Author name: Tejas

ವಿದ್ಯಾರ್ಥಿನಿ ಆತ್ಮಹತ್ಯೆ

ಮುಲ್ಕಿ: ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್‌ನಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬವರ ಪುತ್ರಿ ಉಜ್ವಲ (17) ಎಂದು ಗುರುತಿಸಲಾಗಿದೆ.ರೈಲ್ವೇ ಕ್ವಾಟರ್ಸ್‌ನ ಮನೆಯ ಎದುರು ಬದಿಯ ಕೋಣೆಯಲ್ಲಿ ಡೆತ್ ನೋಟ್ ಬರೆದಿಟ್ಟು ಪ್ಯಾನ್‌ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಉಜ್ವಲ ಮುಲ್ಕಿ ಖಾಸಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿದ ಬಳಿಕ ಮನೆ ಕಡೆ ಬಂದಿದ್ದು, […]

ವಿದ್ಯಾರ್ಥಿನಿ ಆತ್ಮಹತ್ಯೆ Read More »

ಪ್ರಣಾಮ್ ಶೆಟ್ಟಿ ಮೇನಾಲರಿಗೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ

ಸುಳ್ಯ : ಈ ವರ್ಷ ರಾಜ್ಯ ಮಟ್ಟದಲ್ಲಿ ನಡೆದಿರುವ ಪಿಜಿಸಿಇಟಿ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ಅಜ್ಜಾವರ ಗ್ರಾಮದ ಮೇನಾಲ ಸುಭೋದ್ ಶೆಟ್ಟಿ – ಶ್ರೀಮತಿ ಶಿಲ್ಪಾ ದಂಪತಿಗಳ ಪುತ್ರ ಪ್ರಣಾಮ್ ಶೆಟ್ಟಿ ಮೇನಾಲ ರಾಜ್ಯದಲ್ಲಿ 8 ನೇ ರ್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ. ರಾಜ್ಯದಲ್ಲಿ ಒಟ್ಟು 47436 ಮಂದಿ ಪ್ರವೇಶ ಪರೀಕ್ಷೆ ಬರೆದಿದ್ದು, ಅವರಲ್ಲಿ ಪ್ರಣಾಮ್ ಶೆಟ್ಟಿಯವರು 8 ಸ್ಥಾನ ಪಡೆದಿದ್ದಾರೆ. ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಳ್ಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿ, ಪುತ್ತೂರು

ಪ್ರಣಾಮ್ ಶೆಟ್ಟಿ ಮೇನಾಲರಿಗೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ Read More »

ರಾಜ್ಯದ ಮುಖ್ಯ ಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಈಡಿ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (MUDA)ಹಗರಣ ನಡೆದಿದೆ ಎನ್ನಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯವು (ಈಡಿ) ಸೋಮವಾರ(ಸೆ.30) ಪ್ರಕರಣ ದಾಖಲಿಸಿದೆ.ಲೋಕಾಯುಕ್ತ ಎಫ್ ಐಆರ್ ನಲ್ಲಿ ಉಲ್ಲೇಖವಾದ ಹೆಸರುಗಳ ಮೇಲೆ ಇಡಿ ಇಸಿಐಅರ್ ದಖಾಲಾಗಿದೆ.ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ಹೆಸರುಗಳ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಮುಖ್ಯ ಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಈಡಿ Read More »

ಮುಡಾದ ಸೈಟ್‌ಗಳನ್ನು ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದ 14 ಸೈಟ್ಗಳನ್ನು ವಾಪಸ್ ನೀಡುವುದಾಗಿ ಪತ್ರ ಬರೆದಿದ್ದಾರೆ. ಮುಡಾದ ಆಯುಕ್ತರಿಗೆ ಸುದೀರ್ಘ ಪತ್ರ ಬರೆದ ಅವರು ಎಲ್ಲ ಸೈಟ್‌ಗಳನ್ನು ಹಿಂದಿರುಗಿಸುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ

ಮುಡಾದ ಸೈಟ್‌ಗಳನ್ನು ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ Read More »

ಭೀಕರ ಬೈಕ್ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ತಂದೆ ಸಾವು

ಉಡುಪಿ : ಮಿನಿ ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ-ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಸೋಮವಾರ ಸಂಭವಿಸಿದ ಘಟನೆ ವರದಿಯಾಗಿದೆ.ಬೈಕ್ ನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಅಪಘಾತದ ರಭಸಕ್ಕೆ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತರನ್ನು ಸುರೇಶ್ ಆಚಾರ್ಯ (36), ಸಮೀಕ್ಷಾ (7) ಸುಶ್ಮಿತಾ (5) ಮತ್ತು ಸುಶಾಂತ್ (2) ಗುರುತಿಸಲಾಗಿದೆ. ಮೀನಾಕ್ಷಿ ಆಚಾರ್ಯ (32)

ಭೀಕರ ಬೈಕ್ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ತಂದೆ ಸಾವು Read More »

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ

ತುಳುವಿನ ಆದಿಮೂಲ ಕೊರಗ ಭಾಷೆಯಲ್ಲಿ ಕೂಜಿ ಅಂದರೆ ಹೆಣ್ಣು ಮಗಳು. ಹೆಣ್ಣು ಮಗು ಹುಟ್ಟಿದರೆ ಕುಲ ಅಭಿವೃದ್ಧಿಯಾಗುವುದು ಮತ್ತು ಜೀವನ ಸುಗಮವಾಗುವುದು ಎನ್ನುವುದು ಕೊರಗರ ಮೂಲ ನಂಬಿಕೆ. ಹೆಣ್ಣು ಮಗುವಿನ ಜನನವನ್ನು ಅವರು ಹಾಡಿ ನಲಿಯುವ ಸಂಭ್ರಮವನ್ನು ಸಾಹಿತಿ ಪಾಂಗಾಳ ಬಾಬು ಕೊರಗ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬುಡಕಟ್ಟು ಸೊಗಡಿನ ಸಂಗೀತ ನೀಡಿ ಹಾಡಿನ ಮೂಲ ಹೂರಣವನ್ನೆ ಉಣಬಡಿಸಿದ್ದಾರೆ. ಯುವ ಗಾಯಕ ಚೇತನ್ ಖುಷಿ ಗಟ್ಟಿ ಧ್ವನಿಯಲ್ಲಿಸರಾಗವಾಗಿ ಹಾಡಿದ್ದಾರೆ. ಎರಡು

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ Read More »

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ

ತುಳುವಿನ ಆದಿಮೂಲ ಕೊರಗ ಭಾಷೆಯಲ್ಲಿ ಕೂಜಿ ಅಂದರೆ ಹೆಣ್ಣು ಮಗಳು. ಹೆಣ್ಣು ಮಗು ಹುಟ್ಟಿದರೆ ಕುಲ ಅಭಿವೃದ್ಧಿಯಾಗುವುದು ಮತ್ತು ಜೀವನ ಸುಗಮವಾಗುವುದು ಎನ್ನುವುದು ಕೊರಗರ ಮೂಲ ನಂಬಿಕೆ. ಹೆಣ್ಣು ಮಗುವಿನ ಜನನವನ್ನು ಅವರು ಹಾಡಿ ನಲಿಯುವ ಸಂಭ್ರಮವನ್ನು ಸಾಹಿತಿ ಪಾಂಗಾಳ ಬಾಬು ಕೊರಗ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬುಡಕಟ್ಟು ಸೊಗಡಿನ ಸಂಗೀತ ನೀಡಿ ಹಾಡಿನ ಮೂಲ ಹೂರಣವನ್ನೆ ಉಣಬಡಿಸಿದ್ದಾರೆ. ಯುವ ಗಾಯಕ ಚೇತನ್ ಖುಷಿ ಗಟ್ಟಿ ಧ್ವನಿಯಲ್ಲಿಸರಾಗವಾಗಿ ಹಾಡಿದ್ದಾರೆ. ಎರಡು

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ Read More »

(ಅರೆಭಾಷೆ ಕವನ) ರಿಕ್ಷಾ

ಊರಿಗಿರ್ದ್ ಒಂದು ಗಾಡಿಕೂಸಪಣ್ಣನ ಲಟಾರಿ ರಿಕ್ಷಾದಡಬಡ ಸದ್ ಮಾಡಿಕಂಡ್ಕುಡ್ದವರಂಗೆ ಬಾತಿತ್ತ್ದೂರಂದ ಹಾರ್ನ್ ಕೇಳ್ದಂಗೆಜನರ ಕೆಬಿ ಕುತ್ತಾತ್ಮೊದ್ದುಗೆ ಹೋವುಸೊಸೈಟಿಕೆ ಹೋವುಸಾಲುಲಿ ಬಂದು ನಿಂತಾತ್ತ್ಅಜ್ಜನ ತೊಡೆಲಿ ಅಜ್ಜಿ ಕುದ್ರಿಕೆಪಂಡ್ನಕಾಲ ನೆನ್ಪಾತ್ಗೂಡೆ ನಕ್ಕಲೆ ಹೈದ ಕುದ್ರಿಕೆಎಲ್ರಂದ ಮುಂದೆ ಅವ ಓಡ್ತ್ಇವರ ಎಡೆಲಿ ಸಿಕ್ಕಿದ ಕೂಸ್ನಅಳ್ಗೇಲ್ ಬಾರಿ ಜೋರಾತ್ಗಡಿಬಿಡಿ ಹತ್ತಿದ ರಂಗನ ಕಂಬಾಯಿಸೊಂಟದ ಜಾರಿ ಕೆಳಗಿತ್ತ್ತುಂಬಿದ ಬೊಸ್ರಿನ ಹಾಂಗೆಸೇoಕಿ ಬುಕ್ಕಿ ಹೊರ್ಟಾತ್ಚೋಳುನ ನೀರ್ ನ ರೆಟ್ಟಿಸಿಕಂಡ್ಹೊಣ್ಕಾಡಿಕಂಡ್ ಹೋತಿತ್ತ್ಹೊಂಡಕ್ಕೆ ಬಿದ್ದ ರಿಕ್ಷನ ನೂಕಿಕಾನಬಟ್ಟೆ ಎಲ್ಲಾ ಕೆಂಪಾತ್ಬಿಟ್ಟಲಿ ಹಾಕಿದ ಉಪ್ಪಣದಾಂಗೆಕೈಕಾಲೆಲ್ಲ ಚಿರಂಟಿ ಹೋತ್ರಿಕ್ಷನ ತುಂಬಾ ವಾಸನೆ

(ಅರೆಭಾಷೆ ಕವನ) ರಿಕ್ಷಾ Read More »

ಹಿಂದುಗಳ ಹೆಸರಿನಲ್ಲಿ ದಾಖಲಾತಿ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದ ಪಾಕಿಸ್ಥಾನಿ ಕುಟುಂಬದ ಬಂಧನ

ಹಿಂದುಗಳ ಹೆಸರಿನಲ್ಲಿ ದಾಖಲಾತಿ ಮಾಡಿಸಿಕೊಂಡು ಬೆಂಗಳೂರಿನ ಜಿಗಣಿ ಸಮೀಪ ವಾಸವಾಗಿದ್ದ ಪಾಕಿಸ್ತಾನಿ ಕುಟುಂಬ ಸದಸ್ಯರು ಹಾಗೂ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿರುವ ಘಟನೆ ವರದಿಯಾಗಿದೆ.ಪಾಕಿಸ್ತಾನ ಪ್ರಜೆಯ ಪತ್ನಿ ಬಾಂಗ್ಲಾದೇಶದವರಾಗಿದ್ದು, ಇಬ್ಬರು ಮಕ್ಕಳ ಜತೆ ಜಿಗಣಿ ಸಮೀಪದ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ವಾಸವಾಗಿದ್ದರು. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.ಗಲಭೆಯಿಂದಾಗಿ ಬಂಧಿತ ವ್ಯಕ್ತಿ ಪಾಕ್‌ ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದ.

ಹಿಂದುಗಳ ಹೆಸರಿನಲ್ಲಿ ದಾಖಲಾತಿ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದ ಪಾಕಿಸ್ಥಾನಿ ಕುಟುಂಬದ ಬಂಧನ Read More »

ಚೈತ್ರ ಯುವತಿ ಮಂಡಲದ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಆಯ್ಕೆ

ಅಜ್ಜಾವರ : ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಮಾಲತಿ ಸೂರ್ಯ, ಗೀತಾoಜಲಿ ಗುರುರಾಜ್,ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ,ಗೌರವ ಸಲಹೆಗಾರರಾಗಿ ಜಯಲಕ್ಷ್ಮೀ ಸಂಜೀವ ರಾವ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಧನಲಕ್ಷ್ಮೀ ಸಂತೋಷ್,ಪತ್ರಿಕಾ ವರದಿಗಾರರಾಗಿ ಕು.ಪವಿತ್ರ ಮಾವಿನಪಳ್ಳ,ಕ್ರೀಡಾ ಕಾರ್ಯದರ್ಶಿಯಾಗಿ ಭವ್ಯ ಭುವನ್ ಅತ್ಯಾಡಿ,ನಿರ್ದೇಶಕರಾಗಿ ಕು. ಹರಿಣಿ ಶಾಂತಿಮಜಲು, ಕು.ಪ್ರೀತಿ

ಚೈತ್ರ ಯುವತಿ ಮಂಡಲದ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಆಯ್ಕೆ Read More »

error: Content is protected !!
Scroll to Top