September 2025

ಬಿಜೆಪಿ‌ ಸುಳ್ಯ ಮಂಡಲ ಎಸ್.ಸಿ ಮೋರ್ಚಾ ಪ್ರಧಾ‌ನ ಕಾರ್ಯದರ್ಶಿ ಕೊರಗಪ್ಪ ನಿಧನ

ಬಿಜೆಪಿ ಸುಳ್ಯ ಮಂಡಲದ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ಎರಟಾಡಿt ಕೊರಗಪ್ಪ ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆ.10ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ ವರ್ಷ ಪ್ರಾಯವಾಗಿತ್ತು.ಸೆ.7ರಂದು ಅನಾರೋಗ್ಯಕ್ಕೆ ಒಳಗಾಗಿದ್ದ ಕೊರಗಪ್ಪರನ್ನು ಚಿಕಿತ್ಸೆಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸೆ.10ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೊರಗಪ್ಪ ಅವರು ಬಿಜೆಪಿಯಲ್ಲಿ 35 ವರ್ಷಗಳಿಂದ ಸಕ್ರೀಯವಾಗಿ ತೊಡಗಿಕೊಂಡಿದ್ದು ಪಕ್ಷದ ಬೂತ್ ಸಮಿತಿ ಅಧ್ಯಕ್ಷರಾಗಿ, […]

ಬಿಜೆಪಿ‌ ಸುಳ್ಯ ಮಂಡಲ ಎಸ್.ಸಿ ಮೋರ್ಚಾ ಪ್ರಧಾ‌ನ ಕಾರ್ಯದರ್ಶಿ ಕೊರಗಪ್ಪ ನಿಧನ Read More »

ಮಂಡೆಕೋಲು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ,ಎಲ್ಲಾ ಶಿಕ್ಷಕರಿಗೆ ಸನ್ಮಾನ

ಮಂಡೆಕೋಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಲ್ಲಾ ಶಿಕ್ಷಕರನ್ನು ಹಾಗೂ ಬಿಸಿಯೂಟ ಸಿಬ್ಬಂಧಿಗಳನ್ನು ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮದ ಮೊದಲು ಅಧ್ಯಾಪಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಿಕ್ಷಕರ ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಪೂರ್ತಿ ಶಾಲಾ ವಿಧ್ಯಾರ್ಥಿಗಳೇ ನಿರ್ವಹಿಸಿರುವುದು ವಿಶೇಷವಾಗಿತ್ತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುಳ್ಯ ರೈತೋತ್ಪಾದಕ ಕಂಪೆನಿಯ ನಿರ್ದೇಶಕಿ ಮಧುರಾ ಎಂ.ಆರ್ , ಎಸ್‌ ಡಿ ಎಂ ಸಿ ಉಪಾಧ್ಯಕ್ಷ ಮುರಳೀಧರ್

ಮಂಡೆಕೋಲು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ,ಎಲ್ಲಾ ಶಿಕ್ಷಕರಿಗೆ ಸನ್ಮಾನ Read More »

ಸರಕಾರಿ ಯೋಜನೆ ಪಡೆಯಲು ಹಕ್ಕು ಪತ್ರ ಅಗತ್ಯ : ಶಾಸಕಿ ಭಾಗೀರಥಿ ಮುರುಳ್ಯ

ಹಕ್ಕುಪತ್ರ ಸರಕಾರಿ ಯೋಜನೆಗಳನ್ನು ಪಡೆಯಲು ಪೂರಕವಾಗಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಾಲ್ಕೂರು ಗ್ರಾಮದ ಗುಂಡಡ್ಕ ಕಾಲೋನಿಯ ೧೮ ಮಂದಿಗೆ ೯೪ಸಿ ಯೋಜನೆಡಿ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಽಗಳು ಜೊತೆಗೆ ಊರಿನ ಜನರಲ್ಲೂ ಅಭಿವೃದ್ಧಿಯ ಭಾವಗಳಿರಬೇಕು. ಗುಂಡಡ್ಕ ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಽಗಳು, ಮಾಧ್ಯಮದವರು, ಸ್ಥಳೀಯರು, ನಾಯಕರು ಶ್ರಮಿಸಿದ್ದಾರೆ. ಈ ಶ್ರಮದ ಫಲವಾಗಿ ಇಂದು ಹಕ್ಕುಪತ್ರ ಲಭಿಸಿದೆ. ಮುಂದೆ ಹಕ್ಕುಪತ್ರದ ಮೂಲಕ

ಸರಕಾರಿ ಯೋಜನೆ ಪಡೆಯಲು ಹಕ್ಕು ಪತ್ರ ಅಗತ್ಯ : ಶಾಸಕಿ ಭಾಗೀರಥಿ ಮುರುಳ್ಯ Read More »

ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರು ಓರ್ವ ಶ್ರೇಷ್ಠ ಸಮಾಜ ಸುಧಾರಕ : ಶಾಸಕಿ‌ ಭಾಗೀರಥಿ ಮುರುಳ್ಯ

ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಇಡೀ ವಿಶ್ವಕ್ಕೆ ನಾಯಕರಾಗಿ ಶಕ್ತಿಯಾಗಿ ಮೆರೆದು ಶ್ರೇಷ್ಢ ಸಮಾಜ ಸುಧಾರಕರಾದರು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ರಾಷ್ಟಿಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ತಾಲೂಕು ಆಶ್ರಯದಲ್ಲಿ ಸುಳ್ಯದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಮೆಟ್ಟಿನಿಂತು ಸುಧಾರಣೆ ತರಲು ಪ್ರಯತ್ನಿಸಿದರು.ಅವರ ಆದರ್ಶಗಳನ್ನು ಹಲವು ನಾಯಕರು

ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರು ಓರ್ವ ಶ್ರೇಷ್ಠ ಸಮಾಜ ಸುಧಾರಕ : ಶಾಸಕಿ‌ ಭಾಗೀರಥಿ ಮುರುಳ್ಯ Read More »

ಫೈನಾನ್ಸ್ ನವರ ಕಿರುಕುಳದ ಆರೋಪ – ಲಾರಿ‌ ಮಾಲಕ ಆತ್ಮಹತ್ಯೆ ಯತ್ನ

ಸರಕಾರ ಕೆಂಪು ಕಲ್ಲು ಸಾಗಾಟ ನಿಷೇಧ ಮಾಡಿದುದರಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ನವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ಲಾರಿ ಮಾಲಕರೊಬ್ಬರು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಸೆ.10 ವರದಿಯಾಗಿದೆ.ಎಲಿಮಲೆಯ ಭಾನುಪ್ರಕಾಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ.ಈ ಘಟನೆ ನಡೆದಿದ್ದು ವಿಷಯ ತಿಳಿದ ಮನೆಯವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿದುಬಂದಿದೆ.

ಫೈನಾನ್ಸ್ ನವರ ಕಿರುಕುಳದ ಆರೋಪ – ಲಾರಿ‌ ಮಾಲಕ ಆತ್ಮಹತ್ಯೆ ಯತ್ನ Read More »

ನೆಲ್ಲೂರು‌ ಕೆಮ್ರಾಜೆ : ತಾಳೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ

ನೆಲ್ಲೂರು ಕೆಮ್ರಾಜೆ ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಕಾರದಿಂದ ಗ್ರಾಮ ಪಂಚಾಯತ್ ಸಭಾ ಭವನ ನೆಲ್ಲೂರು ಕೆಮ್ರಾಜೆಯಲ್ಲಿ ತಾಳೆ ಕೃಷಿ ಬಗ್ಗೆ ರೈತರಿಗೆ ತರಬೇತಿ ಮತ್ತು ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಚಂದ್ರಾವತಿಯವರು ವಹಿಸಿದ್ದರು. ತಾಳೆ ಕೃಷಿಯ ಬಗ್ಗೆ ಮಾಹಿತಿಯನ್ನು ಕೃಷ್ಣಾ ವೈ.ಟಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 3 F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಏರಿಯಾ ಮ್ಯಾನೇಜರ್ ನೀಡಿದರು. ಕ್ಲಸ್ಟರ್ ಸೂಪರ್ ವೈಸರ್

ನೆಲ್ಲೂರು‌ ಕೆಮ್ರಾಜೆ : ತಾಳೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ Read More »

ಪೋಟೋ ಗ್ರಾಫರ್ ನಾರಾಯಣ ಕಾಯರ್ತೊಡಿ ನಿಧನ

ಕಾಯರ್ತೋಡಿ ನಿವಾಸಿ ಪೋಟೋ ಗ್ರಾಪರ್ ನಾರಾಯಣ ಆಚಾರ್ಯರವರು ನಿಧನ ಹೊಂದಿದ್ದಾರೆಅವರಿಗೆ 60 ವರ್ಷ ಪ್ರಾಯವಾಗಿತ್ತು.ಇವರು ಕಾಯರ್ತೋಡಿ ಮಹಾವಿಷ್ಣು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಮೃತರು ಪತ್ನಿ ಶೋಭಾ, ಸಹೋದರ ಈಶ್ವರ ಆಚಾರ್ಯ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಪೋಟೋ ಗ್ರಾಫರ್ ನಾರಾಯಣ ಕಾಯರ್ತೊಡಿ ನಿಧನ Read More »

ಬಡತನದ ನೋವಿನಲ್ಲಿ ಸುಶ್ಮಿತಾ ಮನೆಯಲ್ಲಿ ಅರಳಿದೆ ದೇಶದ ಗಡಿಕಾಯುವ ನಗು

ಬಡನದಲ್ಲಿ ಬೆಳೆದು ತನ್ನ ತಂದೆಯನ್ನು ಎಳವೆಯಲ್ಲಿ ಕಳೆದುಕೊಂಡು ಕುಟುಂಬದ ಜವಾಬ್ದಾರಿ ಹೆಗಲಮೇಲೆರಿಸಿಕೊಂಡ ಹಳ್ಳಿ ಯುವತಿಯೊಬ್ಬರು ದೇಶ ಕಾಯುವ ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಗೊಂಡು ಸುಳ್ಯ ತಾಲೂಕು ಸಂಭ್ರಮ ಪಡುತ್ತಿದೆ.ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆ ಬೆದ್ರಪಣೆ ದಿ. ನಾಗಪ್ಪ ಗೌಡ ಎಂ.ಎ., ಜಾನಕಿ ದಂಪತಿಯ ಹಿರಿಯ ಪುತ್ರಿ ಸುಶ್ಮಿತ ಎಸ್.ಎಸ್‌.ಸಿ.ಜಿಡಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿ ಬಿ.ಎಸ್.ಎಫ್ ಗೆ ಆಯ್ಕೆಯಾದ ತಾಲೂಕಿನ ಹೆಮ್ಮೆಯ ಪ್ರತಿಭೆ. ತಂದೆ ತಾಯಿ ಕೂಲಿ ಕಾರ್ಮಿಕರಾಗಿ ದುಡಿದು ಸುಶ್ಮಿತಾ,ತಂಗಿ ನಿಶ್ಮಿತಾರನ್ನು ಸಾಕುತ್ತಿದ್ದರು.ತಂದೆಯ ಅಕಾಲಿಕ ನಿಧನದಿಂದ ಸುಶ್ಮಿತಾ

ಬಡತನದ ನೋವಿನಲ್ಲಿ ಸುಶ್ಮಿತಾ ಮನೆಯಲ್ಲಿ ಅರಳಿದೆ ದೇಶದ ಗಡಿಕಾಯುವ ನಗು Read More »

ವಿದ್ಯಾರ್ಥಿನಿಗೆ ಬೈಕಲ್ಲಿ ಬಂದು ಮೈಗೆ ಕೈ ಹಾಕಿದ ಆರೋಪಿಗೆ ನ್ಯಾಯಾಂಗ ಬಂಧನ

ಪುನ್ಚತಾರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಯುವಕನೋರ್ವನಿಗೆ ಮಂಗಳವಾರ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ ಘಟನೆ ವರದಿಯಾಗಿದೆ.ಕಾಲೇಜು ವಿದ್ಯಾರ್ಥಿನಿ ಸಂಜೆ ರಸ್ತೆ ಬದಿ ನಡೆದುಕೊಂಡು ಮನೆಗೆ ಹೋಗುವಾಗ ಪೆರ್ಲಂಪಾಡಿಯ ಉದಯ ಎಂಬವನು ಬೈಕಿನಲ್ಲಿ ಬಂದು ವಿದ್ಯಾರ್ಥಿನಿಯ ಮೈಗೆ ಕೈ ಹಾಕಿರುವುದಾಗಿ ವಿದ್ಯಾರ್ಥಿನಿ ಬೆಳ್ಳಾರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಸಿ.ಸಿ. ಕ್ಯಾಮರಾ ತಪಾಸಣೆ ನಡೆಸಿ ಕೃತ್ಯ ನಡೆಸಿರುವ ಪೆರ್ಲಂಪಾಡಿಯ ಉದಯ ಎಂಬ ಆರೋಪಿಯನ್ನು‌ ಇಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ

ವಿದ್ಯಾರ್ಥಿನಿಗೆ ಬೈಕಲ್ಲಿ ಬಂದು ಮೈಗೆ ಕೈ ಹಾಕಿದ ಆರೋಪಿಗೆ ನ್ಯಾಯಾಂಗ ಬಂಧನ Read More »

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್‌ ಆಯ್ಕೆ

ಸಿ.ಪಿ ರಾಧಾಕೃಷ್ಣನ್‌ ಅವರು ಭಾರತದ ನೂತನ ಉಪರಾಷ್ಟ್ರಪತಿ ಆಗಿ ಆಯ್ಕೆಯಾಗಿದ್ದಾರೆ.ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಎನ್‌ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್‌ ಗೆಲುವು ಸಾಧಿಸಿದರು.452 ಮಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ.ಪ್ರತಿಸ್ಪರ್ಧಿಯಾಗಿದ್ದ ಅಭ್ಯರ್ಥಿ ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಬಿ.ಸುದರ್ಶನ್ ರೆಡ್ಡಿ ಪರಾಭವಗೊಂಡರು. ಇವರಿಗೆ ಕೇವಲ 300 ಮತಗಳು ದೊರಕಿದವುಸಂಸತ್ತಿನಲ್ಲಿ ಸೆಪ್ಟೆಂಬರ್ 9ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಚುನಾವಣೆ

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್‌ ಆಯ್ಕೆ Read More »

error: Content is protected !!
Scroll to Top