February 2026

ದೇಶದಲ್ಲಿ 2.5 ಕೋಟಿ ಆಧಾರ್ ಕಾರ್ಡ್ ರದ್ದು

ದೇಶಾದ್ಯಂತ ಆಧಾರ್ ಡೇಟಾಬೇಸ್‌ನ್ನು ಸುರಕ್ಷಿತ ಹಾಗೂ ನಿಖರವಾಗಿಡುವ ಉದ್ದೇಶದಿಂದ, ಮೃತಪಟ್ಟಿರುವ ವ್ಯಕ್ತಿಗಳಿಗೆ ಸೇರಿದ 2.5 ಕೋಟಿಗೂ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಲೋಕಸಭೆಗೆ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.ಮೃತ ವ್ಯಕ್ತಿಗಳ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುವುದರಿಂದ ಗುರುತು ವಂಚನೆ ತಡೆಯಲು ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಸರ್ಕಾರಿ ಕಲ್ಯಾಣ ಯೋಜನೆಗಳ ದುರುಪಯೋಗ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.ಜಿತಿನ್ ಪ್ರಸಾದ […]

ದೇಶದಲ್ಲಿ 2.5 ಕೋಟಿ ಆಧಾರ್ ಕಾರ್ಡ್ ರದ್ದು Read More »

ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿಧನ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪೂರ್ಣಚಂದ್ರ ಕಣೆಮರಡ್ಕ ದೀರ್ಘಕಾಲಿನ ಅಸೌಖ್ಯದಿಂದ ಫೆ.4ರಂದು ನಿಧನರಾದರು. ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.ಅಸೌಖ್ಯ ಉಲ್ಬಣಿಸಿದಾಗ ಮನೆಯವರು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದಾಗ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.ಮಂಡೆಕೋಲು ಪ್ರದೇಶದಲ್ಲಿ ಜನಾನುರಾಗಿಯಾಗಿದ್ದ ಮಂಡೆಕೋಲು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿದ್ದರು. ಮಂಡೆಕೋಲು ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು, ಮಂಡೆಕೋಲು ದೇವಸ್ಥಾನಕ್ಕೊಳಪಡುವ ಕಳೇರಿ ಉಳ್ಳಾಕುಲು ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ 10 ವರ್ಷಗಳಿಂದ

ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿಧನ Read More »

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರಿಗೆ ಆಯುಷ್ ಶ್ರೀ ಪ್ರಶಸ್ತಿ ಪುರಸ್ಕಾರ.

ಜ. 31 ಮತ್ತು ಫೆ. 1 ರಂದು ಮಂಗಳೂರಿನ ಟಿ ಎಂ ಎ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಆಯುಷ್ ಹಬ್ಬ-2026ರ ಅಂಗವಾಗಿ ಆಯುಷ್ ವೈದ್ಯಕೀಯ ಪದ್ಧತಿಯಲ್ಲಿ ಸಾಧನೆಗೈದವರಿಗೆ ಕೊಡಮಾಡುವ ಆಯುಷ್ ಶ್ರೀ ಪುರಸ್ಕಾರಕ್ಕೆ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ ವಿ ಯವರು ಭಾಜನರಾಗಿದ್ದು, ಅವರ ಆಯುರ್ವೇದ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರಿಗೆ ಆಯುಷ್ ಶ್ರೀ ಪ್ರಶಸ್ತಿ ಪುರಸ್ಕಾರ. Read More »

ಡಾ. ಹರಪ್ರಸಾದ್ ತುದಿಯಡ್ಕ ರವರಿಗೆ ಆಯುಷ್ ಶ್ರೀ ಪ್ರಶಸ್ತಿ

ಡಾ. ಹರಪ್ರಸಾದ್ ತುದಿಯಡ್ಕ ರವರಿಗೆ ಆಯುಷ್ ಶ್ರೀ ಪ್ರಶಸ್ತಿ ಪ್ರದಾನಡಾ. ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ಮಂಗಳೂರಿನಲ್ಲಿ ಆಯೋಜಿಸಿದ್ದ ಆಯುಷ್ ಹಬ್ಬ 2026ರ ಅಂಗವಾಗಿ ನಡೆದ ಆಯುಷ್ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ಹರಪ್ರಸಾದ ತುದಿಯಡ್ಕ ರವರಿಗೆ ಅವರ ವೈದ್ಯ ಕೀಯ ಸಾಧನೆಗಾಗಿ ಆಯುಷ್ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಹರಪ್ರಸಾದ್ ತುದಿಯಡ್ಕ ರವರಿಗೆ ಆಯುಷ್ ಶ್ರೀ ಪ್ರಶಸ್ತಿ Read More »

ಪಂಜ :: ರಕ್ತೇಶ್ವರಿ ದೈವದ ಕೋಲ

ಸುಳ್ಯ ತಾಲೂಕಿನ ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.24 ರಿಂದ ಫೆ.9 ರ ತನಕ, ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.2 ರಂದು ಮುಂಜಾನೆ ಪೂರ್ವ ಸಂಪ್ರದಾಯದಂತೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಲ್ಲಿ ಶ್ರೀ ದೇವಾಲಯಕ್ಕೆ ತೀರ್ಥ ತರಲಾಯಿತು, ಸಂಜೆ ಶ್ರೀ ರಕೇಶ್ವರಿ ದೈವದ ಸನ್ನಿಧಿಯಲ್ಲಿ ತಂಬಿಲ ಸೇವೆ ಹಾಗೂ ಭಂಡಾರ ತೆಗೆಯುವುದು. ರಾತ್ರಿ ದೇಗುಲದಲ್ಲಿ ಮಹಾಪೂಜೆ. ನಿತ್ಯ ಬಲಿ, ಅನ್ನಸಂತರ್ಪಣೆ. ಶ್ರೀ ರಕೇಶ್ವರಿ ದೈವದ

ಪಂಜ :: ರಕ್ತೇಶ್ವರಿ ದೈವದ ಕೋಲ Read More »

ಎಸ್ ಕೆ ಎಸ್ ಎಸ್ ಎಫ್ ಪೇರಡ್ಕ ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸಮ್ಮೇಳನ ಪ್ರಚಾರಾರ್ಥ ಸೌಹಾರ್ದ ಚಹಾ ಕೂಟ

ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ಗೂನಡ್ಕ ಪೇಟೆಯಲ್ಲಿ ಸಮಸ್ತ ಸಮ್ಮೇಳನ ಪ್ರಯುಕ್ತ ಸೌಹಾರ್ದ ಚಹಾ ಕೂಟವನ್ನು ಆಯೋಜಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನೀರ್ ದಾರಿಮಿ ವಹಿಸಿದರು .ಪೇರಡ್ಕ ಮಸೀದಿ ಖತೀಬರಾದ ಅಹಮದ್ ನಈಂ ಫೈಝಿ ದುವಾ ನೆರವೇರಿಸಿದರು .ವೇದಿಕೆಯಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿ ಅದ್ಯಕ್ಷರಾದ ಟಿ ಎಂ ಶಹೀದ್ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಕಲ್ಲುಗುಂಡಿ ಮಸೀದಿ ಖತೀಬರಾದ ನಾಸಿರ್ ದಾರಿಮಿ ಮಾತನಾಡಿ ಸಮಸ್ತ ಶತಾಬ್ಧಿ ಕಾರ್ಯಕ್ರಮದ ಬಗ್ಗೆ

ಎಸ್ ಕೆ ಎಸ್ ಎಸ್ ಎಫ್ ಪೇರಡ್ಕ ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸಮ್ಮೇಳನ ಪ್ರಚಾರಾರ್ಥ ಸೌಹಾರ್ದ ಚಹಾ ಕೂಟ Read More »

ಪಂಜ : ಹಸಿರು ಕಾಣಿಕೆಗಳ ಸಂಗ್ರಹಕ್ಕೆ ಚಾಲನೆ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಹಸಿರು ಕಾಣಿಕೆಗಳ ಸಂಗ್ರಹಕ್ಕಾಗಿ ಶ್ರೀ ದೇವರ ಸನ್ನಿದಿಯಲ್ಲಿ ಪ್ರಾರ್ಥನೆ ಮಾಡಿ ಹೊರಡಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಹಸಿರು ಕಾಣಿಕೆ ವಿಭಾಗದ ಮುಖ್ಯ ಸಂಚಾಲಕರಾದ ಸಂತೋಷ್ ರೈ ಪಲ್ಲತ್ತಡ್ಕ, ಶರತ್ ಕುದ್ವ, ಪವನ್ ಪಲ್ಲತಡ್ಕ, ಮಹಾಲಿಂಗ ಸಂಪ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು

ಪಂಜ : ಹಸಿರು ಕಾಣಿಕೆಗಳ ಸಂಗ್ರಹಕ್ಕೆ ಚಾಲನೆ Read More »

ಹಲವು ಜಿಲ್ಲೆಗಲ್ಲಿ ಮುಂದಿನ 7 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ

ಫೆಬ್ರವರಿ 3 ಮತ್ತು 4 ರಂದು ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಬಹುತೇಕ ಕಡೆ ಒಣ ಹವೆ ಮುಂದುವರಿಯಲಿದ್ದು, ಬೆಳಗಿನ ಜಾವ ಚಳಿ ಹಾಗೂ ಮಂಜಿನ ವಾತಾವರಣ ಇರಲಿದೆ. ಮುಂದಿನ 7 ದಿನಗಳ ಕಾಲ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ 29°C ಮತ್ತು ಕನಿಷ್ಠ 16°C ತಾಪಮಾನ ಇರಲಿದ್ದು, ಮಡಿಕೇರಿಯಲ್ಲಿ ಕನಿಷ್ಠ 16°C ದಾಖಲಾಗಬಹುದು. ಒಟ್ಟಾರೆಯಾಗಿ, ಚಳಿಯ ವಾತಾವರಣದ ನಡುವೆ ಮಳೆಯ ಮುನ್ಸೂಚನೆ ಇರುವುದರಿಂದ, ವಾತಾವರಣದಲ್ಲಿ ಬದಲಾವಣೆ

ಹಲವು ಜಿಲ್ಲೆಗಲ್ಲಿ ಮುಂದಿನ 7 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ Read More »

ಸಂಪಾಜೆ 33 ಕಿ.ವಿ. ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಸ್ಥಾಪಿಸಲು ಇಂದನ ಸಚಿವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಸಂಪಾಜೆ 33 ಕಿ.ವಿ. ವಿದ್ಯುತ್ ಲೈನ್ ಹಾಗೂ ಸಂಪಾಜೆ ರಾಜಾರಾಮಪುರ ದಲ್ಲಿ ಸ್ಥಾಪಿಸಲು ಯೋಜಿಸಲಾಗಿರುವ 2×5 MVA 33/11 ಕಿ.ವಿ. ಉಪಕೇಂದ್ರವನ್ನು ಮತ್ತು ಸಂಬಂಧಿಸಿದ ವಿತರಣಾ ಮೂಲಸೌಕರ್ಯಗಳನ್ನು ತ್ವರಿತವಾಗಿ ಸ್ಥಾಪಿಸಲು ಇಂಧನ ಸಚಿವರಿಗೆ ಮನವಿ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದ್ದಾರೆ.

ಸಂಪಾಜೆ 33 ಕಿ.ವಿ. ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಸ್ಥಾಪಿಸಲು ಇಂದನ ಸಚಿವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ Read More »

ಮಾಡಾವು ಉಪಕೇಂದ್ರದಿಂದ.ಹೆಚ್ಚುವರಿಯಾಗಿ 20 ಮೆಗಾವ್ಯಾಟ್ ಪರಿವರ್ತಕ ಅಳವಡಿಸಿ ಶಾಶ್ವತ ಪರಿಹಾರಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಂದ ಇಂಧನ ಸಚಿವರಿಗೆ ಮನವಿ.

110/33/11KV ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ಪ್ರಸ್ತುತ ಎರಡು 20MVA ಪರಿವರ್ತಕಗಳಿದ್ದು ಈ ಪೈಕಿ ಒಂದು 20MVA ಪರಿವರ್ತಕ ಮೂಲಕ 33KV ಕಾವು ಮತ್ತು ಸುಳ್ಯಹಾಗೂ ಇನ್ನೊಂದು ಪರಿವರ್ತಕದ ಮೂಲಕ ಬೆಳ್ಳಾರೆ ಹಾಗೂ ಗುತ್ತಿಗಾರು ಉಪಕೇಂದ್ರ ಗಳಿಗೆ ವಿದ್ಯುತ್ ವಿತರಣಾ ವ್ಯವಸ್ಥೆ ಇರುತ್ತದೆ,ಪ್ರಸ್ತುತ ಕಾವು ಮತ್ತು ಸುಳ್ಯ ಉಪಕೇಂದ್ರಗಳ ಸ್ಥಾಪಿತ ಸಾಮರ್ಥ್ಯ ಒಟ್ಟು 35MVA ಆಗಿದ್ದು ಬೆಳ್ಳಾರೆ ಹಾಗೂ ಗುತ್ತಿಗಾರು ಉಪಕೇಂದ್ರಗಳ ಸ್ಥಾಪಿತ ಸಾಮರ್ಥ್ಯ 27.5MVA ಆಗಿರುತ್ತದೆ.ಮಾಡಾವು ಉಪಕೇಂದ್ರದ ಎರಡೂ 20MVA ಪರಿವರ್ತಕ ಗಳು ಓವರ್ ಲೋಡ್ ನಿಂದ

ಮಾಡಾವು ಉಪಕೇಂದ್ರದಿಂದ.ಹೆಚ್ಚುವರಿಯಾಗಿ 20 ಮೆಗಾವ್ಯಾಟ್ ಪರಿವರ್ತಕ ಅಳವಡಿಸಿ ಶಾಶ್ವತ ಪರಿಹಾರಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಂದ ಇಂಧನ ಸಚಿವರಿಗೆ ಮನವಿ. Read More »

error: Content is protected !!
Scroll to Top