ಪರಿವಾರಕಾನ : ಮಣ್ಣು ಕೊಚ್ಚಿಕೊಂಡು ಮನೆಯ ಸುತ್ತಮುತ್ತ ಶೇಖರಣೆ
ಪರಿವಾರಕಾನ ಬಳಿ ನೀರಿನೊಂದಿಗೆ ಮಣ್ಣು ಕೊಚ್ಚಿ ಬಂದು ಕೆಳಭಾಗದಲ್ಲಿರುವ ರಸ್ತೆಯನ್ನು ಆವರಿಸಿಕೊಂಡಿದೆ. ಇದರಿಂದಾಗಿ ಇಲ್ಲಿನ ಮನೆಗಳಿಗೆ ಹೋಗಲು ಸಮಸ್ಯೆ ಎದುರಾಗಿದೆ. ಸುರೇಶ್ ಅವರಿಗೆ ಸೇರಿದ ಮೇಲ್ಬಾಗದ ಜಮೀನಿನಲ್ಲಿ ಜೆಸಿಬಿ ಬಳಸಿ ಸಮತಟ್ಟು ಗೊಳಿಸಿ ಮಣ್ಣು ರಾಶಿ ಹಾಕಲಾಗಿತ್ತು. ಇದೀಗ ಸುರಿದ ಮಳೆಗೆ ಮಳೆಯ ನೀರಿನ ಜತೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆಯಲ್ಲಿ ಹಾಗೂ ಮನೆಯ ಅಂಗಳದಲ್ಲಿ ತುಂಬಿರುವುದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.
ಪರಿವಾರಕಾನ : ಮಣ್ಣು ಕೊಚ್ಚಿಕೊಂಡು ಮನೆಯ ಸುತ್ತಮುತ್ತ ಶೇಖರಣೆ Read More »