Author name: Tejas

ಜೂ.1 ರಂದು ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ

ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4 ನೆಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಶುಭಾರಂಭ ಗೊಳ್ಳಲಿದೆ.ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್‌ಗಳ ಅತ್ಯಪೂರ್ವ ಸಂಗ್ರಹದೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯಲ್ಲಿರುವ ಎಂ ಕೆ ರೆಸ್ಸಿಡೆನ್ಸಿ ಕಟ್ಟಡದಲ್ಲಿ ಸುಮಾರು 9000 ಚದರಡಿಯ, ವಿಶಾಲ ಪಾರ್ಕಿಂಗ್ ಸೌಲಭ್ಯ ಹೊಂದಿರುವ,ನಗು ಮೊಗದ ಅನುಭವಿ ಸಿಬ್ಬಂದಿಗಳನ್ನು ಹೊಂದಿರುವಬ್ರಹತ್ ಟೈಲ್ಸ್ ಮಳಿಗೆಜೂ.1 ರ ಸಂಜೆ ಗಂಟೆ 4:00 ಕ್ಕೆ ಉದ್ಘಾಟನೆ ಗೊಳ್ಳಲಿದೆ […]

ಜೂ.1 ರಂದು ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ Read More »

ಬೆದ್ರುಪಣೆ ಸಮೀಪ ಕಾಡಾನೆ ಮರಿ ಸಾವು

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ತಲೆ ಬೆದ್ರುಪಣೆ ಸಮೀಪ ಕಾಡಾನೆಯ ಮರಿಯೊಂದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.ಕಾಡಾನೆಗಳ ಕಾದಾಟದಿಂದ ಮರಿಯಾನೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಬೆದ್ರುಪಣೆ ಸಮೀಪ ಕಾಡಾನೆ ಮರಿ ಸಾವು Read More »

ಸವಣೂರು ಶ್ರೀ ಸೀತಾರಾಮ ರೈ ಕಸ್ತೂರಿ ದಂಪತಿಗಳನ್ನು ಗೌರವಿಸಿದ ಡಾ.ದೇವಿಪ್ರಸಾದ್ ಕಾನತ್ತೂರು ದಂಪತಿಗಳು

ಸವಣೂರು ಶ್ರೀ ಸೀತಾರಾಮ ರೈ ಕಸ್ತೂರಿ ದಂಪತಿಗಳಿಗೆ 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ದಂಪತಿಗಳು ಗೌರವಿಸಿದರು.

ಸವಣೂರು ಶ್ರೀ ಸೀತಾರಾಮ ರೈ ಕಸ್ತೂರಿ ದಂಪತಿಗಳನ್ನು ಗೌರವಿಸಿದ ಡಾ.ದೇವಿಪ್ರಸಾದ್ ಕಾನತ್ತೂರು ದಂಪತಿಗಳು Read More »

ಪೆರಾಜೆ : ಬೈಕ್ ಗಳ ನಡುವೆ ಭೀಕರ ಅಪಘಾತ,ಓರ್ವ ಸಾವು,ಇಬ್ಬರು ಗಂಭೀರ

ಪೆರಾಜೆ ಸಮೀಪ ಬೈಕ್ ಗಳ ಮಧ್ಯೆ ನಡುವೆ ಅಪಘಾತ ಸಂಭವಿಸಿ ಒಬ್ಬರು ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ಮೇ .24ರಂದು ಸಂಜೆ ವರದಿಯಾಗಿದೆಮ್ರತಪಟ್ಟ ವ್ಯಕ್ತಿಯನ್ನು ಕೇರಳ ನಿವಾಸಿ ಮುಂದನಾಥನ್ ಪ್ರದೀಪನ್ ಎಂದು ಗುರುತಿಸಲಾಗಿದೆ.ಗಾಯಾಳುಗನ್ನು‌ಆಸ್ಪತ್ರೆಗೆ ಸಾಗಿಸಲಾಗಿದೆ. ರವಿಕುಮಾರ್ ಚಡಾವು ಸಂಪಾಜೆ ಮತ್ತುಸುಮನ್ ಆಲಡ್ಕ ಸಂಪಾಜೆಗಂಭೀರ ಗಾಯಗೊಂಡವರು ಎಂದು ತಿಳಿದು ಬಂದಿದೆ.

ಪೆರಾಜೆ : ಬೈಕ್ ಗಳ ನಡುವೆ ಭೀಕರ ಅಪಘಾತ,ಓರ್ವ ಸಾವು,ಇಬ್ಬರು ಗಂಭೀರ Read More »

ಅರಂತೋಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ& ತಿದ್ದುಪಡಿ ಶಿಬಿರ ಮತ್ತು ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಮತ್ತು ಚಂದನ ಯುವತಿ ಮಂಡಲ ಅಡ್ತಲೆ ಇವರ ವತಿಯಿಂದ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇವರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಚತಾ ಅಭಿಯಾನದ ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ,ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ NIMA (R) ಸುಳ್ಯ ಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಕಾರ್ಯಕ್ರಮವು

ಅರಂತೋಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ& ತಿದ್ದುಪಡಿ ಶಿಬಿರ ಮತ್ತು ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ Read More »

ಪುತ್ತೂರು : ಕಾರಿ‌ನೊಳಗೆ ನುಗ್ಗಿದ ಹಾವು,ಹೆಚ್ಚಿದ ಆತಂಕ

ಪುತ್ತೂರಿನಲ್ಲಿ ಇಲಿಯೊಂದನ್ನು ಹಿಡಿಯಲು ಕಾರಿನೊಳಗೆ ನುಗ್ಗಿದ ಹಾವು, ನಂತರ ಹೊರಬರಲಾಗದೆ ಸಿಲುಕಿಕೊಂಡ ಘಟನೆ ನಡೆದಿದೆ. ನಗರದ ನಿವಾಸಿಯೊಬ್ಬರ ಕಾರಿನ ಅಡಿಭಾಗಕ್ಕೆ ನುಗ್ಗಿದ ಹಾವು, ಇಲಿಯನ್ನು ಹಿಡಿದ ಬಳಿಕ ರಂಧ್ರದಿಂದ ಹೊರಬರಲು ಸಾಧ್ಯವಾಗದೆ ಪರದಾಡಿದೆ. ಕಾರು ಪೇಟೆಗೆ ಬಂದಾಗ ಸ್ಥಳೀಯರು ಇದನ್ನು ಗಮನಿಸಿ, ಹಾವನ್ನು ಹೊರತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಘಟನೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಪುತ್ತೂರು : ಕಾರಿ‌ನೊಳಗೆ ನುಗ್ಗಿದ ಹಾವು,ಹೆಚ್ಚಿದ ಆತಂಕ Read More »

ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರವೇ ಕೇಂದ್ರ ಸರ್ಕಾರ ಮಾದರಿಯ ವೇತನ

ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಸದ್ಯದಲ್ಲಿಯೇ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನವನ್ನು ಪಡೆದುಕೊಳ್ಳಲಿದ್ದು ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಪ್ರಯತ್ನಗಳು ಸಾಗುತ್ತಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರು ತಿಳಿಸಿದ್ದಾರೆ.ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಮಾದರಿಯ ವೇತನವನ್ನು ಜಾರಿಗೊಳಿಸಲು ಹಾಗೂ ಎನ್ .ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ, ಹಳೇ

ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರವೇ ಕೇಂದ್ರ ಸರ್ಕಾರ ಮಾದರಿಯ ವೇತನ Read More »

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಗೌರವಾರ್ಪಣೆ

ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಸಾಮಾನ್ಯ ಸಭೆಯು ಘಟಕಾಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಇವರ ಅಧ್ಯಕ್ಷತೆಯಲ್ಲಿ ಮೇ 23ರಂದು ಜೇಸಿ ಭವನದಲ್ಲಿ ಗೌರವಾರ್ಪಣೆ ನಡೆಯಿತು.ಕಾರ್ಯಕ್ರಮ ದಲ್ಲಿಮಾತಿಲ್ಲದೆ ನಿರಂತರವಾಗಿ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ, ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ, ಶ್ರಮಿಕ ವರ್ಗದ . ಮಂಜುನಾಥ್ ಮಡ್ತಿಲ ಇವರನ್ನು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಈ ಗೌರವಿಸಲಾಯಿತು.ಸಮಾರಂಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ನಿಕಟಪೂರ್ವ ಅಧ್ಯಕ್ಷರು, ರಾಷ್ಟ್ರೀಯ ಸಂಯೋಜಕರಾದ ಜೆ ಎಫ್ ಎಂ ಸುರೇಶ್ ಕಾಮತ್

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಗೌರವಾರ್ಪಣೆ Read More »

ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

ಜೀರ್ಣೋದ್ಧಾರಗೊಳ್ಳುತ್ತಿರುವ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿಯವರು ಮೇ 23ರಂದು ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿದರು. ಈ ವೇಳೆ ಮಂದಿರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಧನಸಹಾಯ ನೀಡುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಭಜನಾ ಮಂದಿರದ ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಕಾರ್ಯದರ್ಶಿ ನಿರಂಜನ, ಕೋಶಾಧಿಕಾರಿ ಶ್ರೀಮತಿ ಲೀಲಾವತಿ, ಉಪಾಧ್ಯಕ್ಷ ಹರಿಣಾಕ್ಷಿ ಹಾಗೂ ಮುಖಂಡರಾದ ಸುಪ್ರೀತ್ ಮೋoಟಡ್ಕ, ಪ್ರಮುಖರಾದ ರುಕ್ಕಯ್ಯ ಗೌಡ

ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ Read More »

ದರ್ಶನ್ ಆತ್ಮಹತ್ಯೆ ಯತ್ನ?! ಗೃಹ ಸಚಿವ ಪರಮೇಶ್ವ‌ರ್ ಹೇಳಿದ್ದೇನು ಗೊತ್ತಾ?

ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಯನ್ನು ಸಚಿವ ಪರಮೇಶ್ವರ್ ತಳ್ಳಿ ಹಾಕಿದ್ದಾರೆ.ಶನಿವಾರ ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಸುದ್ದಿ ಸಂಪೂರ್ಣ ಸುಳ್ಳು. ಜೈಲಿನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಜೈಲಿನ ಅಧಿಕಾರಿಗಳು ನನಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಆತ್ಮಹತ್ಯೆ ಯತ್ನ?! ಗೃಹ ಸಚಿವ ಪರಮೇಶ್ವ‌ರ್ ಹೇಳಿದ್ದೇನು ಗೊತ್ತಾ? Read More »

error: Content is protected !!
Scroll to Top