ಪ್ರಚಲಿತ

ಅರಂತೋಡು : ಕಡಿಮೆ ಬೆಳೆ ವಿಮಾ ಮೊತ್ತ ಪಾವತಿ,ಕಾನೂನಿನ ಮೊರೆ ಹೋಗಲು ನಿರ್ಧಾರ

2024-25ನೇ ಸಾಲಿನಲ್ಲಿ ಬೆಳೆವಿಮೆ ಪಾವತಿಸಿರುವ ರೈತರಿಗೆ ಈ ಬಾರಿಯ ಮಳೆಯ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೂ ಬೆಳೆವಿಮಾ ಮೊತ್ತವು ಕಡಿಮೆ ಬಿಡುಗಡೆಯಾಗಿರುವ ಬಗ್ಗೆ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ಅಸಮಧಾನಗೊಂಡು ಈ ಕುರಿತಾಗಿ ಸಭೆಯನ್ನು ನಡೆಸಿ ನ್ಯಾಯಯುತ ಬೆಳೆವಿಮೆ ಪರಿಹಾರವನ್ನು ಕೊಡಿಸುವಂತೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿದ್ದಾರೆ.ರೈತರು, ರಾಜ್ಯ ಮತ್ತು ಕೇಂದ್ರ ಸರಕಾರದ ಬೆಳೆವಿಮೆ ಯೋಜನೆಯನ್ವಯ ಮಳೆ, ಬಿಸಿಲು ಸೇರಿದಂತೆ ಹವಾಮಾನದಲ್ಲಿ ಉಂಟಾಗುವ ವೈಪರೀತ್ಯಗಳಿಂದ ಕೃಷಿಯ ಮೇಲೆ […]

ಅರಂತೋಡು : ಕಡಿಮೆ ಬೆಳೆ ವಿಮಾ ಮೊತ್ತ ಪಾವತಿ,ಕಾನೂನಿನ ಮೊರೆ ಹೋಗಲು ನಿರ್ಧಾರ Read More »

ಚೊಕ್ಕಾಡಿ : ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025

ಯುವಜನ ಸಂಯುಕ್ತ ಮಂಡಳಿ (ರಿ.), ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.), ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ, ದಿನಾಂಕ 14-12-2025 ರಂದು ಚೊಕ್ಕಾಡಿ ಪರಿಸರದ ಅಂಗಡಿಗಳ ಮುಂದಿದ್ದ ಕಳೆಗಳನ್ನು ಕಡಿದು ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಕಾಡು ಬೆಳದು ಸಾರ್ವಜನಿಕರಿಗೆ ನಡೆದಾಡಲು ಅಸೌಕರ್ಯ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆಗಳನ್ನು ಕಡಿದು ಪರಿಸರವನ್ನು ಸ್ವಚ್ಛಗೊಳಿಸಿ ಊರನ್ನು ಸುಂದರಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಅಂಗಡಿ

ಚೊಕ್ಕಾಡಿ : ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 Read More »

ಸುಳ್ಯ ತಾಲೂಕಿನ ಕೃಷಿ ಸಖಿಯರು, ಕೃಷಿಕರು ಹಾಗೂ ಸಂಜೀವಿನಿ ಸದಸ್ಯೆಯರಿಗೆ ಕೃಷಿ ಅಧ್ಯಯನ ಪ್ರವಾಸ ಮತ್ತು ಮಾಹಿತಿ ತರಬೇತಿ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ಭಾ. ಕೃ. ಅ. ಸಂಸ್ಥೆ) ಕೇಂದ್ರ, ವಿಟ್ಲ; 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್; ರೇಷ್ಮೆ ಕೃಷಿ ಅಭಿವೃದ್ಧಿ ನಿಗಮ, ಮಂಗಳೂರು; ಹಾಗೂ ಸಂಜೀವಿನಿ ಎನ್‌ಆರ್‌ಎಲ್‌ಎಂ ತಾಲೂಕು ಪಂಚಾಯತ್ ಸುಳ್ಯ ಇವರ ಸಹಯೋಗದಲ್ಲಿ ರೇಷ್ಮೆ ಕೃಷಿ ಮಾಹಿತಿ ಹಾಗೂ ತಾಳೆ ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಭಾ. ಕೃ. ಅ. ಸಂಸ್ಥೆ ಕೇಂದ್ರ, ವಿಟ್ಲದ ವ್ಯವಸ್ಥಾಪನಾ ನಿರ್ದೇಶಕರಾದ ಎಂ. ಪ್ರಸಾದ್ ಶೆಟ್ಟಿ, ನಿವೃತ್ತ ರೇಷ್ಮೆ ನಿರೀಕ್ಷಕರಾದ ಬಿ.ಕೆ. ನಾಯಕ್, ರೇಷ್ಮೆ

ಸುಳ್ಯ ತಾಲೂಕಿನ ಕೃಷಿ ಸಖಿಯರು, ಕೃಷಿಕರು ಹಾಗೂ ಸಂಜೀವಿನಿ ಸದಸ್ಯೆಯರಿಗೆ ಕೃಷಿ ಅಧ್ಯಯನ ಪ್ರವಾಸ ಮತ್ತು ಮಾಹಿತಿ ತರಬೇತಿ Read More »

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಅರಣ್ಯ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್‌ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್‌ ಕುಮಾರ್ ರೈ ಧರ್ಮಣ್ಣನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ, ಪವಿತ್ರಾ ಮಲ್ಲೆಟ್ಟಿ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪಿ.ಎಸ್.ಗಂಗಾಧರ, ಅಬ್ದುಲ್ ಗಫೂ‌ರ್

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ Read More »

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಪ್ರತಿಭೋತ್ಸವ

ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರಸೂಸಲು ಸೂಕ್ತ ವೇದಿಕೆಯೇ ಪ್ರತಿಭೋತ್ಸವ: ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪಠ್ಯ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೊರಸೂಸುವುದಕ್ಕೆ ಪ್ರತಿಭೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಶಾಲಾ ಸಂಚಾಲಕ ಸದಾನಂದ ಮಾವಜಿ ಹೇಳಿದರು. ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್ , ಎಸ್. ಡಿ.ಎಂ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಪ್ರತಿಭೋತ್ಸವ Read More »

ಪಂಜ : ಡಿ.21ಕ್ಕೆ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ ಪೂರ್ವಭಾವಿ ಸಭೆ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ-2026ರ ಪೂರ್ವಭಾವಿ ಸಭೆಯು ಡಿ.21 ರಂದು ಸಂಜೆ ಗಂಟೆ 4.30ಕ್ಕೆ ದೇಗುಲದಲ್ಲಿ ನಡೆಯಲಿದೆ ಎಂದು ದೇವಳದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ತಿಳಿಸಿದ್ದಾರೆ.ಈ ಸಭೆಗೆ ಸೀಮೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ.

ಪಂಜ : ಡಿ.21ಕ್ಕೆ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಸುಳ್ಯದ ಹಿರಿಯ ಉದ್ಯಮಿ ಸುದೇಶ್ ಶೆಟ್ಟಿ ನಿಧನ

ಸುಳ್ಯದ ಹಿರಿಯ ಉದ್ಯಮಿ ಸುದರ್ಶನ ಕೃಷಿ ಏಜೆನ್ಸಿ ಮಾಲಕ ಸುದೇಶ್ ಕುಮಾರ್ ಶೆಟ್ಟಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.16 ರಂದು ನಿಧನರಾದರು.ಅವರಿಗೆ 56 ವರ್ಷ ಪ್ರಾಯವಾಗಿತ್ತುಮೃತರು ಪತ್ನಿ ಅಕ್ಷತಾ ಎಸ್. ಶೆಟ್ಟಿ, ಪುತ್ರರಾದ ಸಮನ್ಯು ಮತ್ತು ಶುಶಾನ್ ರನ್ನು ಅಗಲಿದ್ದಾರೆ ಮೃತರ ಅಂತಿಮ ದರ್ಶನ ಇಂದು ಮಧ್ಯಾಹ್ನ 1 ಗಂಟೆಗೆ ಬೀರಮಂಗಲ ಮನೆಯಲ್ಲಿ ನಡೆಯಲಿದೆ ಕುಟುಂಬದವರು ತಿಳಿಸಿದ್ದಾರೆ.

ಸುಳ್ಯದ ಹಿರಿಯ ಉದ್ಯಮಿ ಸುದೇಶ್ ಶೆಟ್ಟಿ ನಿಧನ Read More »

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 1082 ಲಕ್ಷ ರೂ ಅನುದಾನ ಬಿಡುಗಡೆ.

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸುಳ್ಯ ಕ್ಷೇತ್ರದ 21 ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ (SDMF) ನಿಧಿಯಿಂದ ಅನುದಾನ1082ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಈ ನಿಧಿಯಿಂದ ವಿಶೇಷವಾಗಿ ನೆಲ್ಯಾಡಿ ಗ್ರಾಮದ ಬೈಲು-ಕುತ್ಯಾಡಿ ಸೇತುವೆಗೆ 60ಲಕ್ಷ ರೂ ಮತ್ತು ಆಲಂಕಾರು ಗ್ರಾಮದ ಕಕ್ವೆ ರಸ್ತೆ ಮರುನಿರ್ಮಾಣಕ್ಕೆ 50ಲಕ್ಷ ರೂ ಹಾಗೂ ಸುಳ್ಯ ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆಗಳು ಹಾಗೂ ತಡೆಗೊಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ ಎಂದು ತಿಳಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 1082 ಲಕ್ಷ ರೂ ಅನುದಾನ ಬಿಡುಗಡೆ. Read More »

ಡಿ.26ರಿಂದ ಡಿ.28ರ ತನಕ ತೊಡಿಕಾನ ಪಡ್ಪು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸ ಡಿ.26ರಿಂದ ಡಿ.28ರ ತನಕ ನಡೆಯಲಿದೆ ಎಂದು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಕೆ ನಾರಾಯಣ ಕುಂಟುಕಾಡು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸ್ವಸ್ತಿ। ಶ್ರೀ ವಿಶ್ವಾವಸು ಸಂವತ್ಸರದ ಧನುರ್ ಮಾಸ ೧೦. ಸಲುವ ತಾರೀಕು 28-12-2025ನೇ ರವಿವಾರ ಪೂರ್ವಾಹ್ನ 7.00ರಿಂದ 8.00 ರ ತನಕ ಜರುಗುವ ಧನುರ್ ಲಗ್ನದ ಸುಮುಹೂರ್ತದಲ್ಲಿ ಆಲೆಟ್ಟಿ ಶ್ರೀ ವಿಷ್ಣುಮೂರ್ತಿ ದೈವದ ಪ್ರಧಾನ ಅರ್ಚಕರಾದ ಕುರಿಂಜ ತರವಾಡಿನ ಶ್ರೀ

ಡಿ.26ರಿಂದ ಡಿ.28ರ ತನಕ ತೊಡಿಕಾನ ಪಡ್ಪು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

ತೊಡಿಕಾನ : ಮಲ್ಲಿಕಾರ್ಜುನ ‌ದೇವಳದಲ್ಲಿ ಧನುಪೂಜೆ ಆರಂಭ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಲ್ಲಿ ಇಂದಿನಿಂದ ( ಡಿ.16) ಧನು ಪೂಜೆ ಶ್ರದ್ದಾ ಭಕ್ತಿಯಿಂದ ಅರಂಭಗೊಂಡಿದೆ.ಧನು ಪೂಜೆಯ ಅಂಗವಾಗಿ ದೇವಳದಲ್ಲಿ ದಿನ ನಿತ್ಯ ಭಜನಾ ಸತ್ಸಂಗ ನಡೆಯುತ್ತಿದ್ದುಧನು ಪೂಜಾ ಪ್ರಥಮ ದಿನದಂದುಮಹಾ ವಿಷ್ಣು ಭಜನಾ ತಂಡ ಕಾಯರ್ತೋಡಿಯವರಿಂದ ಭಜನಾ ಸೇವೆ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ಸಿಬ್ಬಂದಿಗಳು ಸೀಮೆಯ ಭಕ್ತರು ನೂರಾರು ಸಂಖ್ಯೆಯಲ್ಲಿ ಪೂಜೆಯ ಲ್ಲಿ ಭಾಗವಹಿಸಿದರು.

ತೊಡಿಕಾನ : ಮಲ್ಲಿಕಾರ್ಜುನ ‌ದೇವಳದಲ್ಲಿ ಧನುಪೂಜೆ ಆರಂಭ Read More »

error: Content is protected !!
Scroll to Top