ಪ್ರಚಲಿತ

ನಾಳೆ (ಜ.31) ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ

ನಾಳೆ (ಜ.31) ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಬೆಳಿಗ್ಗೆ ನವಗ್ರಹ ಹೋಮ, ಚಂಡಿಕಾ ಹೋಮ ನಡೆದು ಪೂರ್ಣಾಹುತಿ ನಂತರ ಮಹಾಮಂಗಳಾರತಿ,ಪ್ರಸಾದ ವಿತರಣೆಯಾಗಿ ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಗಂಟೆ 5.00ರಿಂದ ರಂಗ ಪೂಜೆ, ಪ್ರಸನ್ನ ಪೂಜೆ, ಪ್ರಾರ್ಥನೆ,ಪ್ರಸಾದ ವಿತರಣೆ ನಡೆಯಲಿದೆ.ಹೆಚ್ಚಿನ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಬೇಕೆಂದುಕ್ಷೇತ್ರದ ಧರ್ಮದರ್ಶಿಗಳಾದ ಡಾ.ಕೆ.ವಿ ರೇಣುಕಾಪ್ರಸಾದ್ ವಿನಂತಿಸಿಕೊಂಡಿದ್ದಾರೆ.

ನಾಳೆ (ಜ.31) ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ Read More »

ಅರಂತೋಡು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡುಕೋಣಗಳ ಸಂಚಾರ,ವಾಹನ ಸವಾರರೇ ಎಚ್ಚರ !

ಸುಳ್ಯ ತಾಲೂಕಿನ ಅರಂತೋಡು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ವೈಎಂಕೆ ಜಾಡಾವು ಬಳಿ ಕಾಡು ಕೋಣಗಳು ಆಗಾಗ ರಸ್ತೆ ದಾಟುತ್ತಿದ್ದು ವಾಹನ ಸವಾರರಿಗೆ ಅಪಾಯ ಎದುರಾಗಿದೆ.ವಾಹನ ಸವಾರರಲ್ಲಿ ದ್ವಿಚಕ್ರ ವಾಹನ ಸವಾರರು ಈ ಭಾಗದಲ್ಲಿ ವಾಹನ ಚಲಾಯಿಸುತ್ತಿರುವ ಸಂದರ್ಭದಲ್ಲಿ ಇನ್ನೂ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ.ತಪ್ಪಿದಲ್ಲಿ ಕಾಡುಕೋಣಗಳು ವಾಹನಗಳಿಗೆ ಡಿಕ್ಕಿ ಹೊಡೆದರೆ ಅಪಾಯ ಎದುರಾಗಬಹುದು.

ಅರಂತೋಡು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡುಕೋಣಗಳ ಸಂಚಾರ,ವಾಹನ ಸವಾರರೇ ಎಚ್ಚರ ! Read More »

ಪೆರಾಜೆ : ದೇವಸ್ಥಾನದಲ್ಲಿ ಶಾಮಿಯಾನ ಹಾಕಲು ಅನ್ಯಮತಿಯರಿಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದು ಸಂಘಟನೆ

ಪೆರಾಜೆ ದೇವಸ್ಥಾನದಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಅನ್ಯಮತೀಯರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದು ವರದಿಯಾಗಿದೆ. ಸುಳ್ಯದ ಸಹನಾ ಶಾಮಿಯಾನದವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಿದ್ದಕ್ಕೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ದೇವಳದವರು ಸ್ವಾತಿ ಸೌಂಡ್ಸ್ ನವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಿದ್ದರು.ಅವರು ಸಹನಾ ದವರಿಗೆ ಸಬ್ ಕಾಂಟ್ರಾಕ್ಸ್ ನೀಡಿದ್ದಾರೆ ಎಂದು ದೇವಳದಿಂದ ತಿಳಿದು ಬಂದಿದೆ.ಇದೀಗ ಹಿಂದು ಸಂಘಟನೆಯವರ ವಿರೋಧದ ಹಿನ್ನಲೆಯಲ್ಲಿ ಜಿ.ಜಿ.ನಾಯಕ್ ಅವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ.

ಪೆರಾಜೆ : ದೇವಸ್ಥಾನದಲ್ಲಿ ಶಾಮಿಯಾನ ಹಾಕಲು ಅನ್ಯಮತಿಯರಿಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದು ಸಂಘಟನೆ Read More »

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರ ಕಾಲಾವಧಿ ಕೋಲ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾರಣೀಕ ದೈವ ಶ್ರೀ ಪಾಷಾಣಮೂರ್ತಿ ಅಮ್ಮನವರ ಕಾಲಾವಧಿ ಕೋಲ ಜನವರಿ 28ರಂದು ದೈವಸ್ಥಾನದಲ್ಲಿ ನಡೆಯಿತು.ಜನವರಿ 27ರಂದು ರಾತ್ರಿ ಭಂಡಾರ ತೆಗೆಯಲಾಯಿತು. ಜನವರಿ 28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಿತು. ನಂತರ ಪ್ರಸಾದ ವಿತರಣೆ ನಡೆದು ಹರಕೆ ಸಮರ್ಪಣೆ ನಡೆಯಿತು.ಬಳಿಕ ಅನ್ನಸಂತರ್ಪಣೆ ನಡೆಯಿತು.ಈ‌ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು,ಸದಸ್ಯರು,ಜೀರ್ಣೊದ್ದಾರ ಸಮಿತಿಯವರು,ಸಿಬ್ಬಂದಿಗಳು ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರ ಕಾಲಾವಧಿ ಕೋಲ Read More »

ಶತಮಾನದ ಗಡಿಯಾಚೆಗಿನ ಅರಂತೋಡು ಪಟೇಲ್ ಅಹಮದ್ ಕುಂಞಿ ಹಾಜಿ ಮನೆತನದ (ತರವಾದಡಿನ) ಸಮಿತಿ ರಚನೆ

ದಿನಾಂಕ 21.01.2025 ರಂದು ದಿವಂಗತ ಅರಂತೋಡಿನ ಪಟೇಲರಗಿದ್ದ ದಿವಂಗತ ಅಹಮದ್ ಕುಂಞಿ ಹಾಜಿ ಅವರ ಮೊಮ್ಮಗ ವ್ಯಾಪಾರಿ, ಸಮಾಜ ಸೇವಕ, ಅರಂತೋಡು ಪಾಪ್ಯುಲರ್ ಎಜುಕೇಶನ್ ರಿ ಇದರ ಸ್ಥಾಪಕ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಇದರ ಸ್ಥಾಪಕ ಕಾರ್ಯದರ್ಶಿ,ಅರಂತೋಡು ಮಸೀದಿಯ ಅಧ್ಯಕ್ಷರಾಗಿದ್ದ ಅಹಮದ್ ಪಟೇಲ್ ಅವರು ನಿಧನ ಹೊಂದಿ 40ನೇ ದಿನದ ತಹಲೀಲ್ ದುವಾ ಕಾರ್ಯಕ್ರಮ ಪಟೇಲ್ ಮನೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಶತಮಾನದ ಗಡಿ ದಾಟಿದ ಅರಂತೋಡು ಪಟೇಲರಾಗಿ ಜನನುರಾಗಿ ಕುಂಬ್ಳೆ

ಶತಮಾನದ ಗಡಿಯಾಚೆಗಿನ ಅರಂತೋಡು ಪಟೇಲ್ ಅಹಮದ್ ಕುಂಞಿ ಹಾಜಿ ಮನೆತನದ (ತರವಾದಡಿನ) ಸಮಿತಿ ರಚನೆ Read More »

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಲ ಬೆಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಆಯ್ಕೆ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಇಂದು (ಜ.28) ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.ಪ್ರಸ್ತುತ ಚಂದ್ರ ಕೋಲ್ಟಾರು ರವರು ದ.ಕ.ಜಿಲ್ಲಾ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಲ ಬೆಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಆಯ್ಕೆ Read More »

ಸುಳ್ಯ : ಇಂದು ಪವರ್ ಕಟ್

ಇಂದು ಸುಳ್ಯದಲ್ಲಿ ಪವರ್ ಕಟ್ ಇದೆ.33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ನಡೆಯುವ ಜ.28 ಮಂಗಳವಾರ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆವರೆಗೆ 33/11 ಕೆ.ವಿ ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕಳೆದ ವಾರ ಇದೆ ಈ ದಿವಸ ಪವರ್ ಕಟ್ ಮಾಡಲಾಗಿದ್ದು ರಾತ್ರಿ ಎಂಟು ಗಂಟೆಯ ತನಕ ವಿದ್ಯುತ್ ಸಂಪರ್ಕ

ಸುಳ್ಯ : ಇಂದು ಪವರ್ ಕಟ್ Read More »

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ : ಡಾ.ಅನುರಾಧ ಕುರುಂಜಿ

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ : ಡಾ.ಅನುರಾಧ ಕುರುಂಜಿ Read More »

ಫೆ.21ಕ್ಕೆ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಬಿಡುಗಡೆ

ಸುಳ್ಯ ತಾಲೂಕಿನ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಫೆಬ್ರವರಿ 21ಕ್ಕೆ ಬಿಡುಗಡೆಯಗಲಿದೆ.ಹಲವಾರು ಕಡೆ ಚಿತ್ರೀಕರಣಗೊಂಡು ಸುಳ್ಯದ (ಮೆಡಿಕಲ್ ಕಾಲೇಜು,ಶ್ರೀ ರೇಣುಕಾಪ್ರಸಾದ್ ರವರ ತೋಟದ ಮನೆ, ಗಾಂಧಿನಗರದ ಮೆಹಫಿಲ್ ವಿಲ್ಲಾ , ವೆಂಕಟರಮಣ ಸೊಸೈಟಿ, ಹರಿಹರ,ತಳೂರು )ಸುತ್ತಮತ್ತ ಚಿತ್ರೀಕರಣಗೊಂಡಿದೆ.ಇದೀಗ ಫೆಬ್ರವರಿ 21ಕ್ಕೆ ಚಿತ್ರಮಂದಿರಕ್ಕೆ ಬರಲಿದೆ..*ತೇಜಸ್ ಕಿರಣ್,ಆರೋಹಿ ನೈನಾ..ಚಂದನ ಅನಂತಕೃಷ್ಣ,ರಮೇಶ್ ಭಟ್,ವಿದ್ಯಾಮೂರ್ತಿ ಸಂದೀಪ್ ನಟಿಸಿರುತ್ತಾರೆ.ಸಂಗೀತ ನಿರ್ದೇಶನವನ್ನು ಮಯೂರ್ ಅಂಬೆಕಲ್ಲು ಮಾಡಿದ್ದಾರೆ.ಎಲ್ಲರು ಚಿತ್ರ ಮಂದಿರದಲ್ಲಿ ಈ ಫಿಲಂ ನೋಡಿ ಹರಸಿ

ಫೆ.21ಕ್ಕೆ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಬಿಡುಗಡೆ Read More »

error: Content is protected !!
Scroll to Top