April 2025

ಎ. 21, 22: ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ಮಹೋತ್ಸವ, ಪ್ರಶಸ್ತಿ ಪ್ರದಾನ

ಸುಳ್ಯ : ಶ್ರೀ ಗುರು ರಾಘವೆಂದ್ರ ಮಠದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಏ.21ಮತ್ತು 22ರಂದು ವೇ।ಮೂ। ಶ್ರೀಹರಿ ಎಳಚಿತ್ತಾಯ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬೃಂದಾವನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಎಂ.ಎನ್. ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಗುರು ರಾಘವೇಂದ್ರಾ ನುಗ್ರಹ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಇದನ್ನು ಡಾ| `ಆರ್.ಕೆ.ನಾಯರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು. ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ […]

ಎ. 21, 22: ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ಮಹೋತ್ಸವ, ಪ್ರಶಸ್ತಿ ಪ್ರದಾನ Read More »

ಸಾಹಿತಿ ಜನಾರ್ದನ ಕಣಕ್ಕೂರು ನಿಧನ

ಸುಳ್ಯ ತಾಲೂಕಿನ‌ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಸರಕಾರಿ ಆಸ್ಪತ್ರೆಯ ನಿವೃತ್ತ ಉದ್ಯೋಗಿ, ಸಾಹಿತಿ ಜನಾರ್ದನ ಕಣಕ್ಕೂರು (67) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ನಿವೃತ್ತ ಆರೋಗ್ಯ ಸಹಾಯಕಿ ಗಿರಿಜಾ, ಪುತ್ರ ಕ್ಯಾಪ್ಟನ್ ಡಾ.ಕಾರ್ತಿಕ್ ಕಣಕ್ಕೂರು, ಕೌಶಿಕ್ ಕಣಕ್ಕೂರು ಮತ್ತು ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸಾಹಿತಿ ಜನಾರ್ದನ ಕಣಕ್ಕೂರು ನಿಧನ Read More »

ತೊಡಿಕಾನ : ವೈಭವದಿಂದ ನಡೆದ ಶ್ರೀ ಮಲ್ಲಿಕಾರ್ಜುನ ದೇವರ ದೊಡ್ಡ ದರ್ಶನ ಬಲಿ

ಸುಳ್ಯ ಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಅಂಗವಾಗಿ ಏ.17ರಂದು ರಾತ್ರಿ ಶ್ರೀ‌ ದೇವರ ದೊಡ್ಡ ಬೆಳಗು ಉತ್ಸವ ಏ.18ರಂದು ಬೆಳಿಗ್ಗೆ ದೇವರ ದೊಡ್ಡ ದರ್ಶನ ಬಲಿ ವೈಭವದಿಂದ ನಡೆಯಿತು. ಭಕ್ತರ ಸಂಖ್ಯೆ ಹೆಚ್ಚಳಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೊಡ್ಡ ದರ್ಶನ ಬಲಿಗೆ ಭಕ್ತರು ಆಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಅನ್ನಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಮಂಜುಳಾ, ಉಪತಹಶೀಲ್ದಾರ್ ಮಂಜುನಾಥ,ವ್ಯವಸ್ಥಾಪನಾ

ತೊಡಿಕಾನ : ವೈಭವದಿಂದ ನಡೆದ ಶ್ರೀ ಮಲ್ಲಿಕಾರ್ಜುನ ದೇವರ ದೊಡ್ಡ ದರ್ಶನ ಬಲಿ Read More »

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ನಡು ಬೆಳಗು ಉತ್ಸವ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಏ.16ರಂದು ರಾತ್ರಿ ನಡುಬೆಳಗು ಉತ್ಸವ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಯು.ಕೆ ಉಳುವಾರು,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಸದಸ್ಯರಾದ ಯು.ಕೆ ತೀರ್ಥರಾಮ ಉಳುವಾರು, ಕೆ.ಕೆ ಬಾಲಕ್ರಷ್ಣ ಕುಂಟುಕಾಡು, ವಸಂತ ಪೆಲ್ತಡ್ಕ ಚಂಚಲಕ್ಷಿ,ಮಾಲತಿ ಬೋಜಪ್ಪ ಹಾಸ್ಪಾರೆ, ದೇವಳದ ವ್ಯವಸ್ಥಾಪರಾದ ಆನಂದ ಕಲ್ಲಗದ್ದೆ ಜೀರ್ಣೊದ್ದಾರ ಸಮಿತಿಯವರು,ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ನಡು ಬೆಳಗು ಉತ್ಸವ Read More »

ಕಾಡು ಹಂದಿ ಮಾಂಸ ನೀಡುವುದಾಗಿ ವಂಚಿಸಿದ ವ್ಯಕ್ತಿ ಪೊಲೀಸ್ ಬಲೆಗೆ

ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಲ್ಕುಂದದಲ್ಲಿ ನಡೆದಿದೆ.ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ ಹೇಳಿದ್ದ ಎನ್ನಲಾಗಿದ್ದು, ಈ ವೇಳೆ ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರ

ಕಾಡು ಹಂದಿ ಮಾಂಸ ನೀಡುವುದಾಗಿ ವಂಚಿಸಿದ ವ್ಯಕ್ತಿ ಪೊಲೀಸ್ ಬಲೆಗೆ Read More »

ಸುಳ್ಯದ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮ

ಸುಳ್ಯದ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಏ.16ರಂದು ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ತಹಶೀಲ್ದಾರ್ ಮಂಜುಳಾರವರುಭಾರತ್ ವನ್ ಜನಸಂಪರ್ಕ ಕೇಂದ್ರವನ್ನು ಉದ್ಘಾಟಿಸಿದದರು.ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಹಕಾರ ಕ್ಷೇತ್ರವೆಂದ ಕೂಡಲೇ ಮೊದಲು ನೆನಪಿಗೆ ಬರುವ ಜಿಲ್ಲೆಯೆಂದರೆ ಅದು ದ.ಕ. ಜಿಲ್ಲೆ. ಸಹಕಾರ ಪದ್ಧತಿಯಿಂದ ಕುಟುಂಬದ, ಊರಿನ ರಾಷ್ಟ್ರದ ಏಳಿಗೆಯಾಗುತ್ತದೆ ಎಂದರು.ಸುಳ್ಯ

ಸುಳ್ಯದ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮ Read More »

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ,ಇನ್ನೂ ನಾಲ್ಕು ಮಂದಿಯ ಮೇಲೆ ಆರೋಪ ಪಟ್ಟಿ ದಾಖಲು!

ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇನ್ನೂ ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಇವರಲ್ಲಿ ಮೂವರು ತಲೆಮರೆಸಿಕೊಂಡಿದ್ದಾರೆ.ಇದು ಈ ಪ್ರಕರಣದಲ್ಲಿ ಎನ್‌ಐಎ ಸಲ್ಲಿಸಿರುವ ದ್ವಿತೀಯ ಪೂರಕ ಆರೋಪ ಪಟ್ಟಿ ಆಗಿದ್ದು, ಇದರಲ್ಲಿ ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರಹಮಾನ್ ಮತ್ತು ಅತೀಕ್ ಅಹ್ಮದ್ ಎಂಬವರನ್ನು ಹೆಸರಿಸಲಾಗಿದೆ. ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಈ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರೊಂದಿಗೆ ತಲೆಮರೆಸಿರುವ 6 ಮಂದಿ ಸಹಿತ

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ,ಇನ್ನೂ ನಾಲ್ಕು ಮಂದಿಯ ಮೇಲೆ ಆರೋಪ ಪಟ್ಟಿ ದಾಖಲು! Read More »

ಕಸಾಯಿ ಖಾನೆಗೆ ಕೊಂಡೊಯ್ಯಲು ಕಟ್ಟಿ ಹಾಕಿದ ಗೋವುಗಳ ರಕ್ಷಣೆ!

ಕಸಾಯಿಖಾನೆಗೆ ಕೊಂಡೊಯ್ಯಲು ಕಟ್ಟಿ ಹಾಕಿದ್ದ ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ಮೂಡಬಿದರೆ ತೋಡಾರು ಗ್ರಾಮದ ಬಂಗಬೆಟ್ಟು ಶಾಲೆಯ ಹಿಂಭಾಗದ ಗುಡ್ಡದಲ್ಲಿ ಮಂಗಳವಾರ ನಡೆದಿದೆ.ದುಷ್ಕರ್ಮಿಗಳು ಕಸಾಯಿ ಖಾನೆಗೆ ಒಯ್ಯಲು ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಎಲ್ಲಿಂದಲೂ ಕದ್ದು ತಂದು ಗುಡ್ಡದಲ್ಲಿ ಕಟ್ಟಿ ಹಾಕಿದ್ದರು. ಬೆಳಗ್ಗೆ ಸುಮಾರು 6 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಕೂಡಲೇ ಸ್ಥಳಕ್ಕೆ ತೆರಳಿ ಎರಡು ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿ ಅವುಗಳನ್ನು ಗೋಶಾಲೆಗೆ ಸಾಗಿಸಿದ್ದಾರೆ.ಪೊಲೀಸ್ ಇಲಾಖೆ ಗೋವುಗಳನ್ನು ಕಟ್ಟಿ ಹಾಕಿದ

ಕಸಾಯಿ ಖಾನೆಗೆ ಕೊಂಡೊಯ್ಯಲು ಕಟ್ಟಿ ಹಾಕಿದ ಗೋವುಗಳ ರಕ್ಷಣೆ! Read More »

ಅರಂತೋಡು,ತೊಡಿಕಾನ ಭಾಗದಲ್ಲಿ ಕೈ ಕೊಟ್ಟ ವಿದ್ಯುತ್

ಅರಂತೋಡು ತೊಡಿಕಾನ ಸಂಪಾಜೆ ಭಾಗದಲ್ಲಿ ಸೋಮವಾರ ಸುರಿದ ಗಾಳಿ ಮಳೆಗೆ ಕೆಲವು ಪ್ರದೇಶದಲ್ಲಿ ಲೈನ್ ಮೇಲೆ ಮರ ಗೆಲ್ಲು ಗಳು ಬಿದ್ದು ವಿದ್ಯುತ್ ಕಂಬಗಳು ಹಾನಿಯಾಗಿದ್ದು ನಿನ್ನೆ ಹೋದ ಕರೆಂಟು ಇಂದು ರಾತ್ರಿ ಯದರು ಬರಲಿಲ್ಲ.ಕೆಲವು ಕಡೆ ಕುಡಿಯುವ ನೀರಿಗೆ ಬರ ಬಂದಿದೆ.ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಮೊಬೈಲ್ ಸ್ವಿಚ್ ಮಾಡಿ ಇಟ್ಟಿರುತ್ತಾರೆ. ವಿದ್ಯುತ್ ಗ್ರಾಹಕ ರು ಫೋನ್ ಕರೆ ಮಾಡಿದ್ದರು ಉತ್ತರಿಸುವುದಿಲ್ಲ.ಕೂಡಲೇ ಅಧಿಕಾರಿಗಳು ಕಾರ್ಯಪ್ರವರ್ತ ರಾಗಿ ಕೆಲಸ ನಿರ್ವಹಿಸಿ ವಿದ್ಯುತ್ ಸಮಸ್ಯೆ ಯನ್ನು ಬಗ್ಗೆ

ಅರಂತೋಡು,ತೊಡಿಕಾನ ಭಾಗದಲ್ಲಿ ಕೈ ಕೊಟ್ಟ ವಿದ್ಯುತ್ Read More »

ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಸಾವು

ಕಾಸರಗೋಡು : ಮದ್ಯಪಾನ ಮಾಡಿ ಬಂದು ಅಂಗಡಿ ಮುಂದೆ ಗಲಾಟೆ ಮಾಡುತ್ತಿದ್ದಾನೆಂದು ದೂರು ನೀಡಿದ ಆಕ್ರೋಶದಲ್ಲಿ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿದ ಘಟನೆ ಕಾಸರಗೋಡು ಜಿಲ್ಲೆಯ ಬೇಡಡ್ಕ ಎಂಬಲ್ಲಿ ನಡೆದು ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಎಪ್ರಿಲ್ 8ರಂದು ರಮಿತಾ (30) ಎಂಬ ಮಹಿಳೆ ಮೇಲೆ ಏಸಿಡ್‌ ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೇಹದ ಭಾಗ ಸುಟ್ಟು ಹೋಗಿದ್ದರಿಂದ ಕೂಡಲೇ ಆಕೆಯನ್ನು ಕಾಞಂಗಾಡು ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆನಂತರ ಮಂಗಳೂರಿನ ಆಸ್ಪತ್ರೆಗೆ

ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಸಾವು Read More »

error: Content is protected !!
Scroll to Top