ಪ್ರಚಲಿತ

ನಾಳೆ(ಫೆ.11) ತೊಡಿಕಾನ ದೇವಳಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಮತ್ತು ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಫೆ. 11 ರಂದು ಅಪರಾಹ್ನ 2.00ಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ರವರು ಮತ್ತು ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಭೇಟಿ ನೀಡಲಿದ್ದು, ಅರಂತೋಡು ತೊಡಿಕಾನ ಪಟ್ಟಿ ಭಾಗಮಂಡಲ ರಸ್ತೆಯ ಅಭಿವೃದ್ಧಿಯ ಕುರಿತು‌ ಸಾರ್ವಜನಿಕರ ಮನವಿ ಮೇರೆಗೆ ಸಭೆ ನಡೆಸಲಿದ್ದಾರೆ.

ನಾಳೆ(ಫೆ.11) ತೊಡಿಕಾನ ದೇವಳಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಮತ್ತು ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ರಮೇಶ್ ಕುದ್ಪ್ಪಾಜೆಯವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವಾರ್ಪಣೆ

ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸಿಕೊಂಡು,ಅಡಿಕೆ / ತೆಂಗಿನ ಮರವನ್ನು ಏರುವ, ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಬರುತ್ತಿರುವ ಜಯನಗರದ ಮನೆ ಮನದಲ್ಲಿ ಪ್ರೀತಿಗಳಿಸಿರುವ ರಮೇಶ್ ಕುದ್ಪ್ಪಾಜೆ ಅವರನ್ನು ಸ್ವಾಮಿ ಕೊರಗಜ್ಜ ದೈವಸ್ಥಾನ ಕೊರಂಬಡ್ಕದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವ ವನ್ನು ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಜೇಸಿ ಸುರೇಶ್ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಸಮಿತಿ

ರಮೇಶ್ ಕುದ್ಪ್ಪಾಜೆಯವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವಾರ್ಪಣೆ Read More »

ಕೊಡಿಯಾಲಬೈಲು ; ಮನೋಶಕ್ತಿ ಕಾರ್ಯಗಾರ ಉದ್ಘಾಟನೆ

ಉಪಾಸನ ಫೌಂಡೇಶನ್ ನ ಉಪಾಸಕರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಫೌಂಡೇಶನ್ ಮುಖ್ಯಸ್ಥ ಸದ್ಗುರುಶ್ರೀ ರಾಮರವರ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಮನೋಶಕ್ತಿ ಕಾರ್ಯಗಾರ ಫೆ. 9ರಂದು ನಡೆಯಿತು.ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಡಿ. ವಿ. ಲೀಲಾಧರ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌.ಬಳಿಕ ಮಾತನಾಡಿದ ಅವರು ನಮ್ಮ ಹೃದಯ ಮತ್ತು ಮನಸ್ಸು ಶಾಂತವಾಗಿರಲು ಇಂತಹ ಕಾರ್ಯಕ್ರಮ ಸಹಕಾರಿಯಾಗಬಲ್ಲದು” ಶುಭ ಹಾರೈಸಿದರು.ಉಪಾಸನ ಫೌಂಡೇಶನ್ ನ ಮುಖ್ಯಸ್ಥ ಸದ್ಗುರುಶ್ರೀ

ಕೊಡಿಯಾಲಬೈಲು ; ಮನೋಶಕ್ತಿ ಕಾರ್ಯಗಾರ ಉದ್ಘಾಟನೆ Read More »

ಅರಂತೋಡು : ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಸ್ವಾಮಿ ಕೊರಗಜ್ಜ ದೈವದ ಕೋಲ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕೊಡಂಕೇರಿಯಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ಕಾಲಾವಧಿ ನೇಮೋತ್ಸವ ಹಾಗೂ ಹರಕೆ ಕೋಲ ಫೆಬ್ರವರಿ 8ರಿಂದ ಆರಂಭಗೊಂಡಿದೆ.ಫೆ‌.8ರಂದು ರಾತ್ರಿ ಗುಳಿಗನ ಕೋಲ ಮತ್ತು ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಅಗಲು ಸೇವೆ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.ಸಾವಿರಾರು ಭಕ್ತರು ಆಗಮಿಸಿ ಕೊರಗಜ್ಜ ದೈವದ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಫೆಬ್ರವರಿ 9ರಂದು ರಾತ್ರಿಯಿಂದ ಫೆಬ್ರವರಿ 10 ಸೋಮವಾರದ ತನಕ ಸ್ವಾಮಿ ಸ್ವಾಮಿ ಕೊರಗಜ್ಜ ದೈವದ ಹರಕೆ

ಅರಂತೋಡು : ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಸ್ವಾಮಿ ಕೊರಗಜ್ಜ ದೈವದ ಕೋಲ Read More »

ಸುಳ್ಯದಲ್ಲಿ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ, ಮರಾಟಿ ಬಾಂಧವರು ಸಂಘಟಿತರಾಗಬೇಕು- ತಿಮ್ಮಪ್ಪ ನಾಯ್ಕ್

ಮರಾಟಿಗರು ಇನ್ನಷ್ಟು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.ಮರಾಟಿಭಾಷೆಯನ್ನು ಮಾತನಾಡಿ,ಭಾಷೆಯನ್ನು ಬೆಳೆಸಬೇಕು ಎಂದು ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಹೇಳಿದರು.ಅವರು ಇಂದು ಗಿರಿದರ್ಶಿನಿ ಸಭಾಭವನದ ವಠಾರದಲ್ಲಿ ನಡೆದ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡಿದರು.ಇಂತಹ ಕ್ರೀಡಾಕೂಟಗಳ ಸಂಘಟನೆಯಿಂದ ಮರಾಟಿ ಸಮಾಜದ ಸಂಘಟನೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆಯ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಟಿ ಸಮಾಜದ

ಸುಳ್ಯದಲ್ಲಿ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ, ಮರಾಟಿ ಬಾಂಧವರು ಸಂಘಟಿತರಾಗಬೇಕು- ತಿಮ್ಮಪ್ಪ ನಾಯ್ಕ್ Read More »

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾವಿತ್ರಿ ಐ ಭಟ್ ಆಯ್ಕೆ

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾವಿತ್ರಿ ಐ ಭಟ್ ಹಾಗೂ ಉಪಾಧ್ಯಕ್ಷರಾಗಿ ಮೀನಾಕ್ಷಿ ಕುದ್ಕುಳಿ ದೊಡ್ಡಕುಮೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಎಲ್ಲಾ ನಿರ್ದೇಶಕ ಸ್ಥಾನಗಳಿಗೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲಾ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯಿತು. ಜನವರಿ 22ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ನಿರ್ದೇಶಕರುಗಳಾಗಿ ಸರೋಜ ಕೋಣಗುಂಡಿ, ಸುಶೀಲ ಕೋಣಗುಂಡಿ, ರಾಧಮ್ಮ ಪಡ್ಡು, ಕೆ ಎಮ್ ಶೇಷಮ್ಮ ಕುಂಟುಕಾಡು, ಲೀಲಾವತಿ ಮುಪ್ಪಸೇರು, ಎಂ ಟಿ

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾವಿತ್ರಿ ಐ ಭಟ್ ಆಯ್ಕೆ Read More »

ದೆಹಲಿ ಚುನಾವಣೆ ಬಿಜೆಪಿ ಮುನ್ನಡೆ,ಬಿಜೆಪಿಯಿಂದ ವಿಜಯೋತ್ಸವ ಆಚರಣೆ

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿ ಮುಂದೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷಚಾರಣೆಯನ್ನು ವ್ಯಕ್ತಪಡಿಸಿದರು.ಸ್ಥಳೀಯ ಬಿಜೆಪಿ ನಾಯಕರು ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷದ ಅಭಿಮಾ‌‌ನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ದೆಹಲಿ ಚುನಾವಣೆ ಬಿಜೆಪಿ ಮುನ್ನಡೆ,ಬಿಜೆಪಿಯಿಂದ ವಿಜಯೋತ್ಸವ ಆಚರಣೆ Read More »

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುರಾಧಾ ಕುರುಂಜಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘ, ವಿಕಾಸದಕಾರ್ಯಕಾರಿ ಸಮಿತಿಗೆ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಈ ಸಮಿತಿಯು ಮುಂದಿನ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ Read More »

ಸಂಪಾಜೆ ಪೇರಡ್ಕ ಗೂನಡ್ಕ ಉರೂಸ್ ಸಮರೋಪ, ನಮ್ಮ ಕಾಯಕದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿ – ಸಯ್ಯದ್ ಝೈನುಲ್ ಆಬಿದಿನ್ ತಂಘಳ್ ದುಗ್ಗಲಡ್ಕ

ನಾವು ಮಾಡುವ ಕೆಲಸ ಅಥವಾ ಸೇವೆಯಲ್ಲಿ ವಂಚನೆ ಮೋಸ ಇರಬಾರದು. ಪ್ರಾಮಾಣಿಕವಾಗಿರಬೇಕು, ಯಜಮಾನನಿಗೆ ಯಾವತ್ತು ಮೋಸ ಮಾಡಬಾರದು ಅವರಿಗೆ ತೃಪ್ತಿಯಾಗುವಂತಾ ಸೇವೆ ಮತ್ತು ಕಾಯಕವಾಗಿರಬೇಕೆಂದು ಬಹು| ಸಯ್ಯದ್ ಝೈನುಲ್ ಆಬಿದೀನ್ ತಂಘಳ್ ದುಗ್ಗಲಡ್ಕ ಹೇಳಿದರು. ಅವರು ಫೆ.2 ರಂದು ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕ ಇದರ ಉರೂಸ್ ಸಮಾರೋಪ ಸಮಾರಂಭದಲ್ಲಿ ದುವಾಶೀರ್ವಾಚನ ಮಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ಸ್ಥಳೀಯ ಖತೀಬರಾದ

ಸಂಪಾಜೆ ಪೇರಡ್ಕ ಗೂನಡ್ಕ ಉರೂಸ್ ಸಮರೋಪ, ನಮ್ಮ ಕಾಯಕದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿ – ಸಯ್ಯದ್ ಝೈನುಲ್ ಆಬಿದಿನ್ ತಂಘಳ್ ದುಗ್ಗಲಡ್ಕ Read More »

ಅರಂಬೂರು : ಮಾ.15 ,16, 17 ಮತ್ತು 18 ರಂದು ವೈಭವದ  ಶ್ರೀ ವಯನಾಟ್ ಕಲವನ್ ದೈವಂಕಟ್ಟು ಮಹೋತ್ಸವ

ಅರಂತೋಡು, ಫೆ. 4 : ಮಾ.15 ,16, 17 ಮತ್ತು 18 ರಂದು   ಆಲೆಟ್ಟಿ ಗ್ರಾಮದ ಅರಂಬೂರು   ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಭಾರೀ ವೈಭವದಿಂದ ನಡೆಯಲಿದೆ ಎಂದು ಮಹೋತ್ಸವದ ಅಧ್ಯಕ್ಷರಾದ ಪಿ.ಬಿ ಸುಧಾರ ರೈ  ಹಾಗೂ ಇತರ ಪದಾಧಿಕಾರಿಗಳು ತಿಳಿಸಿದ್ದಾರೆ. ದೈವಸ್ತಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು  ಮಾತನಾಡಿದರು. ತೀಯಾ ಸಮಾಜದ ಆಡಳಿತಕ್ಕೆ ಒಳಪಡುವ ತಾಲೂಕಿನ ಏಕೈಕ ವಯನಾಟ್ ಕುಲವನ್ ದೈವಸ್ಥಾನವಾಗಿರುವ   ಅರಂಬೂರಿನಲ್ಲಿ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ, ಎಲ್ಲರ ಸಹಕಾರದಲ್ಲಿ

ಅರಂಬೂರು : ಮಾ.15 ,16, 17 ಮತ್ತು 18 ರಂದು ವೈಭವದ  ಶ್ರೀ ವಯನಾಟ್ ಕಲವನ್ ದೈವಂಕಟ್ಟು ಮಹೋತ್ಸವ Read More »

error: Content is protected !!
Scroll to Top