ಕ್ರೈಂ

ಹಿರಿಯ ಜಾನಪದ ಕಲಾವಿದೆ ಕೊರಪ್ಪೊಲು ನಾರಾಜೆ ಇನ್ನಿಲ್ಲ

ಹಿರಿಯ ಜಾನಪದ ಕಲಾವಿದೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರಾದ ಸುಳ್ಯ ಜಯನಗರ ನಾರಾಜೆ ನಿವಾಸಿ ಕೊರಪ್ಪೊಲು ತನ್ನ ಮನೆಯಲ್ಲಿ ಸೆ.19ರಂದು ಅಸೌಖ್ಯದಿಂದ ನಿಧನರಾದರು.ಅವರಿಗೆ 85 ವರ್ಷ ಪ್ರಾಯವಾಗಿತ್ತು.ವಿವಿಧಜಾನಪದ ಕುಣಿತ,ಪಾರ್ದನಗಳ ಕಲಾವಿದರಾಗಿದ್ದರು.ತನ್ಬ ಮಕ್ಕಳಾದ ಮುದ್ದಪ್ಪ ಮತ್ತು ತಿಮ್ಮಪ್ಪ ಸೇರಿದಂತೆ ಸೊಸೆಯಂದಿರು ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ‌.

ಹಿರಿಯ ಜಾನಪದ ಕಲಾವಿದೆ ಕೊರಪ್ಪೊಲು ನಾರಾಜೆ ಇನ್ನಿಲ್ಲ Read More »

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಗಳು ಎನ್ನಲಾದ ಯುವಕ ಯುವತಿ ದೇವರಕೊಲ್ಲಿಯಲ್ಲಿ ಪತ್ತೆ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದಿಂದ ಕೇರಳ ಪೊಲೀಸರಿಂದ ಸೆ.17ರಂದು ತಪ್ಪಿಸಿಕೊಂಡಿದ್ದ ಪಾಲಕ್ಕಾಡ್ ಮೂಲದ ಕೊಲೆ ಆರೋಪಿಗಳು ಎಂದು ಹೇಳಲಾಗುತ್ತಿರುವ ಇಬ್ಬರು ದೇವರಕೊಲ್ಲಿ ಮನೆಯೊಂದರಲ್ಲಿ ಸೆ.18ರಂದು ಪತ್ತೆಯಾಗಿದ್ದಾರೆ.ಸಿಕ್ಕಿ ಬಿದ್ದವರು ಓರ್ವ ಯುವಕ ಹಾಗೂ ಒಬ್ಬಳು ಯುವತಿ ಎಂದು ತಿಳಿದು ಬಂದಿದೆ. ತಪ್ಪಿಸಿಕೊಂಡಿದ್ದ ಇವರು ರಾತ್ರಿ ವೇಳೆ ರಬ್ಬ‌ರ್ ತೋಟದ ಮನೆಯ ಬಳಿ ಬಂದು ಆಶ್ರಯ ಪಡೆದಿದ್ದರು.ಸ್ಥಳೀಯರು ಅವರನ್ನು ಹಿಡಿದು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಗಳು ಎನ್ನಲಾದ ಯುವಕ ಯುವತಿ ದೇವರಕೊಲ್ಲಿಯಲ್ಲಿ ಪತ್ತೆ Read More »

ನೆಟ್ಟಾರು : ರಸ್ತೆ ಬದಿಯ ಗುಂಡಿಗೆ ಕಾರು ಬಿದ್ದು ಜಖಂ

ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದ ಘಟನೆ ಗುರುವಾರ ವರದಿಯಾಗಿದೆ.ನೆಟ್ಟಾರು ತಿರುವಿನಲ್ಲಿ ರಿಟ್ಸ್ ಕಾರು ಗುಂಡಿಗೆ ಬಿದ್ದ ಪರಿಣಾಮ ಕಾರು ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.

ನೆಟ್ಟಾರು : ರಸ್ತೆ ಬದಿಯ ಗುಂಡಿಗೆ ಕಾರು ಬಿದ್ದು ಜಖಂ Read More »

ಸಂಪಾಜೆ : ಕೇರಳದಲ್ಲಿ ಕೊಲೆ ಮಾಡಿದ ಆರೋಪಿಗಳ ಥಾರ್ ವಾಹನ ದೇವರಕೊಲ್ಲಿಯಲ್ಲಿ ಪತ್ತೆ, ಆರೋಪಿಗಳು ಪರಾರಿ

ಕೇರಳ ಪಾಲಕ್ಕಾಡ್ ನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಗಳು ಸಂಪಾಜೆ ಬಳಿ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಸೆ. 17ರಂದು ಸಂಜೆ ನಡೆದಿದ್ದು ಅವರ ಥಾರ್ ವಾಹನ ದೇವರಕೊಲ್ಲಿ ಪತ್ತೆಯಾಗಿದೆ.ಆರೋಪಿಗಳು ತಮ್ಮ ಥಾರ್ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯಕಡೆಗೆ ಪ್ರಯಾಣಿಸುವ ಮಾಹಿತಿಯ ಜಾಡು ಹಿಡಿದ ಕೇರಳ ಪೊಲೀಸರು ಅವರನ್ನು ಬಂಧಿಸಲು ಕಲ್ಲುಗುಂಡಿ ಹೊರ ಠಾಣಾ ಸಮೀಪ ತಯಾರಾಗಿದ್ದರು.ಪೊಲೀಸರು ಇರುವ ವಿಷಯ ತಿಳಿದ ಆರೋಪಿ ಗಳು ಕಲ್ಲುಗುಂಡಿ ಪೆಟ್ರೋಲ್

ಸಂಪಾಜೆ : ಕೇರಳದಲ್ಲಿ ಕೊಲೆ ಮಾಡಿದ ಆರೋಪಿಗಳ ಥಾರ್ ವಾಹನ ದೇವರಕೊಲ್ಲಿಯಲ್ಲಿ ಪತ್ತೆ, ಆರೋಪಿಗಳು ಪರಾರಿ Read More »

ಸಂಪಾಜೆ: ಸಿನಿಮೀಯ ಮಾದರಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಕೊಲೆ ಆರೋಪಿ ಗಳು

ಕೊಲೆ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಹಿಡಿಯಲು ಯತ್ನಿಸಿದ ಪೊಲೀಸರನ್ನು ಸಿನಿಮೀಯ ಮಾದರಿಯಲ್ಲಿ ವಂಚಿಸಿ ತಪ್ಪಿಸಿಕೊಂಡುಬ ಪರಾರಿ ಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಕಲ್ಲುಗುಂಡಿಯಿಂದ ವರದಿಯಾಗಿದೆ.ಕೇರಳದ ಪಾಲಕ್ಕಾಡ್ ನಲ್ಲಿ ಕೊಲೆ ಮಾಡಿರುವ ಪ್ರಕರಣವೊಂದರ ಆರೋಪಿಗಳು ತಮ್ಮ ವಾಹನದ ಮೂಲಕ ಮಡಿಕೇರಿಯತ್ತ ಪ್ರಯಾಣಿಸುವ ಮಾಹಿತಿ ಕೇರಳ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹಿಡಿಯುವುದಕ್ಕಾಗಿ ಪೊಲೀಸರು ಬಂದು ಕಾದು ಕುಳಿತಿದ್ದರು. ಈ ವೇಳೆ ಅವರು ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಮಡಿಕೇರಿ ಕಡೆಗೆ ಹೋದರು ಎಂದು

ಸಂಪಾಜೆ: ಸಿನಿಮೀಯ ಮಾದರಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಕೊಲೆ ಆರೋಪಿ ಗಳು Read More »

ಹೋಮ್ ಗಾರ್ಡ್ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ

ಮಾಜಿ ಹೋಮ್‌ ಗಾರ್ಡ್ ರೊಬ್ಬರು ಆ್ಯಸಿಡ್ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ವರದಿಯಾಗಿದೆ.ಪೆರಾಜೆ ಸಮೀಪದ ಅಂಜಿಕಾರ್ ನಿವಾಸಿ ಪ್ರಭಾಕರ ಪೈ (63ವರ್ಷ) ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಅವರು ಕೆಲವು ವರ್ಷಗಳಿಂದ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ‌ ಮಾಡಿದ್ದರು.ಕಳೆದ ಮೂರು ವರ್ಷದಿಂದ ಕರ್ತವ್ಯದಿಂದ‌ ಹೊರಗಿದ್ದರು ಎಂದು ತಿಳಿದು ಬಂದಿದೆ. ಇವರು ಮುಳುಗು ತಜ್ಞ ಕೂಡ ಆಗಿದ್ದು ಹಲವು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಜನರ ಪ್ರೀತಿಗೆ

ಹೋಮ್ ಗಾರ್ಡ್ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ Read More »

ಸಂಪಾಜೆ : ಹಿರಿಯ ಉದ್ಯಮಿ ಇಸ್ಮಾಯಿಲ್ ಚೆಡಾವು ನಿಧನ

ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಕೊಯನಾಡು ಚೆಡಾವು ನಿವಾಸಿ ಕೊಯನಾಡು ಜುಮಾ ಮಸೀದಿ ಮಾಜಿ ಉಪಾಧ್ಯಕ್ಷ, ಹಿರಿಯ ಉದ್ಯಮಿ, ಇಸ್ಮಾಯಿಲ್ ಚೆಡಾವು ರವರು ಅಲ್ಪ ಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 15 (ನಿನ್ನೆ ರಾತ್ರಿ) ರಂದು ನಿಧನರಾದರು.ಮೃತರು ಪತ್ನಿ, ಗಂಡು ಮಕ್ಕಳಾದ ರಫೀಕ್, ರಹೀಮ್, ಹಾಗೂ ಬಂಧು ಬಳಗ ವನ್ನು ಅಗಲಿದ್ದಾರೆ.

ಸಂಪಾಜೆ : ಹಿರಿಯ ಉದ್ಯಮಿ ಇಸ್ಮಾಯಿಲ್ ಚೆಡಾವು ನಿಧನ Read More »

ಬಾವಿಗೆ ಬಿದ್ದು ವ್ಯಕ್ತಿ ಸಾವು

ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೆ.16ರಂದು ವರದಿಯಾಗಿದೆ‌ಬಾವಿಗೆ ಬಿದ್ದು ಮ್ರತಪಟ್ಟ ವ್ಯಕ್ತಿ ನೆಲ್ಲೂರು ಕೆಮ್ರಾಜೆ ಗ್ರಾಮದ ಇರಂತಕತೆ ನಿವಾಸಿ ನಾರಾಯಣ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಗೆ ಬಿದ್ದು ವ್ಯಕ್ತಿ ಸಾವು Read More »

ತೆಂಗಿನ ಕಾಯಿ ಕೊಯ್ಯುತ್ತಿದ್ದಾಗ ಗಳೆ ವಿದ್ಯುತ್ ಲೈನ್ ಗೆ ತಾಗಿ ವ್ಯಕ್ತಿ ಸಾವು

ತೆಂಗಿನ ಮರದಿಂದ ತೆಂಗಿನ ಕೀಳುತ್ತಿದ್ದಾಗ ಅಲ್ಯೂಮೀನಿಯಂ ಗಳೆ ವಿದ್ಯುತ್ ಲೈನಿಗೆ ತಾಗಿ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಇದೀಗ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಿಂದ ಸೆ 15ರಂದು ವರದಿಯಾಗಿದೆ.ಮೃತಪಟ್ಟ ವ್ಯಕ್ತಿ ಬೆಳ್ಳಾರೆ ತಂಬಿನಮಕ್ಕಿಯ ರಾಮ ಎಂದು ಗುರುತಿಸಲಾಗಿದೆ. ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ತೆಂಗಿನ ಕಾಯಿ ಕೊಯ್ಯುತ್ತಿದ್ದಾಗ ಗಳೆ ವಿದ್ಯುತ್ ಲೈನ್ ಗೆ ತಾಗಿ ವ್ಯಕ್ತಿ ಸಾವು Read More »

ವಿಹಾಹಿತ ಮಹಿಳೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ್ದಾಳೆಂಬ ಆರೋಪ,ಪ್ರಿಯತಮನಿಂದ ಮಹಿಳೆಗೆ ಚೂರಿ ಇರಿತ

ವಿವಾಹಿತೆ ಮಹಿಳೆಯೊಬ್ಬರನ್ನು ಪ್ರೀತಿಸಿ ಆಕೆ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಪ್ರಿಯತಮ ಆಕೆಗೆ ಚೂರಿಯಿಂದ ಇರಿದ ಘಟನೆ ಆಡೂರಿನಲ್ಲಿ ನಡೆದಿದ್ದು ಆರೋಪಿಯನ್ನು ಅಡೂರು ಪೋಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.ಮಂಡೆಕೋಲು ಗ್ರಾಮದ ಕುಂಣಿಕಣ್ಣ ಎಂಬವರ ಪುತ್ರ ಪ್ರತಾಪ್ ಮಣಿಯಾಣಿ (೩೬) ವಿವಾಹಿತ ಮಹಿಳೆಗೆ ಚೂರಿಯಿಂದ ಇರಿದು ಬಂಧನಕಕೊಳಗಾದ ಆರೋಪಿ ಎಂದು ಗುರುತಿಸಲಾಗಿದೆ.ಮಂಡೆಕೋಲು ಗ್ರಾಮದ ತೋಟಪ್ಪಾಡಿ ಜಯರಾಜ ಎಂಬವರಿಗೆ ಅಡೂರಿನ ಬಳ್ಳಕಾನ ಕಿಟ್ಟು ನಾಯ್ಕ ಎಂಬವರ ಪುತ್ರಿ ರೇಖಾ ಎಂಬವರೊಂದಿಗೆ ೨೦೧೫ರಲ್ಲಿ ವಿವಾಹ ವಾಗಿತ್ತು. ಈ ದಂಪತಿಗೆ ಒಬ್ಬ

ವಿಹಾಹಿತ ಮಹಿಳೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ್ದಾಳೆಂಬ ಆರೋಪ,ಪ್ರಿಯತಮನಿಂದ ಮಹಿಳೆಗೆ ಚೂರಿ ಇರಿತ Read More »

error: Content is protected !!
Scroll to Top