June 10, 2025

ಸಂಕಲ್ಪದಿಂದ ಸಾಧನೆವರೆಗೆ ದ.ಕ ಜಿಲ್ಲಾ ತಂಡದ ಸಂಚಾಲಕರಾಗಿ ಹರೀಶ್ ಕಂಜಿಪಿಲಿ

ಭಾರತದ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ 11 ನೇ ವರ್ಷದ ಆಚರಣೆಯ ಭಾಗವಾಗಿ ಬಿಜೆಪಿ ಕರ್ನಾಟಕದ ವತಿಯಿಂದಸಂಕಲ್ಪದಿಂದ ಸಾಧನವರೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಸಂಕಲ್ಪದಿಂದ ಸಾಧನವರೆಗೆ ಕಾರ್ಯಕ್ರಮದ ದ.ಕ.ಜಿಲ್ಲಾ ತಂಡದ ಸಂಚಾಲಕರಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಯ್ಕೆಯಾಗಿದ್ದಾರೆ.ಸುಳ್ಯ ಮಂಡಲ ಸಂಚಾಲಕರಾಗಿ ಪುಲಸ್ಯ ರೈ ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ಆಶಾ ತಿಮ್ಮಪ್ಪ ಹಾಗೂ ಪದ್ಮನಾಭ ಶೆಟ್ಟಿ ಪೆರುವಾಜೆ ಆಯ್ಕೆಯಾಗಿದ್ದಾರೆ.

ಸಂಕಲ್ಪದಿಂದ ಸಾಧನೆವರೆಗೆ ದ.ಕ ಜಿಲ್ಲಾ ತಂಡದ ಸಂಚಾಲಕರಾಗಿ ಹರೀಶ್ ಕಂಜಿಪಿಲಿ Read More »

ಕಾಟಿಗೇರಿ ಸಮೀಪ ಕಾರು ಭೀಕರ ಅಪಘಾತ

ಮಾಣಿ ಮೈಸೂರು‌ ರಸ್ತೆಯ ಮಡಿಕೇರಿ‌ ಸಮೀಪದ ಕಾಟಿಗೇರಿ ಸಮೀಪ ಕಾರು ಅಪಘಾತವಾಗಿ ಜಖಂಗೊಂಡಿದೆ.ಪ್ರಯಾಣಿಕರು ಗಾಯಗೊಂಡಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಾಟಿಗೇರಿ ಸಮೀಪ ಕಾರು ಭೀಕರ ಅಪಘಾತ Read More »

ಅಭಿಮಾನ ಒಳ್ಳೆಯದೇ, ಅಂಧಾಭಿಮಾನ ಜೀವಕ್ಕೇ ಮಾರಕ!

ಐಪಿಎಲ್‌ನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಇದು ಎಲ್ಲಿಯವರೆಗೆ ಎಂದರೆ ತಾಯಿಯೊಬ್ಬಳು ಒಂಬತ್ತು ತಿಂಗಳುಗಳ ಕಾಲ ಉದರದೊಳಗೆ ಹೊತ್ತುಕೊಂಡು ಪೋಷಿಸಿದ, ತಂದೆಯೊಬ್ಬ ತನ್ನ ಯೌವನವನ್ನೆಲ್ಲಾ ಸವೆಸಿ ಎರಡು ದಶಕಗಳಷ್ಟು ಕಾಲ ಸಾಕಿದ, ಹೆತ್ತವರಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಜೀವವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುವಷ್ಟು, ಉಸಿರನ್ನೇ ಚೆಲ್ಲಿ ಬಿಡುವಷ್ಟು…ಜನ ಮರುಳೋ, ಜಾತ್ರೆ ಮರುಳೋ ಗೊತ್ತಿಲ್ಲ. ತಮ್ಮ ಖುಷಿಗಳನ್ನೆಲ್ಲಾ ತ್ಯಾಗ ಮಾಡಿ, ಕುಟುಂಬವನ್ನೇ ದೂರ ಇಟ್ಟು ಹಗಲು ರಾತ್ರಿ ಈ

ಅಭಿಮಾನ ಒಳ್ಳೆಯದೇ, ಅಂಧಾಭಿಮಾನ ಜೀವಕ್ಕೇ ಮಾರಕ! Read More »

ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆ ಯ ಭೀತಿ

ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅಮೃಂಜನ ಸ್ನಾನ ಗುಂಡಿ ಯಿಂದ ತೊಡಿಕಾನ ಹಾಲಿನ ಡೈರಿ ವರೆಗೆ ಜಳಕ ಗುಂಡಿ ಹೊಳೆ ಯಲ್ಲಿ ವಿಪರೀತ ಗಿಡ ಗಂಟೆ ಗಳು ಬೆಳೆದು ಕಳೆದ ವರ್ಷ ಹೊಳೆಯ ಎರಡು ಬದಿಯಲ್ಲಿ ಹಾದು ಹೋಗುವ ಆರಂತೋಡು-ತೊಡಿಕಾ ನ ಪಿ. ಡಬ್ಲ್ಯೂ. ಇ ರಸ್ತೆ ಮತ್ತು ಹಾಲಿನ ಡೈರಿ ಕುಂಟುಕಾಡು ಪಂಚಾಯತ್ ರಸ್ತೆ ಯಲ್ಲಿ ನೀರು ಹರಿದು ಕೃತಕ ನೆರೆ ಸೃಷ್ಟಿ ಯಾಗಿ ವಾಹನ ಸಂಚಾರಕ್ಕೆ ಕಷ್ಟ ವಾಗಿದ್ದು ಈ ವರ್ಷವೂ ಮೊನ್ನೆ ಸುರಿದ ಬಾರಿ

ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆ ಯ ಭೀತಿ Read More »

ಬಾವಿಯಲ್ಲಿ ಶವ ಪತ್ತೆ

ಮರ್ಕಂಜದ ಬೊಮ್ಮಾರಿನಲ್ಲಿ ಕೊಳೆತ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ಇದವರದಿಯಾಗಿದೆ.ಬೊಮ್ಮಾರು ನಿವಾಸಿ ಶೀನ ಪೂಜಾರಿ ಎಂಬವರ ಮೃತದೇಹ ಇದಾಗಿರಬಹುದೆಂದು ಅಂದಾಜಿಸಲಾಗಿದೆ.ಅವರು ಕಳೆದ ಕೆಲ ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದರು. ಕಳೆದ ಏಳೆಂಟು ದಿನಗಳಿಂದ ಶೀನ ಪೂಜಾರಿಯವರು ಯಾರಿಗೂ ಕಾಣಿಸುತ್ತಿರಲಿಲ್ಲ. ಹೀಗಾಗಿ ಅವರದ್ದೇ ಮೃತದೇಹ ಎಂದು ಹೇಳಲಾಗುತ್ತಿದೆ.ಬೊಮ್ಮಾರು ಆಸುಪಾಸಿನಲ್ಲಿ ಕೊಳೆತ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಬಾವಿಯಲ್ಲಿ ಶವ ಇರುವುದು ಕಂಡು ಬಂದಿದೆ. ಇದೀಗ ಸ್ಥಳದಲ್ಲಿ ಸ್ಥಳೀಯರು ಸೇರಿದ್ದು, ಪೋಲೀಸರ ಬಂದ ಬಳಿಕ ಶವ ತೆಗೆಯಬೇಕಾಗಿದೆ. ಆಂಬುಲೆನ್ಸ್ಶೀನ ಪೂಜಾರಿಯವರಿಗೆ ಇಬ್ಬರು

ಬಾವಿಯಲ್ಲಿ ಶವ ಪತ್ತೆ Read More »

error: Content is protected !!
Scroll to Top