Author name: Tejas

ಅಂತರ್ ರಾಜ್ಯ ಸಾಂಸ್ಕೃತಿಕ ಕಾರ್ಯಕ್ರಮ ವಿನಿಮಯ ಸಿ.ಸಿ.ಆರ್.ಟಿ ಬಳಗದ ಮುಖ್ಯ ಉದ್ದೇಶ : ಶೀತಲ್ ಯು.ಕೆ

ಸಿ.ಸಿ.ಆರ್.ಟಿ ಬಳಗ ಸುಳ್ಯದಲ್ಲಿ ಶಿಕ್ಷಕ ಚಿನ್ನಪ್ಪ ಗೌಡರ ಮುಂದಾಳತ್ವದಲ್ಲಿ ಪರಿಣಾಮಕಾರಿಯಾಗಿ ತನ್ನ ಚಟುವಟಿಕೆ ನಿರ್ವಹಿಸುತ್ತಿದ್ದು ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳುವುದು ಸಿ.ಸಿ.ಆರ್‌.ಟಿ.ಬಳಗದ ಮೂಲ ಉದ್ದೇಶ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ ಹೇಳಿದರು.ಸಿ. ಸಿ.. ಆರ್.ಟಿ ಬಳಗ ಸುಳ್ಯ ಇದರ ನೇತೃತ್ವದಲ್ಲಿ ಶ್ರೀ ಸುಬ್ರಹ್ಮಣೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಸಂಯುಕ್ತ ಆಶ್ರಯದಲ್ಲಿ ಜ.1ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಝೇಂಕಾರಅಂತರರಾಜ್ಯ ಸಂಗೀತ ಹಬ್ಬಸಾಂಪ್ರದಾಯಿಕ ಹಾಗೂ ನವೀನ ಸಂಗೀತ ವಾದ್ಯಗಳ ಪರಿಚಯ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಅವರು […]

ಅಂತರ್ ರಾಜ್ಯ ಸಾಂಸ್ಕೃತಿಕ ಕಾರ್ಯಕ್ರಮ ವಿನಿಮಯ ಸಿ.ಸಿ.ಆರ್.ಟಿ ಬಳಗದ ಮುಖ್ಯ ಉದ್ದೇಶ : ಶೀತಲ್ ಯು.ಕೆ Read More »

43 ವರ್ಷದ ಇತಿಹಾಸವಿರುವ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ – ಲತಾಶ್ರೀ ಸುಪ್ರೀತ್ ಮೋಂಟಡ್ಕ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, 43 ವರ್ಷದ ಇತಿಹಾಸವಿರುವ ಜೇಸಿಐ ಭಾರತ ವಲಯ 15ರ ಪ್ರತಿಷ್ಠಿತ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ 2026ನೇ ಸಾಲಿನಲ್ಲಿ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಸಾಹಿತಿ, ಲೇಖಕಿ, ಸಂಘಟಕಿ, ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರು 44ನೇ ಅಧ್ಯಕ್ಷರಾಗಿ ನಿಯೋಜನೆಗೊಂಡಿರುತ್ತಾರೆ. ನಿಕಟಪೂರ್ವ ಅಧ್ಯಕ್ಷರಾಗಿ ಜೇಸಿ. ಹೆಚ್.ಜಿ.ಎಫ್. ಸುರೇಶ್ ಕಾಮತ್ ಜಯನಗರ, ಕಾರ್ಯದರ್ಶಿಯಾಗಿ ಜೇಸಿ. ತಾರಾ ಮಾದವ ಚೂಂತಾರು, ಜತೆ ಕಾರ್ಯದರ್ಶಿಯಾಗಿ ಜೇಸಿ. ವಿನೋದ್

43 ವರ್ಷದ ಇತಿಹಾಸವಿರುವ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ – ಲತಾಶ್ರೀ ಸುಪ್ರೀತ್ ಮೋಂಟಡ್ಕ Read More »

ಸುಳ್ಯ : ಸಿಡ್ಬಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲ್ಲೂಕಿನ ಸಿಡ್ಬಿ ಉದ್ಯಮ ಮಾಡುವವರ ವಿಶೇಷ ತರಬೇತಿ ಕಾರ್ಯಾಗಾರವನ್ನು ದ.ಕ-2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ರವರು ಉದ್ಘಾಟಿಸಿ ಶ್ರೀ ಕ್ಷೇತ್ರ ದ ವೈಶಿಷ್ಟ್ಯ, ಕ್ಷೇತ್ರದ ಕಾರ್ಯಕ್ರಮಗಳು ಮತ್ತು ಸಿಡ್ಬಿ ಸ್ವ-ಉದ್ಯೋಗ ಮಾಡುವವರಿಗೆ ರುಡ್ಸೆಟ್ ಸಂಸ್ಥೆಯಿಂದ ಹಲವು ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಇರುವ ಬಗೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯ ಬಹುದೆಂಬುದರ ಬಗ್ಗೆ ಮಾಹಿತಿ ನೀಡಿದರು. ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಕರುಣಾಕರ ಜೈನ್

ಸುಳ್ಯ : ಸಿಡ್ಬಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ Read More »

ಕಡಬ ಪ.ಪಂ. ನಾಮನಿರ್ದೇಶಿತ ಸದಸ್ಯರ ನೇಮಕಾತಿ ರದ್ದು

ಕಡಬ: ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ವಿರೋಧ ಹಾಗೂ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಕಡಬ ಪಟ್ಟಣ ಪಂಚಾಯತ್‌ಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಹೊರಡಿಸಿದ್ದ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಿದೆ.ಏನಿದು ಘಟನೆ? ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಆಡಳಿತ ಹಿಡಿದ ಬೆನ್ನಲ್ಲೇ, ಸರ್ಕಾರವು ಅಶ್ರಫ್ ಶೇಡಿಗುಂಡಿ, ಶಾಲಿನಿ ಸತೀಶ್ ಹಾಗೂ ಆಶಿಸ್ ಅರಸ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಆದರೆ, ಈ ನೇಮಕಾತಿಯು ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗಮನಕ್ಕೆ

ಕಡಬ ಪ.ಪಂ. ನಾಮನಿರ್ದೇಶಿತ ಸದಸ್ಯರ ನೇಮಕಾತಿ ರದ್ದು Read More »

ಕನ್ನಡ ಪರಾಜೆ ಶಾಲೆಯಲ್ಲಿ ಶಾಸಕ ಪೊನ್ನಣ್ಣರ ಅವರಿಂದ ಎಲ್‌ಕೆಜಿ ಕೊಠಡಿ ಉದ್ಘಾಟನೆ

ಪೆರಾಜೆ: ಕನ್ನಡ ಪೆರಾಜೆ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಎಲ್ ಕೆ ಜಿ ತರಗತಿ ಕೊಠಡಿಯನ್ನು ಶಾಸಕರಾದ ಪೊನ್ನಣ್ಣ ರವರು ಡಿ 31 ರಂದು ರವರು ಉದ್ಘಾಟಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಶಾಲೆಯ ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಎಸ್‌ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ವಿನುತಾ, ಸ್ಥಳೀಯರಾದ ಸುರೇಶ್ ಪೆರುಮುಂಡ,ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಜಯರಾಮ ಪೆರುಮುಂಡ, ಬಿ ಓ ಮಹೇಶ್, ಹಾಗೂ ಅಬೂಬಕ್ಕರ್ ಪಿಎನ್,

ಕನ್ನಡ ಪರಾಜೆ ಶಾಲೆಯಲ್ಲಿ ಶಾಸಕ ಪೊನ್ನಣ್ಣರ ಅವರಿಂದ ಎಲ್‌ಕೆಜಿ ಕೊಠಡಿ ಉದ್ಘಾಟನೆ Read More »

ಯುವಕ ನಿಧನ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿ ರಾಜೀವ ನಾಯ್ಕ ರ ಮಗ ಶ್ರೀರಾಮ (25)ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಡಿ.31ರಂದು ನಿಧನರಾದರುಶ್ರೀರಾಮ ಕೆಲ ಸಮಯಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಯಿಂದ ಚೇತರಿಕೆಯಾಗದಿರುವುದರಿಂದ ಒಂದು ವಾರದ ಹಿಂದೆಯಷ್ಟೇ ಮತ್ತೆ ಮನೆಗೆ ಕರೆ ತಂದು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.ಮೃತರು ಅವಿವಾಹಿತರಾಗಿದ್ದು ತಾಯಿ ಜಾನಕಿ, ಸಹೋದರ ಭವಿತ್, ಸಹೋದರಿ ಕುಸುಮ ಜಯರಾಮ್ ಹಾಗೂ ಬಂಧು

ಯುವಕ ನಿಧನ Read More »

ಆಟೋ ರಿಕ್ಷಾ ಚಾಲಕರ ಸಂಘದಿಂದ ಚೆನ್ನಕೇಶವ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ದ ಕ …ಇದರ ವತಿಯಿಂದ ತಾಲೂಕಿನ ಎಲ್ಲಾ ಸದಸ್ಯರ ಪರವಾಗಿ ಮತ್ತು ತಾಲೂಕಿನ ಸಂಘಕ್ಕೆ ತಾಲೂಕಿನಾದ್ಯಂತ ಪ್ರೋತ್ಸಾಹ ಮಾಡುವ ಹಿತೈಷಿ ಬಂಧುಗಳ ಶ್ರೇಯೋಭಿವೃದ್ಧಿ ಗಾಗಿ… ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮಹಾಪೂಜೆ ಹಣ್ಣುಕಾಯಿ ನಡೆಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರಶಾಂತ್ ಭಟ್… ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಶಾಂತಿನಗರ ಕೋಶಾಧಿಕಾರಿ ರವಿ ಎಸ್. ಮಾಜಿ

ಆಟೋ ರಿಕ್ಷಾ ಚಾಲಕರ ಸಂಘದಿಂದ ಚೆನ್ನಕೇಶವ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ Read More »

ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ಕನಸಿನ ರಸ್ತೆಗೆ ೩೦ವರ್ಷಗಳ ಬಳಿಕ ಕಾಂಕ್ರೀಟೀಕರಣ- ವಿರಾಜಪೇಟೆ ಶಾಸಕ ಪೊನ್ನಣ್ಣರಿಂದ ಉದ್ಘಾಟನೆ

ಕಾನೂನು ತೊಡಕುಗಳಿಂದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ೨೫ ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳದೆ ೩೦ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ೬ ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಳ್ಳುವುದರ ಮೂ ಲಕ ೩೦ವರ್ಷಗಳ ಬಳಿಕ ೨೫ ಮನೆಗಳ ಫಲಾನುಭವಿಗಳ ಕನಸು-ನನಸಾಗಿದ್ದು, ಸೋಮವಾರ ಅವರು ರಸ್ತೆಯನ್ನು ಉದ್ಘಾಟಿಸಿದರು.ಪೆರಾಜೆ ಗ್ರಾಮದ ಪೆರಂಗಜೆ -ನೆಡ್ಚಿಲ್ ಕುಟುಂಬಸ್ಥರ ೨೫ ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಸುಮಾರು ೩೦ ವರ್ಷಗಳಿಂದ ಅಭಿವೃದ್ದಿ ಕಾಣದೇ ಇದ್ದು, ಈ ರಸ್ತೆ ಅಭಿವೃದ್ಧಿ ಕಾಣದೆ ಸರಕುಸಾಗಾಟನೆಗೆ ಮತ್ತು ಶಾಲಾ ಮಕ್ಕಳನ್ನು ದ್ವಿಚಕ್ರ

ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ಕನಸಿನ ರಸ್ತೆಗೆ ೩೦ವರ್ಷಗಳ ಬಳಿಕ ಕಾಂಕ್ರೀಟೀಕರಣ- ವಿರಾಜಪೇಟೆ ಶಾಸಕ ಪೊನ್ನಣ್ಣರಿಂದ ಉದ್ಘಾಟನೆ Read More »

ಸುಳ್ಯ : ರಾಷ್ಟ್ರ ಕವಿ ಡಾ| ಕುವೆಂಪು ಅವರ ಜನ್ಮದಿನಾಚರಣೆ 2025 ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ವಂತಿಕಾ ಸಾಹಿತ್ಯ ಸಾಂಸ್ಕೃತಿಕ ಬಳಗ ಸುಳ್ಯ, ದ. ಕ. “ಚಂದನಾ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದಸಂಧ್ಯಾರಶ್ಮಿ ಸಾಹಿತ್ಯ ಸಂಘ’, ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ ಸುಳ್ಯ ತಾಲೂಕು ಇವರುಗಳ ಸಹಯೋಗದೊಂದಿಗೆಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಡಾ| ಕುವೆಂಪು ಅವರ ಜನ್ಮದಿನಾಚರಣೆ 2025 ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿ.29ರಂದು ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ನಡೆಯಿತು.ಸ್ವಂತಿಕಾ ಸಾಹಿತ್ಯ-ಸಾಂಸ್ಕೃತಿಕ ಬಳಗ ಸುಳ್ಯದ ಅಧ್ಯಕ್ಷ ಹಾಗೂ ನಿವೃತ್ತ ಸಿ.ಡಿ.ಪಿ.ಒ. ನಾರಾಯಣ ನೀರಬಿದಿರೆ ಅಧ್ಯಕ್ಷತೆ

ಸುಳ್ಯ : ರಾಷ್ಟ್ರ ಕವಿ ಡಾ| ಕುವೆಂಪು ಅವರ ಜನ್ಮದಿನಾಚರಣೆ 2025 ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ Read More »

ಸಾಹಿತಿಯಾದವನಿಗೆ ಅಭಿಮಾನ ಮತ್ತು ಅವಮಾನಗಳನ್ನು ಸಹಿಸಿಕೊಳ್ಳುವ ಶಕ್ತಿಯಿರಬೇಕು : ಡಾ.ಶಾಲಿನಿ ಡಿ.ಎಲ್

ಸುಳ್ಯ : ಕಾವ್ಯ ಸೆಳೆದಷ್ಟು ಬೇರೆ ಯಾವ ಸಾಹಿತ್ಯ ಪ್ರಕಾರವು ನಮ್ಮನ್ನು ಸೆಳೆಯುವುದಿಲ್ಲ.ಕವನಗಳನ್ನು‌ ಬರೆಯಲು ವಯಸ್ಸಿನ ಅಂತರವಿಲ್ಲ ಕೇವಲ ಭಾವನೆಗಳ ಸಮತೋಲನವನ್ನು ಅರ್ಥ ಮಾಡಿಕೊಂಡರೆ ಸಾಕು.ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುವವನು ಮೊದಲು ಕವಿಯಾಗಿ ಪಾದಾರ್ಪಣೆ ಮಾಡುತ್ತಾನೆ.ಸಾಹಿತಿಯಾದವನಿಗೆ ಅಭಿಮಾನ ಮತ್ತು ಅವಮಾನಗಳನ್ನು ಸಹಿಸಿಕೊಳ್ಳುವ ಇರಬೇಕೆಂದು ಸಾಹಿತಿ ಹಾಗೂ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ.ಶಾಲಿನಿ ಡಿ.ಎಲ್ ಹೇಳಿದರು.ಅವರು ಕುಕ್ಕುಜಡ್ಕದಲ್ಲಿ ನಡೆಯುತ್ತಿರುವ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭಾಷಾ ಪ್ರೇಮಿಯಾದವನು

ಸಾಹಿತಿಯಾದವನಿಗೆ ಅಭಿಮಾನ ಮತ್ತು ಅವಮಾನಗಳನ್ನು ಸಹಿಸಿಕೊಳ್ಳುವ ಶಕ್ತಿಯಿರಬೇಕು : ಡಾ.ಶಾಲಿನಿ ಡಿ.ಎಲ್ Read More »

error: Content is protected !!
Scroll to Top