Author name: Tejas

ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರವೇ ಹೊಸ ನಿಯಮ

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇತರ ಭಾಗಗಳಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನಿನ ಅನ್ವಯ ಅವಕಾಶ ಕಲ್ಪಿಸುವ ಕುರಿತಂತೆ ಬೆಂಗಳೂರಿನ ವಿಧಾನ ಸೌಧದಲ್ಲಿ ಮಂಗಳವಾರ ಸ್ಪೀಕರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಗಣಿ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಹಾಗೂ […]

ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರವೇ ಹೊಸ ನಿಯಮ Read More »

ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ 2.50 ಕೋಟಿ ಅನುದಾನ ಬಿಡುಗಡೆ

ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಪುರಾತನ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗೆ 1.25 ಕೋಟಿ ಮತ್ತು ಸುಳ್ಯ ತಾಲೂಕಿನ ಐವರ್ನಾಡು ಚಲ್ಲತ್ತಡಿ ವೆಂಟೆಡ್ ಡ್ಯಾಮ್ ಸಹಿತ ಸೇತುವೆ ನಿರ್ಮಾಣಕ್ಕೆ 1.25 ಕೋಟಿ ಅನುದಾನ ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ 2.50 ಕೋಟಿ ಅನುದಾನ ಬಿಡುಗಡೆ Read More »

ಆಲೆಟ್ಟಿ : ಹಾವು ಕಡಿದು ಮಹಿಳೆ ಸಾವು

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಂಬಿಯಲ್ಲಿ ಮಹಿಳೆಯೊಬ್ಬರು ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳವಾರ ವರದಿಯಾಗಿದೆ.ಒಲೆಗೆ ಬೆಂಕಿ ಹಾಕುತ್ತಿದ್ದ ಸಂದರ್ಭ ಹಾವೊಂದು ಕಡಿದುಕುಡೆಂಬಿ ಕುತ್ತಿಮುಂಡ ಶಾಂತಪ್ಪ ಎಂಬವರ ಪತ್ನಿ ರಾಧಮ್ಮ ಮೃತಪಟ್ಟ ಮಹಿಳೆ. ರಾಧಾಮ್ಮರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.

ಆಲೆಟ್ಟಿ : ಹಾವು ಕಡಿದು ಮಹಿಳೆ ಸಾವು Read More »

ಪೇರಾಲು : ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪೇರಾಲು ಅಂಬೋಟಿ ಮತ್ತು ಶ್ರೀರಾಮ ಭಜನಾ ಮಂದಿರ ಪೇರಾಲು ಅಂಬೋಟಿ ಇದರ ವತಿಯಿಂದ 7ನೇ ವರ್ಷದ ವರಮಹಾಲಕ್ಚ್ಮಿ ಪೂಜೆ ಶ್ರೀರಾಮ ಸಭಾಭವನ, ಪೇರಾಲು ಅಂಬೋಟಿಯಲ್ಲಿ ಪ್ರರೋಹಿತ ಗಣೇಶಭಟ್ ಮುರೂರು ಇವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.8 ರಂದು ಜರಗಿತು.ಈ ಸಂದರ್ಭದಲ್ಲಿ, ಅಧ್ಯಕ್ಷರಾಗಿ ಜಯಶ್ರೀ ಬತ್ಲಿ ಮನೆ ಕಾರ್ಯದರ್ಶಿಯಾಗಿ ನಾಗವೇಣಿ ಮಿತ್ತಪೇರಾಲು ಸ್ಥಾಪಕಾಧ್ಯಕ್ಷರಾದ ದಿವ್ಯಲತಾ ಚೌಟಾಜೆ ಹಾಗೂ ಸಮಿತಿಯ ಪಧಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಶ್ರೀರಾಮ ಭಜನಾಮಂದಿರದ ಅಧ್ಯಕ್ಷರು,

ಪೇರಾಲು : ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆ Read More »

ಐವರ್ನಾಡು ಗ್ರಾಮ‌ ಆಡಳಿತಾಧಿಕಾರಿಯಾಗಿ‌ ಸುಜು ವೈ.ಎಸ್ ಕರ್ತವ್ಯಕ್ಕೆ ಹಾಜರು

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮ ಆಡಳಿತಾಧಿಕಾರಿಯಾಗಿ ಸುಜು ವೈ.ಎಸ್.ರವರು ಆ.9 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಪೆರಾಜೆ ಗ್ರಾಮದ ಯಾಪಾರೆ ಸುಂದರ ಗೌಡ ಮತ್ತು ಯೋಗೀಶ್ವರಿ ದಂಪತಿಯ ಪುತ್ರಿ.

ಐವರ್ನಾಡು ಗ್ರಾಮ‌ ಆಡಳಿತಾಧಿಕಾರಿಯಾಗಿ‌ ಸುಜು ವೈ.ಎಸ್ ಕರ್ತವ್ಯಕ್ಕೆ ಹಾಜರು Read More »

ಮಾಸಾಶನ ಮಂಜೂರಾತಿ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿಂತಿಕಲ್ಲು ವಲಯದ ಕುಕ್ಕಯ್ಯಕೇಡಿ ಎಂಬಲ್ಲಿ ವಾಸವಾಗಿರುವ ತೀರ ಬಡತನದಲ್ಲಿರುವ ಸದಸ್ಯರಾದ ಬಾಬು ರೈ ಮತ್ತು ದೈಯಕ್ಕು ದಂಪತಿಗಳಿಗೆ ಶ್ರೀ ಕ್ಷೇತ್ರದಿಂದ ತಿಂಗಳಿಗೆ 2000/- ಮಾಸಾಶನ ಮೊತ್ತ ಮಂಜೂರಾಗಿದ್ದು, ಇವರಿಗೆ ಮಂಜೂರಾತಿ ಪತ್ರವನ್ನು ಊರಿನ ಗಣ್ಯರಾದ ಶ್ರೀಯುತ ಸುಧೀರ್‌ ಕುಮಾರ್‌ ಶೆಟ್ಟಿ ಕುಕ್ಕಯ್ಯಕೇಡಿ ಇವರು ವಿತರಿಸಿದರು.ಈ ಸಂದರ್ಭದಲ್ಲಿ ನಿಂತಿಕಲ್ಲು ವಲಯದ ಅಧ್ಯಕ್ಷರಾದ ಶ್ರೀ ವಸಂತ ಗೌಡ, ವಲಯ ಮೇಲ್ವೀಚಾರಕರು ಶ್ರೀಮತಿ ಸವಿತಾ,

ಮಾಸಾಶನ ಮಂಜೂರಾತಿ ಪತ್ರ ವಿತರಣೆ Read More »

ಸುಳ್ಯ : ನಿವೇದಿತಾ ಮಹಿಳಾ ಜಾಗ್ರತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಆ.11ರಂದು ರಕ್ಷಾ ಬಂಧನ ಕಾರ್ಯಕ್ರಮ ಸುಳ್ಯದ ವಿವಿಧ ಕಡೆಗಳಲ್ಲಿ ಆಚರಿಸಲಾಯಿತು . ಗಣೇಶ್ ಪ್ರಿಂಟರ್ಸ್ ಸುಳ್ಯ ,ಭಟ್ ಎಸೋಸಿಯೇಟ್ ಲೆಕ್ಕ ಪರಿಶೋಧಕರ ಕಚೇರಿ, ಸರಕಾರಿ ಆಸ್ಪತ್ರೆ ಮತ್ತು ಪ್ರೆಸ್ ಕ್ಲಬ್ ಸುಳ್ಯ, ಇಲ್ಲಿ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು ಎಲ್ಲರಿಗೂ ರಾಖಿ ಕಟ್ಟಿ ಸಿಹಿ ಹಂಚಲಾಯಿತು. ಮತ್ತು ಸರಕಾರಿ ಆಸ್ಪತ್ರೆ ಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ನೀಡಿ ರಾಖಿ ಕಟ್ಟುವುದರ ಮುಖಾಂತರ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಟ್ರಸ್ಟ್

ಸುಳ್ಯ : ನಿವೇದಿತಾ ಮಹಿಳಾ ಜಾಗ್ರತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ Read More »

ಅರಂತೋಡು : ರಕ್ಷಾ ಬಂಧನ ಕಾರ್ಯಕ್ರಮ

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಗುತ್ತಿಗಾರು ಮಹಾ ಶಕ್ತಿ ಕೇಂದ್ರದ ಮಹಿಳಾ ಪ್ರಮುಖ ಮತ್ತು ಮಹಿಳಾ ಮೋರ್ಚದ ಕಾರ್ಯದರ್ಶಿ ಭಾರತಿ ಪುರುಷೋತ್ತಮ್, ಬೂತ್ ಅಧ್ಯಕ್ಷರಾದ ಅಧ್ಯಕ್ಷರಾದ ಕಿಶೋರ್ ಕುಮಾರ್ UM, ನಿವೃತ್ತ ಶಿಕ್ಷಕಿ ಗಂಗಮ್ಮ, ಹಾಲು ಡೈರಿ ಅಧ್ಯಕ್ಷರಾದ ಮೋಹನ್ ಮತ್ತು ಪದಾಧಿಕಾರಿಗಳು, ಸಂಘದ ಕಾರ್ಯದರ್ಶಿ ವಿಮಲಾ ಸುಮಾಶೇಖರ್, ಮತ್ತು ಗ್ರಾಮದ ಹಿರಿಯ ಕಿರಿಯ ಕಾರ್ಯಕರ್ತರು ಭಾಗವಹಿಸಿದ್ದರು .

ಅರಂತೋಡು : ರಕ್ಷಾ ಬಂಧನ ಕಾರ್ಯಕ್ರಮ Read More »

ಸುಳ್ಯ : ಬೀದಿ ನಾಟಕ‌ ಪ್ರದರ್ಶನ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಇದರ ಸಹಯೋಗದಲ್ಲಿ ದಿನಾಂಕ 11-08-2025ರಂದು ವಿಶ್ವ ಅಂಗದಾನ ದಿನಾಚರಣೆಯ ಕುರಿತು ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಅಂಗದಾನದ ಜಾಗೃತಿ ಮೂಡಿಸುವ ಸಲುವಾಗಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ಎನ್.ಎಂ.ಸಿ ಕಾಲೇಜಿನ ಐ.ಕ್ಯೂ.ಏ.ಸಿ ವಿಭಾಗ ಹಾಗೂ ಎನ್. ಎಂ.ಸಿ. ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಬೀದಿ ನಾಟಕ ಪ್ರದರ್ಶನವನ್ನು

ಸುಳ್ಯ : ಬೀದಿ ನಾಟಕ‌ ಪ್ರದರ್ಶನ Read More »

ರೈತನ ಜೀವ ತೆಗೆದ ಪುಂಡಾನೆಯನ್ನು ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಿ : ಕೆ.ಜಿ ಬೋಪಯ್ಯ

ಚೆಂಬು ಗ್ರಾಮದ ದಬ್ಬಡ್ಕದಲ್ಲಿ ರೈತನ ಪ್ರಾಣ ತೆಗೆದ ಪುಂಡಾನೆಯನ್ನು‌ ಅರಣ್ಯ ಇಲಾಖೆ ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಬೇಕು,ಆನೆಯನ್ನು‌ ಸೆರೆ ಹಿಡಿಯದಿದ್ದರೆ ಪ್ರತಿಭಟನೆ ನಿಲ್ಲದು ಎಂದು ಮಾಜಿ ಸ್ವೀಕರ್ ಕೆ.ಜಿ ಬೋಪಯ್ಯ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.ಅವರು ಕಳೆದ ವಾರ ಚೆಂಬು ಗ್ರಾಮದ ದಬ್ಬಡ್ಕ ಕೊಪ್ಪದಲ್ಲಿ ಕೃಷಿಕರೊಬ್ಬರನ್ನು ಪುಂಡಾನೆ ತುಳಿದು ಕೊಂದಿರುವ ಹಿನ್ನಲೆಯಲ್ಲಿ ಕಾಡಾನೆಗಳನ್ನು‌ ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಸಂಪಾಜೆ ವಲಯಾರಣ್ಯಧಿಕಾರಿ ಕಚೇರಿ ಎದುರು ಸೋಮವಾರ ಕೊಡಗು ಸಂಪಾಜೆ ಹೋಬಳಿ ನಾಗರೀಕ ಹಿತಾರಕ್ಷಣಾ ವೇದಿಕೆ ನೇತ್ರತ್ವದಲ್ಲಿ ನಡೆದ

ರೈತನ ಜೀವ ತೆಗೆದ ಪುಂಡಾನೆಯನ್ನು ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಿ : ಕೆ.ಜಿ ಬೋಪಯ್ಯ Read More »

error: Content is protected !!
Scroll to Top