September 2025

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿ ವ್ಯಕ್ತಿ ಸಾವು

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬದಿಯಡ್ಕದಿಂದ ವರದಿಯಾಗಿದೆ. ಮೃತರನ್ನು ಬದಿಯಡ್ಕದ ಚುಲ್ಲಿಕ್ಕಾನದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ತಿಳಿದು ಬಂದಿದೆ.ಭಾನುವಾರ ಸಂಜೆ ವಿನ್ಸೆಂಟ್ ತನ್ನ ಮನೆಯ ಸಮೀಪವಿರುವ ಸಣ್ಣ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದಾಗ ಈ ಘಟನೆ ನಡೆದಿದೆ. ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಅವರು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಅವರನ್ನು ತಕ್ಷಣ ಕುಂಬ್ಳೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರಲ್ಲಿ ಅವರು ತಲುಪುವ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.ವಿನ್ಸೆಂಟ್ ಬೇಲಾ ಕಟ್ಟತಂಗಡಿಯ ವೆಲ್ಡಿಂಗ್ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. […]

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿ ವ್ಯಕ್ತಿ ಸಾವು Read More »

ಪೆರಾಜೆ : ಹೃದಯಾಘಾತದಿಂದ ನಿಧನ

ಪೆರಾಜೆ ಗ್ರಾಮದ ಪೆರುಮುಂಡ ನರೇಂದ್ರ ಪಿ.(51)ಅವರು ಹೃದಯಾಘಾತದಿಂದ ಸೆ. ೨೨ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಬೆಳಿಗ್ಗೆ ಎದೆನೋವು ಬಂದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ತಾಯಿ ಕಮಲ, ಪತ್ನಿ ಸುಲೋಚನಾ, ಮಕ್ಕಳಾದ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

ಪೆರಾಜೆ : ಹೃದಯಾಘಾತದಿಂದ ನಿಧನ Read More »

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿನವರಾತ್ರಿಯ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ದಿನಾಂಕ 22/9/2025 ರಂದು ನವರಾತ್ರಿ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬ ಉದ್ಘಾಟನೆಗೊಂಡಿತು.ಕಾರ್ಯಕ್ರಮವನ್ನು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶ್ರೀಯುತ .ನಿತ್ಯಾನಂದ ಮುಂಡೋಡಿ ಅವರು ಉದ್ಘಾಟಿಸಿ ಶಾಲೆ ಹಾಗೂ ಕಾರ್ಯಕ್ರಮದ ಕುರಿತು ಮಾತನಾಡಿ ಶುಭ ಹಾರೈಸಿದರು. ಗೊಂಬೆ ಹಬ್ಬದ ಮಹತ್ವ ಹಾಗೂ ವಿಶೇಷತೆಯನ್ನು ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ ಅವರು ವಿವರಿಸಿದರು . ರಾಮ, ಲಕ್ಷ್ಮಣ , ಸೀತಾ , ಹನುಮಂತ ಜೊತೆಗೆ ಶಾರದೆ , ಲಕ್ಷ್ಮೀ, ಸರಸ್ವತಿ, ನವದುರ್ಗೆಯರಾಗಿ ಹಾಗೂ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿನವರಾತ್ರಿಯ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ Read More »

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ ಬೇಂದ್ರೆ ರಾಷ್ಟ್ರಪ್ರಶಸ್ತಿ

ಬೆಳಕು ಸಾಹಿತ್ಯಿಕ,ಶೈಕ್ಷಣಿಕ,ಸಾಂಸ್ಕೃತಿಕ ಟ್ರುಸ್ಟ್(ರಿ)ರಾಯಚೂರು ಇದರ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಸೆ:21 ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜರುಗಿದೆ. ಇಲ್ಲಿ ನೀಡುವ ದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರ’ಸರಿಯಾಗಲಿ ಸಮಾಜ’ಎಂಬ ಕವನ ಆಯ್ಕೆಯಾಗಿದ್ದು’ನೆನಪಿನ ಬುತ್ತಿ’ ಸಂಪಾದಿತ ಕವನ ಸಂಕಲನದಲ್ಲೂ ಅದು ಸ್ಥಾನ ಪಡೆದಿರುವುದಕ್ಕೆ ಇವರುದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಣ್ಯರ ಸಮಕ್ಷಮ ಸ್ವೀಕರಿಸಿದರು.

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ ಬೇಂದ್ರೆ ರಾಷ್ಟ್ರಪ್ರಶಸ್ತಿ Read More »

ಅಡ್ತಲೆ : ನೂತನ ಚಂದನಾ ಮಹಿಳಾ ಮಂಡಳ ಅಸ್ತಿತ್ವಕ್ಕೆ

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನೂತನವಾಗಿ ಚಂದನಾ ಮಹಿಳಾ ಮಂಡಳಾ ರಚನೆಗೊಂಡಿದೆ.ಮಹಿಳಾ ಮಂಡಳ ಅಧ್ಯಕ್ಷರಾಗಿ ಸರಸ್ವತಿ ಚಿದಾನಂದ ಅಡ್ತಲೆಉಪಾಧ್ಯಕ್ಷರಾಗಿ ಯಶೋದ ಜಯರಾಮ ಅಡ್ತಲೆಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಅಜಿತ್ ಪಿಂಡಿಮನೆಕೋಶಧಿಕಾರಿಯಾಗಿ ದಿವ್ಯ ಮೋಹನ್ ಅಡ್ತಲೆ ಆಯ್ಕೆಯಾಗಿದ್ದಾರೆ.ನಿರ್ದೆಶಕರಾಗಿ ಶ್ಯಾಮಲಾ ಹರಿಪ್ರಸಾದ್ ಅಡ್ತಲೆ,ಸುಜಯ ಲೋಹಿತ್ ಮೇಲಡ್ತಲೆ, ಲತಾ ಜಯರಾಮ ಮೇಲಡ್ತಲೆ, ಕವಿತಾ ವಿಶ್ವನಾಥ್ ಅಡ್ತಲೆ, ವಿಮಲಾ ಶಶಿಕುಮಾರ್ ಉಳುವಾರು, ಜಯಲತಾ ಭವಾನಿಶಂಕರ್ ಅಡ್ತಲೆ, ದಿನೇಶ್ವರಿ ಶಿವರಾಮ ಪಿಂಡಿಮನೆ, ಹಸ್ತವಿ ಹೇಮಾಕುಮಾರ ಚೀಮಾಡು ಆಯ್ಕೆಗೊಂಡರು.ಸದಸ್ಯರಾಗಿ ಮನಿಮಾಲ ಅಡ್ತಲೆ ,ವಸಂತಿ ಪಿಂಡಿಮನೆ,ಜಯಂತಿ

ಅಡ್ತಲೆ : ನೂತನ ಚಂದನಾ ಮಹಿಳಾ ಮಂಡಳ ಅಸ್ತಿತ್ವಕ್ಕೆ Read More »

ಕಲ್ಲಿನ ಕೋರೆಯ ನೀರಲ್ಲಿ ಮುಳುಗಿ ಬಾಲಕ ಸಾವು

ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಬಕ ಬಳಿ ಕಲ್ಲಿನ ಕೋರೆಯಲ್ಲಿ ನಡೆದಿದೆ.ಮೃತರನ್ನು ಕಬಕ ಕಲ್ಲಂದಡ್ಕ ನಿವಾಸಿ ಅಜ್ವಾನ್‌ (13)ಎಂದು ಗುರುತಿಸಲಾಗಿದೆ.ಸ್ನೇಹಿತರ ಜೊತೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಲ್ಲಿನ ಕೋರೆಯ ನೀರಲ್ಲಿ ಮುಳುಗಿ ಬಾಲಕ ಸಾವು Read More »

ಪೂರ್ಣಿಮಾ ಪೆರ್ಲಂಪಾಡಿಮಡಿಕೇರಿ ದಸರಾ ಕವಿಗೋಷ್ಠಿ ಗೆ ಆಯ್ಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಕೊಳ್ತಿಗೆ ವಲಯದ ಪೆರ್ಲಂಪಾಡಿ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲಂಪಾಡಿ ಇವರು 2025 ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ. ಸೆಪ್ಟೆಂಬರ್ 25ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲಿದ್ದು ಇವರು ಅನೇಕ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರು ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ವಲಯ 15ರ ಬೆಳ್ಳಾರೆ ಜೇಸಿಸ್ ನ 2026ರ ನಿಯೋಜಿತ ಅಧ್ಯಕ್ಷರು

ಪೂರ್ಣಿಮಾ ಪೆರ್ಲಂಪಾಡಿಮಡಿಕೇರಿ ದಸರಾ ಕವಿಗೋಷ್ಠಿ ಗೆ ಆಯ್ಕೆ Read More »

ನೆಕ್ಸ್ಟ ಜನರೇಶನ್ ಜಿಎಸ್ ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ

ನೆಕ್ಸ್ಟ ಜನರೇಶನ್ ಜಿಎಸ್ ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟರನ್ನು ಪಕ್ಷ ನೇಮಕಗೊಳಿಸಿದೆ.ಜಿಎಸ್ ಟಿ ಸ್ಲಾಬ್ ವಿಚಾರವಾಗಿ ರಾಜ್ಯದ್ಯಾಂತ ಜನಸಾಮಾನ್ಯರಿಗೆ ತಿಳಿಸಲು ಈ ಜವಾಬ್ದಾರಿ ನೀಡಲಾಗಿದ್ದು.ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವುದು.

ನೆಕ್ಸ್ಟ ಜನರೇಶನ್ ಜಿಎಸ್ ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ಏಷ್ಯಾ ಕಪ್ 2025: ಭಾರತಕ್ಕೆ ಭರ್ಜರಿ ಜಯ, ಪಾಕ್‌ಗೆ ಮತ್ತೆ ಮುಖಭಂಗ

.21ರಂದು ನಡೆದ ಏಷ್ಯಾ ಕಪ್ 2025ರ ಸೂಪರ್ ಪೋರ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ 5 ವಿಕೆಟ್ ಕಳೆದುಕೊಂಡು 172 ರನ್‌ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನತ್ತಿದ ಭಾರತದ ಪರ ಆರಂಭಿಕರಾದ ಅಭಿಷೇಕ್ (74), ಗಿಲ್ (47) ಮತ್ತು ತಿಲಕ್ () ಗಳಿಸಿ ಭಾರತದ ಗೆಲುವಿಗೆ ಕಾರಣರಾದರು

ಏಷ್ಯಾ ಕಪ್ 2025: ಭಾರತಕ್ಕೆ ಭರ್ಜರಿ ಜಯ, ಪಾಕ್‌ಗೆ ಮತ್ತೆ ಮುಖಭಂಗ Read More »

ಸುಳ್ಯ ನಗರ ಪಂಚಾಯತ್ ಶೆಡ್ ನಲ್ಲಿ ರಾಶಿ ಬಿದ್ದ ಕಸವನ್ನು ಖಾಲಿ ಮಾಡಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ

ಸುಳ್ಯ ನಗರ ಪಂಚಾಯತ್ ಮುಂಭಾಗದ ಶೆಡ್ ನಲ್ಲಿ ಅನೇಕ ವರ್ಷಗಳಿಂದ ರಾಶಿ ಬಿದ್ದಿದ್ದ ತ್ಯಾಜ್ಯ ಕೊನೆಗೂ ಖಾಲಿಯಾಗಿದೆ. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಪ್ರಯತ್ನದಿಂದ ಮೊದಲ ಬಾರಿಗೆ ಕಸ ಸಂಪೂರ್ಣ ಖಾಲಿಯಾಗಿದ್ದು ಅಧ್ಯಕ್ಷರ ಈ ಕೆಲಸವನ್ನು ಅನೇಕರು ಶ್ಲಾಘಿಸಿದ್ದಾರೆ.ಶಶಿಕಲಾ ನೀರಬಿದಿರೆ ನಗರ ಪಂಚಾಯತ್ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಸುಳ್ಯದ ಕಸದ ಸಮಸ್ಯೆ ಪರಿಹಾರಕ್ಕೆ ಸಂಸದರು, ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮುಖಾಂತರ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ರಾಶಿ ಬಿದ್ದಿದ್ದ ಕಸದ ಬಗ್ಗೆ ನಿರಂತರ ಟೀಕೆ, ರಾಜಕೀಯ

ಸುಳ್ಯ ನಗರ ಪಂಚಾಯತ್ ಶೆಡ್ ನಲ್ಲಿ ರಾಶಿ ಬಿದ್ದ ಕಸವನ್ನು ಖಾಲಿ ಮಾಡಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ Read More »

error: Content is protected !!
Scroll to Top