Uncategorized

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ

ಕಾಡುಕೋಣ ತಿವಿದು ರೈತರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಜಾಲ್ಸೂರಿನಿಂದ ವರದಿಯಾಗಿದೆ.ಜಾಲ್ಸೂರು ಗ್ರಾನದ ರವಿಶಂಕರ ಭಟ್‌ ಅವರು ಕಾಡುಕೋಣ ತಿವಿದು ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.ಜಾಲ್ಲೂರು ಗ್ರಾಮದ ನಂಗಾರು ಎಂಬಲ್ಲಿ ಇದೀಗ ಸಂಭವಿಸಿದೆ.ಜಾಲ್ಲೂರಿನ ನಂಗಾರು ರವಿಶಂಕರ ಭಟ್‌ರವರು ತನ್ನ ಮನೆಯ ತೋಟದಲ್ಲಿರುವಾಗ ಘಟನೆ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗುತ್ತಿದೆಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ Read More »

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು

ಸುಳ್ಯ ತಾಲೂಕಿನ ಅರಂತೋಡು ಗ್ತಾಮದ ಉಳುವಾರು ರಮೇಶ ಅವರ ಪತ್ನಿ ನಳೀನಿ(51)ಶಂಕಿತ ಇಲಿ ಜ್ವರದಿಂದ ಜು.31ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಪತಿ ರಮೇಶ್ ಸೇರಿದಂತೆ ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು Read More »

ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಮಹಿಳೆಯ ಬಂಧನ

ಬೆಂಗಳೂರಿನಲ್ಲಿ ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ 30 ವರ್ಷದ ಮಹಿಳೆಯನ್ನು ಎ.ಟಿ.ಎಸ್ ಪೊಲೀಸರು ಬಂಧಿಸಿದ್ದಾರೆ.ಶಂಕಿತ ಆರೋಪಿ ಶಮಾ ಪರ್ವೀನ್ ಬಂಧಿತ ಆರೋಪಿ.ಈಕೆ ಜಾರ್ಖಂಡ್ ಮೂಲದವಳಾಗಿದ್ದು, ಬೆಂಗಳೂರಿನ ಹೆಬ್ಬಾಳದ ಮನೋರಾಯಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.ಭಯೋತ್ಪಾದನೆಯ ಕಡೆಗೆ ಯುವಕರನ್ನು ಸೆಳೆಯುವುದಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡಲಾಗುತ್ತಿದ್ದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪ ಶಮಾ ಪರ್ವೀನ್ ಮೇಲಿದೆ.

ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಮಹಿಳೆಯ ಬಂಧನ Read More »

ನಾಪತ್ತೆಯಾದ ಯುವಕನ ದ್ವಿಚಕ್ರ ವಾಹನ,ಮೊಬೈಲ್ ಪೋನ್ ಪತ್ತೆ

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಡೇಶಿವಾಲಯ ಗ್ರಾಮದ ಕೊರತಿಗುರಿಯ ಯುವಕನೊರ್ವ ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆಯ ಜಕ್ರಿಬೆಟ್ಟು ಡ್ಯಾಂ ಬಳಿ ಅನಾಥವಾಗಿ ಪತ್ತೆಯಾಗಿದೆ.ಕಡೇಶಿವಾಲಯ ಗ್ರಾಮದ ಜಗದೀಶ್ ಆಚಾರ್ಯ ಅವರ ಪುತ್ರ ಹೇಮಂತ್ ಆಚಾರ್ಯ (28) ಜುಲೈ 28 ರಂದು ಫರಂಗಿಪೇಟೆಗೆ ಕೆಲಸಕ್ಕೆಂದು ತೆರಳಿದ ನಂತರ ನಾಪತ್ತೆಯಾಗಿದ್ದರು. ಆತನಿಗಾಗಿ ಹುಡುಕಾಟ ನಡೆಸಿದ ಕುಟುಂಬಸ್ಥರು ಜುಲೈ 29 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾಪತ್ತೆಯಾದ ಯುವಕನ ದ್ವಿಚಕ್ರ ವಾಹನ,ಮೊಬೈಲ್ ಪೋನ್ ಪತ್ತೆ Read More »

ಅರಂತೋಡು : ಮನೆಗೆ ಮರ ಬಿದ್ದು ಹಾನಿ

ಅರಂತೋಡು ಕಲ್ಲಗದ್ದೆ ಸುಧಾಕರ ರವರ ಮನೆಗೆ ರಾತ್ರಿ ಬೀಸಿದ ಬಾರಿ ಗಾಳಿಯಿಂದ ಹಿಂಬದಿ ಇರುವ ಮರ ಮನೆ ಮೇಲೆ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಪಿಡಿಒ ಜಯ ಪ್ರಕಾಶ್,ಗ್ರಾಮ ಲೆಕ್ಕಾಧಿಕಾರಿ ಶರತ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಂತೋಡು : ಮನೆಗೆ ಮರ ಬಿದ್ದು ಹಾನಿ Read More »

ಅರಂತೋಡು ಶಾದಿ ಮಹಲ್ ಬಳಿ ಭಾರಿ ಗಾತ್ರದ ಮರಬಿದ್ದು ರಸ್ತೆ ತಡೆ

ಅರಂತೋಡು ಉದಯನಗರ ಎಂಬಲ್ಲಿ ಹಾಸ್ಟೆಲ್ ಬಳಿರುವ ಬ್ರಹತ್ ಮರವೊಂದು ರಾತ್ರಿ ಬೀಸಿದ ಬಾರಿ ಗಾಳಿಗೆ ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡ ಸಮೀಪ ಬಿದ್ದು ರಸ್ತೆಗೆ ತಡೆ ಉಂಟಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರದಿಯಾಗಿದೆ. ತಕ್ಷಣವೇ ಶಾದಿ ಮಹಲ್ ಪಕ್ಕದ ಮನೆಯವರು ಮಜೀದ್ ಸಿಟಿ ಮೆಡಿಕಲ್ಸ್ ರವರಿಗೆ ತಿಳಿಸಿದರು.ತೆರವು ಗೊಳಿಸುವ ಕಾರ್ಯದಲ್ಲಿ ಖಾದರ್ ಮೊಟ್ಟoಗಾರ್, ನವಾಝ್,ಖಾದರ್, ಯು. ಎಸ್ ಜಿ ಶಾಮಿಯಾನ ಮನೀಶ್ ಉಳುವಾರು,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೇರ್, ಸುಕುಮಾರ ಉಳುವಾರು,

ಅರಂತೋಡು ಶಾದಿ ಮಹಲ್ ಬಳಿ ಭಾರಿ ಗಾತ್ರದ ಮರಬಿದ್ದು ರಸ್ತೆ ತಡೆ Read More »

ಧರ್ಮಸ್ಥಳದಲ್ಲಿ ಅನಾಮಧೇಯ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಕಾರ್ಯಾಚರಣೆ ಅಂತ್ಯ

ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ವ್ಯಕ್ತಿಯೊಬ್ವರು ಗುರುತಿಸಿದ ಮೊದಲ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಅಧಿಕಾರಿಗಳು ಅಂತ್ಯಗೊಳಿಸಿದ್ದಾರೆ. ಆ ವ್ಯಕ್ತಿನ ತೋರಿಸಿದ 13 ಸ್ಥಳಗಳ ಪೈಕಿ ಒಂದನೇ ಸ್ಥಳವನ್ನು ಮೊದಲು ಜನರ ಸಹಾಯದಿಂದ 4 ಅಡಿ ಅಗೆಸಲಾಗಿದ್ದು, ಏನೂ ಸಿಗದಿದ್ದಾಗ ಆತನ ಮನವಿ ಮೇರೆಗೆ ಹಿಟಾಚಿ ಮೂಲಕ 15 ಅಡಿ ಅಗಲ, 8 ಅಡಿ ಆಳ ಅಗೆಸಲಾಯಿತು. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಶ್ವಾನದಳ ಸ್ಥಳ ಪರಿಶೀಲಿಸಿದರೂ ಯಾವುದೇ ಕುರುಹು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಧರ್ಮಸ್ಥಳದಲ್ಲಿ ಅನಾಮಧೇಯ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಕಾರ್ಯಾಚರಣೆ ಅಂತ್ಯ Read More »

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ನಾಗರಪಂಚಮಿ ಆಚರಣೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ನಾಗನಮೂಲೆ ನಾಗನಕಟ್ಟೆಯಲ್ಲಿ ಮತ್ತು ದೇವಳ ಸಮೀಪದ ನಾಗನಕಟ್ಟೆಯ ನಾಗನಕಲ್ಲಿಗೆ ನಾಗರ ಪಂಚಮಿ ಪ್ರಯುಕ್ತ ಹಾಲೆರೆದು,ಸಿಯಾಳಭಿಷೇಕ ಮಾಡಿ ನಾಗತಂಬಿಲ ನಡೆಸಿ ಪೂಜೆ ಸಲ್ಲಿಸಲಾಯಿತು. ದೇವಳ ಪ್ರಧಾನ ಅರ್ಚಕ ಕೇಶವಮೂರ್ತಿ,ಶ್ರೀನಿಧಿ ಪೂಜಾ ಕಾರ್ಯಕ್ರಮ ನಡೆಸಿದರು. ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು‌.ಕೆ , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕಕ್ರಷ್ಣ ಕುಂಟುಕಾಡು(ಕರಿಮಜಲು)ಮಾಲತಿ ಬೋಜಪ್ಪ,ಚಂಚಲಾಕ್ಷಿ,ತಿಮ್ಮಯ್ಯ ಮೆತ್ತಡ್ಕ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಪೆತ್ತಾಜೆ,ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ,ತೊಡಿಕಾನ ಮಲ್ಲಿಕಾರ್ಜುನ ಭಜನಾ

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ನಾಗರಪಂಚಮಿ ಆಚರಣೆ Read More »

ಬೆಳ್ತಂಗಡಿ : ಇಂದು ಹೂತು ಹಾಕಿದ ಆಸ್ತಿಪಂಜರ ಹೊರತೆಗೆಯುವ ಕಾರ್ಯ

:ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ಎಸ್.ಐ.ಟಿ ಯ ಉನ್ನತ ಮೂಲಗಳು ಮಾಹಿತಿ ನೀಡಿದೆ.ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಮಂಗಳೂರು KMC ಆಸ್ಪತ್ರೆಯ ಇಬ್ಬರು ನುರಿತ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ತಂಡ ಕೂಡ ಎಸ್.ಐ.ಟಿ ಆದೇಶದ ಮೇರೆಗೆ ಆಗಮಿಸಿ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆಗೆ ತಯಾರಿ ಮಾಡುತ್ತಿದ್ದಾರೆ.

ಬೆಳ್ತಂಗಡಿ : ಇಂದು ಹೂತು ಹಾಕಿದ ಆಸ್ತಿಪಂಜರ ಹೊರತೆಗೆಯುವ ಕಾರ್ಯ Read More »

ಸುಳ್ಯ : ಗೌಡರ ಯುವ ಸೇವಾ ಸಂಘ,ಮಹಿಳಾ ಘಟಕದಿಂದ ಸಾಂಧೀಪ್ ಶಾಲೆಯಲ್ಲಿ ವರ್ಷ ಸಂಭ್ರಮ ಕಾರ್ಯಕ್ರಮ

ಗೌಡರ ಯುವ ಸೇವಾ ಸಂಘ ಸುಳ್ಯ, ತಾಲೂಕು ಗೌಡ ಮಹಿಳಾ ಘಟಕ ಸುಳ್ಯ ಇದರ ಆಶ್ರಯದಲ್ಲಿ ಮಹಿಳಾ ಘಟಕದ “ವರ್ಷ ಸಂಭ್ರಮ” ಕಾರ್ಯಕ್ರಮ ಸಾಂದೀಪ್ ವಿಶೇಷ ಶಾಲೆಯಲ್ಲಿ ಜು.28 ರಂದು ನಡೆಯಿತು.ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ವಿನುತಾ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಡಾ.ಸಾಯಿಗೀತ ಜ್ಞಾನೇಶ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್.ಗಂಗಾಧರ್, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷರಾದ ಪಿ.ಸಿ ಜಯರಾಮ, ರಾಜ್ಯಮಟ್ಟದ

ಸುಳ್ಯ : ಗೌಡರ ಯುವ ಸೇವಾ ಸಂಘ,ಮಹಿಳಾ ಘಟಕದಿಂದ ಸಾಂಧೀಪ್ ಶಾಲೆಯಲ್ಲಿ ವರ್ಷ ಸಂಭ್ರಮ ಕಾರ್ಯಕ್ರಮ Read More »

error: Content is protected !!
Scroll to Top