Author name: Tejas

ಸಂಪಾಜೆ : ಕಾಡಾನೆಗಳಿಂದ ಬೆಳೆ ನಾಶ

ಸಂಪಾಜೆ ಗ್ರಾಮದ ಕರುಣಾಕರ ಎಸ್.ಪಿ ಅವರ ತೋಟಕ್ಕೆ ದಾಳಿ ಮಾಡಿದ ಆನೆಗಳ ಹಿಂಡು ಅಪಾರ ಪ್ರಮಾಣದ ಕ್ರಷಿಯನ್ನು ನಾಶಪಡಿಸಿದ ಘಟನೆ ವರದಿಯಾಗಿದೆ.ಅಡಿಕೆ,ತೆಂಗು,ಬಾಳೆ ಇತರ ಬೆಳೆಗಳ‌ನ್ನು ನಾಶ ಪಡಿಸಿವೆ ಎಂದು ತಿಳಿದು ಬಂದಿದೆ.ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿವೆ.

ಸಂಪಾಜೆ : ಕಾಡಾನೆಗಳಿಂದ ಬೆಳೆ ನಾಶ Read More »

ನಾಳೆ ಬಳ್ಪ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೊಳ್ಳಿಮೂರ್ತ

ಬಲ್ಪ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ದಲ್ಲಿ ನಾಳೆ 7-3-26 ಶನಿವಾರ ಪೂರ್ವಹ್ನ 10 ರಿಂದ ಕೊಳ್ಳಿ ಮುಹೂರ್ತ ನಡೆಯಲಿದೆ ಒತ್ತೆಕೋಲ ಏಪ್ರಿಲ್ 27,28 ರಂದು ನಡೆಯಲಿದೆ ನಾಳೆ ನಡೆಯುವ ಕೊಳ್ಳಿ ಮುಹೂರ್ತಕ್ಕೆ ಭಕ್ತದಿಗಳೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ.

ನಾಳೆ ಬಳ್ಪ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೊಳ್ಳಿಮೂರ್ತ Read More »

ಪಿಸ್ತೂಲ್ ತೋರಿಸಿ ಗುಂಡು ಹಾರಿಸಲು ಯತ್ನಿಸಿದ ಯುವಕನ ಬಂಧನ

ಪುತ್ತೂರಿನ ರಿಲಯನ್ಸ್ ಮಾಲ್ ಬಳಿ ಕಾರು ಚಾಲಕರೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ, ಗುಂಡು ಹಾರಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಯುವಕನೊಬ್ಬನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಪುತ್ತೂರು ನಿವಾಸಿ ಮಹಮ್ಮದ್ ಶಫೀಕ್‌ (19) ಎಂದು ಎಂದು ತಿಳಿದು ಬಂದಿದೆ.ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಎಂಬವರು ನೀಡಿದ ದೂರಿನ ಪ್ರಕಾರ, ಈ ಘಟನೆಯು ಮಾರ್ಚ್ 2ರ ಮಧ್ಯಾಹ್ನ ಸಂಭವಿಸಿದೆ. ಹಕೀಂ ಅವರು ಪುತ್ತೂರಿನಿಂದ ಕೂರ್ನಡ್ಕಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಹೆಲ್ಮೆಟ್ ಧರಿಸದ ಸುಮಾರು ೩೦ ವರ್ಷದ

ಪಿಸ್ತೂಲ್ ತೋರಿಸಿ ಗುಂಡು ಹಾರಿಸಲು ಯತ್ನಿಸಿದ ಯುವಕನ ಬಂಧನ Read More »

ಹೆಚ್ .ಪಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ಆದೇಶ

ಸುಳ್ಯ : ಹೆಚ್ .ಪಿ ಗ್ಯಾಸ್ ಬಳಕೆದಾರರು ಇನ್ನು ಮುಂದೆ ತಮ್ಮ ಇಚ್ಛೆಯಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲ.ಗ್ರಾಹಕರ ಬಳಿ ಇರುವ ಸಿಲಿಂಡರ್ ಗಳ ಸಂಖ್ಯೆಗೆ ಅನುಗುಣವಾಗಿ ಬುಕ್ಕಿಂಗ್ ಅವಧಿಯನ್ನು ನಿಗದಿ ಮಾಡಿದೆ.ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರ ಸಿಲಿಂಡರ್ ವಿತರಣೆ 21 ದಿನಗಳ ನಂತರ ಮುಂದಿನ ರೀಫಿಲ್ ಬುಕ್ ಮಾಡಲು ಅವಕಾಶವಿರುತ್ತದೆ.ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರ ಸಿಲಿಂಡರ್ ಖಾಲಿಯಾದ ನಂತರ ಮುಂದಿನ ಬುಕ್ಕಿಂಗ್ ಮಾಡಲು ಕನಿಷ್ಠ 30 ದಿನಗಳ ಅಂತರವಿರಬೇಕು* .ಜೊತೆಗೆ ಬಯೋಮೆಟ್ರಿಕ್ ಇ -ಕೆವೈಸಿ

ಹೆಚ್ .ಪಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ಆದೇಶ Read More »

ಇಫ್ತಾರ್ ಕೂಟ ಆಯೋಜಿಸಿದ ಮಂಜುನಾಥ ರೈ ಬೇಲ್ಯ ಅವರಿಗೆ ಸನ್ಮಾನ

ಅಜ್ಜಾವರ ಮೇನಾಲ ಜಮಾತ್ ವತಿಯಿಂದ ದಿನಾಂಕ 26 ನೇ ಸೋಮವಾರ ಸಂಜೆ ಮೇನಲದ ವಲಿಯುಲ್ಲಾಹಿ ದುರ್ಗಾ ಶರೀಫ್ ಇದರ ಅಂಕಣದಲ್ಲಿ ಶ್ರೀ ಮಂಜುನಾಥ ರೈ ಬೇಲ್ಯ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಅಜ್ಜಾವರ ಮೇಲದ ಪ್ರತಿಷ್ಠಿತ ಊರೂಸ್ ಸಂದರ್ಭದಲ್ಲಿ ವಿಶೇಷ ಸಹಾಯವನ್ನು ನೀಡುತ್ತಿರುವ ಮಂಜುನಾಥ್ ಬೇಲ್ಯ ಅವರು ಇತ್ತೀಚೆಗೆ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಸೌಹಾರ್ದತೆಯನ್ನು ಮೆರೆದಿದ್ದರು. ಮಂಜುನಾಥ ರೈ ಹೇಳುವಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಾನು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದೇನೆ. ಆದರೆ ನಾನು ಯಾವುದೇ ಸನ್ಮಾನವನ್ನು

ಇಫ್ತಾರ್ ಕೂಟ ಆಯೋಜಿಸಿದ ಮಂಜುನಾಥ ರೈ ಬೇಲ್ಯ ಅವರಿಗೆ ಸನ್ಮಾನ Read More »

ರೋಚಕ ಗೆಲುವಿನೊಂದಿಗೆ ಪೈನಲ್ ಪ್ರವೇಶಿಸಿದ ಭಾರತೀಯ ಕ್ರಿಕೆಟ್ ತಂಡ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ ಸಂಜು ಸ್ಯಾಟ್ಸನ್ 42 ಎಸೆತಗಳಲ್ಲಿ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಈ ಪ್ರದರ್ಶನದಿಂದ ಭಾರತ ತಂಡವು ಇಂಗ್ಲೆಂಡ್ ತಂಡಕ್ಕೆ 254 ರನ್‌ಗಳ ಬೃಹತ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 7 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಸೋಲು ಕಂಡಿತು.ಈ ಮೂಲಕ ಟೀಂ ಇಂಡಿಯಾ 8 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ

ರೋಚಕ ಗೆಲುವಿನೊಂದಿಗೆ ಪೈನಲ್ ಪ್ರವೇಶಿಸಿದ ಭಾರತೀಯ ಕ್ರಿಕೆಟ್ ತಂಡ Read More »

ಭಾರತೀಯ ಕ್ರಿಕೆಟ್ ತಂಡದ ಅಬ್ಬರದ ಬ್ಯಾಟಿಂಗ್, ಇಗ್ಲೆಂಡ್ ತಂಡಕ್ಕೆ 253 ರನ್ ಟಾರ್ಗೆಟ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ ಸಂಜು ಸ್ಯಾಟ್ಸನ್ 42 ಎಸೆತಗಳಲ್ಲಿ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಇಶಾನ್ ಕಿಶನ್ 18 ಎಸೆತಗಳಲ್ಲಿ 39 ರನ್, ದುಬೆ 25 ಬಾಲ್‌ಗೆ 43 ರನ್, ತಿಲಕ್ ವರ್ಮಾ 7 ಬಾಲ್‌ಗೆ 21 ರನ್ ಗಳಿಸಿದರು. ಈ ಉತ್ತಮ ಪ್ರದರ್ಶನದ ಮೂಲಕ ಭಾರತ ತಂಡವು ಇಂಗ್ಲೆಂಡ್ ತಂಡಕ್ಕೆ 253 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.

ಭಾರತೀಯ ಕ್ರಿಕೆಟ್ ತಂಡದ ಅಬ್ಬರದ ಬ್ಯಾಟಿಂಗ್, ಇಗ್ಲೆಂಡ್ ತಂಡಕ್ಕೆ 253 ರನ್ ಟಾರ್ಗೆಟ್ Read More »

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಮಡಿಕೇರಿಯಲ್ಲಿ ವ್ಯಕ್ತಿಯೊಬ್ಬರು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ‌.ಆಮೆಮನೆ ದೇವಿಪ್ರಸಾದ್ (43 ವರ್ಷ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ‌‌ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಬದಿ ಬಡಾವಣೆ ರಸ್ತೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪನ್ಯಾಸಕಿ ಪತ್ನಿ ಕವಿತಾ, ನಗರ ಠಾಣೆ ಅಧಿಕಾರಿ ಅನ್ನಪೂರ್ಣ, ಡಿವೈಎಸ್ ಪಿ ಸೂರಜ್,ಸರ್ಕಲ್ ಇನ್ಸ್‌ಪೆಕ್ಟ‌ರ್ ರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ Read More »

ಕೊರಂಬಡ್ಕ : ಶ್ರೀ ನಾಗಬ್ರಹ್ಮ ಅದಿಮೋಗೇರ್ಕಳ, ಗುಳಿಗ, ಕೊರಗಜ್ಜ ಕ್ಷೇತ್ರದ ನೇಮೋತ್ಸವ ಸಮಿತಿ ರಚನೆ

ಸುಳ್ಯ ಜಯನಗರದ ಕೊರಂಬದ್ಕದಲ್ಲಿರುವ ಶ್ರೀ ನಾಗಬ್ರಮ್ಮ ಅದಿಮೊಗೇರ್ಕಳ, ಗುಳಿಗ, ಕೊರಗಜ್ಜ ಕ್ಷೇತ್ರದಲ್ಲಿ ಇತ್ತೀಚೆಗೆ ನೇಮೋತ್ಸವ ಮತ್ತು ಆಡಳಿತ ವ್ಯವಸ್ಥಾಪನ ಸಮಿತಿಯ ಜಂಟಿ ಸಭೆ ನಡೆಯಿತು.ಸಭೆಯಲ್ಲಿ ಉತ್ಸವ ಸಮಿತಿಯನ್ನು ನೂತನವಾಗಿ ರಚಿಸಲಾಯಿತು.ಗೌರವಧ್ಯಕ್ಷರಾಗಿ ರಮೇಶ್ ಇರಂತಮಜಲು, ಅಧ್ಯಕ್ಷರಾಗಿ ಸೋಮಶೇಖರ ದೋಳ ಎರಡನೇ ಬಾರಿಗೆ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಪ್ರಸನ್ನ ಕುದ್ಪಾಜೆ, ಉಪಾಧ್ಯಕ್ಷ ದಯಾನಂದ ಕುದ್ಪಾಜೆ. ಖಜಾಂಜಿಯಾಗಿ ಪ್ರಶಾಂತ್ ಕುದ್ಪಾಜೆ ಮತ್ತು ಜೊತೆಕಾರ್ಯದರ್ಶಿಯಾಗಿ ಸಚಿನ್ ಕೊಯಿಂಗೋಡಿ i ಆಯ್ಕೆ ಆದರು.ಇದೇ ಸಭೆಯಲ್ಲಿ ಮಹಿಳಾ ಸಮಿತಿಯನ್ನೂ ರಚಿಸಲಾಯಿತು. ಮಹಿಳಾ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಿ

ಕೊರಂಬಡ್ಕ : ಶ್ರೀ ನಾಗಬ್ರಹ್ಮ ಅದಿಮೋಗೇರ್ಕಳ, ಗುಳಿಗ, ಕೊರಗಜ್ಜ ಕ್ಷೇತ್ರದ ನೇಮೋತ್ಸವ ಸಮಿತಿ ರಚನೆ Read More »

ಅಡುಗೆ ವಿಚಾರವಾಗಿ ಅತ್ತೆ ಸೊಸೆ ಜಗಳ,ಸೊಸೆ ನೇಣು ಬಿಗಿದು ಆತ್ಮಹತ್ಯೆ

ಅಡುಗೆ ವಿಷಯದಲ್ಲಿ ಅತ್ತೆ ಜೊತೆ ಜಗಳವಾಗಿ ಸೊಸೆಯೊಬ್ಬರು ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟೆಕ್ಕಿ ಸುಷ್ಮಾ(35) ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ.ಸುಷ್ಮಾ ಅವರು ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು ಮತ್ತು ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಸಣ್ಣಪುಟ್ಟ ವಿಷಯಗಳಿಗೆ ಮನೆಯಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ನಡುವೆ ಅಡುಗೆ ಮಾಡುವ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ.ಕಲ್ಪನಾ ಅವರು ಸುಷ್ಮಾ ಅವರಿಗೆ ಅಡುಗೆ

ಅಡುಗೆ ವಿಚಾರವಾಗಿ ಅತ್ತೆ ಸೊಸೆ ಜಗಳ,ಸೊಸೆ ನೇಣು ಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top