September 2025

ಪೂರ್ಣಿಮಾ ತೋಟಪ್ಪಾಡಿಯವರಿಗೆ ರಾಜ್ಯಮಟ್ಟದ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ

ವಿವಿಧ ಕಡೆಗಳಲ್ಲಿ ಜರುಗಿದ ಕಾರ್ಯಕ್ರಮ ಹಾಗೂ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ತಮ್ಮ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ 2025 ಸೆಪ್ಟೆಂಬರ್ 14ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಪೂರ್ಣಿಮಾ ತೋಟಪ್ಪಾಡಿಯವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪೂರ್ಣಿಮಾ ತೋಟಪ್ಪಾಡಿಯವರಿಗೆ ರಾಜ್ಯಮಟ್ಟದ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ Read More »

ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಲೇಖಕಿ, ಕವಯತ್ರಿ ಡಾ. ಅನುರಾಧಾ ಕುರುಂಜಿಯವರು 2025 ರ ಮಡಿಕೇರಿ ದಸರ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ. ಸೆಪ್ಟೆಂಬರ್ 25 ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಇವರು ಕವನ ವಾಚಿಸಲಿದ್ದು ಈ ಹಿಂದೆ ಹಂಪಿ ಉತ್ಸವ ಹಾಗೂ ತಾಲೂಕು, ಜಿಲ್ಲೆ, ರಾಜ್ಯ, ಕೇರಳ ರಾಜ್ಯ, ಕಾಸರಗೋಡು ಮೊದಲಾದ ಕಡೆಗಳಲ್ಲಿ ಕವನ, ಚುಟುಕು ವಾಚನಗಳನ್ನು

ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ Read More »

ಕಲ್ಚೆರ್ಪೆ : ತ್ಯಾಜ್ಯ ಸಮಸ್ಯೆ ಪರಿಹಾರವಾಗದಿದ್ದರೆ ಸುಳ್ಯ ನಗರ ಪಂಚಾಯತಿಗೆ ಮುತ್ತಿಗೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೆರ್ಪೆಯಲ್ಲಿ ಅಸಮರ್ಪಕವಾಗಿ ನಡೆಯುತ್ತಿರುವ ನಗರ ಪಂಚಾಯತಿ ಕಸ ವಿಲೇವಾರಿ ಘಟಕದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಲೆಟ್ಟಿಪಂಚಾಯತ್‌ ಸದಸ್ಯ ಸುದೇಶ್ ಅರಂಬೂರು ಸಹಿತ ಸ್ಥಳೀಯರು ಒತ್ತಾಯಿಸಿದ್ದಾರೆ.ಸುಮಾರು ಆರು ತಿಂಗಳ ಹಿಂದೆ ಶಾಸಕರ ಮತ್ತು ನಗರ ಪಂಚಾಯತ್ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ ಪ್ರಕಾರ ಕಸವನ್ನು ಶೇಖರಣೆ ಮಾಡದೆ ದಿನದ ಕಸವನ್ನು ಅದೇ ದಿನ ಬರ್ನಿಂಗ್ ಮಾಡಿ ಮುಗಿಸುವುದೆಂದು ನಿರ್ಣಯಿಸಿ

ಕಲ್ಚೆರ್ಪೆ : ತ್ಯಾಜ್ಯ ಸಮಸ್ಯೆ ಪರಿಹಾರವಾಗದಿದ್ದರೆ ಸುಳ್ಯ ನಗರ ಪಂಚಾಯತಿಗೆ ಮುತ್ತಿಗೆ Read More »

ವಿಶ್ವವಿಖ್ಯಾತ ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಡೆಕೋಲಿನ ರಂಜನಿ ಮಕ್ಕಳ ಯಕ್ಷಗಾನ ಕಲಾ ತಂಡ ಆಯ್ಕೆ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ತುಳುನಾಡಿನ ಸಂಸ್ಕೃತಿ ಬಂಬಿಸುವ ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನ ಮೈಸೂರು ದಸರಾದಲ್ಲಿ ಪ್ರದರ್ಶನವಾಗಲಿದೆ. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾ.ಪಂ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡ ಅರಿವು ಕೇಂದ್ರ ಮಂಡೆಕೋಲು ಇದರ ಬಾಲ ಕಲಾವಿದರಿಂದ ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ಸೆ. 23ರಂದು ರಾತ್ರಿ 7-00 ಗಂಟೆಯಿಂದ ಮಹಿಷ ಮರ್ಧಿನಿ ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಡೆಕೋಲಿನ ರಂಜನಿ ಮಕ್ಕಳ ಯಕ್ಷಗಾನ ಕಲಾ ತಂಡ ಆಯ್ಕೆ Read More »

ಐ ಐ ಹೆಚ್ ಆರ್ ಬೆಂಗಳೂರಿನಲ್ಲಿ ಸುಳ್ಯದ ಕೃಷಿ ಸಖಿಯರಿಗೆ ತೋಟಗಾರಿಕಾ ಕೌಶಲ್ಯ ವೃದ್ಧಿಗಾಗಿ ತರಬೇತಿ

ಎನ್ ಆರ್ ಎಲ್ ಎಂ ಸಂಜೀವಿನಿ ಸುಳ್ಯ ತಾಲೂಕಿನ ಕೃಷಿ ಸಖಿಯರ ಕೌಶಲ್ಯ ವೃದ್ಧಿಗಾಗಿ ಸುಧಾರಿತ ತೋಟಗಾರಿಕಾ ತರಬೇತಿಯನ್ನು ಭಾ. ಕೃ. ಸಂ.ಪ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ದ.ಕ ಜಿಲ್ಲೆ ಇವರ ಸಹಯೋಗದೊಂದಿಗೆ RKVY ಯೋಜನೆಯಡಿ ಎರಡು ದಿನಗಳ ತರಬೇತಿಯನ್ನು ಹದಿನೆಂಟು ಗ್ರಾಮ ಪಂಚಾಯತ್ ಗಳಿಂದ ಆಯ್ಕೆಗೊಂಡ ಸಕ್ರಿಯ ಕೃಷಿ ಸಖಿಯರುಗಳಿಗೆ ಹಮ್ಮಿಕೊಳ್ಳಲಾಯಿತು. ಡಾ. ತುಷಾರ್ ಕಾಂತಿ ಬೆಹೇರ ನಿರ್ದೇಶಕರು ICAR- ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಇವರು

ಐ ಐ ಹೆಚ್ ಆರ್ ಬೆಂಗಳೂರಿನಲ್ಲಿ ಸುಳ್ಯದ ಕೃಷಿ ಸಖಿಯರಿಗೆ ತೋಟಗಾರಿಕಾ ಕೌಶಲ್ಯ ವೃದ್ಧಿಗಾಗಿ ತರಬೇತಿ Read More »

ಸುಳ್ಯ ದಲ್ಲಿ ಕಂದಾಯ ಸಚಿವರ ನೇತೃತ್ವ ದಲ್ಲಿ ಕಂದಾಯ ಅದಾಲತ್ ನಡೆಸಿ ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ತ್ವರಿತ ಕ್ರಮ ಕ್ಕೆ ಕೆ ಡಿ ಪಿ ಸದಸ್ಯ ಅಶ್ರಫ್ ಗುಂಡಿ ಮನವಿ

ಸರಕಾರದ ಮಹತ್ವಾಕಾಂಶದ ಅಕ್ರಮ ಸಕ್ರಮ ಯೋಜನೆಯನ್ನು ಸಾರ್ವಜನಿಕರು ಸದುಪಯೊಗ ಪಡೆಯಲು ಸುಳ್ಯದಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸದೆ ಇರುವುದರಿಂದ ಸರಕಾರ ಯೋಜನೆ ಪ್ರಯೋಜನಕ್ಕೆ ಬರುತ್ತಿಲ್ಲ. ಮತ್ತು ತಾಲೂಕಿನ ಅನೇಕರಿಗೆ ಅನ್ಯಾಯವಾಗಿದೆ. ಸಮಿತಿ ಸಭೆಯನ್ನು ಕರೆಯಲು ಸಂಬಂಧಪಟ್ಟ ಅಧಿಕಾರಿಗಳು ಆಸಕ್ತಿ ತೋರಿಸದೆ ಇರುವುದರಿಂದ ಸಂಶಯಕ್ಕೆ ಎಡೆಮಾಡಿದೆ. ಇದರ ಬಗ್ಗೆ ಕೆ.ಡಿ.ಪಿ ಸದಸ್ಯರು ಹಿಂದಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನ್ಯ ತಹಶೀಲ್ದಾರರನ್ನು ಸಭೆ ಕರೆಯಲು ಆಗ್ರಹಿಸಿದರು ಪ್ರಯೋಜನವಾಗಿಲ್ಲ. ಸರಕಾರಿ ಸ್ಥಳವಾಗಿದ್ದರು ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕೇಳಲಾಗುತ್ತಿದೆ. ಅರಣ್ಯ

ಸುಳ್ಯ ದಲ್ಲಿ ಕಂದಾಯ ಸಚಿವರ ನೇತೃತ್ವ ದಲ್ಲಿ ಕಂದಾಯ ಅದಾಲತ್ ನಡೆಸಿ ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ತ್ವರಿತ ಕ್ರಮ ಕ್ಕೆ ಕೆ ಡಿ ಪಿ ಸದಸ್ಯ ಅಶ್ರಫ್ ಗುಂಡಿ ಮನವಿ Read More »

ಆರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಚತೆಯಲ್ಲಿ ಪಂಚಾಯತ್ “ಗ್ರಾಮ ಸ್ವರಾಜ್” ಸಭಾಂಗಣದಲ್ಲಿ ಸೆ.18ರಂದು ನಡೆಯಿತು.ಸಭೆಯಲ್ಲಿ ಪಂಚಾಯತ್ ಆಡಳಿತದ ಆಡಳಿತಾವಧಿ 3,4ತಿಂಗಳಲ್ಲಿ ಮುಗಿಯುವುದರಿಂದ ಬೆಂಕಿಗೆ ಆಹುತಿಯಾದ ಘನ ತ್ಯಾಜ್ಯ ಘಟಕ “ಸ್ವಚ್ಛ ಸಂಕೀರ್ಣ”ದ ಕಟ್ಟಡ ರಚನೆಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಕೈಗೊಳ್ಳಳು ಕ್ರಮ ವಹಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೀಟಿಂಗ್ ಹಾಲ್, ಅಧ್ಯಕ್ಷ ಉಪಾಧ್ಯಕ್ಷರ ಚೇಂಬರ್ ಗಳಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಬದಲಿ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ತೋಡಿಕಾನ ಗ್ರಾಮದಲ್ಲಿ

ಆರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಗಳು ಎನ್ನಲಾದ ಯುವಕ ಯುವತಿ ದೇವರಕೊಲ್ಲಿಯಲ್ಲಿ ಪತ್ತೆ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದಿಂದ ಕೇರಳ ಪೊಲೀಸರಿಂದ ಸೆ.17ರಂದು ತಪ್ಪಿಸಿಕೊಂಡಿದ್ದ ಪಾಲಕ್ಕಾಡ್ ಮೂಲದ ಕೊಲೆ ಆರೋಪಿಗಳು ಎಂದು ಹೇಳಲಾಗುತ್ತಿರುವ ಇಬ್ಬರು ದೇವರಕೊಲ್ಲಿ ಮನೆಯೊಂದರಲ್ಲಿ ಸೆ.18ರಂದು ಪತ್ತೆಯಾಗಿದ್ದಾರೆ.ಸಿಕ್ಕಿ ಬಿದ್ದವರು ಓರ್ವ ಯುವಕ ಹಾಗೂ ಒಬ್ಬಳು ಯುವತಿ ಎಂದು ತಿಳಿದು ಬಂದಿದೆ. ತಪ್ಪಿಸಿಕೊಂಡಿದ್ದ ಇವರು ರಾತ್ರಿ ವೇಳೆ ರಬ್ಬ‌ರ್ ತೋಟದ ಮನೆಯ ಬಳಿ ಬಂದು ಆಶ್ರಯ ಪಡೆದಿದ್ದರು.ಸ್ಥಳೀಯರು ಅವರನ್ನು ಹಿಡಿದು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಗಳು ಎನ್ನಲಾದ ಯುವಕ ಯುವತಿ ದೇವರಕೊಲ್ಲಿಯಲ್ಲಿ ಪತ್ತೆ Read More »

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಭಾರತೀಯ ಬಿ.ಎಸ್.ಎಫ್ ಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆಯವರಿಗೆ ಅಭಿನಂದನಾ ಕಾರ್ಯಕ್ರಮ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ರೀ ಸುಳ್ಯ ಇದರ ವತಿಯಿಂದ ನಮ್ಮ ತಾಲೂಕಿನ ಹೆಮ್ಮೆಯ ಪುತ್ರಿ ಅರಂತೋಡು ಗ್ರಾಮದ ಸುಶ್ಮಿತಾ ಬೆದ್ರುಪಣೆ ಇವಳು ಗಡಿಪದ್ರತಾ ಪಡೆಗೆ ಆಯ್ಕೆಯಾದ ಸುಸಂದರ್ಭದಲ್ಲಿ ಅವರನ್ನು ಅವರ ಮನೆಗೆ ತೆರಳಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಪುಷ್ಪಾ ಮೇದಪ್ಪ ಉಪಾಧ್ಯಕ್ಷರಾದ ಗುಣವತಿ ಕೊಲ್ಲಂತಡ್ಕ ಕಾರ್ಯದರ್ಶಿಯಾದ ಲೋಲಾಕ್ಷಿ ದಾಸನ ಕಜೆ ಸಂಘಟನಾ ಕಾರ್ಯದರ್ಶಿಯಾದ ಜಯಂತಿ ಜನಾರ್ದನ ನಿರ್ದೇಶಕರಾದ ಸರಸ್ವತಿ ಕಕ್ಕಾಡು ಚಂದ್ರ ಹೊನ್ನಪ್ಪ ಸುಜಾತ ರೈ, ಸಂಸ್ಥೆಯ ಗೌರವ ಆಹ್ವಾನಿತರಾದ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಭಾರತೀಯ ಬಿ.ಎಸ್.ಎಫ್ ಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆಯವರಿಗೆ ಅಭಿನಂದನಾ ಕಾರ್ಯಕ್ರಮ Read More »

ನೆಟ್ಟಾರು : ರಸ್ತೆ ಬದಿಯ ಗುಂಡಿಗೆ ಕಾರು ಬಿದ್ದು ಜಖಂ

ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದ ಘಟನೆ ಗುರುವಾರ ವರದಿಯಾಗಿದೆ.ನೆಟ್ಟಾರು ತಿರುವಿನಲ್ಲಿ ರಿಟ್ಸ್ ಕಾರು ಗುಂಡಿಗೆ ಬಿದ್ದ ಪರಿಣಾಮ ಕಾರು ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.

ನೆಟ್ಟಾರು : ರಸ್ತೆ ಬದಿಯ ಗುಂಡಿಗೆ ಕಾರು ಬಿದ್ದು ಜಖಂ Read More »

error: Content is protected !!
Scroll to Top