ,ಮೊದಲ ಪಂದ್ಯಾಟದಲ್ಲಿ ತೊಡಿಕಾನ ಎ ತಂಡಕ್ಕೆ ಜಯ Read More »

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿಹೆಚ್ಚಿನ ಕಡೆಗಳಲ್ಲಿ ರಾಜಕೀಯ ಹಾಗೂ ಇತರೆ ಸಂಘಟನೆಗಳಿಗೆ ಸಂಭಧಿಸಿದಂತೆ ಹಾಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕೆಲವೊಂದು ಕಡೆಗಳಲ್ಲಿ ಜನರು ಇನ್ನೂ ಬದಲಾಗಿಲ್ಲ…ಇದು ಸಮಾಜದಲ್ಲಿ ನಡೆಯತಕ್ಕಂತ ನಿಜ ವಿಷಯ.ಹೆಣ್ಣನ್ನು ಸಾಮಾಜಿಕವಾಗಿ ಪ್ರತೀ ಕೆಲಸದಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಳಸಿಕೊಳ್ಳೋದು, ಹಾಗೇನೆ ಸಮುದಾಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಂತ ಇಟ್ಟುಕೊಂಡು ಹೆಣ್ಣನಕಸ ಕ್ಲೀನಿಂಗ್, ಸಗಣಿಗುಡಿಸುದಕ್ಕೆ,ಇತರೇ ಕೆಲಸಗಳಿಗೆ ಹೆಣ್ಣನ್ನ ಬಳಸಿಕೊಳ್ತಾರೆ…ಇದೇ ಸಮಾಜದಲ್ಲಿಕೆಲವು ಪ್ರಮುಖರಂತ ಮಹಿಳಾ ದಿನಾಚರಣೆ ಬಗ್ಗೆ ವೇದಿಕೆ ಮೇಲೆ ಭಾಷಣ ಮಾಡಲು ಬಿಟ್ಟರೆ ದೊಡ್ಡದಾಗಿ ಹೆಣ್ಣನ್ನ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ Read More »

error: Content is protected !!
Scroll to Top