ಕ್ರೈಂ

ಮಗುನೊಂದಿಗೆ ತಾಯಿ ಕೆರೆಗೆ ಹಾರಿ,ತಾಯಿ ಮಗು ಸಾವು

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರದಲ್ಲಿ ತಾಯಿ ಮಗು ಕೆರೆಗೆ ಹಾರಿ ಸಾವನ್ನಪ್ಪಿದ ಘಟನೆ ಜ.4ರಂದುಬೆಳಿಗ್ಗೆ ವರದಿಯಾಗಿದೆ.ಹರೀಶ್ ಆರ್ವಾರ ಎಂಬವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ ಮಗು ಮೃತಪಟ್ಟವರು.ಘಟನೆಗೆ ಕಾರಣ ತಿಳಿದು ಬಂದಿಲ್ಲ.ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗುನೊಂದಿಗೆ ತಾಯಿ ಕೆರೆಗೆ ಹಾರಿ,ತಾಯಿ ಮಗು ಸಾವು Read More »

ಯುಪಿ ಬಿಜೆಪಿ ಶಾಸಕ ಸಭೆಯ ವೇಳೆ ಹೃದಯಾಘಾತದಿಂದ ನಿಧನ

ಬಿಜೆಪಿ ಶಾಸಕ ಶ್ಯಾಮ್ ಬಿಹಾರಿ ಲಾಲ್ ಅವರು ತಮ್ಮ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಒಂದು ದಿನದ ನಂತರ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಬರೇಲಿಯ ಫರೀದ್‌ಪುರ ಶಾಸಕರ ಆರೋಗ್ಯ ಹಠಾತ್ತನೆ ಹದಗೆಟ್ಟಿತು ಮತ್ತು ಪಶುಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಅವರೊಂದಿಗಿನ ಸಭೆಯ ಸಮಯದಲ್ಲಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಯುಪಿ ಬಿಜೆಪಿ ಶಾಸಕ ಸಭೆಯ ವೇಳೆ ಹೃದಯಾಘಾತದಿಂದ ನಿಧನ Read More »

ಬೈಕ್ ಅಪಘಾತದಲ್ಲಿ ಯುವಕ ಸಾವು

ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬೀಡಿನಗದ್ದೆ ನಿವಾಸಿ ಯುವಕ ಉಡುಪಿ ಸಮೀಪದ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಅಪಾತದಲ್ಲಿ ಮೃತಪಟ್ಟ ಘಟನೆ ಜ.2ರಂದು ನಸುಕಿನ ವೇಳೆ ವರದಿಯಾಗಿದೆ.ಸೇತುವೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಯುವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ನಸುಕಿನ ವೇಳೆ ೨:೩೦ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮೃತರು ತಂದೆ ಜನಾರ್ದನ ಸೇರಿದಂತೆ ಕುಟುಂಬದವರನ್ನು‌ ಅಗಲಿದ್ದಾರೆ.

ಬೈಕ್ ಅಪಘಾತದಲ್ಲಿ ಯುವಕ ಸಾವು Read More »

ಸಂಪಾಜೆ : ಬೈಕ್ ಅಪಘಾತ, ಮೊಬೈಲ್ ಪೋನ್ ಬ್ಲಾಸ್ಟ್ ಯುವಕನಿಗೆ ಗಾಯ

ಬೈಕ್ ಅಪಘಾತವಾಗಿ ಸವಾರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಚೌಕಿಯಿಂದ ವರದಿಯಾಗಿದೆ.ಗಾಯಗೊಂಡ ಯುವಕನ್ನು ಕೊಯನಾಡು ಚಡಾವು ನಿವಾಸಿ ತನುಷ್ ಗುರುತಿಸಲಾಗಿದೆ.ಮೊಬೈಲ್ ಅಪಘಾತದ ಸ್ಥಳದಲ್ಲಿ ಬ್ಲಾಸ್ಟ್ ಆಗಿ ಉರಿದಿದೆ ಎಂದು ತಿಳಿದು ಬಂದಿದೆ.ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಸಂಪಾಜೆ : ಬೈಕ್ ಅಪಘಾತ, ಮೊಬೈಲ್ ಪೋನ್ ಬ್ಲಾಸ್ಟ್ ಯುವಕನಿಗೆ ಗಾಯ Read More »

ಬೊಳಿಯಮ್ಮ ಸಣ್ಣಮನೆ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಮುಪ್ಪಸೇರು ಸಣ್ಣಮನೆ ಜತ್ತಪ್ಪ ಗೌಡರ ಧರ್ಮಪತ್ನಿ ಬೊಳಿಯಮ್ಮ ಅಸೌಖ್ಯದಿಂದ ಡಿ.22ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ ಸುಮಾರು‌ 65ವರ್ಷ ಪ್ರಾಯವಾಗಿತ್ತು.ಮೃತರು ಪತಿ ಜತ್ತಪ್ಪ ಗೌಡ,ಮಕ್ಕಳಾದ ಹರೀಶ,ಶ್ರೀಧರ ಇಬ್ಬರು ಸೊಸೆಯಂದಿರನ್ನು ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.

ಬೊಳಿಯಮ್ಮ ಸಣ್ಣಮನೆ ನಿಧನ Read More »

ಬಸ್ ಬೈಕ್ ಅಪಘಾತವಾಗಿ ಬೈಕ್ ಸವಾರ ಗಂಭೀರ

ಅರಂತೋಡು : ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಸಂಪಾಜೆ ಗ್ರಾಮದ ಕಡೆಪಾಲ ಬಳಿ ಡಿ.21ರಂದು ಸಂಭವಿಸಿದೆ.ಗಾಯಗೊಂಡ ಬೈಕ್ ಸವಾರನ್ನು ಕೇರಳ ಮೂಲದ ಜಿನೇಶ್(36) ಎಂದು ಗುರುತಿಸಲಾಗಿದೆ.ಕಡೆಪಾಲ ರಾಷ್ಟ್ರೀಯ ಹೆದ್ದಾರಿ 275ರ ತಿರುವಿನಲ್ಲಿ ಮಿನಿ ಬಸ್ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಬೈಕ್ ಅಪಘಾತವಾಗಿ ಬೈಕ್ ಸವಾರ ಗಂಭೀರ Read More »

ಅಕ್ಷತಾ ಪೂಜಾರಿಗೆ ಕೂಡಲೇ ನ್ಯಾಯ ಒದಗಿಸಲಿ,ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಒತ್ತಾಯ

ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂಬೆಳಗ್ಗೆ ನುಗ್ಗಿ ಯುವತಿಗೆ ಹಲ್ಲೆ ನಡೆಸಿರುವುದನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಖಂಡಿಸುತ್ತದೆ. ತಪ್ಪಿಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಲ್ಲವರ ಮಹಾಮಂಡಲ (ರಿ) ಮೂಲ್ಕಿ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಒತ್ತಾಯಿಸಿದ್ದಾರೆ.ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೋಲಿಸರು ಇಲ್ಲದೇ, ಕೇವಲ ಪುರುಷ ಪೊಲೀಸರು ನುಗ್ಗಿ, ಯುವತಿ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಯುವತಿ

ಅಕ್ಷತಾ ಪೂಜಾರಿಗೆ ಕೂಡಲೇ ನ್ಯಾಯ ಒದಗಿಸಲಿ,ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಒತ್ತಾಯ Read More »

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಲ್ಲಿದ್ದ ಮಗು ಬಾವಿಗೆ ಬಿದ್ದು ಸಾವು

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಿಂದ ಮಗು ಆಯತಪ್ಪಿ ಜಾರಿ ಬಾವಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ನಡೆದಿದೆ.ಮೃತ ಮಗುವನ್ನು ಕೀರ್ತನಾ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ನಯನಾ ಕರ್ಕಡ ಅವರು ಮನೆ ಸಮೀಪದ ಬಾವಿಯಿಂದ ನೀರು ಎಳೆಯುತ್ತಿದ್ದಾಗ ಈ ರ್ಘಟನೆ ನಡೆದಿದೆ.ಕೂಡಲೇ ತಾಯಿ ನಯನಾ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಗುವನ್ನು ಹೊರತೆಗೆದರಾದರೂ, ಅದಾಗಲೇ ಮಗು ಮೃತಪಟ್ಟಿತ್ತು.ಘಟನಾ ಸ್ಥಳಕ್ಕೆ ಉಡುಪಿ ನಗರ ಠಾಣಾ ಪಿಎಸ್‌ ಐ ಭರತೇಶ್ ಕಂಕಣವಾಡಿ ಭೇಟಿ ನೀಡಿ

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಲ್ಲಿದ್ದ ಮಗು ಬಾವಿಗೆ ಬಿದ್ದು ಸಾವು Read More »

ಮೈಸೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸುಳ್ಯದ ಯುವಕ ಸಾವು

ಬೆಂಗಳೂರಿನಿಂದ ಸುಳ್ಯದ ತನ್ನ ಹುಟ್ಟೂರಿಗೆ ಹಿಂದಿರುಗುತ್ತಿದ್ದಾಗ ಮೈಸೂರು ಸಮೀಪದ ಮಳವಳ್ಳಿ ಯಲ್ಲಿ ಸಂಭವಿಸಿದ ಅಪಘಾತದಲ್ಲಿ ಉಬರಡ್ಕ ಸಮೀದ ಕಂದಡ್ಕದ ಯುವಕನೋರ್ವ ಮೃತಪಟ್ಟ ಘಟನೆ ಡಿ.12ರಂದು ಮುಂಜಾನೆ ವರದಿಯಾಗಿದೆ.ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾರ್ ನಿವಾಸಿ ಶೇಷಪ್ಪ ನಾಯ್ಕರವರ ಪುತ್ರ ದೀಕ್ಷಿತ್ (25) ರವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿದ್ದು, ಬೆಂಗಳೂರಿನಿಂದ ಹೊರಟು ಕಲ್ಟಾರ್ ನ ತನ್ನ ಮನೆಗೆ ಬುಲೆಟ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿ ಯಲ್ಲಿ ಅಪಘಾತ ಸಂಭವಿಸಿದೆ. ತೀವ್ರ ಅಪಘಾತಕ್ಕೆ ಗಂಭೀರಗಾಯಗೊಂಡ ದೀಕ್ಷಿತ್ ರವರು

ಮೈಸೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸುಳ್ಯದ ಯುವಕ ಸಾವು Read More »

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ಸುಳ್ಯ ಪೋಲಿಸ್ ಠಾಣೆ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ 2025 ನಡೆಯಿತು.ಸುಳ್ಯ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸರಸ್ವತಿ ‘ಪೋಸ್ಕೊ ಕಾಯ್ದೆ’ಯ ಕುರಿತು ಮತ್ತು ಸಬ್ ಇನ್ಸ್ಪೆಕ್ಟರ್ ಸಂತೋಷ ‘ಸೈಬರ್ ಅಪರಾಧಗಳ’ , ‘ಮಾದಕ ವಸ್ತುಗಳ ಬಳಕೆಯ ಅಪರಾಧ’ ಮತ್ತು ‘ಟ್ರಾಫಿಕ್ ನಿಯಮಗಳ’ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು.ರಾಣೆಯ ಸಿಬ್ಬಂದಿಗಳಾದ ಸಂತೋಷ, ಪ್ರಕಾಶ್

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ Read More »

error: Content is protected !!
Scroll to Top