April 2025

ತನ್ನ ಭಾವಿ ಅಳಿಯನೊಂದಿಗೆ ಅತ್ತೆ ಪರಾರಿ!

ಮಗಳ ಮದುವೆಗೆ ಕೇವಲ 9 ದಿನ ಬಾಕಿ ಉಳಿದಿರುವ ವೇಳೆ ತಾಯಿ ತನ್ನ ಭಾವಿ ಅಳಿಯನ ಜೊತೆಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ಅಲಿಗಢದಲ್ಲಿ ನಡೆದಿದೆ.ಭಾವಿ ಅಳಿಯನ ಮೇಲೆಯೇ ಅತ್ತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ, ಮದುವೆಗೂ ಮೊದಲು ಆ ಜೋಡಿ ಓಡಿ ಹೋಗಲು ನಿರ್ಧಾರ ಮಾಡಿತ್ತು. ಮಗಳ ಮದುವೆಗೆ ಮಾಡಿಸಿದ್ದ ಆಭರಣಗಳು ಹಾಗೂ ಹಣವನ್ನು ತೆಗೆದುಕೊಂಡು ತಾಯಿ ತನ್ನ ಭಾವಿ ಅಳಿಯನ ಜೊತೆಗೆ ಪರಾರಿಯಾಗಿದ್ದಾಳೆ.ಮಹಿಳೆಯೇ ಮುಂದೆ ನಿಂತು ತನ್ನ ಮಗಳಿಗೆ ನಿಶ್ಚಿತಾರ್ಥ ನಡೆಸಿದ್ದಳು. ಹುಡುಗನನ್ನೂ ಆಕೆಯೇ ಹುಡುಕಿದ್ದಳು. ಮದುವೆ […]

ತನ್ನ ಭಾವಿ ಅಳಿಯನೊಂದಿಗೆ ಅತ್ತೆ ಪರಾರಿ! Read More »

ಸತಿಪತಿಗಳಾದ ಬೆಳ್ತಂಗಡಿಯ ರಂಜಿತ್ ಗೌಡ ಹಾಗೂ ಸುಶ್ಮಿತಾ ಗೌಡ!

ಪರಸ್ಪರ ಪ್ರೀತಿಸಿ ಪ್ರೀತಿಯ ಫಲವಾಗಿ ಜನಿಸಿದ ಮಗುವನ್ನು ಸಮಾಜಕ್ಕೆ ಅಂಜಿ ಕಾಡಿನಲ್ಲಿ ಬಿಟ್ಟು ಸುಮ್ಮನಿದ್ದ ಬೆಳ್ತಂಗಡಿ ತಾಲೂಕಿನ ರಂಜಿತ್ ಗೌಡ ಹಾಗೂ ಸುಶ್ಮಿತಾ ಗೌಡ ಅವರು ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ, ಪವಿತ್ರ ನಡ ಗ್ರಾಮದ ಕುತ್ತೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದ ಸನ್ನಿಧಿಯಲ್ಲಿ ವಿವಾಹವಾಗಿದ್ದಾರೆ.ಮಗು ಮಾತ್ರ ಇನ್ನೂ ತಂದೆ-ತಾಯಿಯ ಮಡಿಲು ಸೇರಿಲ್ಲ. ಪುತ್ತೂರಿನ ವಾತ್ಸಲ್ಯಧಾಮದಲ್ಲಿ. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರ ಆರೈಕೆಯಲ್ಲಿ ಬೆಳೆಯುತ್ತಿದೆ.ಮಗುವನ್ನು ಮರಳಿ ಪಡೆಯಲು ಈ ನವದಂಪತಿಗಳು ಈಗ ಸಂಕಲ್ಪ ಮಾಡಿದ್ದಾರೆ. “ನಮ್ಮ

ಸತಿಪತಿಗಳಾದ ಬೆಳ್ತಂಗಡಿಯ ರಂಜಿತ್ ಗೌಡ ಹಾಗೂ ಸುಶ್ಮಿತಾ ಗೌಡ! Read More »

ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡಕೊಂಡ ಅವಳಿ ಜವಳಿ ಮಕ್ಕಳು

ಶಿರಸಿಯ ಖ್ಯಾತ ವೈದ್ಯರಾದ ಡಾ. ದಿನೇಶ ಹೆಗಡೆ-ಡಾ. ಸುಮನ್ ಹೆಗಡೆ ಅವರ ಅವಳಿ-ಜವಳಿ ಮಕ್ಕಳಿಬ್ಬರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 6ನೇ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದ್ದಾರೆ.600ಕ್ಕೆ 594 ಅಂಕ ಪಡೆದು ಶೇ. 99 ಸಾಧನೆ ಮಾಡಿದ (ಅವಳಿ-ಜವಳಿ) ವಿದ್ಯಾರ್ಥಿಗಳಾದ ದಕ್ಷ ಹಾಗೂ ರಕ್ಷಾ ಇಬ್ಬರೂ ಒಂದೇ ಸಂಖ್ಯೆಯ ಅಂಕ ಪಡೆದಿರುವುದು ವಿಶೇಷವಾಗಿದೆ. ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಕ್ಷನಿಗೆ 4 ವಿಷಯದಲ್ಲಿ ಶೇ.100, ರಕ್ಷಾನಿಗೆ 2 ವಿಷಯದಲ್ಲಿ ಶೇ 100 ಅಂಕ ಪಡೆದಿದ್ದಾರೆ.

ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡಕೊಂಡ ಅವಳಿ ಜವಳಿ ಮಕ್ಕಳು Read More »

ಸುಳ್ಯ ಶಾರದಾ ಕಾಲೇಜಿಗೆ ಶೇ.100 ಫಲಿತಾಂಶ

ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಸುಳ್ಯದ ಶಾರದಾ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಾಗಿದೆ.ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಿಂದ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಕಲಾ ವಿಭಾಗದಲ್ಲಿ 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.5 ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದಾರೆ. ಹರ್ಷಿತಾ 587 ಅತೀ ಹೆಚ್ಚು ಅಂಕ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದಾರೆ.ಸುಶ್ಮಿತಾ 565 ಅತೀ ಹೆಚ್ಚು ಅಂಕ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ 31 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 3 ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದು ವಿದ್ಯಾಕುಮಾರಿ

ಸುಳ್ಯ ಶಾರದಾ ಕಾಲೇಜಿಗೆ ಶೇ.100 ಫಲಿತಾಂಶ Read More »

ಏ.13ರಿಂದ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವ ಆರಂಭ ಹಿನ್ನಲೆ, ಅಲಂಕಾರ ಸಮಿತಿ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಧ್ವಜಾರೋಹಣದ ಮೂಲಕ ಆರಂಭಗೊಳ್ಳಲಿದ್ದು ಜಾತ್ರೋತ್ಸವ ಪೂರ್ವ ತಯಾರಿ ಅಂಗವಾಗಿ ಮಂಗಳವಾರ ದೇವಳದಲ್ಲಿ ಅಲಂಕಾರ ಸಮಿತಿ‌ಯ ಸಭೆ ನಡೆಯಿತು.ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಕೊಳಲುಮೂಲೆ (ಉಳುವಾರು)ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ತಿಮ್ಮಯ್ಯ ಮೆತ್ತೆಡ್ಕ, ವಸಂತ ಪೆಲ್ತಡ್ಕ,ಮ್ಯಾನೇಜರ್ ಆನಂದ ಕಲ್ಲಗದ್ದೆ, ಅಲಂಕಾರ ಸಮಿತಿ‌ ಸಂಚಾಲಕ ಸೋಮಶೇಖರ ಪೈಕ, ಸಹ

ಏ.13ರಿಂದ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವ ಆರಂಭ ಹಿನ್ನಲೆ, ಅಲಂಕಾರ ಸಮಿತಿ ಸಭೆ Read More »

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ಮತ್ತು 7ನೇ ಸ್ಥಾನ ಪಡಕೊಂಡ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅಭಿನಂದಿಸಿದ ಶಾಸಕಿ ಭಾಗೀರಥಿ ಮುರುಳ್ಯ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶ್ರೀವಿದ್ಯಾ ಎನ್ 595 ಅಂಕ ಪಡೆದುಕೊಂಡು, ರಾಜ್ಯಕ್ಕೆ 5ನೇ ಸ್ಥಾನ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ಇವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಗುರು ನಾರಾಯಣ್ ಭಟ್ ಕಾಣಿಯೂರು ಮತ್ತು ಶೈಲಶ್ರೀಯವರ ಪುತ್ರಿ.ದ್ವಿತಿಯ ಪಿಯುಸಿ ಪರಿಕ್ಷೇಯಲ್ಲಿ 593 ಅಂಕರಾಜ್ಯದಲ್ಲಿ 7ಸ್ಥಾನ ಪಡೆದಉತ್ತಮ್ ಅವರನ್ನು ಕೂಡ ಶಾಸಕರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಇವರು

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ಮತ್ತು 7ನೇ ಸ್ಥಾನ ಪಡಕೊಂಡ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅಭಿನಂದಿಸಿದ ಶಾಸಕಿ ಭಾಗೀರಥಿ ಮುರುಳ್ಯ Read More »

ಭಾರೀ ಗಾಳಿ ಮಳೆಗೆ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಸ್ಕೂಟರ್ ಸವಾರ ಕೂದಳೆಲೆ ಅಂತರದಿಂದ ಪಾರು!

ದ.ಕ ಜಿಲ್ಲೆಯ ಕೆಲ ಭಾಗದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು ಬಂಟ್ವಾಳ ತಾಲೂಕಿನ ಮಾಣಿ ಪುತ್ತೂರು ಹೆದ್ದಾರಿಯ ನೇರಳೆಕಟ್ಟೆ ಸಮೀಪ ತೆಂಗಿನ ಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರ ಕೂದಳೆಲೆ ಅಂತರಿಂದ ಪಾರಾದ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.ಸ್ಕೂಟರ್ ಸವಾರ ವೇಗವಾಗಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಂತೆ ತೆಂಗಿನ ಮರ ಮುರಿದ್ದು ಸ್ಕೂಟರ್ ಮುಂಭಾಗವೇ ಬಿತ್ತು.ಅದ್ರಷ್ಠವಶಾತ್ ಸ್ಕೂಟರ್ ಸವಾರ ಅಪಾಯದಿಂದ ಪಾರಾಗಿದ್ದಾನೆ.

ಭಾರೀ ಗಾಳಿ ಮಳೆಗೆ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಸ್ಕೂಟರ್ ಸವಾರ ಕೂದಳೆಲೆ ಅಂತರದಿಂದ ಪಾರು! Read More »

ವಿದ್ಯಾಳಿಗೆ ರಾಜ್ಯದಲ್ಲಿ ಐದನೇ ಸ್ಥಾನ

ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕಡಬ ತಾಲೂಕಿನ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ದಲ್ಲಿ ಶ್ರೀವಿದ್ಯಾ ಎನ್ 595 ಅಂಕ ಪಡೆದುಕೊಂಡು, ರಾಜ್ಯಕ್ಕೆ 5ನೇ ಸ್ಥಾನ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಗುರು ನಾರಾಯಣ್ ಭಟ್ ಕಾಣಿಯೂರು ಮತ್ತು ಶೈಲಶ್ರೀಯವರ ಪುತ್ರಿ ವಿದ್ಯಾ.

ವಿದ್ಯಾಳಿಗೆ ರಾಜ್ಯದಲ್ಲಿ ಐದನೇ ಸ್ಥಾನ Read More »

ವೈಷ್ಣವಿಗೆ ರಾಜ್ಯದಲ್ಲಿ ಆರನೇ ಸ್ಥಾನ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುನಂದಾ ಶೆಟ್ಟಿಯವರ ಪುತ್ರಿ, ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ 594 ಅಂಕಗಳೊಂದಿಗೆ ರಾಜ್ಯಕ್ಕೆ 6 ನೇ ಸ್ಥಾನಿಯಾಗಿದ್ದಾರೆ.

ವೈಷ್ಣವಿಗೆ ರಾಜ್ಯದಲ್ಲಿ ಆರನೇ ಸ್ಥಾನ Read More »

ಪಿ.ಯು.ಪಿ ಫಲಿತಾಂಶ ಪ್ರಕಟ,ದ.ಕ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದುದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಂತೆ ಉಡುಪಿ ಮೊದಲ ಸ್ಥಾನ(ಶೇ.93.90 )ಗಳಿಸಿರೆ ದಕ್ಷಿಣ ಕನ್ನಡ(93.57) ದ್ವಿತೀಯ ಸ್ಥಾನ ಗಳಿಸಿದೆ.ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ದಕ್ಷಿಣ ಕನ್ನಡದ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಅಮೂಲ್ಯ ಕಾಮತ್ ಅವರು 600ಕ್ಕೆ 599 ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರೆ. ದಕ್ಷಿಣ ಕನ್ನಡದ ಜಿಲ್ಲೆಯ ಕೆನಾರ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ದೀಪಶ್ರೀ ಅವರು 600 ಕ್ಕೆ 599 ಅಂಕ

ಪಿ.ಯು.ಪಿ ಫಲಿತಾಂಶ ಪ್ರಕಟ,ದ.ಕ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ Read More »

error: Content is protected !!
Scroll to Top