January 2026

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಮೈದಾನ ಶುಚಿತ್ವ ಕಾರ್ಯ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಯುವ ಸಂಭ್ರಮ ಕಾರ್ಯಕ್ರಮದ ಮೈದಾನ ಶುಚಿತ್ವ ಕಾರ್ಯಕ್ರಮವನ್ನು ಮಾಡಿದ ಮಿತ್ರ ಮಂಡಳಿ ನಾಗತೀರ್ಥ ಅಧ್ಯಕ್ಷರು ಮತ್ತು ಸದಸ್ಯರು, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರಿಗೆ ದೇಗುಲದ ವತಿಯಿಂದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯ‌ಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಧನ್ಯವಾದ ಸಲ್ಲಿಸಿದ್ದಾರೆ.

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಮೈದಾನ ಶುಚಿತ್ವ ಕಾರ್ಯ Read More »

ಅಡ್ತಲೆಯಲ್ಲಿ ನಾಯಿಯನ್ನು ಹೊತ್ತೊಯ್ದ ಚಿರತೆ,ಆತಂಕದಲ್ಲಿ ಸ್ಥಳೀಯರು!

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ಹಾಸ್ಪರೆ ಕೂಸಪ್ಪ ಗೌಡ ಎಂಬವರ ಸಾಕು ನಾಯಿಯನ್ನು ಜ.21ರ ರಾತ್ರಿ ಮನೆಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ವರದಿಯಾಗಿದೆ.ಮನೆಯ ಸಿಸಿ ಟಿ ವಿ ಪರಿಶೀಲಿಸಿದಾಗ ಮನೆಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದ ಈ ಘಟನೆ ಕಂಡು ಬಂದಿದೆ.ಅಡ್ತಲೆ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದೀಗ ಚಿರತೆ ಹಾವಳಿ ಸೇರ್ಪಡೆಗೊಂಡಿದೆ.

ಅಡ್ತಲೆಯಲ್ಲಿ ನಾಯಿಯನ್ನು ಹೊತ್ತೊಯ್ದ ಚಿರತೆ,ಆತಂಕದಲ್ಲಿ ಸ್ಥಳೀಯರು! Read More »

ಅರಂತೋಡು ಜಮಾಅತ್ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಅಶ್ರಫ್ ಗುಂಡಿ ಪುನರಾಯ್ಕೆ

ಅರಂತೋಡು ಬದ್ರಿಯಾ ಜುಮಾಮಸೀದಿ ಇದರ ವಾರ್ಷಿಕ ಮಹಾ ಸಭೆಯು ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ಜ. 16 ರಂದು ನಡೆಯಿತು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ ಮೂಸಾನ್ ವರದಿ ವಾಚಿಸಿ, ಲೆಕ್ಕಪತ್ರಗಳನ್ನು ಮಂಡಿಸಿದರು. ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ (ಸಚಿವ ಸ್ಥಾನ ಮಾನ) ಹಾಗೂ ನಿವೃತ್ತ ಉಪನ್ಯಾಸಕ ಎ. ಅಬ್ದುಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲಿ ಅಧ್ಯಕ್ಷರಾಗಿ ಅಶ್ರಫ್ ಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ

ಅರಂತೋಡು ಜಮಾಅತ್ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಅಶ್ರಫ್ ಗುಂಡಿ ಪುನರಾಯ್ಕೆ Read More »

ಅಡ್ತಲೆ ಮರ್ಕಂಜ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು

ಸುಳ್ಯ ತಾಲೂಕಿನ ಅಡ್ತಲೆ ಮರ್ಕಂಜ – ರಸ್ತೆಯಲ್ಲಿ ಜ.20ರಂದು ಸಂಜೆ ಕಾಡಾನೆಗಳು ರಸ್ತೆ ದಾಟಿದ ಘಟನೆ ವರದಿಯಾಗಿದೆ.ಕೆಲ ಸಮಯಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳು ಸಂಜೆಯಾಗುತ್ತಲೇ ಕಾಡು ಬಿಟ್ಟು ನಾಡಿಗೆ ಇಳಿಯುತ್ತಿವೆ. ಕಾಡಿನಂಚಿನ ತೋಟಗಳಿಗೆ ನುಗ್ಗುತ್ತಿರುವ ಕಾಡನೆಗಳ ಹಿಂಡು ಅಪಾರ ಕೃಷಿ ಹಾನಿ ಮಾಡುತ್ತಿವೆ.ಇಂದು ಸಂಜೆ 6.50ರ ಅಡ್ತಲೆ ಮರ್ಕಂಜ ರಸ್ತೆಯನ್ನು ಅಡ್ಡ ದಾಟಿವೆ.ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಡ್ತಲೆ ಮರ್ಕಂಜ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು Read More »

ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ ನಿಧನ

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ ಅಸೌಖ್ಯದಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಜ.20ರಂದು ನಿಧನರಾದರು.ಅವರಿಗೆ ಸುಮಾರು 36 ವರ್ಷ ವಯಸ್ಸಾಗಿತ್ತು.ಬಳ್ಳಡ್ಲ ದಿ.ದುಗ್ಗಪ್ಪ ಗೌಡ – ಶ್ ಇಂದಿರಾ ದಂಪತಿಯ ಪುತ್ರರಾಗಿದ್ದ ಅನಿಲ್ ಗ್ರಾ.ಪಂ. ಸದಸ್ಯರಾಗಿ ಜನ ಸೇವೆ ಮಾಡುತ್ತಿದ್ದರು. ಆದರೆ ಕಳೆದ ಕೆಲ ಸಮಯದಿಂದ ಅವರು ಅಸೌಖ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಮೃತರು ತಾಯಿ ಇಂದಿರಾ , ಪತ್ನಿಕಾವ್ಯ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ ನಿಧನ Read More »

ಭಾರತ ಸರ್ಕಾರದ ಪರಿಶಿಷ್ಟಜಾತಿ ಉಪಯೋಜನೆಯಡಿ ಪಲಾನುಭವಿಗಳಿಗೆ ಸವಲತ್ತು ವಿತರಣೆ

ಭಾರತ ಸರಕಾರದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ ಐವರ್ನಾಡು ಗ್ರಾಮಗಳ ಅರ್ಹ ಪಲಾನುಭವಿಗಳಿಗೆ ಕೃಷಿ ಸವಲತ್ತುಗಳ ವಿತರಣ ಕಾರ್ಯಕ್ರಮವು ಜ.19ರಂದು ಸುಳ್ಯ ತಾಲೂಕು ಪಂಚಾಯತ್ ವಠಾರದಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಸವಲತ್ತುಗಳನ್ನು ವಿತರಿಸಿ ಶುಭ ಹಾರೈಸಿದರು.ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋ ಪ್ರಾದೇಶಿಕ ಕೇಂದ್ರ ತ್ರಿಶೂರ್ ಹಾಗೂ ದ.ಕ. ಕೃಷಿ ವಿಜ್ಞಾನ ಕೇಂದ್ರದ ಮೂಲಕ ಈ ಸವಲತ್ತುಗಳ ವಿತರಣೆ ನಡೆಯಿತು.ಅಧಿಕ ಪರಿಶಿಷ್ಟ ಜಾತಿ ಕೃಷಿಕರಿರುವ ಪ್ರದೇಶಗಳ ಫಲಾನುವಿಗಳಿಗೆ ಈ ಸಲಕರಣೆಗಳನ್ನು ಯೋಜನೆಯ ಮೂಲಕ

ಭಾರತ ಸರ್ಕಾರದ ಪರಿಶಿಷ್ಟಜಾತಿ ಉಪಯೋಜನೆಯಡಿ ಪಲಾನುಭವಿಗಳಿಗೆ ಸವಲತ್ತು ವಿತರಣೆ Read More »

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧ ಮುಖ್ಯ : ಒಲ್ಡಿನ್ ಡಿ.ಕುನ್ಹಾ

ಸಮಾಜದಲ್ಲಿ ಜನರಿಗೆ ಹಣ ಮುಖ್ಯವಲ್ಲ ಸಂಬಂಧ ಮುಖ್ಯ ಈ ನಿಟ್ಟಿನಲ್ಲಿ ತಾನು ಕಲಿತ ಶಿಕ್ಷಣ ಸಂಸ್ಥೆಯೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಬಂಧ ಇರಿಸಿಕೊಳ್ಳಬೇಕೆಂದು ಸೈಂಟ್ ಬ್ರಿಜಿಟ್ಸ್ ಶಾಲೆಯ ಜೊತೆ ಕಾರ್ಯದರ್ಶಿ ಪೂಜ್ಯನೀಯ ಒಲ್ಡಿನ್ ಡಿ.ಕುನ್ಹಾ ಹೇಳಿದರು.ಅವರು ಸುಳ್ಯ ಬೀರಮಂಗಲದಲ್ಲಿರುವಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ‌ಸುಳ್ಯ ಇದರ ಅಮೃತ ಮಹೋತ್ಸವ ಅಂಗವಾಗಿ ಜ.20ರಂದು ಶಾಲಾ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ವಿದ್ಯಾರ್ಥಿ ಎಸ್.ಎಂ ಬಾಪೂ ಸಾಹೇಬ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧ ಮುಖ್ಯ : ಒಲ್ಡಿನ್ ಡಿ.ಕುನ್ಹಾ Read More »

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧವ ಮುಖ್ಯ : ಒಲ್ಡಿನ್ ಡಿ.ಕುನ್ಹಾ

ಸಮಾಜದಲ್ಲಿ ಜನರಿಗೆ ಹಣ ಮುಖ್ಯವಲ್ಲ ಸಂಬಂಧ ಮುಖ್ಯ. ಈ ನಿಟ್ಟಿನಲ್ಲಿ ತಾನು ಕಲಿತ ಶಿಕ್ಷಣ ಸಂಸ್ಥೆಯೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಬಂಧ ಇರಿಸಿಕೊಳ್ಳಬೇಕೆಂದು ಸೈಂಟ್ ಬ್ರಿಜಿಟ್ಸ್ ಶಾಲೆಯ ಜೊತೆ ಕಾರ್ಯದರ್ಶಿ ಪೂಜ್ಯನೀಯ ಒಲ್ಡಿನ್ ಡಿ.ಕುನ್ಹಾ ಹೇಳಿದರು.ಅವರು ಸುಳ್ಯ ಬೀರಮಂಗಲದಲ್ಲಿರುವಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ‌ಸುಳ್ಯ ಇದರ ಅಮೃತ ಮಹೋತ್ಸವ ಅಂಗವಾಗಿ ಜ.20ರಂದು ಶಾಲಾ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ವಿದ್ಯಾರ್ಥಿ ಎಸ್.ಎಂ ಬಾಪೂ ಸಾಹೇಬ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧವ ಮುಖ್ಯ : ಒಲ್ಡಿನ್ ಡಿ.ಕುನ್ಹಾ Read More »

ರಾಜ್ಯದ ಹಲವು ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆ ಸುರಿಯುವ ಸಾಧ್ಯತೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಚಳಿ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನವರಿ 21ರವರೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದ್ದು, ಚಳಿ ಹೆಚ್ಚಾಗಲಿದೆ. ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆ ಸುರಿಯುವ ಸಾಧ್ಯತೆ Read More »

ತೊಡಿಕಾನ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ

ಸುಳ್ಯ ತಾಲೂಕಿನ ತೊಡಿಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಸಿರು ಕಾನನದ ಮಧ್ಯೆ ಕಂಗೊಳಿಸುತ್ತಿದೆ.ಶಾಲೆಗೆ ಇದೀಗ 75 ವರುಷದ ಸಂಭ್ರಮ.ಅನೇಕರ ಬಾಳನ್ನು ಬೆಳಗಿದ ವಿದ್ಯಾದೇಗುಲದ ಅಮೃತ ಸಂಭ್ರಮವನ್ನು ಅರ್ಥಪೂರ್ಣ ವಾಗಿ ಆಚರಿಸಲು ಶಾಲೆಯ ಊರವರು ಸೇರಿಕೊಂಡು ಅಮೃತಮಹೋತ್ಸವ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ಇದೇ ಜನವರಿ ಜ.22ರಂದು ಶಾಲೆಯಲ್ಲಿ ಅಮೃತ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.ತೊಡಿಕಾನ ಎಂಬುದು ಕಾನನಗಳ ಮಧ್ಯೆ ಸೀಮಿತ ಸಂಖ್ಯೆಯ ಮನೆಗಳು, ಎಲ್ಲಿ ನೋಡಿದರೂ ದಟ್ಟಾರಣ್ಯ. ಸೀಮೆ ದೇವಸ್ಥಾನ

ತೊಡಿಕಾನ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ Read More »

error: Content is protected !!
Scroll to Top