May 20, 2026

ದಿ. ಪ್ರವೀಣ್ ಪಾನತ್ತಿಲ ಬೆದ್ರುಪಣೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಚೆಸ್ಕಾಂ ಪ್ರಭಾರ ಸಹಾಯಕ ಇಂಜಿನಿಯರ್ ಆಗಿದ್ದ ಪ್ರವೀಣ್ ಪಾನತ್ತಿಲ ಬೆದ್ರುಪಣೆ ಇವರ ವೈಕುಂಠ ಸಮಾರಾಧನಾ ಕಾರ್ಯಕ್ರಮ ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಶ್ರೀ ಭವಾನಿ ಶಂಕರ ಅಡ್ತಲೆ ಇವರು ನುಡಿನಮನ ಸಲ್ಲಿಸಿದರು. ಮೃತರ ತಾಯಿ ಪೂವಮ್ಮ , ಪತ್ನಿ ರೇಖಾ, ಮಗ ಮೌರ್ಯ, ತಂಗಿ ಪ್ರಮೀಳ ಭಾವ ಮೋಹನ್ ಹಾಗೂ ಮನೆಯವರು , ಸಂಬಂಧಿಕರು, ಕುಟುಂಬಸ್ಥರು ಭಾಗವಹಿಸಿ ನುಡಿನಮನ ನಮನ ಸಲ್ಲಿಸಿದರು.

ದಿ. ಪ್ರವೀಣ್ ಪಾನತ್ತಿಲ ಬೆದ್ರುಪಣೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ Read More »

ಪಂಜ :ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಕೃತಿ ಅಧ್ಯಯನ ಚಾರಣ ಶಿಬಿರ,ಚಾರಣಿಗರನ್ನು ಸ್ವಾಗತಿಸಿ ದೇವಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ.ಡಾ.ದೇವಿಪ್ರಸಾದ್ ಕಾನತೂರು

ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ವತಿಯಿಂದ ರಾಜ್ಯಮಟ್ಟದ ರೋವರ್ಸ್ ರೇಂಜರ್ಸ್ ಮತ್ತು ಸೌಟ್ಸ್-ಗೈಡ್ಸ್ ಪ್ರಕೃತಿ ಅಧ್ಯಯನ ಚಾರಣ ಶಿಬಿರ ನಡೆಯಿತು. ತಂಡ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಒಂದು ದಿನ ವಾಸ್ತವ್ಯ ನಡೆಯಿತು . ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರು ತಂಡವನ್ನು ಸ್ವಾಗತಿಸಿದರು.

ಪಂಜ :ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಕೃತಿ ಅಧ್ಯಯನ ಚಾರಣ ಶಿಬಿರ,ಚಾರಣಿಗರನ್ನು ಸ್ವಾಗತಿಸಿ ದೇವಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ.ಡಾ.ದೇವಿಪ್ರಸಾದ್ ಕಾನತೂರು Read More »

ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿರುವುದು ಅರೆಭಾಷಿಕರಿಗೆ ಸಂದ ಗೌರವ : ಹೊದ್ದೆಟ್ಟಿ ಭವಾನಿಶಂಕರ

ನಮ್ಮೇಲ್ಲರ ಪ್ರಯತ್ನದಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿದೆ‌.ಇದು ಅರೆಭಾಷಿಕರಿಗೆ ಸಂದ ಗೌರವ ಎಂದು ಅರೆಭಾಷೆಯ ಮೊದಲಿನ ಕವಿ ಹೊದ್ದೆಟ್ಟಿ ಭವಾನಿಶಂಕರ ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ,ಅರೆಭಾಷೆ ಸಂಸ್ಕೃತಿ ಮತ್ರು ಸಾಹಿತ್ಯ ಸಂಘ ಸರಕಾರಿ ಪ್ರಥಮ ಕಾಲೇಜು ಕೊಡಿಯಾಲಬೈಲು ಇವರ ಆಶ್ರಯದಲ್ಲಿ ಕೊಡಿಯಾಲಬೈಲು ಪ್ರಥಮ‌ ದರ್ಜೆ ಕಾಲೇಜಿನ ಸಭಾ ಭವನದಲ್ಲಿ ನಡೆದ ಅರೆಭಾಷೆಯ ಮೊದಲಿನ ಕವಿ ಹೊದ್ದೆಟ್ಟಿ ಭವಾನಿಶಂಕರ ಅವರ ಸಾಹಿತ್ಯಾವಲೋಕನ ಮತ್ತು ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿರುವುದು ಅರೆಭಾಷಿಕರಿಗೆ ಸಂದ ಗೌರವ : ಹೊದ್ದೆಟ್ಟಿ ಭವಾನಿಶಂಕರ Read More »

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು

ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ಜಗದೀಶ್ ಎಂಬುವವರು ಕಣಜದ ಹುಳು ಕಡಿದು ಸಾವನ್ನಪ್ಪಿದ ಘಟನೆ ಮೇ 19ರಂದು ವರದಿಯಾಗಿದೆ.ತಮ್ಮ ತೋಟದಲ್ಲಿ ಕಳೆ ಕಟಾವು ಯಂತ್ರದಲ್ಲಿ ಕಾಡು ಕಡಿಯುತ್ತಿದ್ದ ಸಂದರ್ಭ ಕಣಜದ ಹುಳದ ಗುಂಪು ಕಚ್ಚಿ ಗಂಭೀರ ಗಾಯಗೊಂಡ ಬಳಿಕ ಸ್ಥಳೀಯರು ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು Read More »

error: Content is protected !!
Scroll to Top