ತೊಡಿಕಾನದಲ್ಲಿ ಮನರಂಜಿಸಿದ ನೂತನ ಯಕ್ಷಗಾನ ಪ್ರಸಂಗ ವರ್ಣಪಲ್ಲಟ
ಸುಳ್ಯ ಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಏ.13ರಂದು ದೇವಳದ ವಠಾರದಲ್ಲಿ ನಡೆದ ವರ್ಣಪಲ್ಲಟ ಯಕ್ಷಗಾನ ಬಯಲಾಟ ಉತ್ತಮವಾಗಿ ಮೂಡಿ ಬಂದು ಯಕ್ಷಭಿಮಾನಿಗಳ ಮನರಂಜಿಸಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು,ಜಾತ್ರೋತ್ಸವ ಸಮಿತಿಯವರು,ಜೀರ್ಣೋದ್ಧಾರ ಸಮಿತಿಯವರು ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದು ಯಕ್ಷಗಾನ ವೀಕ್ಷಿಸಿದರು.
ತೊಡಿಕಾನದಲ್ಲಿ ಮನರಂಜಿಸಿದ ನೂತನ ಯಕ್ಷಗಾನ ಪ್ರಸಂಗ ವರ್ಣಪಲ್ಲಟ Read More »










