ಕ್ರೈಂ

ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬೆಳಗಾವಿಯ ಖಾಸಗಿ ಕಾಲೇಜಿನ ಉಪನ್ಯಾಸಕ ನಾಗೇಶ್ವ‌ರ್, ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ತನ್ನೊಂದಿಗೆ ಲಿವ್ ಇನ್ ರಿಲೇಷನ್‌ ಶಿಪ್ ನಲ್ಲಿರಲು ಒತ್ತಾಯಿಸಿದ್ದ. ದೌರ್ಜನ್ಯದಿಂದ ನೊಂದ ವಿದ್ಯಾರ್ಥಿನಿ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ನೀಡಿದ ದೂರಿನ ಮೇರೆಗೆ ಬೆಳಗಾವಿ ಕ್ಯಾಂಪ್ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಉಪನ್ಯಾಸಕನನ್ನು ಬಂಧಿಸಲಾಗಿದೆ.

ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ Read More »

ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ,ಜಾತಿ ನಿಂದನೆ ಮಾಡಿದ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು

ಪುತ್ತೂರು: ಸುಳ್ಯ ತಾಲೂಕು ಕೆಮ್ರಾಜೆಯ ಗಿರೀಶ ಎಂಬಾತ 3-11-2017 ರಂದು ಪರಿಶಿಷ್ಟ ಜಾತಿಗೆ ಸೇರಿದ ಮರ್ಕಂಜ ಗ್ರಾಮದ ಗುಂಡಿಮಜಲಿನ ಮಹಿಳೆಯೋರ್ವರು ಕುಡಿಯಲು ಮತ್ತು ಗೃಹ ಬಳಕೆಗಾಗಿ ಶೇಖರಿಸಿಟ್ಟ ನೀರಿನ ಬ್ಯಾರೆಲ್‌ನಲ್ಲಿ ಮಲವಿಸರ್ಜನೆ ಮಾಡಿ ನೀರನ್ನು ಮಲಿನ ಮಾಡಿದ್ದು ಇದನ್ನು ವಿಚಾರಿಸಲು ಬಂದ ಮಹಿಳೆ ಮತ್ತು ಅವರ ಗಂಡನಿಗೆ ಜಾತಿನಿಂದನೆ ಮಾಡಿ, ಬೈದು ಅವಮಾನ ಮಾಡಿ ದೌರ್ಜನ್ಯ ಎಸಗಿದ್ದರಿಂದ ಆರೋಪಿತನ ವಿರುದ್ಧ ಪ.ಜಾ ಮತ್ತು ಪ.ಪ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದಲ್ಲಿ ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾಗಿದ್ದ ಶ್ರೀನಿವಾಸ್.ಬಿ.ಎಸ್

ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ,ಜಾತಿ ನಿಂದನೆ ಮಾಡಿದ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು Read More »

ನಿಡ್ಯಮಲೆ ಸಮೀಪ ಗುಂಡು ತಗುಲಿ ಸತ್ತ ಕಡವೆ ಪತ್ತೆ

ಪೆರಾಜೆ ನಿಡ್ಯಮಲೆ ರಸ್ತೆ ಬದಿಯ ಪಾನತ್ತಿಲ್ಲ ಎಂಬಲ್ಲಿ ಕಡೆವೆಯ ಮ್ರತ ದೇಹ ಪತ್ತೆಯಾದ ಘಟನೆ ನ 28ರಂದು ವರದಿಯಾಗಿದೆ.ನ.27ರಂದು ರಾತ್ರಿ ಯಾರೋ ಬೇಟೆಗಾರರು ಗುಂಡು ಹೊಡೆದು ರಸ್ತೆ ಬದಿ ಬಂದು ಕಡವೆ ಬಿದ್ದಿವೆ.ಸಂಪಾಜೆ ಅರಣ್ಯ ಇಲಾಖೆಯವರು ಸತ್ತ ಕಡೆವೆಯನ್ನು ಕೊಂಡೊಯ್ದು ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ.

ನಿಡ್ಯಮಲೆ ಸಮೀಪ ಗುಂಡು ತಗುಲಿ ಸತ್ತ ಕಡವೆ ಪತ್ತೆ Read More »

ಮಗುವಿಗೆ ಜನ್ಮ ನೀಡಿದ ಹತ್ತನೇ ತರಗತಿಯ ವಿದ್ಯಾರ್ಥಿನಿ,ಹಲವರ ವಿರುದ್ಧ ಪ್ರಕರಣ ದಾಖಲು!

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಡಿ.ದೇವರಾಜ ಅರಸ್‌ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದ ವಿಷಯವನ್ನು ಮುಚ್ಚಿಟ್ಟ ಆರೋಪದ ಮೇಲೆ ವಸತಿ ನಿಲಯದ ಮೇಲ್ವಿಚಾರಕಿ ಶಶಿಕಲಾ ಹಿರೇಮಠ, ಅಡುಗೆ ಕೆಲಸಗಾರರಾದ ಪಾರ್ವತಿ ಕುದಿರಿಮೋತಿ ಹಾಗೂ ಪ್ರಿಯಾಂಕಾ ಸಿಂಧೋಗಿ ಅವರನ್ನು ಅಮಾನತುಗೊಳಿಸಲಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕ ಹನುಮನಗೌಡ ಬತ್ತಿಯನ್ನು ಬಂಧಿಸಲಾಗಿದೆ. ಶಿಕ್ಷಕರು, ವೈದ್ಯಾಧಿಕಾರಿ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ

ಮಗುವಿಗೆ ಜನ್ಮ ನೀಡಿದ ಹತ್ತನೇ ತರಗತಿಯ ವಿದ್ಯಾರ್ಥಿನಿ,ಹಲವರ ವಿರುದ್ಧ ಪ್ರಕರಣ ದಾಖಲು! Read More »

ಸಂಪಾಜೆ : ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವು

ಸುಳ್ಯ ತಾಲೂಕಿ ಸಂಪಾಜೆ ಗ್ರಾಮದ ಗಡಿಕಲ್ಲಿ ನಲ್ಲಿ ನ. 27ರಂದು ಸಂಜೆ ವೇಳೆಗೆ ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕಮಲ ಎಂಬವರನ್ನು ತಕ್ಷಣವೇ ಚಿಕಿತ್ಸೆಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತುಚಿಕಿತ್ಸೆ ಫಲಿಸದೇ ನವೆಂಬರ್ 27 ರಂದು ರಾತ್ರಿ 11.30 ರ ವೇಳೆಗೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.

ಸಂಪಾಜೆ : ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವು Read More »

ಕನಿಕರಪಳ್ಳ : ತೆರೇಸಾ ಡಿ.ಸೋಜಾ ನಿಧನ

ಸುಳ್ಯ ನಾವೂರು ಕನಿಕರಪಳ್ಳ ಜೋಸೆಫ್ ಮೊಂತೇರೊ (ಮೇಸ್ತ್ರಿ )ಎಂಬವರ ಪತ್ನಿ ತೆರೇಸಾ ಡಿ.ಸೋಜಾರವರು ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು(ನ.26) ಮುಂಜಾನೆ ನಿಧನರಾದರು.ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತಿ ಮತ್ತು ಪುತ್ರ ಮೊಂತೇರೊ ರವರನ್ನು ಅಗಲಿದ್ದಾರೆ. ಮೃತರ ಅಂತಿಮ ಕಾರ್ಯ ನಾಳೆ ಸುಳ್ಯ ಚರ್ಚ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಕನಿಕರಪಳ್ಳ : ತೆರೇಸಾ ಡಿ.ಸೋಜಾ ನಿಧನ Read More »

ತೊಡಿಕಾನ : ಪೆರಂಬಾರು ಚಿನ್ನಪ್ಪ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪೆರಂಬಾರು ಮನೆಯ ಚಿನ್ನಪ್ಪ ಗೌಡರು ನ.24ರಂದು ನಿಧನ ರಾದರು.ಅವರಿಗೆ 65 ವರ್ಷ ಪ್ರಾಯವಾಗಿತ್ತು.ಮ್ರತರು ಪತ್ನಿ ಸರಸ್ವತಿ,ಪುತ್ರರಾದ ಶಿವರಾಮ,ಯತೀಶ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ತೊಡಿಕಾನ : ಪೆರಂಬಾರು ಚಿನ್ನಪ್ಪ ಗೌಡ ನಿಧನ Read More »

ಕಲ್ಲುಗುಂಡಿ : ಗೂಳಿ ಕಾಳಗ ಅಂಗಡಿ ಧ್ವಂಸ

ಅರಂತೋಡು : ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ  ನೆಲ್ಲಿಕುಮೇರಿಯ ಫಿಲೋಮಿನ ಕುಟಿನ್ಹ ರವರ ಅಂಗಡಿಗೆ ಹೋರಿಗಳು ಗೂಳಿ ಕಾಳಗ ಮಾಡಿಕೊಂಡು ನುಗ್ಹಿ  ಅಂಗಡಿ ದ್ವಂಸ ಮಾಡಿದ ಘಟನೆ ನ.23ರಂದು  ಸಂಜೆ ವೇಳೆ ವರದಿಯಾಗಿದೆಇದರಿಂದ ಅಪಾರ  ನಷ್ಟ ಸಂಭವಿಸಿದೆದಾಳಿಯಿಂದ ಫಿಲೋಮಿನ ರವರಿಗೆ ಗಾಯವಾಗಿದೆಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಪಂಚಾಯತ್ ಸದಸ್ಯರಾದ ಜಿ ಕೆ ಹಮೀದ್, ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್, ಪಂಚಾಯತ್ ಸ್ವಚ್ಛತಾ ತಂಡದ ಗುರುವ ಕಡೆಪಾಲ ಭೇಟಿ ನೀಡಿದ್ದಾರೆ.

ಕಲ್ಲುಗುಂಡಿ : ಗೂಳಿ ಕಾಳಗ ಅಂಗಡಿ ಧ್ವಂಸ Read More »

ತೊಡಿಕಾನ : ನಾರ್ಕೋಡು ಸುಂದರ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ‌ ಗ್ರಾಮದ ನಾರ್ಕೋಡು ಪರ್ನೋಜಿ ಸುಂದರ ಗೌಡ ಅವರು ನ.23ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.ಅವರಿಗೆ 82 ವರ್ಷವಾಗಿತ್ತು.ಮ್ರತರು ಮಕ್ಕಳಾದ ಗುರುಪ್ರಸಾದ್,ಜಯಶ್ರೀ,ಸೊಸೆ ಮೊಮ್ಮಕ್ಕನ್ನು ಸಹೋದರನ್ನು ಕುಟುಂಬಸ್ಥರನ್ನು,ಬಂಧುಬಳಗ ,ಮಿತ್ರರನ್ನು ಅಗಲಿದ್ದಾರೆ.

ತೊಡಿಕಾನ : ನಾರ್ಕೋಡು ಸುಂದರ ಗೌಡ ನಿಧನ Read More »

ಕಲ್ಲುಗುಂಡಿ : ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ,ಪ್ರಕರಣ ದಾಖಲು

ಈಚರ್ ಲಾರಿಯಲ್ಲಿ ಅಕ್ರಮವಾಗಿ ಕೇರಳ ಕಡೆಯಿಂದ ಮಡಿಕೇರಿಯತ್ತ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದಾಗ ಸುಳ್ಯ ಪೊಲೀಸರು ಲಾರಿ ಮತ್ತು ಕಲ್ಲುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನವಂಬರ್ 20ರಂದು ರಾತ್ರಿ ವರದಿಯಾಗಿದೆ.ಈಚರ್ ವಾಹನದಲ್ಲಿ ಕೇರಳದ ಮಿಂಚಿನ ಪದವು ಎಂಬಲ್ಲಿಂದ ಸುಮಾರು 400 ಕೆಂಪು ಕಲ್ಲುಗಳನ್ನು ಪರವಾನಿಗೆ ಇಲ್ಲದೆ ಕೊಂಡೋಗುತ್ತಿದ್ದಾಗ ಕಲ್ಲುಗುಂಡಿ ಹೊರ ಠಾಣೆಯ ಬಳಿ ರಾತ್ರಿ ಸುಮಾರು 11.15 ರ ವೇಳೆಗೆ ಪೊಲೀಸರು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ.ಈ ಸಂದರ್ಭ ಕಲ್ಲು ಸಾಗಾಟಕ್ಕೆ ಪರವಾನಿಗೆ ಇಲ್ಲದೇ ಇರುವ ಬಗ್ಗೆ

ಕಲ್ಲುಗುಂಡಿ : ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ,ಪ್ರಕರಣ ದಾಖಲು Read More »

error: Content is protected !!
Scroll to Top