Author name: Tejas

ಐವರ್ನಾಡು : ಯುವಕ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ ತಾಲೂಕಿಮ ಐವರ್ನಾಡು ಗ್ರಾಮದ ದೇವರಕಾನದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.11ರಂದು ಸಂಜೆ ನಡೆದಿದೆ.ತೀರ್ಥಪ್ರಸಾದ್ ಕುಳ್ಳಂಪಾಡಿ (30)ಎಂಬವರು ಮನೆಯ ಹಿಂಬದಿಯಲ್ಲಿ ಸೀರೆಯ ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇವರು ಕೆಲ ಸಮಯದ ಹಿಂದೆ ಬೆಳ್ಳಾರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.

ಐವರ್ನಾಡು : ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಅರಂತೋಡು ಬಳಿ ಕಾರು ತಡೆಬೆಲಿಗೆ ಡಿಕ್ಕಿ ಹೊಡೆದು ಅಪಾಯದಿಂದ ಪ್ರಯಾಣಿಕರು ಪಾರು

ಮಡಿಕೇರಿಯಿಂದ ಕಾಸರಗೋಡು ತೆರಳುತ್ತಿದ್ದ ಕಿಗರ್ ಕಾರು ಅರಂತೋಡು ಬಳಿ ಕೊಡೆಂಕೇರಿ ಸಮೀಪ ರಸ್ತೆಯ ತಡೆ ಬೇಲಿಗೆ ಕಾರು ಗುದ್ದಿ ಪ್ರಯಾಣಿಕರು ಪಾರಾಗಿದ್ದ ಘಟನೆ ನಡೆದಿದೆ.ಕಾರಿನ ಮುಂಭಾಗ ಜಖಂ ಆಗಿದೆ ಎಂದುಬ್ತಿಲಿದು ಬಂದಿದೆ.

ಅರಂತೋಡು ಬಳಿ ಕಾರು ತಡೆಬೆಲಿಗೆ ಡಿಕ್ಕಿ ಹೊಡೆದು ಅಪಾಯದಿಂದ ಪ್ರಯಾಣಿಕರು ಪಾರು Read More »

ಬೆಳ್ಳಾರೆ : ಅಕ್ರಮ‌ ಜಾನುವಾರು ಸಾಗಾಟ ಪತ್ತೆ

ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಪೋಲೀಸರು ದಾಳಿ ನಡೆಸಿ ರಿಕ್ಷಾ ಚಾಲಕನನ್ನು ಬಂಧಿಸಿದ ಘಟನೆ ನಡೆದಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ ಘಟನೆ ಸೆ. 09 ರಂದು ರಾತ್ರಿ ನಡೆದಿದೆ.ಚೆನ್ನಾವರದ ಇಸುಬು ಎಂಬವರು ಕೊಳಂಬಳದ ವ್ಯಕ್ತಿಯೊಬ್ಬರಿಂದ ಜಾನುವಾರು ಒಂದನ್ನು ಖರೀಸಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ ಬೆಳ್ಳಾರೆ ಪೋಲೀಸರು ತಡೆದು ನಿಲ್ಲಿಸಿದಾಗ ಅಟೋರಿಕ್ಷಾ ( KA21 C 6532) ದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಹೋರಿ ಪತ್ತೆಯಾಗಿದೆ. ರಿಕ್ಷಾದಲ್ಲಿದ್ದ ಒರ್ವನನ್ನು ಪೋಲೀಸರು

ಬೆಳ್ಳಾರೆ : ಅಕ್ರಮ‌ ಜಾನುವಾರು ಸಾಗಾಟ ಪತ್ತೆ Read More »

ಬಿಜೆಪಿ‌ ಸುಳ್ಯ ಮಂಡಲ ಎಸ್.ಸಿ ಮೋರ್ಚಾ ಪ್ರಧಾ‌ನ ಕಾರ್ಯದರ್ಶಿ ಕೊರಗಪ್ಪ ನಿಧನ

ಬಿಜೆಪಿ ಸುಳ್ಯ ಮಂಡಲದ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ಎರಟಾಡಿt ಕೊರಗಪ್ಪ ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆ.10ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ ವರ್ಷ ಪ್ರಾಯವಾಗಿತ್ತು.ಸೆ.7ರಂದು ಅನಾರೋಗ್ಯಕ್ಕೆ ಒಳಗಾಗಿದ್ದ ಕೊರಗಪ್ಪರನ್ನು ಚಿಕಿತ್ಸೆಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸೆ.10ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೊರಗಪ್ಪ ಅವರು ಬಿಜೆಪಿಯಲ್ಲಿ 35 ವರ್ಷಗಳಿಂದ ಸಕ್ರೀಯವಾಗಿ ತೊಡಗಿಕೊಂಡಿದ್ದು ಪಕ್ಷದ ಬೂತ್ ಸಮಿತಿ ಅಧ್ಯಕ್ಷರಾಗಿ,

ಬಿಜೆಪಿ‌ ಸುಳ್ಯ ಮಂಡಲ ಎಸ್.ಸಿ ಮೋರ್ಚಾ ಪ್ರಧಾ‌ನ ಕಾರ್ಯದರ್ಶಿ ಕೊರಗಪ್ಪ ನಿಧನ Read More »

ಮಂಡೆಕೋಲು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ,ಎಲ್ಲಾ ಶಿಕ್ಷಕರಿಗೆ ಸನ್ಮಾನ

ಮಂಡೆಕೋಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಲ್ಲಾ ಶಿಕ್ಷಕರನ್ನು ಹಾಗೂ ಬಿಸಿಯೂಟ ಸಿಬ್ಬಂಧಿಗಳನ್ನು ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮದ ಮೊದಲು ಅಧ್ಯಾಪಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಿಕ್ಷಕರ ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಪೂರ್ತಿ ಶಾಲಾ ವಿಧ್ಯಾರ್ಥಿಗಳೇ ನಿರ್ವಹಿಸಿರುವುದು ವಿಶೇಷವಾಗಿತ್ತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುಳ್ಯ ರೈತೋತ್ಪಾದಕ ಕಂಪೆನಿಯ ನಿರ್ದೇಶಕಿ ಮಧುರಾ ಎಂ.ಆರ್ , ಎಸ್‌ ಡಿ ಎಂ ಸಿ ಉಪಾಧ್ಯಕ್ಷ ಮುರಳೀಧರ್

ಮಂಡೆಕೋಲು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ,ಎಲ್ಲಾ ಶಿಕ್ಷಕರಿಗೆ ಸನ್ಮಾನ Read More »

ಸರಕಾರಿ ಯೋಜನೆ ಪಡೆಯಲು ಹಕ್ಕು ಪತ್ರ ಅಗತ್ಯ : ಶಾಸಕಿ ಭಾಗೀರಥಿ ಮುರುಳ್ಯ

ಹಕ್ಕುಪತ್ರ ಸರಕಾರಿ ಯೋಜನೆಗಳನ್ನು ಪಡೆಯಲು ಪೂರಕವಾಗಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಾಲ್ಕೂರು ಗ್ರಾಮದ ಗುಂಡಡ್ಕ ಕಾಲೋನಿಯ ೧೮ ಮಂದಿಗೆ ೯೪ಸಿ ಯೋಜನೆಡಿ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಽಗಳು ಜೊತೆಗೆ ಊರಿನ ಜನರಲ್ಲೂ ಅಭಿವೃದ್ಧಿಯ ಭಾವಗಳಿರಬೇಕು. ಗುಂಡಡ್ಕ ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಽಗಳು, ಮಾಧ್ಯಮದವರು, ಸ್ಥಳೀಯರು, ನಾಯಕರು ಶ್ರಮಿಸಿದ್ದಾರೆ. ಈ ಶ್ರಮದ ಫಲವಾಗಿ ಇಂದು ಹಕ್ಕುಪತ್ರ ಲಭಿಸಿದೆ. ಮುಂದೆ ಹಕ್ಕುಪತ್ರದ ಮೂಲಕ

ಸರಕಾರಿ ಯೋಜನೆ ಪಡೆಯಲು ಹಕ್ಕು ಪತ್ರ ಅಗತ್ಯ : ಶಾಸಕಿ ಭಾಗೀರಥಿ ಮುರುಳ್ಯ Read More »

ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರು ಓರ್ವ ಶ್ರೇಷ್ಠ ಸಮಾಜ ಸುಧಾರಕ : ಶಾಸಕಿ‌ ಭಾಗೀರಥಿ ಮುರುಳ್ಯ

ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಇಡೀ ವಿಶ್ವಕ್ಕೆ ನಾಯಕರಾಗಿ ಶಕ್ತಿಯಾಗಿ ಮೆರೆದು ಶ್ರೇಷ್ಢ ಸಮಾಜ ಸುಧಾರಕರಾದರು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ರಾಷ್ಟಿಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ತಾಲೂಕು ಆಶ್ರಯದಲ್ಲಿ ಸುಳ್ಯದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಮೆಟ್ಟಿನಿಂತು ಸುಧಾರಣೆ ತರಲು ಪ್ರಯತ್ನಿಸಿದರು.ಅವರ ಆದರ್ಶಗಳನ್ನು ಹಲವು ನಾಯಕರು

ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರು ಓರ್ವ ಶ್ರೇಷ್ಠ ಸಮಾಜ ಸುಧಾರಕ : ಶಾಸಕಿ‌ ಭಾಗೀರಥಿ ಮುರುಳ್ಯ Read More »

ಫೈನಾನ್ಸ್ ನವರ ಕಿರುಕುಳದ ಆರೋಪ – ಲಾರಿ‌ ಮಾಲಕ ಆತ್ಮಹತ್ಯೆ ಯತ್ನ

ಸರಕಾರ ಕೆಂಪು ಕಲ್ಲು ಸಾಗಾಟ ನಿಷೇಧ ಮಾಡಿದುದರಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ನವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ಲಾರಿ ಮಾಲಕರೊಬ್ಬರು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಸೆ.10 ವರದಿಯಾಗಿದೆ.ಎಲಿಮಲೆಯ ಭಾನುಪ್ರಕಾಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ.ಈ ಘಟನೆ ನಡೆದಿದ್ದು ವಿಷಯ ತಿಳಿದ ಮನೆಯವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿದುಬಂದಿದೆ.

ಫೈನಾನ್ಸ್ ನವರ ಕಿರುಕುಳದ ಆರೋಪ – ಲಾರಿ‌ ಮಾಲಕ ಆತ್ಮಹತ್ಯೆ ಯತ್ನ Read More »

ನೆಲ್ಲೂರು‌ ಕೆಮ್ರಾಜೆ : ತಾಳೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ

ನೆಲ್ಲೂರು ಕೆಮ್ರಾಜೆ ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಕಾರದಿಂದ ಗ್ರಾಮ ಪಂಚಾಯತ್ ಸಭಾ ಭವನ ನೆಲ್ಲೂರು ಕೆಮ್ರಾಜೆಯಲ್ಲಿ ತಾಳೆ ಕೃಷಿ ಬಗ್ಗೆ ರೈತರಿಗೆ ತರಬೇತಿ ಮತ್ತು ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಚಂದ್ರಾವತಿಯವರು ವಹಿಸಿದ್ದರು. ತಾಳೆ ಕೃಷಿಯ ಬಗ್ಗೆ ಮಾಹಿತಿಯನ್ನು ಕೃಷ್ಣಾ ವೈ.ಟಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 3 F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಏರಿಯಾ ಮ್ಯಾನೇಜರ್ ನೀಡಿದರು. ಕ್ಲಸ್ಟರ್ ಸೂಪರ್ ವೈಸರ್

ನೆಲ್ಲೂರು‌ ಕೆಮ್ರಾಜೆ : ತಾಳೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ Read More »

ಪೋಟೋ ಗ್ರಾಫರ್ ನಾರಾಯಣ ಕಾಯರ್ತೊಡಿ ನಿಧನ

ಕಾಯರ್ತೋಡಿ ನಿವಾಸಿ ಪೋಟೋ ಗ್ರಾಪರ್ ನಾರಾಯಣ ಆಚಾರ್ಯರವರು ನಿಧನ ಹೊಂದಿದ್ದಾರೆಅವರಿಗೆ 60 ವರ್ಷ ಪ್ರಾಯವಾಗಿತ್ತು.ಇವರು ಕಾಯರ್ತೋಡಿ ಮಹಾವಿಷ್ಣು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಮೃತರು ಪತ್ನಿ ಶೋಭಾ, ಸಹೋದರ ಈಶ್ವರ ಆಚಾರ್ಯ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಪೋಟೋ ಗ್ರಾಫರ್ ನಾರಾಯಣ ಕಾಯರ್ತೊಡಿ ನಿಧನ Read More »

error: Content is protected !!
Scroll to Top