July 2025

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಗೆ ಪರಿಹಾರ ನೀಡಲು ಮನವಿ

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ಎಂಬಲ್ಲಿ ಕಾಡಾನೆಗಳು ತಿರುಗಾಡುತ್ತಿದ್ದು ಅದನ್ನು ಕಾಡಿಗೆ ಓಡಿಸುವ ಸಂದರ್ಭದಲ್ಲಿ, ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ(60) ಎಂಬವರು ಆನೆ ದಾಳಿಗೆ ಜುಲೈ 17 ರಂದು ಬಲಿಯಾಗಿದ್ದು. ಈ ಬಗ್ಗೆ ಜುಲೈ 17 ರಂದು ಸಂಜೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ ಅವರನ್ನು ಭೇಟಿ ಮಾಡಿ “ಆನೆ-ಮಾನವ ಸಂಘರ್ಷದಿಂದ, ತಾಲೂಕಿನಲ್ಲಿ ಹೆಚ್ಚಿನ ನಷ್ಟ ಹಾಗೂ ಸಾವು ಸಂಭವಿಸುತ್ತಿದ್ದು, ನಿಯಂತ್ರಣಕ್ಕೆ ಸರ್ಕಾರ ಸಕಲ ರೀತಿಯ, ಪ್ರಯತ್ನ […]

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಗೆ ಪರಿಹಾರ ನೀಡಲು ಮನವಿ Read More »

ಸಹೋದರನಿಂದ ಸಹೋದರನಿಗೆ ಕತ್ತಿಯಿಂದ ಹಲ್ಲೆ

ಸಹೋದರ ವ್ಯಕ್ತಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ನಡೆದಿದೆ. ಕಡಬ ಕೌಕ್ರಾಡಿ ಗ್ರಾಮದ ನಿವಾಸಿ ರಾಜಶೇಖರ (37) ಹಲ್ಲೆಗೆ ಒಳಗಾದವರು. ಅವರ ಸಹೋದರ ಜಯರಾಜ್ ಹಲ್ಲೆ ನಡೆಸಿದವರು.ರಾಜಶೇಖರ (37) ಅವರು ದಿನಾಂಕ: 16.07.2025 ರಂದು ರಾತ್ರಿ ಸಮಯ ತನ್ನ ಮನೆಯಾದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿದ್ದಾಗ, ಸ್ಥಳಕ್ಕೆ ಬಂದ ಆರೋಪಿ ರಾಜಶೇಖರ ಅವರ ಸಹೋದರ ಮನೋಜ್‌ಕುಮಾರ್ ಎಂಬವರು ರಾಜಶೇಖ‌ರ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.

ಸಹೋದರನಿಂದ ಸಹೋದರನಿಗೆ ಕತ್ತಿಯಿಂದ ಹಲ್ಲೆ Read More »

ಅಗ್ನಿ ದುರಂತಕ್ಕೆ ತುತ್ತಾದ ಆರಂತೋಡು ಘನ ತಾಜ್ಯ ಘಟಕ ಕ್ಕೆ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರಿಂದ ರೂ 5ಲಕ್ಷ ಅನುದಾನ ಘೋಷಣೆ

ರಾಜ್ಯಕ್ಕೆ ಮಾದರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಘಟಕ ( ಸ್ವಚ್ಛ ಸಂಕೀರ್ಣ )ಜುಲೈ 9ರಂದು ಆಕಸ್ಮಿಕ ಅಗ್ನಿ ದುರಂತಕ್ಕೆ ತುತ್ತಾಗಿ ಸಂಪೂರ್ಣ ನಾಶಗೊಂಡಿದ್ದು. ಅದರ ಪುನರ್ ನಿರ್ಮಾಣಕ್ಕೆ ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರುರವರು ತಕ್ಷಣಕ್ಕೆ ರೂ 5ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ್ದು. ಉಳಿದ ಅನುದಾನಕ್ಕೆ ಸ್ವಚ್ಛ ಭಾರತ್ ಮಿಷನ್ ಅನುದಾನ ಮುಖಾಂತರ ಬಿಡುಗಡೆಗೆ ಪ್ರಯತ್ನಸುವುದಾಗಿ ತಿಳಿಸಿದ್ದಾರೆ.

ಅಗ್ನಿ ದುರಂತಕ್ಕೆ ತುತ್ತಾದ ಆರಂತೋಡು ಘನ ತಾಜ್ಯ ಘಟಕ ಕ್ಕೆ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರಿಂದ ರೂ 5ಲಕ್ಷ ಅನುದಾನ ಘೋಷಣೆ Read More »

ಕಾಡಾನೆ ತಿವಿದು ವ್ಯಕ್ತಿ ಸಾವು

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಅದನ್ನು ಓಡಿಸುವ ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ ಆನೆಯು ಸೋಂಡಿಲಿನಿಂದ ತಿವಿದು ಗಂಭೀರ ಗಾಯಗೊಳಿಸಿ ಆತ ಮೃತಪಟ್ಟ ಘಟನೆ ಜು. 17 ರಂದು ನಡೆದಿದೆ.ಬೆಳ್ಳಂಬೆಳ್ಳಗೆ ಎರಡು ಆನೆಗಳು ಗೇರು ಪ್ಲಾಂಟೇಶನ್ ನಲ್ಲಿ ತಿರುಗಾಡುತ್ತಿದ್ದು ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಆನೆ ಓಡಿಸುವ ಸಂದರ್ಭದಲ್ಲಿ ಆನೆಯು ತಿರುಗಿ ಬಂದು ಬಾಲಕೃಷ್ಣ ಶೆಟ್ಟಿ ಎಂಬವರಿಗೆ ಸೊಂಡಿಲಿನಿಂದ ತಿವಿದು, ಗಂಭೀರ

ಕಾಡಾನೆ ತಿವಿದು ವ್ಯಕ್ತಿ ಸಾವು Read More »

ಹೃದಯಾಘಾತದಿಂದ ಯುವಕ ಸಾವು

ಆಲೆಟ್ಟಿ ಗ್ರಾಮದ ಬಡ್ಡಡ್ಕ ಗೂಡಿಂಜ ನಿವಾಸಿ ರಾಮಣ್ಣ ನಾಯ್ಕ ರ ಪುತ್ರ ದಿನೇಶ್ ನಾಯ್ಡ್ ರವರು ಹೃದಯಾಘಾತದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು. ಮೃತರು ತಂದೆ ರಾಮಣ್ಣ ನಾಯ್ಕ, ತಾಯಿ ಶ್ರೀಮತಿ ಕಾವೇರಿ ಸಹೋದರ ರಾಜೇಶ್ ನಾಯ್ಕ ಮತ್ತು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಯುವಕ ಸಾವು Read More »

ಚೂರಿಯಿಂದ ಇರಿದು ಪತ್ನಿಯ ಕೊಲೆ ಮಾಡಿದ ಪತಿ

ಪತಿ ತನ್ನ ಪತ್ನಿಗೆ ಚೂರಿಯಿಂದ ಇರಿದುಕೊಲೆ ಮಾಡಿದ ಘಟನೆ ಜು.17ರ ಗುರುವಾರ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಸಮೀಪದ ಬಾಜಾರು ಎಂಬಲ್ಲಿ ನಡೆದಿದೆ.ಬಾಜಾರು ನಿವಾಸಿ ಝೀನತ್ (41) ಮೃತ ಮಹಿಳೆ. ಪತಿ ರಫೀಕ್ ಕೊಲೆ ಮಾಡಿದ ಆರೋಪಿ ಎಂದು‌ ತಿಳಿದು ಬಂದಿದೆ.ಮುಂಜಾನೆ ಬೆಳಗ್ಗೆ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪತ್ನಿಗೆ ರಫೀಕ್ ಚೂರಿಯಿಂದ ಇರಿದು ಹತ್ಯೆ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಚೂರಿಯಿಂದ ಇರಿದು ಪತ್ನಿಯ ಕೊಲೆ ಮಾಡಿದ ಪತಿ Read More »

ಗ್ರಾಮ ಪಂಚಾಯತ್ ಅಧ್ಯಕ್ಷ ನಿಧನ

ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಶೆಟ್ಟಿ (48) ಎನ್ಮಾಡಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಜುಲೈ 16 ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷ ನಿಧನ Read More »

ಅರಂತೋಡು : ಹೊಟೇಲ್ ಮಾಲೀಕ ನಿಧನ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 24 ವರ್ಷ ಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಯೋಗೀಶ( 42 ವ)ರವರು ಇಂದು ನಿಧನ ರಾದರು. ಮೃತರ ತಾಯಿ ಮೀನಾಕ್ಷಿ, ಪತ್ನಿ ಲಲಿತಾ (ರೇಶ್ಮಾ) ಧನುಷ್ ,ಗೌಶಿಕ್, ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ

ಅರಂತೋಡು : ಹೊಟೇಲ್ ಮಾಲೀಕ ನಿಧನ Read More »

ಸಂಪಾಜೆ : ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ ನಡೆಯಿತು ಕುಡಿಯುವ ನೀರಿನ ಯೋಜನೆ ಜಾರಿ ಬಳಕೆ ಕುರಿತು ಮಾಹಿತಿ ಹಾಗೂ ಮೀಟರ್ ಆಧಾರದಲ್ಲಿ ಎಷ್ಟು ನೀರನ್ನು ಪ್ರತಿ ಮನೆಗೆ ತಲುಪಿಸುವ ಬಗ್ಗೆ ಸುರೇಶ್ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರಾರದ ಚೈತ್ರಾ ಮಾಹಿತಿ ನೀಡಿದರು ಪಂಚಾಯತ್ ಅಬಿವೃದಿ ಆಧಿಕಾರಿ

ಸಂಪಾಜೆ : ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ Read More »

ಪೆರಾಜೆಯಿಂದ ಓಡಿಸಿದ ಕಾಡಾನೆ ತೊಡಿಕಾನದಲ್ಲಿ ತಡರಾತ್ರಿ ಪತ್ಯಕ್ಷ! ಸ್ಥಳೀಯರ ನಿದ್ದೆಗೆಡಿಸಿದ ಕಾಡಾನೆ

ಪೆರಾಜೆ ಗ್ರಾಮದ ಖಾಸಗಿ ತೋಟದಲ್ಲಿ ಬೀಡುಬಿಟ್ಟ ಒಂಟಿ ಕಾಡನೆಯನ್ನು ಕೊಡಗಿನ ಪೆರಾಜೆ ಗ್ರಾಮದಿಂದ ಜು.15ರಂದು ದ.ಕ. ಜಿಲ್ಲೆಯ ತೊಡಿಕಾನ ಗ್ರಾಮಕ್ಕೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಮೂಲಕ ಅಟ್ಟಿಸಲಾಗಿದ್ದು ಆ ಕಾಡಾನೆ ತೊಡಿಕಾನ ಗ್ರಾಮದಲ್ಲಿ ತಡರಾತ್ರಿ ಕಾಣಿಸಿಕೊಂಡು ಗ್ರಾಮದ ಕೆಲವು ಜನರ ತೋಟಗಳಿಗೆ ದಾಳಿ ಮಾಡಿದೆ.ಅಮಚೂರು ಬೆಟ್ಟದಪುರ ಚಿಪ್ಪುರುಗುಡ್ಡೆಗೆ ಅಟ್ಟಿಸಲಾದ ಕಾಡಾನೆ ಬಳಿಕ ಕುಂಟುಕಾಡು ಭಾಗದಲ್ಲಿ ಕಾಣಿಸಿಕೊಂಡಿದೆ.ಅಲ್ಲಿಂದ ಕಾಡಾನೆಯನ್ನು ಸ್ಥಳೀಯರು ಓಡಿಸಿದ್ದು ಬಳಿಕ ಅದು ನಾಗನಮೂಲೆ,ಚಿಟ್ಟನ್ನೂರು,ಎಡ್ಚಾರ್ ಭಾಗದ ರೈತರ ತೋಟಗಳಿಗೆ ನುಗ್ಗಿ ಬೆಳೆನಾಶ ಮಾಡಿವೆ ಎಂದು ತ ರೈತರು

ಪೆರಾಜೆಯಿಂದ ಓಡಿಸಿದ ಕಾಡಾನೆ ತೊಡಿಕಾನದಲ್ಲಿ ತಡರಾತ್ರಿ ಪತ್ಯಕ್ಷ! ಸ್ಥಳೀಯರ ನಿದ್ದೆಗೆಡಿಸಿದ ಕಾಡಾನೆ Read More »

error: Content is protected !!
Scroll to Top