Author name: Tejas

ಅರಂತೋಡು : ನಿವೃತ್ತ ಮುಖ್ಯ ಶಿಕ್ಷಕಿ ಸರೋಜನಿ ಕಲ್ಲುಗದ್ದೆ ನಿಧನ

ಅರಂತೋಡು ಗ್ರಾಮದ ಕಲ್ಲುಗದ್ದೆ ನಿವೃತ್ತ ಮುಖ್ಯ ಶಿಕ್ಷಕ ದಿ. ಜತ್ತಪ್ಪ ಗೌಡರ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಸರೋಜಿನಿ(83ವರ್ಷ) ಕಲ್ಲುಗದ್ದೆಯವರು ಅಸೌಖ್ಯದಿಂದ ಜೂ. 28ರಂದು ಸ್ವಗೃಹದಲ್ಲಿ ನಿಧನರಾದರು.ಗೂನಡ್ಕ ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪುತ್ರರಾದ ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್ ಕಲ್ಲುಗದ್ದೆ, ಕೃಷಿಕರಾದ ಹರಿಪ್ರಸಾದ್ ಕಲ್ಲುಗದ್ದೆ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ದಿವಾಕರ ಕಲ್ಲುಗದ್ದೆ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ತಾರಾನಾಥ ಕಲ್ಲುಗದ್ದೆ, ಪುತ್ರಿ […]

ಅರಂತೋಡು : ನಿವೃತ್ತ ಮುಖ್ಯ ಶಿಕ್ಷಕಿ ಸರೋಜನಿ ಕಲ್ಲುಗದ್ದೆ ನಿಧನ Read More »

ಸುಳ್ಯದ ಆದರ್ಶ ಸೌಹಾರ್ದ ಸಹಕಾರ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮಿಪೂಜೆ ಮತ್ತು ಗಣಹೋಮ

ಸಹಕಾರಿ ರತ್ನ ಸವಣೂರು ಕೆ. ಸೀತಾರಾಮ ರೈಯವರು ಅಧ್ಯಕ್ಷರಾಗಿರುವ ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸುಳ್ಯ ಶಾಖೆಯಲ್ಲಿ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮೀಪೂಜೆ ಮತ್ತು ಗಣಹೋಮ ಜೂ. 28ರಂದು ಪುರೋಹಿತರಾದ ಶಿವಕುಮಾರ್ ಭಟ್ ಎಡಮಂಗಲರವರ ನೇತೃತ್ವದಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾಗಿರುವ ಕೆ. ಸೀತಾರಾಮ ರೈ ಸವಣೂರು, ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ, ಸುಳ್ಯ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವಪ್ರಭಾಕರನ್ ನಾಯರ್, ನ್ಯಾಯವಾದಿ ಎನ್. ಜಯಪ್ರಕಾಶ್

ಸುಳ್ಯದ ಆದರ್ಶ ಸೌಹಾರ್ದ ಸಹಕಾರ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮಿಪೂಜೆ ಮತ್ತು ಗಣಹೋಮ Read More »

ಅಜ್ಜಾವರ : ಶಾಲಾ ವಿವಿಧ ಸಂಘಗಳ ಉದ್ಘಾಟನೆ

ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವಿಜ್ಞಾನ ಸಂಘ, ಕ್ರೀಡಾ ಸಂಘ, ಪರಿಸರ ಸಂಘಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಗಳಿಗೆಅಧಿಕೃತವಾಗಿ ಜೂ. 27 ರಂದು ಚಾಲನೆ ನೀಡಲಾಯಿತುಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದಗುರುರಾಜ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಈ‌ ಸಂದರ್ಭದಲ್ಲಿ ಮೂವತೈದು ವರ್ಷಗಳ ಹಿಂದೆರಾಯಚೂರು ಜಿಲ್ಲೆ ಸಿಂಧನೂರಿನಿಂದ ಬಂದು ದೈಹಿಕ ಶಿಕ್ಷಕರಾಗಿ ಅಜ್ಜಾವರದಲ್ಲಿ 1986-1991 ರವರೆಗೆ ಐದು ವರ್ಷಗಳ ಕಾಲಸೇವೆ ಸಲ್ಲಿಸಿದ್ದ ಶಿವ ಬಸಪ್ಪ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿಗೌರವಿಸಲಾಯಿತು . ವೇದಿಕೆಯಲ್ಲಿ ಸುಳ್ಯ ತಾಲೂಕು ಪಂಚಾಯತ್

ಅಜ್ಜಾವರ : ಶಾಲಾ ವಿವಿಧ ಸಂಘಗಳ ಉದ್ಘಾಟನೆ Read More »

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ದೇವಚಳ್ಳ ಶಾಲೆಯಲ್ಲಿ ಪುಸ್ತಕ ವಿತರಣೆ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮವು ಜೂ. 27 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಜಯಾನಂದ ಪಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ 15 ವಲಯ ಅಧ್ಯಕ್ಷರಾದ ಜೆ ಎಫ್ ಎಸ್ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಅತಿಥಿಗಳಾಗಿ ಜೇಸಿಐ ವಲಯ- 15 ನೇತ್ರಾವತಿ (ರಿಜನ್ -ಬಿ) ಇದರ ಉಪಾಧ್ಯಕ್ಷ ಜೇಸಿ ಸೆನೆಟರ್ ಜಿತೇಶ್ ಪಿರೆರಾ, ಜೇಸಿಐ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ದೇವಚಳ್ಳ ಶಾಲೆಯಲ್ಲಿ ಪುಸ್ತಕ ವಿತರಣೆ Read More »

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಸ್ಕಂದ ಕಾಂಪ್ಲೆಕ್ಸ್‌ನಲ್ಲಿ ಸಿಂಧೂರ ವಸ್ತ್ರ ಮಳಿಗೆ ಶುಭಾರಂಭ

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಸ್ಕಂದ ಕಾಂಪ್ಲೆಕ್ಸ್‌ನಲ್ಲಿ ಸಿಂಧೂರ ಶೋರೂಂ ವಸ್ತ್ರ ಮಳಿಗೆ ಜೂ.೨೭ರಂದು ಅದ್ಧೂರಿಯಾಗಿ ಶುಭಾರಂಭಗೊಂಡಿದೆ.ಸುಳ್ಯದ ಕೆ.ವಿ.ಜಿ. ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ| ಗೀತಾ ದೊಪ್ಪರವರು ದೀಪ ಬೆಳಗಿ ನೂತನ ಮಳಿಗೆಯನ್ನು ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಗಾಯಕಿ ಪೂರ್ಣಿಮಾ ಕೃಷ್ಣರಾಜ್, ದಯಾಮಣಿ ಹೇಮಂತ್, ಲತಾ ರೈ ಬೂಡು, ಶೈಲಜಾ, ಮಂಜುಳಾ ಬಡಿಗೇ‌ರ್, ಮೋಹಿನಿ ವಿಶ್ವನಾಥ್, ಧರ್ಮಕಲಾ, ರಜನಿ, ಶಾಲಿನಿ, ದೇವಿಶ್ರೀ, ಜಯಶ್ರೀ, ಕುಸುಮಾ, ಪುಷ್ಪಾ, ವರ್ತಕರ ಸಂಘದ ಗೌರವಾಧ್ಯಕ್ಷರಾದ ಸುಧಾಕರ ರೈ ಪಿ.ಬಿ.,

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಸ್ಕಂದ ಕಾಂಪ್ಲೆಕ್ಸ್‌ನಲ್ಲಿ ಸಿಂಧೂರ ವಸ್ತ್ರ ಮಳಿಗೆ ಶುಭಾರಂಭ Read More »

ಹರಿಹರ ಪಲ್ಲತ್ತಡ್ಕ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರಿಹರ ಪಲ್ಲತ್ತಡ್ಕ, ಐನೆಕಿದು, ಬಾಳುಗೋಡು ಮತ್ತು ಕೊತ್ನಡ್ಕ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಈ ಸಮಾರಂಭದಲ್ಲಿ ಸುಳ್ಯ ತಾಲೂಕಿನ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ವೆಂಕಪ್ಪ ಗೌಡರವರು ದೀಪವನ್ನು ಪ್ರಜ್ವಲಿಸಿ

ಹರಿಹರ ಪಲ್ಲತ್ತಡ್ಕ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ Read More »

ಚೆಂಬು : ಶ್ರಮ ಸೇವೆಯ ಮೂಲಕ ಸೇತುವೆಯ ಹೂಳೆತ್ತುವ ಕೆಲಸ

ಚೆಂಬು ಗ್ರಾಮದ ಏಣಿಯಾರದಲ್ಲಿರುವ, ಉಂಬಾಳೆ ಕಟ್ಟಪಳ್ಳಿ ರಸ್ತೆಯ ಸೇತುವೆಯ ಮೇಲೆ ಹಲವು ವರ್ಷಗಳಿಂದ ತುಂಬಿದ್ಧ ಹೂಳುನ್ನು ಊರವರು ತೆಗೆದು ಸೇತುವೆಗೆ ಹೊಸ ಮೆರಗನ್ನು ನೀಡಿದರು.ಶಿವಪ್ರಕಾಶ್ ಪರಿವಾರ, ಸೋಮಣ್ಣ ಪರಿವಾರ, ಧನುಷ್ ಪರಿವಾರ, ವಿಜಯ ಪೋಲ್ಮಾರ, ಸದಾನಂದ ಪೋಲ್ಮಾರ, ರುದ್ರಪ್ಪ ಕೊಂಬರನ ಶ್ರಮ‌‌‌ ಸೇವೆಯಲ್ಲಿ ಭಾಗವಹಿಸಿದರು.

ಚೆಂಬು : ಶ್ರಮ ಸೇವೆಯ ಮೂಲಕ ಸೇತುವೆಯ ಹೂಳೆತ್ತುವ ಕೆಲಸ Read More »

ಮಂಡೆಕೋಲು ಗ್ರಾಮ ಯುವ ಕಾಂಗ್ರೆಸ್ ಸಭೆ

ಮಂಡೆಕೋಲು ಗ್ರಾಮದ ಯುವ ಕಾಂಗ್ರೆಸ್ ಸಮಿತಿಯ ಸಭೆ ಇಂದು ಮಂಡೆಕೋಲಿನ ಕಣೆಮರಡ್ಕದಲ್ಲಿ ನಡೆಯಿತು. ಮಂಡೆಕೋಲು ಗ್ರಾಮ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಫೀಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಆಡಳಿತ) ಭವಾನಿಶಂಕರ್ ಕಲ್ಮಡ್ಕ ಸಭೆಯನ್ನುದ್ದೇಶಿಸಿ ಮಾತನಾಡಿ ಪಕ್ಷ ಸಂಘಟನೆ ಮತ್ತು ಯುವ ಕಾಂಗ್ರೆಸ್ ಸಮಿತಿಗಳ ಜವಾಬ್ದಾರಿ ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನೂತನ ಬೂತ್, ಗ್ರಾಮಸಮಿತಿಗಳ ಜೊತೆಗೆ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. SIR ಪ್ರಕ್ರಿಯೆಯ ಬಗ್ಗೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು

ಮಂಡೆಕೋಲು ಗ್ರಾಮ ಯುವ ಕಾಂಗ್ರೆಸ್ ಸಭೆ Read More »

ಎಲ್.ಪಿ.ಜಿ ಪೂರೈಕೆಗೆ ಕೇಂದ್ರ ಸರಕಾರ ವಿಧಿಸಿದ್ದ ನಿರ್ಬಂಧ ತೆರವು

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಪೂರೈಕೆಗೆ ಕೇಂದ್ರ ಸರಕಾರ ವಿಧಿಸಲಾಗಿದ್ದ ನಿರ್ಬಂಧವನ್ನು ಹಿಂಪಡೆದಿದೆ.ಕೆಲವು ತಿಂಗಳುಗಳಿಂದ ಸಿಲಿಂಡರ್‌ ಕೊರತೆಯ ಆತಂಕದಲ್ಲಿದ್ದ ಹೋಟೆಲ್, ರೆಸ್ಟೋರೆಂಟ್, ಧಾಬಾ, ಕ್ಯಾಂಟೀನ್ ಹಾಗೂ ಸಣ್ಣ ಉದ್ಯಮಗಳಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಬಿಕ್ಕಟ್ಟಿನ ಸಮಯದಲ್ಲಿ ಗೃಹ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ವಾಣಿಜ್ಯ LPG ವಿತರಣೆಗೆ ಮಿತಿ ಹೇರಿತ್ತು. ಆದರೆ ಅಂತರರಾಷ್ಟ್ರೀಯ ಪರಿಸ್ಥಿತಿ ಸುಧಾರಿಸಿರುವುದು ಮತ್ತು ಪೂರೈಕೆ ಸರಪಳಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ

ಎಲ್.ಪಿ.ಜಿ ಪೂರೈಕೆಗೆ ಕೇಂದ್ರ ಸರಕಾರ ವಿಧಿಸಿದ್ದ ನಿರ್ಬಂಧ ತೆರವು Read More »

ಅರಂತೋಡು ಸಮಸ್ತ ಸ್ಥಾಪನಾ ದಿನ ಆಚರಣೆ

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ಇದರ ಆಶ್ರಯದಲ್ಲಿ “ಆದರ್ಶ ಪರಿಶುದ್ಧತೆ ಶತಮಾನಗಳಲ್ಲಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸಮಸ್ತ ಸ್ಥಾಪನಾ ದಿನವನ್ನು ಜೂ.26 ರಂದು ಅರಂತೋಡು ಮಸೀದಿ ವಠಾರದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಸಂದೇಶ ಭಾಷಣವನ್ನು ಖತೀಬರಾದ ಬಹು| ಆಸಿಫ್ ಅಝ್ಹರಿ ಮಾತನಾಡಿ ಸಯ್ಯದ್ ವರಕ್ಕಲ್ ಮುಲ್ಲಕೋಯ ತಂಗಳ್, ಅಹ್ಮದ್ ಕುಟ್ಟಿ ಮುಸ್ಲಿಯಾರ್, ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್, ಇ.ಕೆ ಅಬೂಬಕ್ಕರ್ ಮುಸ್ಲಿಯಾರ್ ರಂತಹ ಮಹನೀಯರ ಪರಿಶ್ರಮ ಮತ್ತು ತ್ಯಾಗದಿಂದದಿಂದ ಕಟ್ಟಿ

ಅರಂತೋಡು ಸಮಸ್ತ ಸ್ಥಾಪನಾ ದಿನ ಆಚರಣೆ Read More »

error: Content is protected !!
Scroll to Top