August 2025

ಅಪ್ರಾಪ್ತೆ ಹುಡುಗಿಯನ್ನು‌ ಗರ್ಭವತಿಯಾಗಿಸಿದ ಸಂಬಂಧಿ ಯುವಕ,ಹೆರಿಯಾಗಿ ಮಗು ಸಾವು!

ತನ್ನ ಹತ್ತಿರದ ಸಂಬಂಧಿಯಿಂದಲೇ ಗರ್ಭವತಿಯಾದ ಪರಿಣಾಮ ಕೊಲ್ಲಮೊಗ್ರದ ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿ ಮಗು ಮೃತಪಟ್ಟ ಘಟನೆ ನಡೆದಿದೆ.ಈ ಹುಡುಗಿ ಸಂಬಂಧಿಕರ ಮನೆಗೆ ಬಂದಿದ್ದಾಗ ಸಂಬಂಧಿ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನೆನ್ನಲಾಗಿದೆ. ಪರಿಣಾಮ ಆಕೆ ಗರ್ಭವತಿಯಾಗಿದ್ದಳು. ಪ್ರಕರಣ ಪೋಲೀಸ್‌ ಠಾಣೆ ಮೆಟ್ಟಿಲೇರಿ ಯುವಕನ ಮೇಲೆ ಫೋಕೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು‌ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಅಪ್ರಾಪ್ತೆ ಹುಡುಗಿಯನ್ನು‌ ಗರ್ಭವತಿಯಾಗಿಸಿದ ಸಂಬಂಧಿ ಯುವಕ,ಹೆರಿಯಾಗಿ ಮಗು ಸಾವು! Read More »

ದಾವಣಗೆರೆಯಲ್ಲೊಂದು ಸುಂದರ ಗಾಜಿನ ಮನೆ..

ಹಸಿರು ಗಾಜಿನ ಬಳೆಗಳೆ ಸ್ತ್ರೀ ಕುಲದ ಶುಭ ಸ್ವರಗಳೇ ಹೆಣ್ಣು ಮಕ್ಕಳಿಗೆ ಸೀರೆ ,ಹಸಿರು ಬಳೆಗಳು ಅಂದರೆ ತುಂಬಾ ಇಷ್ಟ ಅಲ್ವಾ ಅದಕ್ಕಾಗಿಯೇ ದಾವಣಗೆರೆ ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರವಾಸಿಗರ ಆಕರ್ಷಣೀಯ ವೃಕ್ಷ ಪ್ರೀತಿಯ ಜೋತಕವಾಗಿದೆ. ಗಾಜಿನ ಮನೆ ಒಳಗೆ ವೃತ್ತಾಕಾರದಲ್ಲಿ ಬೆಂಚಿನ ಜೋಡಣೆ ಕುಳಿತುಕೊಳ್ಳಲು ಅವಕಾಶವಿದ್ದು ಒಳಗೆ ಹೊರಗು ಗಿಡಗಳು ಅಲ್ಲದೆ ಮನೆಯಂತೆ ಬಾಸ ವಾಗುವ ಕೋಣೆ, ಸೆಲ್ಫಿ ಕಾರ್ನರ್ ರೂ.20 ಇದ್ದು ಚಿಕ್ಕ ಮಕ್ಕಳಿಗೆ ಕಡಿಮೆ ಇದೆ ಬೇಸಿಗೆ ಕಾಲದಲ್ಲಿ ಬಿಸಿಲಿನ ಕಾವು ಸ್ವಲ್ಪ

ದಾವಣಗೆರೆಯಲ್ಲೊಂದು ಸುಂದರ ಗಾಜಿನ ಮನೆ.. Read More »

ಪಾನಮತ್ತ ಮಹಿಳೆಯಿಂದ ಸುಳ್ಯದ ರಸ್ತೆಯಲ್ಲಿ ಉರುಳು ಸೇವೆ!

ಸುಳ್ಯ ಸರ್ಕಾರಿ ಆಸ್ಪತ್ರೆಗೆ ತನ್ನ ಸಂಬಂಧಿ ರೋಗಿಯನ್ನು ನೋಡಲು ಬಂದಿದ್ದ ವೃದ್ದ ಮಹಿಳೆಯೋರ್ವರು ಪಾನಮತ್ತವಾಗಿ ರಸ್ತೆಯಲ್ಲಿ ಉರುಳು ಸೇವೆ ಮಾಡಿದ ಘಟನೆ ಆ 13 ರಂದು ನಡೆದಿದೆ.ಮಹಿಳೆ ಆಸ್ಪತ್ರೆಯ ರಸ್ತೆಯಿಂದ ಉರುಳಿಕೊಂಡು ಮುಖ್ಯ ರಸ್ತೆಯತ್ತ ಬರುವುದನ್ನು ಕಂಡ ಸ್ಥಳೀಯರು ಮಹಿಳೆಯನ್ನು ಎಬ್ಬಿಸಿ ರಸ್ತೆ ಬದಿ ಕುಳ್ಳಿರಿಸಲು ಹರಸಾಹಸ ಪಟ್ಟರು. ಸಂಬಂಧಿಕರು ಓರ್ವರು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.ಈ ಘಟನೆಯಿಂದ ಜನರಿಗೆ ಪುಕ್ಕಟೆ ಮನರಂಜನೆ ದೊರೆಯಿತು.

ಪಾನಮತ್ತ ಮಹಿಳೆಯಿಂದ ಸುಳ್ಯದ ರಸ್ತೆಯಲ್ಲಿ ಉರುಳು ಸೇವೆ! Read More »

ಕಾಪಿ ಬೆಳೆಗಾರರಿಗೆ ಬೆಳೆಯುವರಿಗೆ ಇಲ್ಲಿದೆ ಮಹತ್ವದ ಮಾಹಿತಿ,ಓದಿ

ಸುಳ್ಯ ತಾಲೂಕಿನಲ್ಲಿ 2025-26ನೇ ಸಾಲಿನಲ್ಲಿ ಕಾಫಿ ಬೆಳೆಯನ್ನು ಉಪಬೆಳೆಯಾಗಿ ನಾಟಿ ಮಾಡಿರುವ/ಮಾಡಲಿರುವ ಕೃಷಿಕರು ತಮಗೆ ಸಂಬಂಧಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮಾಹಿತಿಯನ್ನು ತಕ್ಷಣ ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ.ದಕ್ಷಿಣ ಕನ್ನಡದ ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಮಹತ್ವಾಕಾಂಕ್ಷಿ ಯೋಜನೆಯಾಗಿ ಸುಳ್ಯ ತಾಲ್ಲೂಕಿನಲ್ಲಿ ಅಡಿಕೆ ಹಳದಿ ರೋಗ ಪೀಡಿತ ಪ್ರದೇಶದಲ್ಲಿ ಪರ್ಯಾಯವಾಗಿ ಕಾಫಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಹಮ್ಮಿಕೊಂಡಿದ್ದು ಆಸಕ್ತ ರೈತರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆ.16 ಕೊನೆಯ ದಿನವಾಗಿರುತ್ತದೆ.

ಕಾಪಿ ಬೆಳೆಗಾರರಿಗೆ ಬೆಳೆಯುವರಿಗೆ ಇಲ್ಲಿದೆ ಮಹತ್ವದ ಮಾಹಿತಿ,ಓದಿ Read More »

ಕಾಡು ಪ್ರಾಣಿಗಳ ಹಾವಳಿ ತಡೆಯಲು ಮನವಿ

ಅರಂತೋಡು ಗ್ರಾಮದ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ವಲಯಾರಣ್ಯಾಧಿಕಾರಿಗಳಿಗೆ ವಾರ್ಡಿನಲ್ಲಿ ಆಗುತ್ತಿರುವ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಕುರಿತು ಮನವಿ ಪತ್ರ ನೀಡಲಾಯಿತು.ಮನವಿ ಸ್ವೀಕರಿಸಿದ ವಲಯಾರಣ್ಯಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು..ಅಗತ್ಯವಿದ್ದ ಕಡೆ ಆನೆ ಕಂದಕ, ಸೋಲಾರ್ ಬೇಲಿ , ಸೋಲಾರ್ ದೀಪ ಹಾಗೂ ಸೂಚನಾ ಫಲಕ ಆಳವಡಿಸುವುದಾಗಿ ತಿಳಿಸಿದರು. ಈಗಾಗಲೇ ಸುಮಾರು 25 ಬೀದಿ ದೀಪಗಳು , 15 ಕಿ.ಮೀ ರಸ್ತೆ ಬದಿ ಕಾಡು ಕಡೆಯುವುದಕ್ಕೆ ಅನುಮತಿಗಾಗಿ ಕೇಳಲಾಗಿದ್ದು ಅದನ್ನು ಮಾಡುವ ಸಂದರ್ಭದಲ್ಲಿ

ಕಾಡು ಪ್ರಾಣಿಗಳ ಹಾವಳಿ ತಡೆಯಲು ಮನವಿ Read More »

ಸುಳ್ಯ : ಸಂಸ್ಕೃತ ಸಪ್ತಾಹ ಕಾರ್ಯಕ್ರಮ

ಕೆ. ವಿ. ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ಸಪ್ತಾಹವು ದಿನಾಂಕ 5/08/2025 ರಿಂದ 11/08/2025 ವರೆಗೆ ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು 5/08/2025ರಂದು ಕಾಲೇಜಿನ ಪ್ರಾಂಶುಪಾಲಾರಾದ ಡಾ. ಲೀಲಾಧರ್ ಡಿ ವಿ ಯವರು ಸಂಸ್ಕೃತ ಪತ್ರದ ಅಂಚೆಪೆಟ್ಟಿಗೆ ಅನಾವರಣ ಗೊಳಿಸುವ ಮೂಲಕ ನೆರವೇರಿಸಿದರು.ಒಂದು ವಾರಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಸಂಸ್ಕೃತ ಸಮೂಹ ಗಾಯನ, ಸಂಸ್ಕೃತ ಲೇಖನ ಪತ್ರ, ಸಂಸ್ಕೃತ ಪ್ರಬಂಧ ಹಾಗೂ ಸಂಸ್ಕೃತ

ಸುಳ್ಯ : ಸಂಸ್ಕೃತ ಸಪ್ತಾಹ ಕಾರ್ಯಕ್ರಮ Read More »

ಕದಿಕಡ್ಕ : “ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮ

ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಹಮ್ಮಿಕೊಂಡಿರುವ “ಚಿಣ್ಣರೊಂದಿಗೆ ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮದ ಒಂಬತ್ತನೇ ಕಾರ್ಯಕ್ರಮವು ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿರುವ ಕದಿಕಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿ ಮಕ್ಕಳಿಗೆ ಕತೆ ಹೇಳಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ರವೀಶ್ ಭಾಗವಹಿಸಿ ಮಕ್ಕಳಿಗೆ

ಕದಿಕಡ್ಕ : “ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮ Read More »

ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರವೇ ಹೊಸ ನಿಯಮ

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇತರ ಭಾಗಗಳಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನಿನ ಅನ್ವಯ ಅವಕಾಶ ಕಲ್ಪಿಸುವ ಕುರಿತಂತೆ ಬೆಂಗಳೂರಿನ ವಿಧಾನ ಸೌಧದಲ್ಲಿ ಮಂಗಳವಾರ ಸ್ಪೀಕರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಗಣಿ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಹಾಗೂ

ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರವೇ ಹೊಸ ನಿಯಮ Read More »

ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ 2.50 ಕೋಟಿ ಅನುದಾನ ಬಿಡುಗಡೆ

ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಪುರಾತನ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗೆ 1.25 ಕೋಟಿ ಮತ್ತು ಸುಳ್ಯ ತಾಲೂಕಿನ ಐವರ್ನಾಡು ಚಲ್ಲತ್ತಡಿ ವೆಂಟೆಡ್ ಡ್ಯಾಮ್ ಸಹಿತ ಸೇತುವೆ ನಿರ್ಮಾಣಕ್ಕೆ 1.25 ಕೋಟಿ ಅನುದಾನ ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ 2.50 ಕೋಟಿ ಅನುದಾನ ಬಿಡುಗಡೆ Read More »

ಆಲೆಟ್ಟಿ : ಹಾವು ಕಡಿದು ಮಹಿಳೆ ಸಾವು

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಂಬಿಯಲ್ಲಿ ಮಹಿಳೆಯೊಬ್ಬರು ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳವಾರ ವರದಿಯಾಗಿದೆ.ಒಲೆಗೆ ಬೆಂಕಿ ಹಾಕುತ್ತಿದ್ದ ಸಂದರ್ಭ ಹಾವೊಂದು ಕಡಿದುಕುಡೆಂಬಿ ಕುತ್ತಿಮುಂಡ ಶಾಂತಪ್ಪ ಎಂಬವರ ಪತ್ನಿ ರಾಧಮ್ಮ ಮೃತಪಟ್ಟ ಮಹಿಳೆ. ರಾಧಾಮ್ಮರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.

ಆಲೆಟ್ಟಿ : ಹಾವು ಕಡಿದು ಮಹಿಳೆ ಸಾವು Read More »

error: Content is protected !!
Scroll to Top