ಅರಂತೋಡು ಭಾಗದಲ್ಲಿ ರಾತ್ರಿ ಹೊತ್ತು ನಿರಂತರ ವಿದ್ಯುತ್ ಅಡಚಣೆ ಪರಿಹರಿಸಲು ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ ಆಗ್ರಹ
ಅರಂತೋಡು : ಮಳೆಗಾಲ ಪ್ರಾಂಭವಾದಾಗಿನಿಂದ ತೊಡಿಕಾನ ಫೀಡರ್ ನಿಂದ ಸರಬರಾಜು ಆಗುವ ವಿದ್ಯುತ್ ಅರಂತೋಡು ತೊಡಿಕಾನ ಮತ್ತು ಪೆರಾಜೆ ಗ್ರಾಮಗಳಲ್ಲಿ ರಾತ್ರಿ ಹೊತ್ತು ನಿರಂತರ ಅಡಚಣೆ ಆಗುತ್ತಿದ್ದು ಈ ಬಗ್ಗೆ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಕೆ.ಡಿಪಿ ಸದಸ್ಯ ಅಶ್ರಫ್ ಗುಂಡಿ ಆರೋಪಿಸಿದ್ದಾರೆ. ರಾತ್ರಿ ಮತ್ತು ಬೆಳಗಿನ ಸಮಯದಲ್ಲಿ ವಿಧ್ಯುತ್ ಅಡಚಣೆಯಾಗುವುದರಿಂದ ಬೆಳಗಿನ ಸಮಯದಲ್ಲಿ ತೆರಳುವ ಉದ್ಯೋಗಸ್ಥರಿಗೆ, ವಿದ್ಯಾರ್ಥಿಗಳಿಗೆ ಮತ್ತು ಗ್ರಾಮ ಪಂಚಾಯತ್ ನಿಂದ ಸರಬರಾಜು ಆಗುವ ಸಾರ್ವಜನಿಕ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. […]



