Author name: Tejas

ದೈವ ನರ್ತಕನ ಹೊಡೆದು ಕೊಲೆ

ಕಾಸರಗೋಡು ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ನರ್ತಕ. ಸತೀಶನ್ ಯಾನೆ ಬಿಜು (46) ಅವರ ಸಾವು ಕೊಲೆಯೆಂದು ತನಿಖೆಯಲ್ಲಿ ತಿಳಿದುಬಂದಿದ್ದು, ಆರೋಪಿಯಾದ ಸ್ನೇಹಿತ ಚಿದಾನಂದನನ್ನು (32) ಪೊಲೀಸರು ಬಂಧಿಸಿದ್ದಾರೆ.ಚೋಮಣ್ಣ ಎಂಬವರ ಮನೆಯಲ್ಲಿ ಜೂ.9 ರಂದು ಚಿದಾನಂದ ಹಾಗೂ ಸತೀಶನ್‍ ಇಬ್ಬರು ಮದ್ಯ ಸೇವಿಸುತ್ತಿದ್ದರು. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಈ ಸಂದರ್ಭ ಚಿದಾನಂದ ಸತೀಶನ್ ಅವರನ್ನು ಕೆಳಗೆ ತಳ್ಳಿದ್ದಾನೆ. ಸತೀಶನ್‍ ತಲೆಗೆ ಗಾಯವಾಗಿದೆ. ಸತೀಶನ್‍ ಮನೆಗೆ ಬಾರದ್ದನ್ನು ಕಂಡು […]

ದೈವ ನರ್ತಕನ ಹೊಡೆದು ಕೊಲೆ Read More »

ಸುಳ್ಯ : ಬಸ್ಸು ಟಿಪ್ಪರ್ ಅಪಘಾತ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 272ರಲ್ಲಿ ಸುಳ್ಯದ ಓಡಾಬೈ ನಲ್ಲಿ ಜೂ.14 ರಂದು ಮುಂಜಾನೆ ಕೆ ಎಸ್ ಆರ್ ಟಿ ಸಿ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.ಸುಳ್ಯ ಕಡೆಗೆ ಬರುತ್ತಿದ್ದ ಬಸ್ ಹಾಗೂ ಸುಳ್ಯ ದಿಂದ ಪೈಚಾರ್ ಕಡೆಗೆ ಹೋಗುತ್ತಿದ್ದ ಟಿಪ್ಪರ್ ನಡುವೆ ಈ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸುಳ್ಯ : ಬಸ್ಸು ಟಿಪ್ಪರ್ ಅಪಘಾತ Read More »

ಒಂದು‌ ತೆಂಗಿನ ಕಾಯಿ ತೂಕ ಎಷ್ಟು ನೋಡಿ,ನಿಮಗೆ ಅಚ್ಚರಿ ಆಗಬಹುದು!

ಕಡಬ ತಾಲೂಕಿನ ರಾಮಕುಂಜ ಗ್ರಾಮದ ದೇರೆಜಾಲು ಮನೆಯ ಪ್ರವೀಣ ಎಂಬವರ ತೋಟದಲ್ಲಿ ಒಂದು ದೊಡ್ಡ ಗಾತ್ರದ ತೆಂಗಿನ ಕಾಯಿ ದೊರೆತ್ತಿದೆ. ಇದರ 1.620 ಗ್ರಾಮ್ ಇದೆ. ಒಂದು ಕೆ.ಜೆ ತೆಂಗಿನ ಕಾಯಿಗೆ ಅಂದಾಜು 70 ರೂಪಾಯಿ ಇದ್ದು, 1620 ಗ್ರಾಂ ತೆಂಗಿನ ಕಾಯಿಗೆ ಅಂದಾಜು 113 ರೂ. ಆಗುತ್ತದೆ.ಕೇವಲ ಒಂದು ತೆಂಗಿನ ಕಾಯಿ ಅಲ್ಲ… ಅವರ ತೋಟದಲ್ಲಿರುವ ಒಂದು ತೆಂಗಿನ ಮರದಲ್ಲಿ ಬೆಳೆಯುವ ಪ್ರತಿ ತೆಂಗಿನ ಕಾಯಿಗಳ ತೂಕವು ಸರಾಸರಿ ಅಂದಾಜು 1.5 ಕೆ.ಜಿ ಗಿಂತ ಅಧಿಕವಿರುತ್ತದೆ.ಕಳೆದ

ಒಂದು‌ ತೆಂಗಿನ ಕಾಯಿ ತೂಕ ಎಷ್ಟು ನೋಡಿ,ನಿಮಗೆ ಅಚ್ಚರಿ ಆಗಬಹುದು! Read More »

ಸುಳ್ಯ ಶಾಸಕರಿಂದ ಸಂಚಾರ ಆರೋಗ್ಯ ಘಟಕ ವಾಹನ ಉದ್ಘಾಟನೆ

ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸ್ಥಾಪಿತವಾಗಿರುವ ಸಂಚಾರಿ ಆರೋಗ್ಯ ಘಟಕದ ವಾಹನವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಇಂದು ಹಸಿರು ನಿಶಾನೆ ತೋರಿಸುವ ಮೂಲಕ ಜೂ.13ರಂದು ತಾಲೂಕು ಸುಳ್ಯ ತಾಲೂಕು ಪಂಚಾಯತ್ ವಠಾರದಲ್ಲಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಶಾಸಕರು ಈ ಸಂಚಾರಿ ಘಟಕದ ಮೂಲಕ ಕಾರ್ಮಿಕರು ತಮ್ಮ ಕೆಲಸದ ಸ್ಥಳದಲ್ಲೇ ಉಚಿತ ಆರೋಗ್ಯ ತಪಾಸಣೆ, ಪ್ರಾಥಮಿಕ ಚಿಕಿತ್ಸೆ ಔಷಧ ವಿತರಣೆ ಮತ್ತು ತಜ್ಞರ ಸಲಹೆಗಳನ್ನು ಪಡೆಯಬಹುದಾಗಿದೆ. ಗ್ರಾಮೀಣ ಮತ್ತು ಪೆರಿಫರಲ್ ಪ್ರದೇಶಗಳ ಕಾರ್ಮಿಕ

ಸುಳ್ಯ ಶಾಸಕರಿಂದ ಸಂಚಾರ ಆರೋಗ್ಯ ಘಟಕ ವಾಹನ ಉದ್ಘಾಟನೆ Read More »

ಶಾಲಾ ಬಸ್ ಗಳ ನಡುವೆ ಅಪಘಾತ,ವಿದ್ಯಾರ್ಥಿಗಳು ಅಪಾಯದಿಂದ ಪಾರು

ಸುಳ್ಯ ತಾಲೂಕಿನ ಆಲೆಟ್ಟಿ ಮುಖ್ಯ ರಸ್ತೆಯ ನಾಗಪಟ್ಟಣ ಪಯಸ್ವಿನಿ ಸೇತುವೆ ಬಳಿ ಶಾಲಾ ಬಸ್ ಗಳ ನಡುವೆ ಅಪಘಾತ ಸಂಭವಿಸಿ ಘಟನೆ ಶುಕ್ರವಾರ ವರದಿಯಾಗಿದೆ.ಆಲೆಟ್ಟಿ ಕಡೆಯಿಂದ ಬರುತ್ತಿದ್ದ ಕೆ.ವಿ.ಜಿ.ಸ್ಕೂಲ್ ಬಸ್ಸಿಗೆ ಸುಳ್ಯದಿಂದ ಮಿತ್ತಡ್ಕ ರೋಟರಿ ಶಾಲೆಗೆ ಹೋಗುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಇದ್ದು ಅದೃಷ್ಟವಶಾತ್ ಯಾವುದೇ ರೀತಿಯ ಅಪಾಯ ಸಂಭವಿಸದೆ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸಿನ ಮುಂಭಾಗ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಶಾಲಾ ಬಸ್ ಗಳ ನಡುವೆ ಅಪಘಾತ,ವಿದ್ಯಾರ್ಥಿಗಳು ಅಪಾಯದಿಂದ ಪಾರು Read More »

ಪಂಜ ಮೂಲದ ವೈದ್ಯ ಆದರ್ಶ ಮತ್ತು ಕುಟುಂಬದವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

ತನ್ನ ಪತಿ ಡಾ.ಆದರ್ಶ ಮತ್ತು ಅವರ ಮನೆಯವರ ಮೇಲೆ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಅನೂಹ್ಯ ಎಂಬವರು ಮೈಸೂರಲ್ಲಿ ಪೋಲೀಸರಿಗೆ ನೀಡಿರುವ ಕೇಸಿಗೆ ರಾಜ್ಯ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿರುವುದಾಗಿ ತಿಳಿದುಬಂದಿದೆ.ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ ಮದುವೆಯೂ ಆಗಿ ಬಳಿಕ ಮನೆಗೆ ಕರೆದೊಯ್ಯಲು ಡಾ.ಆದರ್ಶ ನಿರಾಕರಿಸಿ ವರದಕ್ಷಿಣೆಗಾಗಿ ಶರತ್ತು ವಿಧಿಸಿರುವುದಾಗಿ ಅನೂಹ್ಯ ದೂರಿನಲ್ಲಿ ತಿಳಿಸಿದ್ದರು.ಪಂಜ ಮೂಲದ ಡಾ.ಆದರ್ಶ, ಅವರ ತಂದೆ ಪಂಜದ ಸಂಗಾತಿ ವೆಂಕಟ್ರಮಣ ಭಟ್, ತಾಯಿ ಶಶಿಕಲಾ, ಅಣ್ಣ ಆದಿತ್ಯ ಬಂಧು ರಜಿತ್ ಭಟ್ ರವರ

ಪಂಜ ಮೂಲದ ವೈದ್ಯ ಆದರ್ಶ ಮತ್ತು ಕುಟುಂಬದವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ Read More »

ಗುಜರಾತ್ ವಿಮಾನ ದುರಂತದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶವಾಗಿ ಪಾರು

ಏರ್ ಇಂಡಿಯಾ ವಿಮಾನ Al171 ದರಂತದಲ್ಲಿ ಪವಾಡಸದೃಶವಾಗಿ ಪ್ರಯಾಣಿಕರೊಬ್ಬರು ಬದುಕುಳಿದಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಮೇಶ್‌ ವಿಶ್ವಾಸ್‌ಕುಮಾ‌ರ್ ಬುಚರ್ವಾಡಾ ಭೀಕರ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಿಗೆ ಸಿಲುಕಿ ಸಾವು ಗೆದ್ದಿದ್ದಾರೆ.ಸೀಟ್ 11A ನಲ್ಲಿ ಕುಳಿತಿದ್ದ 38 ವರ್ಷದ ರಮೇಶ್ ಘಟನೆಯ ಸಮಯದಲ್ಲಿ ವಿಮಾನದ ತುರ್ತು ನಿರ್ಗಮನ ದ್ವಾರದಿಂದ ಜಿಗಿದಿದ್ದಾರೆ ಎಂದು ಹೇಳಲಾಗುತ್ತಿದೆ.ಗಾಯಗೊಂಡ ರಮೇಶ್ ಘಟನೆ ಕುರಿತು ವಿವರಿಸುತ್ತಾ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.ಅಹಮದಾಬಾದ್ ಪೊಲೀಸ್ ಕಮಿಷನ‌ರ್ ಜಿ.ಎಸ್. ಮಲಿಕ್ ಅವರು ರಮೇಶ್ ಅವರು ಬದುಕುಳಿದಿದ್ದಾರೆ ಎಂದು ಸುದ್ದಿಗಾರರಿಗೆ

ಗುಜರಾತ್ ವಿಮಾನ ದುರಂತದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶವಾಗಿ ಪಾರು Read More »

ಗುಜರಾತ್ : ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಹಿತ 242 ಮಂದಿ ಸಾವು

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (68) ಅವರು ಮೃತಪಟ್ಟಿದ್ದು, ವಿಮಾನದಲ್ಲಿದ್ದ 242ಕ್ಕೂ ಮಂದಿ ಮೃತಪಟ್ಟಿದ್ದಾರೆಂದು ಅಲ್ಲಿನ ಮೂಲಗಳು ತಿಳಿವೆ.ಇಂದು ಮಧ್ಯಾಹ್ನ 1.50 ರ ಸುಮಾರಿಗೆ ವಿಮಾನ ಟೇಕ್ ಆಫ್ ಆದ ಬಳಿಕ ಇಪ್ಪತ್ತು ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ಈ ವೇಳೆ ವಿಮಾನದ ಎಂಜಿನ್‌ನಲ್ಲಿ ತೀವ್ರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನದ ಪೈಲಟ್ ಈ ವಿಷಯವನ್ನು ‘ಎಟಿಸಿ’ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಕೆಲವೇ ನಿಮಿಷಗಳಲ್ಲಿ

ಗುಜರಾತ್ : ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಹಿತ 242 ಮಂದಿ ಸಾವು Read More »

ಏರ್ ಇಂಡಿಯಾ ವಿಮಾನ ಪತನ

ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಇಂದು) ಮಧ್ಯಾಹ್ನ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾದ ಘಟನೆ ವರದಿಯಾಗಿದೆ.230 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಾಜ್ಯ ಪೊಲೀಸ್‌ ನಿಯಂತ್ರಣ ಕೊಠಡಿ ದೃಢಪಡಿಸಿದೆ. ಬೋಯಿಂಗ್ 787-8 ಗ್ರೀಮ್‌ಲೈನ‌ರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ದಿತ್ತು.ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿನಗರ ಬಳಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾದ ಸ್ಥಳವು ವಸತಿ

ಏರ್ ಇಂಡಿಯಾ ವಿಮಾನ ಪತನ Read More »

ಮದುವೆಯಾಗುವುದಾಗಿ ನಂಬಿಸಿ ವೈದ್ಯನಿಂದ ಯುವತಿಗೆ ಹಲವು ಬಾರಿ ದೈಹಿಕ ಸಂಪರ್ಕ,ವೈದ್ಯನ ಬಾವನನ್ನು ಬಂಧಿಸಿದ ಪೊಲೀಸರು!

ಸುಳ್ಯ ತಾಲೂಕಿನ ಪಂಜದ ವೈದ್ಯರೊಬ್ಬರು ಮೈಸೂರಿನ ಯುವತಿಗೆ ಮದುವೆಯಾಗೋದಾಗಿ ಹೇಳಿ ವಂಚಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟು ಅವರ ಬಾವನೋರ್ವನನ್ನು ಮೈಸೂರಿನ ಪೊಲೀಸರು ಸುಳ್ಯದಲ್ಲಿ ಸಿ‌ನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.ಆದರ್ಶ್ ಅವರ ಬಾವ ರಜಿತ್ ಭಟ್ ಬಂಧನಕೊಳಗಾದ ಆರೋಪಿ. ವಂಚನೆಗೊಳಗಾದ ಯುವತಿ ಪೊಲೀಸರಿಗೆ ದೂರು ನೀಡಿದ್ದರು.ಪಂಜ ಮೂಲದ ಡಾ.ಆದರ್ಶ್ ಅವರಿಗೆ ಫೇಸ್ಟುಕ್ ಮೂಲಕ ಯುವತಿಯ ಪರಿಚಯವಾಗಿದೆ. ಬಳಿಕ ವಿವಾಹದ ಭರವಸೆ ನೀಡಿ ಆದರ್ಶ್ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ, ರಿಜಿಸ್ಟರ್ಡ್ ವಿವಾಹವಾಗಿದ್ದರಾಂತೆ. ಆದರೆ ಇದೀಗ ಇದಕ್ಕೆ ತಮ್ಮ ತಂದೆ

ಮದುವೆಯಾಗುವುದಾಗಿ ನಂಬಿಸಿ ವೈದ್ಯನಿಂದ ಯುವತಿಗೆ ಹಲವು ಬಾರಿ ದೈಹಿಕ ಸಂಪರ್ಕ,ವೈದ್ಯನ ಬಾವನನ್ನು ಬಂಧಿಸಿದ ಪೊಲೀಸರು! Read More »

error: Content is protected !!
Scroll to Top