ಪ್ರಚಲಿತ

ನಾಳೆ (ಏ.1) ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವದಿ ಜಾತ್ರೋತ್ಸವ ಏ.13ರಿಂದ ಆರಂಭಗೊಳ್ಳಲಿದೆ.ನಾಳೆ (ಏ.1) ಬೆಳಿಗ್ಗೆ 9 ಗಂಟೆಗೆ ಗೊನೆ ಮುಹೂರ್ತ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಸೀಮೆಯ ಹೆಚ್ಚಿನ ಭಕ್ತರು ಭಾಗವಹಿಸಬೇಕೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆ (ಏ.1) ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಅರಂತೋಡು : ಸಂಭ್ರಮದ ಈದುಲ್ ಫಿತರ್ ಆಚರಣೆ

ಅರಂತೋಡು ನಲ್ಲಿ ಈದುಲ್ ಫಿತರ್ ಹಬ್ಬವನ್ನು ಮುಸ್ಲಿಂ ಭಾಂಧವರು ಬಹಳ ಸಂಭ್ರಮದಿಂದ ಆಚರಿಸಲಾಯಿತು, ಈದ್ ನಮಾಜ್ ನೇತ್ರತ್ವ ವನ್ನು ಖತಿಬ್ ಬಹು, ಇಸ್ಮಾಯಿಲ್ ಪೈಝಿ ಗಟ್ಟಮನೆ ನಿರ್ವಹಿಸಿ, ಈದ್ ಸಂದೇಶ ನೀಡಿದರು, ಜಮಾತ್ ಪದಾಧಿಕಾರಿಗಳು, ಅದೀನ ಸಂಘ ಸಂಸ್ಥೆ ಪದಾಧಿಕಾರಿಗಳು, ಜಮಾತ್ ನ ಸರ್ವ ಸದಸ್ಯರು ಪಾಲ್ಗೊಂಡರು

ಅರಂತೋಡು : ಸಂಭ್ರಮದ ಈದುಲ್ ಫಿತರ್ ಆಚರಣೆ Read More »

ಅರೆಭಾಷೆಯನ್ನು ವಿಸ್ತರಿಸಲು ವಿನೂತನ ಕಾರ್ಯಕ್ರಮ: ಸದಾನಂದ ಮಾವಂಜಿ

ಅರೆಭಾಷೆ ಇಂದು ಜಾತಿ, ಗಡಿ ಮೀರಿ ಬೆಳೆಯುತ್ತಿರುವುದು ಸಂತೋಷದ ವಿಚಾರವಾಗಿದೆ.ಇದನ್ನು ಇನ್ನಷ್ಟು ವಿಸ್ತರಿಸಲು ಗಡಿನಾಡ ಉತ್ಸವ ಸೇರಿದಂತೆ ಇನ್ನಿತರ ವಿನೂತನ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುವುದು” ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಹೇಳಿದರು. ಅವರು ಮಾ.30ರಂದು ಆಲೆಟ್ಟಿ ಗ್ರಾಮದ ಕುಡೆಕಲ್ಲು ಐನ್ ಮನೆ ವಠಾರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ನಡೆದ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಐನ್ ಮನೆ ಎನ್ನುವುದು ಎಲ್ಲರನ್ನು

ಅರೆಭಾಷೆಯನ್ನು ವಿಸ್ತರಿಸಲು ವಿನೂತನ ಕಾರ್ಯಕ್ರಮ: ಸದಾನಂದ ಮಾವಂಜಿ Read More »

ಪೊಲೀಸ್ ಮೂರುಗೋಳಿಯ ಪ್ರವೀಣ್ .ಎಂ ಅವರಿಗೆ ಮುಖ್ಯಮಂತ್ರಿ ಪದಕ

ಬೆಳ್ತಂಗಡಿ : ಪೊಲೀಸ್‌ ಹೆಡ್‌ ಕಾಸ್ಟೇಬಲ್ ಮೂರುಗೋಳಿಯ ಪ್ರವೀಣ್.ಎಂ ಇವರಿಗೆ ಈ ಭಾರಿ ಮುಖ್ಯಮಂತ್ರಿ ಪದಕಕ್ಕೆ ಅಯ್ಕೆ ಅಗಿದ್ದಾರೆ. ಎಪ್ರಿಲ್ 2 ರಂದು ಕರ್ನಾಟಕ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕವನ್ನು ನೀಡಲಿದ್ದಾರೆ.ಬೆಳ್ತಂಗಡಿ ತಾಲೂಕಿನ ಪುತ್ತಿಲ್ಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗರ ಮೊದಲ ಮಗ ಪ್ರವೀಣ್.ಎಂ ಇವರು 2002 ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡರು. ಮೊದಲು ಕರ್ತವ್ಯವನ್ನು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಮಾಡಿದ್ದು ಬಳಿಕ ಬೆಳ್ತಂಗಡಿ ವೃತ್ತ ಕಚೇರಿ,

ಪೊಲೀಸ್ ಮೂರುಗೋಳಿಯ ಪ್ರವೀಣ್ .ಎಂ ಅವರಿಗೆ ಮುಖ್ಯಮಂತ್ರಿ ಪದಕ Read More »

ದನ ಸಾಗಾಟ ಮಾಡುತ್ತಿದ್ದವರ ಹಲ್ಲೆ ನಡೆಸಿದ ಆರೋಪಿಗಳ ಬಂಧನ

ದನ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಪ್ರಕರಣ ಮೂಡಬಿದರೆಯಿಂದ ಭಾನುವಾರ ವರದಿಯಾಗಿದೆ.ಕಡಂದಲೆಯ ಸುಧೀರ್ ಶೆಟ್ಟಿ ಹಾಗೂ ಸುರತ್ಕಲ್‌ನ ಧನರಾಜ್ ಬಂಧಿತ ಆರೋಪಿಗಳಾಗಿದ್ದು, ಇತರ ಐದು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.ಮೂಡಬಿದಿರೆ ಬಿರಾವಿನ ಕೂಸಪ್ಪ ಪೂಜಾರಿ ಅವರು ತನ್ನ ಪರಿಚಯದ ಕಾರ್ಕಳದ ಬಜಗೋಳಿಯ ಮನೆಯಿಂದ ಗೀರ್ ತಳಿಯ ಹೋರಿಯೊಂದನ್ನು ಸಂಗಬೆಟ್ಟುವಿನ ಅಬ್ದುಲ್ ರಹ್ಮಾನ್ ಅವರ ವಾಹನದಲ್ಲಿ ಶುಕ್ರವಾರ ಸಂಜೆ ಮೂಡಬಿದಿರೆಯತ್ತ ತರುತ್ತಿದ್ದರು. ಗೀರ್ ತಳಿಯ ಹೋರಿಯನ್ನು

ದನ ಸಾಗಾಟ ಮಾಡುತ್ತಿದ್ದವರ ಹಲ್ಲೆ ನಡೆಸಿದ ಆರೋಪಿಗಳ ಬಂಧನ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕುರಿತು ಪೂರ್ವಭಾವಿ ಸಭೆ ಮಾ.29ರಂದು ದೇವಳದ ಅಕ್ಷಯ ಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಜಾತ್ರೋತ್ಸವ ಉಪ ಸಮಿತಿಗಳ ರಚನೆ ಮಾಡಲಾಯಿತು.ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು.ಜಾತ್ರೋತ್ಸವ ಸಮಿತಿಯ ಉಪ ಸಮಿತಿಗಳನ್ನು ರಚಿಸಲಾಯಿತು. ಸಂಪಾಜೆ, ಆಲೆಟ್ಟಿ, ಆರಂತೋಡು, ಉಬರಡ್ಕ, ಮರ್ಕಂಜ ಹಾಗೂ ನೆರೆಯ ಗ್ರಾಮಗಳಲ್ಲಿ ಹಸಿರು ವಾಣಿ ಸಂಗ್ರಹಿಸಲು ಆಯಾ ಗ್ರಾಮದ ಬೈಲುವಾರು ಸಭೆ ಕರೆದು ತಿಳಿಸುವುದು ಹಾಗೂ ಆಮಂತ್ರಣ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಭಾವೈಕ್ಯತೆಯ ಸಂಗಮವಾದ ತೆಕ್ಕಿಲ್ ಇಫ್ತಾರ್ ಕೂಟ,ಮೂರು ಧರ್ಮದ ಧರ್ಮಗುರುಗಳಿಗೆ ಪ್ರತಿಷ್ಠಾನ ವತಿಯಿಂದ ಸನ್ಮಾನ

ಅರಂತೋಡು ಪ್ರತಿಷ್ಠಾನ ವತಿಯಿಂದ ಮಾ. 26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಇಪ್ಪತ್ತನೇ ವರ್ಷದ ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟವು ಭಾವೈಕ್ಯದ ಸಂಗಮವಾಯಿತು. ಕಾರ್ಯಕ್ರಮದಲ್ಲಿ ಮೂರು ಧರ್ಮದ ಧರ್ಮ ಗುರುಗಳನ್ನು ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ದ ಪುರುಷ ಮಠ ಮರ್ಕಂಜ ಇದರ ಧರ್ಮದರ್ಶಿ ರಾಜೇಶ್ ನಾಥ್ ಜಿ. ಸುಳ್ಯ ಬೀರಮಂಗಲ ಸೈಂಟ್ ವಿಕ್ಟರ್ ಚರ್ಚ್ ನ ಧರ್ಮ ಗುರು ಫಾದರ್ ವಿಕ್ಟರ್ ಡಿ’ಸೋಜಾ , ಅರಂತೋಡು ಬದ್ರಿಯಾ ಜುಮಾ

ಭಾವೈಕ್ಯತೆಯ ಸಂಗಮವಾದ ತೆಕ್ಕಿಲ್ ಇಫ್ತಾರ್ ಕೂಟ,ಮೂರು ಧರ್ಮದ ಧರ್ಮಗುರುಗಳಿಗೆ ಪ್ರತಿಷ್ಠಾನ ವತಿಯಿಂದ ಸನ್ಮಾನ Read More »

ಪಂಜ- ಮಂಜೇಶ್ವರ ರಸ್ತೆಯ ಮರು ಡಾಮರಿಕರಣಕ್ಕೆ ಗುದ್ದಲಿಪೂಜೆ

ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾದ ಪಂಜ- ಮಂಜೇಶ್ವರ ರಸ್ತೆಯ 75ಲಕ್ಷ ವೆಚ್ಚದ ಮರುಡಾಮರಿಕರಣಕ್ಕೆ ಇಂದು ಬಳ್ಪದ ಬೊಗಯ್ಯನ ಕೆರೆಯ ಬಳಿ ಗುದ್ದಲಿಪೂಜೆಯನ್ನು ಮಾನ್ಯ ಶಾಸಕರು ನೆರವೆರಿಸಿದರು.ಈ ಸಂದರ್ಭದಲ್ಲಿ ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಹರ್ಷಿತ್ ಕಾರ್ಜ,ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪಕ್ಷದ ಪ್ರಮುಖರಾದಸುಬ್ರಹ್ಮಣ್ಯ ಕುಳ, ವೆಂಕಟ್ ದಂಬೆಕೊಡಿ, ರಮಾನಂದ ಎಣ್ಣೆಮಜಲು,ದೇವಿ ಚಿಕ್ಮುಳಿ, ರವಿನರಿಯಾಂಗ,ರಾಜು ಕನಕಲ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಂಜ- ಮಂಜೇಶ್ವರ ರಸ್ತೆಯ ಮರು ಡಾಮರಿಕರಣಕ್ಕೆ ಗುದ್ದಲಿಪೂಜೆ Read More »

ಕಳಂಜ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಭೋಜನ ಶಾಲೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 3 ಲಕ್ಷ ಧನಸಹಾಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕಳಂಜ ಕಾರ್ಯಕ್ಷೇತ್ರದಲ್ಲಿ ಶ್ರೀ ವಿಷ್ಣಮೂರ್ತಿ ದೈವಸ್ಥಾನದ ನೂತನ ಭೋಜನಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 3 ಲಕ್ಷ ಅನುದಾನದ ಮಂಜೂರಾತಿ ಪತ್ರ ವಿತರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಸುಳ್ಯ ಇದರ ಯೋಜನಾಧಿಕಾರಿಗಳಾದ ಶ್ರೀ ಮಾಧವ,ಗೌಡ ಇವರು ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ (ರಿ ) ಕಳಂಜ ಇದರ ಅಧ್ಯಕ್ಷರಾದ

ಕಳಂಜ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಭೋಜನ ಶಾಲೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 3 ಲಕ್ಷ ಧನಸಹಾಯ Read More »

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ

ಅರಂತೋಡು : ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಸುಜಯ ಲೋಹಿತ್ ಅವರ ತೊಟಕ್ಕೆ ಕಾಡಾನೆ ದಾಳಿ ಅಪಾರ ಕೃಷಿ ನಾಶ ಮಾಡಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.ತೆಂಗಿನ ಮರ ಬಾಳೆ ಇತರ ಕ್ರಷಿ ಬೆಳೆಗಳನ್ನು ನಾಶ ಮಾಡಿದೆ.ಅನೇಕ ತಿಂಗಳಿನಿಂದ ಅಡ್ತಲೆ ಪರಿಸರ ದಲ್ಲಿ ಕಾಡಾನೆಗಳು ಬೀಡು ಬಿಟ್ಟು ಆಗಾಗ್ಗೆ ಕೃಷಿ ನಾಶ ಮಾಡುತ್ತಿದೆ. ಕಾಡು ಕೋಣ ಹಾವಳಿಯು ಹೆಚ್ಚಾಗಿದ್ದು ಅನೇಕ ರೈತರ ಕ್ರಷಿ ಮಾಶ ಮಾಡಿವೆ.ಆನೆ ಹಾಗೂ ಕಾಡು ಕೋಣಗಳ ಹಾವಳಿ ವಿಪರೀತ ಆಗುತ್ತಿದ್ದು, ಜನಪ್ರತಿನಿದಿನಗಳು ದಯವಿಟ್ಟು

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ Read More »

error: Content is protected !!
Scroll to Top