June 2, 2026

ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಸಂಜೆ ವೇಳೆ ದಿಢೀರನೆ ಆರಂಭವಾದ ಭಾರೀ ಮಳೆಗೆ ಇಡೀ ನಗರವೇ ಕಂಗೆಟ್ಟಿದೆ. ಪ್ರಮುಖ ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡಿದ್ದು, ಕಚೇರಿಗಳಿಂದ ಮನೆಗೆ ಮರಳುತ್ತಿದ್ದ ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಯಿತು. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಳೆಯ ಅಬ್ಬರಕ್ಕೆ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ Read More »

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಜಾಕೆ ಸದಾನಂದ-ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆ

ಸುಳ್ಯ: ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ ೨೦೨೬-೨೭ನೇ ಸಾಲಿನ ಅಧ್ಯಕ್ಷರಾಗಿ ಜಾಕೆ ಸದಾನಂದ, ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆಯಾದರು.ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಅಧ್ಯಕ್ಷ ಜಾಕೆ ಸದಾನಂದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.ಖಜಾಂಜಿಯಾಗಿ ಶ್ರೀನಿವಾಸ ಭಟ್ ಡಿ., ಉಪಾಧ್ಯಕ್ಷರಾಗಿ ರಾಮಚಂದ್ರ ಬುಡ್ಲೆಗುತ್ತು, ಜತೆಕಾರ್ಯದರ್ಶಿಯಾಗಿ ಜಯರಾಮ ರೈ ಕೆ., ನಿರ್ದೇಶಕರುಗಳಾಗಿ ಎ.ದೇರಣ್ಣ ಗೌಡ, ರಾಮಚಂದ್ರ ಎಂ., ಶ್ಯಾಂಕುಮಾರ್ ಎಂ.ಎಸ್., ಮೋನಪ್ಪ ಕೆ.ಎಂ., ವಸಂತ ಕೆ.ಎಸ್., ಜನಾರ್ದನ ಗೌಡ ಬರೆಮೇಲು,

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಜಾಕೆ ಸದಾನಂದ-ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆ Read More »

ಕಿರ್ಲಾಯ : ಕಾಡಾನೆಗಳಿಂದ ಕೃಷಿ ನಾಶ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರ್ಲಾಯ ಭಾಗದಲ್ಲಿ ಜೂ.1ರಂದು ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಪಾರ ಕೃಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ.ಈ ಭಾಗದ ಕಿರ್ಲಾಯ ಕಿಶೋರ್ ಕುಮಾರ್ ಅವರಿಗೆ ಸೇರಿದ ಮೂರು ತೆಂಗಿನ ಮರ,ಒಂದು ಜೀಕುಜ್ಜೆ ಮರ, ಇಪ್ಪತ್ತು ಬಾಳೆ ಗಿಡಗಳನ್ನು ನಾಶ ಮಾಡಿವೆ.ಅಲ್ಲದೆ ನೆರೆಯ ಕೃಷಿಕರಾದ ಗಣೇಶ ಕಿರ್ಲಾಯ,ಕೆ.ಆರ್.ದಿನೇಶ,ಹರೀಪ್ರಸಾದ್ ಕಲ್ಲುಗದ್ದೆ,ನಾಗಪ್ಪ ಗೌಡ ಗುಂಡ್ಲ ಇತರ ತೋಟಗಳಿಗೆ ಆನೆಗಳು ನುಗ್ಗಿ ಕೃಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ‌.

ಕಿರ್ಲಾಯ : ಕಾಡಾನೆಗಳಿಂದ ಕೃಷಿ ನಾಶ Read More »

ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಒಂದು ಕೇಜಿ ಬೆಳ್ಳಿ ಹರಕೆ ಒಪ್ಪಿಸಿದ ದಂಪತಿ

ಸುಳ್ಯ ನಾವೂರು ಕಲ್ಕುಡ ದೈವಸ್ಥಾನಕ್ಕೆ ನಿವೃತ್ತ ಶಿಕ್ಷಕರೊಬ್ಬರು 2.60 ಲಕ್ಷ ಮೌಲ್ಯದ 1 ಕೆ.ಜಿ ಬೆಳ್ಳಿಯನ್ನು ಹರಕೆಯ ರೂಪದಲ್ಲಿ ನೀಡಿದ್ದಾರೆ.ಸುಳ್ಯ ಅಂಬಟೆಡ್ಕದ ನಿವಾಸಿಯಾಗಿರುವ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕರಾದ ವಿಶಾಲಾಕ್ಷ ಮತ್ತು ಮುಕ್ತಾ ದಂಪತಿಯವರು ಹರಕೆಯ ಬಾಬ್ತು ದೈವದ ಮಣೆ ಮಂಚದ ಹೊದಿಕೆಗಾಗಿ ಸುಮಾರು ರೂ. 2.60 ಲಕ್ಷ ಮೌಲ್ಯದ ಬೆಳ್ಳಿಯನ್ನು ಒಪ್ಪಿಸಿದರು‌.ಈ ಸಂದರ್ಭದಲ್ಲಿ ಧರ್ಮ ದರ್ಶಿ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯವರು ಉಪಸ್ಥಿತರಿದ್ದರು.

ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಒಂದು ಕೇಜಿ ಬೆಳ್ಳಿ ಹರಕೆ ಒಪ್ಪಿಸಿದ ದಂಪತಿ Read More »

error: Content is protected !!
Scroll to Top