Author name: Tejas

ಬೈಕ್ ಸವಾರರ ಮೇಲೆ ಕಡವೆ ಜಿಗಿದು ಬೈಕ್ ಸವಾರರಿಗೆ ಗಾಯ

ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಮಾವಿನಕಟ್ಟೆಯಲ್ಲಿ ಬೈಕ್ ಸವಾರರ ಮೇಲೆ ಕಡವೆ ಜಿಗಿದು ಬೈಕ್ ಸಾವರರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ವರದಿಯಾಗಿದೆ.ಎಲಿಮಲೆ ಕಡೆಯಿಂದ ಗುತ್ತಿಗಾರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರರು ಮಾವಿನಕಟ್ಟೆ ತಲುಪುತ್ತಿದ್ದಂತೆ ಏಕಾಏಕಿ ಕಡವೆ ಬೈಕ್ ಮೇಲೆ ಹಾರಿದೆ. ಪರಿಣಾಮ ಬೈಕ್‌ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಬೈಕ್ ಸವಾರರ ಮೇಲೆ ಕಡವೆ ಜಿಗಿದು ಬೈಕ್ ಸವಾರರಿಗೆ ಗಾಯ Read More »

ಗುರುವಿನೊಂದಿಗೆ ಗೌರವ ಭಾವನೆ ಇದ್ದಾಗ ವಿದ್ಯಾರ್ಥಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ : ಶಾಸಕಿ ಭಾಗೀರಥಿ ಮುರುಳ್ಯ

ಗುರವಿನೊಂದಿಗೆ ಗೌರವ ಭಾವನೆ ಇದ್ದಾಗ ವಿದ್ಯಾರ್ಥಿಯು ಉತ್ತಮ‌ ಶಿಕ್ಷಣ ಪಡೆಯಲು ಸಾಧ್ಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಅರಂತೋಡು ನೆಹರೂ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಸೆ.5ರಂದು ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಠ್ಯದ ಶಿಕ್ಷಣ ಪಡೆಯುವುದಲ್ಲ.ಸಾಮಾಜಿಕ ಸಂಬಂಧ ನೈತಿಕೆಯ ಬಗ್ಗೆ ಸಮಾಜದಿಂದ ಶಿಕ್ಷಣ ಪಡೆಯುವ ಅಗತ್ಯ ಇದೆ.ಇದು ಭವಿಷ್ಯದಲ್ಲಿ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು‌ ಸಹಕಾರಿಯಾಗಬಲ್ಲದು.ಜೀವನ‌ ಪರಿಪೂರ್ಣಗೊಳ್ಳುವುದೇ ಶಿಕ್ಷಣದಿಂದ ಅವರು ಎಂದು

ಗುರುವಿನೊಂದಿಗೆ ಗೌರವ ಭಾವನೆ ಇದ್ದಾಗ ವಿದ್ಯಾರ್ಥಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ : ಶಾಸಕಿ ಭಾಗೀರಥಿ ಮುರುಳ್ಯ Read More »

ಸುಳ್ಯ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ

ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಕೊಡಮಾಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಸುಳ್ಯ ತಾಲೂಕಿನ ಮೂವರು ಶಿಕ್ಷಕರು ಆಯ್ಕೆಗೊಂಡಿದ್ದಾರೆ. ಪ್ರೌಢಶಾಲಾ ವಿಭಾಗದಿಂದ ಎಣ್ಣೂರು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಮೋಹನ್, ಪ್ರಾಥಮಿಕ ಶಾಲಾ ವಿಭಾಗದಿಂದ ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ್ ಗೌಡ ಕೆರೆಮೂಲೆ, ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಶಾಲೆಯ ಮುಖ್ಯ ಶಿಕ್ಷಕಿ ಲಲಿತ ಕುಮಾರಿ ಆಯ್ಕೆಯಾಗಿದ್ದಾರೆ.

ಸುಳ್ಯ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ Read More »

ಮಹಿಳೆಗೆ ಅಶ್ಲೀಲ ಕರೆ ಮಾಡಿ ಅಶ್ಲೀಲ ಸಂದೇಶ ರವಾನಿಸಿದ ಪೊಲೀಸಪ್ಪನ ಬಂಧನ

ಮಹಿಳೆಯೋರ್ವರು ದೂರು ನೀಡಲು ಠಾಣೆಗೆಬಂದಿದ್ದು, ಪೊಲೀಸ್ ಪೇದೆಯೊಬ್ಬರು ಮಹಿಳೆಗೆ ಪದೇ ಪದೇ ಅಶ್ಲೀಲ ಕರೆಗಳು ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡಿದ ಆರೋಪದಡಿ ಮೂಡುಬಿದಿರೆ ಠಾಣೆಯ ಪೊಲೀಸ್ ಪೇದೆಯನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಪೇದೆ ಶಾಂತಪ್ಪ (28) ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಇನ್ನು ಬಂಧನಕ್ಕೂ ಮುನ್ನವೇ ಪೊಲೀಸ್‌ ಆಯುಕ್ತರು ಅವರನ್ನು ಅಮಾನತುಗೊಳಿಸಿದ್ದರೆ ಎನ್ನಲಾಗಿದೆ.ಘಟನೆಯ ವಿವರ: ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕುರಿತು ಮೂಡಬಿದಿರೆ ಪೊಲೀಸ್‌ ಠಾಣೆಗೆ ಆಗಸ್ಟ್ 25ರಂದು ದೂರು ನೀಡಲು

ಮಹಿಳೆಗೆ ಅಶ್ಲೀಲ ಕರೆ ಮಾಡಿ ಅಶ್ಲೀಲ ಸಂದೇಶ ರವಾನಿಸಿದ ಪೊಲೀಸಪ್ಪನ ಬಂಧನ Read More »

ಮಗುವಿಗೆ ಜನ್ಮ ನೀಡಿದ ಪ್ರಕರಣ : ಆರೋಪಿ ಶ್ರೀಕೃಷ್ಣ ಜೆ.ರಾವ್ ಗೆ ಜಾಮೀನು ಮಂಜೂರು

ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್ ಇದೀಗ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ ಎಂದು ತಿಳಿದು ಬಂದಿದೆ.ಆರೋಪಿಗೆ ಕರ್ನಾಟಕ ಹೈಕೋರ್ಟ್ ಸೆ.೩ರಂದು ಜಾಮೀನು ಮಂಜೂರು ಮಾಡಿತ್ತು. ಬಳಿಕ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಸೆ.೪ರಂದು ಮುಗಿಸಿ ಆರೋಪಿಯನ್ನು ಮಂಗಳೂರು ಜೈಲಿನಿಂದ ಬಿಡುಗಡೆಗೊಳಿಸಿ ಕರೆತರಲಾಗುತ್ತಿದೆ ಎಂದು ಮಾಹಿತಿ ಲಭಿಸಿದೆ.

ಮಗುವಿಗೆ ಜನ್ಮ ನೀಡಿದ ಪ್ರಕರಣ : ಆರೋಪಿ ಶ್ರೀಕೃಷ್ಣ ಜೆ.ರಾವ್ ಗೆ ಜಾಮೀನು ಮಂಜೂರು Read More »

ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ)1500 ನೇ ಜನ್ಮ ದಿನಾಚರಣೆವಿದ್ಯಾರ್ಥಿಗಳ ಇಸ್ಲಾಮಿಕ್ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಮತ್ತು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಅರಂತೋಡು ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ದುವಾ ಬದ್ರಿಯಾ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟೆಮನೆ ನೆರವೇರಿಸಿದರು.ವೇದಿಕೆಯಲ್ಲಿ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್ ,ಸದರ್ ಅಶ್ರಫ್ ಮುಸ್ಲಿಯಾರ್,ಮದರಸ ಮ್ಯಾನೇಜ್ಮೆಂಟ್ ಸಂಚಾಲಕ

ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ)1500 ನೇ ಜನ್ಮ ದಿನಾಚರಣೆವಿದ್ಯಾರ್ಥಿಗಳ ಇಸ್ಲಾಮಿಕ್ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ Read More »

ಪಾಲಡ್ಕ : ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ ಪಡಿಸಿದ ಕಾಡಾನೆಗಳು

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪಾಲಡ್ಕ ಸಮೀಪ ಕಾಡಾನೆಗಳು ಮತ್ತೆ ಗುರುವಾರ ಮುಂಜಾನೆ ಸ್ಥಳೀಯರ ತೋಟಗಳಿಗೆ ನುಗ್ಗಿ ಕೃಷಿನಾಶಪಡಿಸಿದ ಘಟನೆ ವರದಿಯಾಗಿದೆ. ಪಾಲಡ್ಕ ಅಮೆಮನೆ ವಾಸುದೇವ, ಪೆರುಮುಂಡ ಶೇಷಪ್ಪ ಗೌಡ,ಅಮೆಮನೆ ಮೇದಪ್ಪ ಗೌಡರ ತೋಟಗಳಿಗೆ ನುಗ್ಗಿ್ದ ಕಾಡಾನೆಗಳು ,ಅಡಿಕೆ,ತೆಂಗು,ಬಾಳೆ ಇತರ ಕ್ರಷಿಗಳನ್ನು ನಾಶ ಮಾಡಿ ಹಾಕಿವೆ .ಪರಿಣಾಮ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ..ಕೊಳೆರೋಗದಿಂದ ಹೈರಾಣಾದ ರೈತರಿಗೆ ಕಾಡಾನೆಗಳು ಬಂದು ಬೆಳೆ ನಾಶಪಡಿಸುತ್ತಿರುವುದು ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದುರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸತತ ಕಾಡಾನೆಗಳಿಂದ

ಪಾಲಡ್ಕ : ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ ಪಡಿಸಿದ ಕಾಡಾನೆಗಳು Read More »

ನಾಳೆ ಅಡ್ತಲೆಯಲ್ಲಿ ಎನ್.ಎಸ್.ಶಿಬಿರ ಹಾಗೂ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು‌. ಸುಶ್ಮಿತಾ ಇವರಿಗೆ ಹುಟ್ಟೂರ ಅಭಿನಂದನಾ ಸಮಾರಂಭ

ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಒಂದು ದಿನದ ಶಿಬಿರ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿ, ಸ್ಪಂದನ ಗೆಳೆಯರ ಬಳಗ ರಿ. ಅಡ್ತಲೆ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇವರ ಆಶ್ರಯದಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು. ಸುಶ್ಮಿತಾ ಎಂ.ಎ ಇವರಿಗೆ ಹುಟ್ಟೂರ ಅಭಿನಂದನಾ ಸಮಾರಂಭ ಅಡ್ತಲೆ ಶಾಲೆಯಲ್ಲಿ ಸೆ.5ರಂದು ನಡೆಯಲಿದೆ. ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಕಮಿಟಿ ‘ಬಿ’ ಇದರ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ

ನಾಳೆ ಅಡ್ತಲೆಯಲ್ಲಿ ಎನ್.ಎಸ್.ಶಿಬಿರ ಹಾಗೂ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು‌. ಸುಶ್ಮಿತಾ ಇವರಿಗೆ ಹುಟ್ಟೂರ ಅಭಿನಂದನಾ ಸಮಾರಂಭ Read More »

ಸಮೃದ್ದ್ ಗ್ರಾಮ ಪಂಚಾಯತ್ ಯೋಜನೆಗೆ ಅರಂತೋಡು ಗ್ರಾಮ ಪಂಚಾಯತ್ ಆಯ್ಕೆ

ಆಫ್ಟಿಕಲ್ ಕೇಬಲ್ ಬಳಸಿ ಡಿಜಿಟಲ್ ಸೇವೆಗಳು ಮತ್ತು ಆರ್ಥಿಕ ಅವ್ಯಶಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲಪಿಸುವ ಮೂಲಕ ದೂರ ಸಂಪರ್ಕ ಆಧಾರಿತ ಸಮೃದ್ದ್ ಗ್ರಾಮ ಪಂಚಾಯತ್ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ 7 ಗ್ರಾಮ ಪಂಚಾಯತ್ ಗಳಲ್ಲಿ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ಆಯ್ಕೆ ಯಾಗಿರುತ್ತದೆ.ಸಮೃದ್ ಗ್ರಾಮ ಪಂಚಾಯತ್ ಯೋಜನೆ ತಾಲೂಕಿಗೊಂದು ಗ್ರಾ.ಪಂ. ಆಯ್ಕೆಆಪ್ಟಿಕಲ್ ಫೈಬರ್ ಕೇಬಲ್ ಬಳಸಿ ಡಿಜಿಟಲ್ = ಸೇವೆಗಳು ಮತ್ತು ಆರ್ಥಿಕ ಅವಕಾಶ ಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಮೂಲಕ ದೂರಸಂ ಪರ್ಕ

ಸಮೃದ್ದ್ ಗ್ರಾಮ ಪಂಚಾಯತ್ ಯೋಜನೆಗೆ ಅರಂತೋಡು ಗ್ರಾಮ ಪಂಚಾಯತ್ ಆಯ್ಕೆ Read More »

ಕಡೆಪಾಲ : ಲಾರಿ ಕಾರು ಅಪಘಾತದಲ್ಲಿ ಮಹಿಳೆ ಸಾವು,ಗಂಭೀರ ಗಾಯಗೊಂಡರು ಮಂಗಳೂರಿಗೆ ಶಿಪ್ಟ್

ಸುಳ್ಯ: ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕಲ್ಲುಗುಂಡಿ ಸಮೀಪ ಕಡೆಪಾಲದಲ್ಲಿ ಕಾರು ಮತ್ತು ಟ್ಯಾಂಕರ್ ಮಧ್ಯೆ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.ಸುಳ್ಯದ ಕಡೆ ಬರುತ್ತಿದ್ದ ಟ್ಯಾಂಕ‌ರ್ ಮತ್ತು ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ.ಅಪಘಾತಕ್ಕೀಡಾದ ಕಾರಿನವರು ಕೊಡಗು ಸಿದ್ದಾಪುರದ ನೆಲ್ಲಿಹುದಿಕೇರಿಯವರು.ಕಾರಿನಲ್ಲಿದ್ದ ನೆಲ್ಲಿಹುದಿಕೇರಿಯ ಶೋಭಾ (47) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಕಾರು ಚಾಲಕ ದೇವಯ್ಯ ಹಾಗೂ ವನಜಾಕ್ಷಿ ಗಂಭೀರ ಗಾಯಗೊಂಡಿದ್ದು

ಕಡೆಪಾಲ : ಲಾರಿ ಕಾರು ಅಪಘಾತದಲ್ಲಿ ಮಹಿಳೆ ಸಾವು,ಗಂಭೀರ ಗಾಯಗೊಂಡರು ಮಂಗಳೂರಿಗೆ ಶಿಪ್ಟ್ Read More »

error: Content is protected !!
Scroll to Top